<p><strong>ಮಂಗಳೂರು: </strong>`ಕೃತಿ ಚೌರ್ಯಮಾಡುವವರಿದ್ದಾರೆ ಎಂದು ಕನ್ನಡದ ಲೇಖಕರೆಲ್ಲ ಮನೆ ಮುಂದೆ ಫಲಕ ಹಾಕಿಕೊಳ್ಳಬೇಕಾಗಿದೆ. ಲೇಖಕರೆಲ್ಲ ಜಾಗೃತರಾಗಬೇಕಿದೆ. ಯಾವ ಸಾಹಿತಿಗೂ ಇಂತಹ ಮೋಸ ಆಗಬಾರದು~ ಎಂದು ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ನೋವಿನಿಂದ ಹೇಳಿದ್ದಾರೆ. <br /> <br /> ~2011ನೇ ಸಾಲಿನ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ~ಬ್ಯಾರಿ~ ಸಿನಿಮಾ ಕಥೆಗೆ ನನ್ನ `ಚಂದ್ರಗಿರಿ ತೀರದಲ್ಲಿ~ ಕೃತಿಯನ್ನೇ ಬಳಸಿಕೊಳ್ಳಲಾಗಿದೆ. ಇದು ಸ್ಪಷ್ಟ ಕೃತಿಚೌರ್ಯ~ ಎಂದು `ಪ್ರಜಾವಾಣಿ~ ಬಳಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು. <br /> <br /> ` ಯಾರದೋ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಇಂತಹ ಕೆಲವು ಬ್ಯಾರಿಗಳಿಂದಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ~ ಎಂದು ಕಿಡಿಕಾರಿದರು.<br /> <br /> ಪ್ರಶಸ್ತಿ ಬಂದಿತ್ತು: `ಚಂದ್ರಗಿರಿ ತೀರದಲ್ಲಿ ಕೃತಿ ತಮಿಳಿನಲ್ಲಿ 2002ರಲ್ಲಿ ~ಜಮಿಲಾ~ ಎಂಬ ಸಿನಿಮಾ ಆಗಿತ್ತು. 2002ರಲ್ಲಿ ತಮಿಳುನಾಡು ಸರ್ಕಾರ ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿತ್ತು. ಒಂದು ಬಾರಿ ಪ್ರಶಸ್ತಿ ದೊರಕಿದ ಕಥೆಯನ್ನು ಆಧರಿಸಿದ ಸಿನಿಮಾವನ್ನು ಹೇಗೆ ಮತ್ತೊಮ್ಮೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ~ ಎಂದು ಪ್ರಶ್ನಿಸಿದರು. <br /> <br /> <strong>ಒಪ್ಪಂದ:</strong> `ಈ ಕೃತಿಯನ್ನು ಬೇರೆಯವರಿಗೆ ಸಿನಿಮಾ ಮಾಡಲು ಕೊಡುವುದಿಲ್ಲ ಎಂದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಸಿ) ಜತೆ ಒಪ್ಪಂದ ಮಾಡಿಕೊಂಡಿದ್ದೆ. ಈ ಒಪ್ಪಂದ 2015ರವರೆಗೆ ಜಾರಿಯಲ್ಲಿರುತ್ತದೆ. ಕೃತಿಚೌರ್ಯ ಮಾಡಿದ ಬಗ್ಗೆ ಎನ್ಎಫ್ಡಿಸಿಗೂ ಪತ್ರ ಬರೆದು ತಿಳಿಸಿದ್ದೆ. ಅವರಿಂದಲೂ ಪ್ರತಿಕ್ರಿಯೆ ಬಂದಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು. <br /> <br /> `ಚಿತ್ರದ ನಿರ್ಮಾಪಕ ಅಲ್ತಾಫ್ ಕೃತ್ಯದ ಬಗ್ಗೆ ರಾಜ್ಯ ಚಲನಚಿತ್ರ ಮಂಡಳಿಗೂ ದೂರು ಸಲ್ಲಿಸಿದ್ದೆ. ಆಗ ಅಧ್ಯಕ್ಷರಾಗಿದ್ದ ಜಯಮಾಲಾ ಸಿನಿಮಾ ನಿರ್ಮಾಣ ಮಾಡದಂತೆ ತಡೆಹಿಡಿದಿದ್ದರು. ಅಲ್ತಾಫ್ ನನ್ನ ಕಾಲಿಗೆ ಬಿದ್ದು ಕ್ಷಮಿಸಿ ಎಂದು ಬೇಡಿಕೊಂಡ. ಆದರೂ ಅನುಮತಿ ನೀಡಿರಲಿಲ್ಲ~ ಎಂದರು. <br /> <br /> `ಕೃತಿಚೌರ್ಯ ವಿರುದ್ಧ ಮಂಗಳೂರಿನ ನ್ಯಾಯಾಲಯದ ಮೊರೆ ಹೋಗಿದ್ದೆ. ಈ ವಯಸ್ಸಿನಲ್ಲಿ ಅಲೆದಾಟ, ರಗಳೆ ಬೇಡ ಎಂದು ತೀರ್ಮಾನಿಸಿ ಮೊಕದ್ದಮೆ ಹಿಂದೆ ಪಡೆದೆ. ಆದರೆ, ನನಗೆ ನ್ಯಾಯಾಲಯದಲ್ಲಿ ಸೋಲಾಗಿದೆ ಎಂದು ಅಲ್ತಾಫ್ ತಪ್ಪು ಮಾಹಿತಿ ನೀಡುತ್ತಿದ್ದಾನೆ~ ಎಂದರು.