<p>ನವದೆಹಲಿ (ಪಿಟಿಐ): ಇಲ್ಲಿನ ಹೈಕೋರ್ಟ್ನಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತ ಕೂದಲೆಳೆಯಲ್ಲಿ ಪಾರಾದರು.<br /> <br /> ಸ್ವಾಗತಕಾರರ ಕೌಂಟರ್ನಲ್ಲಿ ಪಾಸ್ ತೆಗೆದುಕೊಂಡ ಕಾನೂನು ವರದಿಗಾರ ಉಪಮನ್ಯು ತ್ರಿವೇದಿ ನ್ಯಾಯಾಲಯದ ಕಟ್ಟಡದೆಡೆಗೆ ದೌಡಾಯಿಸುತ್ತಿದ್ದರು. ಅವರು ಕೌಂಟರ್ ಬಿಟ್ಟು ಇನ್ನೂ ಒಂದು ನಿಮಿಷ ಕೂಡ ಆಗಿರಲಿಲ್ಲ. ಅಷ್ಟರೊಳಗೇ ಕಿವಿಗಳನ್ನು ಕಿವುಡಾಗಿಸುವಂತಹ ಭಾರಿ ಶಬ್ದ ಅಪ್ಪಳಿಸಿತು.<br /> <br /> ತಿರುಗಿ ನೋಡಿದರೆ ಘೋರ ದೃಶ್ಯ. ಆದರೆ ಆ ಕಠಿಣ ಸಂದರ್ಭದಲ್ಲೂ ಅವರು ವೃತ್ತಿ ಪ್ರಜ್ಞೆ ಮೆರೆದು, ತಕ್ಷಣವೇ ಕಚೇರಿಗೆ ಫೋನ್ ಮಾಡಿ ಎಲ್ಲರಿಗಿಂತ ಮೊದಲು ಸ್ಫೋಟ ಸುದ್ದಿ ಮುಟ್ಟಿಸಿದರು.<br /> <br /> `ನಾನು ಜೀವಾಪಾಯದಿಂದ ಪಾರಾಗಿ ಮೊದಲು ಸುದ್ದಿ ಕೊಟ್ಟಿದ್ದಕ್ಕೆ ಸಂತಸವಾಗಿದೆ. ಆದರೆ ಸ್ಫೋಟ ಸ್ಥಳದ ರಕ್ತಸಿಕ್ತ ಭೀಕರ ದೃಶ್ಯಗಳು ಮನಸ್ಸನ್ನು ಆಳವಾಗಿ ಕಲಕಿವೆ~ ಎಂದಿದ್ದಾರೆ ತ್ರಿವೇದಿ.<br /> <br /> ಬಾಂಬ್ ಸ್ಫೋಟ ಸಂಭವಿಸಿದ ನಂತರ ಬೆಂಕಿ, ಹೊಗೆ, ಕೂಗಾಟ, ಚೀರಾಟ ಇಡೀ ಪ್ರದೇಶವನ್ನು ಆವರಿಸಿತು. ನ್ಯಾಯಾಲಯ ಪ್ರವೇಶಿಸಲು ಧಾವಿಸುತ್ತಿದ್ದ ವಕೀಲರು ಸದ್ದು ಬಂದ ಕಡೆ ಓಡಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೆಣಗಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಇಲ್ಲಿನ ಹೈಕೋರ್ಟ್ನಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತ ಕೂದಲೆಳೆಯಲ್ಲಿ ಪಾರಾದರು.<br /> <br /> ಸ್ವಾಗತಕಾರರ ಕೌಂಟರ್ನಲ್ಲಿ ಪಾಸ್ ತೆಗೆದುಕೊಂಡ ಕಾನೂನು ವರದಿಗಾರ ಉಪಮನ್ಯು ತ್ರಿವೇದಿ ನ್ಯಾಯಾಲಯದ ಕಟ್ಟಡದೆಡೆಗೆ ದೌಡಾಯಿಸುತ್ತಿದ್ದರು. ಅವರು ಕೌಂಟರ್ ಬಿಟ್ಟು ಇನ್ನೂ ಒಂದು ನಿಮಿಷ ಕೂಡ ಆಗಿರಲಿಲ್ಲ. ಅಷ್ಟರೊಳಗೇ ಕಿವಿಗಳನ್ನು ಕಿವುಡಾಗಿಸುವಂತಹ ಭಾರಿ ಶಬ್ದ ಅಪ್ಪಳಿಸಿತು.<br /> <br /> ತಿರುಗಿ ನೋಡಿದರೆ ಘೋರ ದೃಶ್ಯ. ಆದರೆ ಆ ಕಠಿಣ ಸಂದರ್ಭದಲ್ಲೂ ಅವರು ವೃತ್ತಿ ಪ್ರಜ್ಞೆ ಮೆರೆದು, ತಕ್ಷಣವೇ ಕಚೇರಿಗೆ ಫೋನ್ ಮಾಡಿ ಎಲ್ಲರಿಗಿಂತ ಮೊದಲು ಸ್ಫೋಟ ಸುದ್ದಿ ಮುಟ್ಟಿಸಿದರು.<br /> <br /> `ನಾನು ಜೀವಾಪಾಯದಿಂದ ಪಾರಾಗಿ ಮೊದಲು ಸುದ್ದಿ ಕೊಟ್ಟಿದ್ದಕ್ಕೆ ಸಂತಸವಾಗಿದೆ. ಆದರೆ ಸ್ಫೋಟ ಸ್ಥಳದ ರಕ್ತಸಿಕ್ತ ಭೀಕರ ದೃಶ್ಯಗಳು ಮನಸ್ಸನ್ನು ಆಳವಾಗಿ ಕಲಕಿವೆ~ ಎಂದಿದ್ದಾರೆ ತ್ರಿವೇದಿ.<br /> <br /> ಬಾಂಬ್ ಸ್ಫೋಟ ಸಂಭವಿಸಿದ ನಂತರ ಬೆಂಕಿ, ಹೊಗೆ, ಕೂಗಾಟ, ಚೀರಾಟ ಇಡೀ ಪ್ರದೇಶವನ್ನು ಆವರಿಸಿತು. ನ್ಯಾಯಾಲಯ ಪ್ರವೇಶಿಸಲು ಧಾವಿಸುತ್ತಿದ್ದ ವಕೀಲರು ಸದ್ದು ಬಂದ ಕಡೆ ಓಡಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೆಣಗಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>