<p><strong>ಚಿತ್ರದುರ್ಗ: </strong>ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.<br /> <br /> ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಹಿಂದೆ ಇದ್ದ ಕೊಳವೆ ಬಾವಿಗಳು ಬತ್ತಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರೂ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ದೂರಿದರು.<br /> <br /> ಶ್ರೀರಂಗಪಟ್ಟಣ ಜೇವರ್ಗಿ ರಸ್ತೆಯಿಂದ ಚಿಕ್ಕಹಳ್ಳಿ ಗ್ರಾಮಕ್ಕೆ ಬರುವ ರಸ್ತೆ ಅಭಿವೃದ್ಧಿ ಪಡಿಸಬೇಕು. ಈ ಮಾರ್ಗಕ್ಕೆ ತೆರಳುವ ಒಂದು ಕಿ.ಮೀ. ದೂರ ಬಹಳ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ದೂರಿದರು.<br /> <strong><br /> ಬಸ್ ನಿಲ್ಲಿಸಬೇಡಿ:</strong> ಇದೇ ಸಂದರ್ಭದಲ್ಲಿ ಚಿಕ್ಕಹಳ್ಳಿ, ಬ್ಯಾಡರೆಡ್ಡಿಹಳ್ಳಿ, ತಿಮ್ಮನಹಳ್ಳಿ, ವಲ್ಸೆ, ಬಂಜಿಗೆರೆ, ಹೊನ್ನೂರು, ಘಟಪರ್ತಿ, ಉಳ್ಳಾರ್ತಿ, ದುಗ್ಗಾವರ, ಗ್ರಾಮಸ್ಥರು, ಗ್ರಾಮಕ್ಕೆ ಬರುವ ಬಸ್ ಸಂಚಾರ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿದರು.<br /> <br /> ಎಸ್.ಆರ್. ಎಕ್ರ್ಪ್ರೆಸ್ ಬಸ್ ದಿನಕ್ಕೆ 8 ಬಾರಿ ಸಂಚರಿಸುತ್ತಿದ್ದು, ಈ ಗ್ರಾಮದ ಜನತೆಗೆ ಅನುಕೂಲಕರವಾಗಿದೆ. ಆದರೆ, ಕೆಲವು ಬಂಜಿಗೆರೆ ಗ್ರಾಮದ ಗ್ರಾಮಸ್ಥರು ಈ ಬಸ್ ಸಂಚಾರ ನಿಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಈ ಬಸ್ ಸಂಚಾರ ನಿಲ್ಲಿಸಿದದರೆ ತಮಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದರು.<br /> <br /> ಮಲ್ಲಿಕಾರ್ಜುನ್, ರಫಿ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ರಾಜು, ರಮೇಶ್ಕುಮಾರ್, ನಾಗೇಶ್, ಬಸವರೆಡ್ಡಿ, ಬಂಜಪ್ಪ, ಬಸವರೆಡ್ಡಿ, ಕುಮಾರ್, ಗುರುಸ್ವಾಮಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.<br /> <br /> ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಹಿಂದೆ ಇದ್ದ ಕೊಳವೆ ಬಾವಿಗಳು ಬತ್ತಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರೂ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ದೂರಿದರು.<br /> <br /> ಶ್ರೀರಂಗಪಟ್ಟಣ ಜೇವರ್ಗಿ ರಸ್ತೆಯಿಂದ ಚಿಕ್ಕಹಳ್ಳಿ ಗ್ರಾಮಕ್ಕೆ ಬರುವ ರಸ್ತೆ ಅಭಿವೃದ್ಧಿ ಪಡಿಸಬೇಕು. ಈ ಮಾರ್ಗಕ್ಕೆ ತೆರಳುವ ಒಂದು ಕಿ.ಮೀ. ದೂರ ಬಹಳ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ದೂರಿದರು.<br /> <strong><br /> ಬಸ್ ನಿಲ್ಲಿಸಬೇಡಿ:</strong> ಇದೇ ಸಂದರ್ಭದಲ್ಲಿ ಚಿಕ್ಕಹಳ್ಳಿ, ಬ್ಯಾಡರೆಡ್ಡಿಹಳ್ಳಿ, ತಿಮ್ಮನಹಳ್ಳಿ, ವಲ್ಸೆ, ಬಂಜಿಗೆರೆ, ಹೊನ್ನೂರು, ಘಟಪರ್ತಿ, ಉಳ್ಳಾರ್ತಿ, ದುಗ್ಗಾವರ, ಗ್ರಾಮಸ್ಥರು, ಗ್ರಾಮಕ್ಕೆ ಬರುವ ಬಸ್ ಸಂಚಾರ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿದರು.<br /> <br /> ಎಸ್.ಆರ್. ಎಕ್ರ್ಪ್ರೆಸ್ ಬಸ್ ದಿನಕ್ಕೆ 8 ಬಾರಿ ಸಂಚರಿಸುತ್ತಿದ್ದು, ಈ ಗ್ರಾಮದ ಜನತೆಗೆ ಅನುಕೂಲಕರವಾಗಿದೆ. ಆದರೆ, ಕೆಲವು ಬಂಜಿಗೆರೆ ಗ್ರಾಮದ ಗ್ರಾಮಸ್ಥರು ಈ ಬಸ್ ಸಂಚಾರ ನಿಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಈ ಬಸ್ ಸಂಚಾರ ನಿಲ್ಲಿಸಿದದರೆ ತಮಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದರು.<br /> <br /> ಮಲ್ಲಿಕಾರ್ಜುನ್, ರಫಿ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ರಾಜು, ರಮೇಶ್ಕುಮಾರ್, ನಾಗೇಶ್, ಬಸವರೆಡ್ಡಿ, ಬಂಜಪ್ಪ, ಬಸವರೆಡ್ಡಿ, ಕುಮಾರ್, ಗುರುಸ್ವಾಮಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>