<p><strong>ಕುದುರೆಮುಖ (ಕಳಸ): </strong>ಗಣಿಗಾರಿಕೆ ಸ್ಥಗಿತಗೊಂಡ ನಂತರ ಬಹುತೇಕ ಸ್ತಬ್ಧವಾಗಿರುವ ಕುದುರೆಮುಖ ಪಟ್ಟಣದತ್ತ ಭಾರತೀಯ ಸೇನೆ ನೋಟ ಹರಿಸಿದೆ. ದಟ್ಟ ಕಾನನದ ಹಸಿರು ಸೌಂದರ್ಯದ ಮಡಿಲಲ್ಲಿ ವಿರಾಜಮಾನವಾಗಿರುವ ಪಟ್ಟಣದಲ್ಲಿ ಮಿಲಿಟರಿ ಅಕಾಡೆಮಿ ಸ್ಥಾಪಿಸುವ ಸಾಧ್ಯತೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸೇನೆಯ ಪ್ರಮುಖ ಅಧಿಕಾರಿಯೊಬ್ಬರು ಕುದುರೆಮುಖ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.<br /> <br /> ಅಕಾಡೆಮಿ ಸ್ಥಾಪನೆಗೆ ಕುದುರೆಮುಖ ಸೂಕ್ತ ಸ್ಥಳವೇ ಎಂದು ತಿಳಿದುಕೊಳ್ಳಲು ದೆಹಲಿಯಿಂದ ಆಗಮಿಸಿದ್ದ ಕರ್ನಲ್ ಪ್ರಕಾಶ್, ಮೂಡಿಗೆರೆ ತಹಸೀಲ್ದಾರ್ ಶಿವೇಗೌಡ ಅವರೊಂದಿಗೆ ಶುಕ್ರವಾರ ಕುದುರೆಮುಖ ಪಟ್ಟಣದ ಪ್ರತಿ ಭಾಗವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರು.<br /> <br /> ಅಕಾಡೆಮಿ ಸ್ಥಾಪನೆಗೆ 500 ಎಕರೆ ಭೂಮಿ ಅವಶ್ಯಕತೆಯಿದ್ದು, ಸಮತಟ್ಟಾದ ಪ್ರದೇಶವಾಗಿರಬೇಕು.ಯೋಧರ ತರಬೇತಿಗೆ ಅನುಕೂಲವಾಗುತ್ತದೆ ಎಂದು ಕರ್ನಲ್ ತಿಳಿಸಿದ್ದಾಗಿ ತಹಸೀಲ್ದಾರ್ ಪ್ರಜಾವಾಣಿಗೆ ಶನಿವಾರ ಮಾಹಿತಿ ನೀಡಿದ್ದಾರೆ.<br /> <br /> ಕರ್ನಲ್, ಕುದುರೆಮುಖ ಪಟ್ಟಣದಂಚಿನಲ್ಲೇ ಹರಿಯುವ ಭದ್ರಾ ನದಿಯಿಂದ ವೇರ್ಹೌಸ್ವರೆಗಿನ ಪ್ರದೇಶವನ್ನು( ಸೆಕ್ಟರ್ 4 ಮತ್ತು ಸೆಕ್ಟರ್ 5) ವಿಶೇಷವಾಗಿ ಪರಿಶೀಲಿಸಿದರು. ಸ್ಥಳ ಪರಿಶೀಲನೆ ನಂತರ ಸೇನೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು. ಸೆಕ್ಟರ್ 4-5 ಕಂದಾಯ ಭೂಮಿಯಾಗಿದ್ದು, ಸೇನೆ ಬಯಸಿದಲ್ಲಿ ರಾಜ್ಯ ಸರ್ಕಾರ ಭೂಮಿ ಹಸ್ತಾಂತರಿಸಬಹುದಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದುರೆಮುಖ (ಕಳಸ): </strong>ಗಣಿಗಾರಿಕೆ ಸ್ಥಗಿತಗೊಂಡ ನಂತರ ಬಹುತೇಕ ಸ್ತಬ್ಧವಾಗಿರುವ ಕುದುರೆಮುಖ ಪಟ್ಟಣದತ್ತ ಭಾರತೀಯ ಸೇನೆ ನೋಟ ಹರಿಸಿದೆ. ದಟ್ಟ ಕಾನನದ ಹಸಿರು ಸೌಂದರ್ಯದ ಮಡಿಲಲ್ಲಿ ವಿರಾಜಮಾನವಾಗಿರುವ ಪಟ್ಟಣದಲ್ಲಿ ಮಿಲಿಟರಿ ಅಕಾಡೆಮಿ ಸ್ಥಾಪಿಸುವ ಸಾಧ್ಯತೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸೇನೆಯ ಪ್ರಮುಖ ಅಧಿಕಾರಿಯೊಬ್ಬರು ಕುದುರೆಮುಖ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.<br /> <br /> ಅಕಾಡೆಮಿ ಸ್ಥಾಪನೆಗೆ ಕುದುರೆಮುಖ ಸೂಕ್ತ ಸ್ಥಳವೇ ಎಂದು ತಿಳಿದುಕೊಳ್ಳಲು ದೆಹಲಿಯಿಂದ ಆಗಮಿಸಿದ್ದ ಕರ್ನಲ್ ಪ್ರಕಾಶ್, ಮೂಡಿಗೆರೆ ತಹಸೀಲ್ದಾರ್ ಶಿವೇಗೌಡ ಅವರೊಂದಿಗೆ ಶುಕ್ರವಾರ ಕುದುರೆಮುಖ ಪಟ್ಟಣದ ಪ್ರತಿ ಭಾಗವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರು.<br /> <br /> ಅಕಾಡೆಮಿ ಸ್ಥಾಪನೆಗೆ 500 ಎಕರೆ ಭೂಮಿ ಅವಶ್ಯಕತೆಯಿದ್ದು, ಸಮತಟ್ಟಾದ ಪ್ರದೇಶವಾಗಿರಬೇಕು.ಯೋಧರ ತರಬೇತಿಗೆ ಅನುಕೂಲವಾಗುತ್ತದೆ ಎಂದು ಕರ್ನಲ್ ತಿಳಿಸಿದ್ದಾಗಿ ತಹಸೀಲ್ದಾರ್ ಪ್ರಜಾವಾಣಿಗೆ ಶನಿವಾರ ಮಾಹಿತಿ ನೀಡಿದ್ದಾರೆ.<br /> <br /> ಕರ್ನಲ್, ಕುದುರೆಮುಖ ಪಟ್ಟಣದಂಚಿನಲ್ಲೇ ಹರಿಯುವ ಭದ್ರಾ ನದಿಯಿಂದ ವೇರ್ಹೌಸ್ವರೆಗಿನ ಪ್ರದೇಶವನ್ನು( ಸೆಕ್ಟರ್ 4 ಮತ್ತು ಸೆಕ್ಟರ್ 5) ವಿಶೇಷವಾಗಿ ಪರಿಶೀಲಿಸಿದರು. ಸ್ಥಳ ಪರಿಶೀಲನೆ ನಂತರ ಸೇನೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು. ಸೆಕ್ಟರ್ 4-5 ಕಂದಾಯ ಭೂಮಿಯಾಗಿದ್ದು, ಸೇನೆ ಬಯಸಿದಲ್ಲಿ ರಾಜ್ಯ ಸರ್ಕಾರ ಭೂಮಿ ಹಸ್ತಾಂತರಿಸಬಹುದಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>