<br /> <br /> ಆದರೆ `ಕೃತಿಚೌರ್ಯ ಆರೋಪ ಮಾಡಿ ನ್ಯಾಯಾಲಯಕ್ಕೆ ಹೋಗುವವರೆಗೆ ನನಗೆ ಸಾರಾ ಅಬೂಬಕ್ಕರ್ ಎಂಬ ಲೇಖಕಿ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ~ ಎಂದು `ಬ್ಯಾರಿ~ ಚಿತ್ರ ನಿರ್ಮಾಪಕ ಟಿ.ಎಚ್.ಅಲ್ತಾಫ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.</p>.<p><br /> <br /> ಸಿನಿಮಾ ಬ್ಯಾನರ್ನಲ್ಲಿ ಕಥೆಗಾರ ಹೆಸರು ಹಾಕಿದ ಇರ್ಫಾನ್ ಚೊಕ್ಕಬೆಟ್ಟು ಅವರ ಕೃತಿ ಹಾಜರುಪಡಿಸಲು ನ್ಯಾಯಾಲಯ ಸೂಚಿಸಿತ್ತು. ಈವರೆಗೂ ಕೃತಿ ಹಾಜರುಪಡಿಸಿಲ್ಲ. ಇರ್ಫಾನ್ಗೆ ಕನ್ನಡದಲ್ಲಿ ಸರಿಯಾಗಿ ಬರೆಯಲು ಬರುತ್ತದಾ ಎಂಬುದನ್ನು ಮೊದಲು ನೋಡಿಕೊಳ್ಳಲಿ~ ಎಂದು ಸಾರಾ ಸಿಟ್ಟಾದರು.<br /> <br /> <strong>ಸಾರಾ ಗೊತ್ತೇ ಇರಲಿಲ್ಲ: </strong><br /> ~ಅವರಿಗೆ ವಯಸ್ಸಾಗಿದೆ. ಕೃತಿ ಚೌರ್ಯ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಿನಿಮಾ ವಿರುದ್ಧ ತುಂಬಾ ಅಪಪ್ರಚಾರ ಮಾಡಿದ್ದಾರೆ. ಇದೊಂದು ರೀತಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುವ ಯತ್ನ~ ಎಂದು ಆರೋಪಿಸಿದರು.<br /> <br /> ~ನಮ್ಮ ಊರಿನ ಘಟನೆ ಆಧರಿಸಿ ಬ್ಯಾರಿ ಸಿನಿಮಾ ಕಥೆ ಹೆಣೆಯಲಾಗಿದೆ. ಅಲ್ಲಿಯ ಸಮಸ್ಯೆ ನಾನೇ ನಿಂತು ಸರಿಪಡಿಸಿದ್ದೆ. ಇರ್ಫಾನ್ಗೆ ಘಟನೆ ವಿವರಿಸಿ ಕಥೆ ಬರೆದುಕೊಡುವಂತೆ ವಿನಂತಿಸಿದ್ದೆ. ಸಿನಿಮಾ ನೋಡಿದವರೂ ಇದು ಸಾರಾ ಅವರ ಕಥೆಯಲ್ಲ ಎಂದಿದ್ದಾರೆ. ನಾನೇಕೆ ಕೃತಿಚೌರ್ಯ ಮಾಡಲಿ~ ಎಂದು ಪ್ರಶ್ನಿಸಿದರು. <br /> <br /> ~ಬ್ಯಾರಿ ಸಮುದಾಯದಲ್ಲಿ ಬೊಳುವಾರು ಮಹಮ್ಮದ್ ಕುಂಞ, ಫಕೀರ್ ಅಹ್ಮದ್ ಕಟ್ಪಾಡಿ, ಮಹಮ್ಮದ್ ಬಡ್ಡೂರು ಅವರಂತಹ ಉತ್ತಮ ಕಥೆಗಾರರಿದ್ದಾರೆ. ಅಗತ್ಯ ಎನಿಸಿದ್ದರೆ ಅವರ ಕಾದಂಬರಿಗಳನ್ನೇ ಸಿನಿಮಾ ಮಾಡುತ್ತಿದ್ದೆ~ ಎಂದು ಮಾತು ಮುಗಿಸಿದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>`ಕೃತಿ ಚೌರ್ಯಮಾಡುವವರಿದ್ದಾರೆ ಎಂದು ಕನ್ನಡದ ಲೇಖಕರೆಲ್ಲ ಮನೆ ಮುಂದೆ ಫಲಕ ಹಾಕಿಕೊಳ್ಳಬೇಕಾಗಿದೆ. ಲೇಖಕರೆಲ್ಲ ಜಾಗೃತರಾಗಬೇಕಿದೆ. ಯಾವ ಸಾಹಿತಿಗೂ ಇಂತಹ ಮೋಸ ಆಗಬಾರದು~ ಎಂದು ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ನೋವಿನಿಂದ ಹೇಳಿದ್ದಾರೆ. <br /> <br /> ~2011ನೇ ಸಾಲಿನ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ~ಬ್ಯಾರಿ~ ಸಿನಿಮಾ ಕಥೆಗೆ ನನ್ನ `ಚಂದ್ರಗಿರಿ ತೀರದಲ್ಲಿ~ ಕೃತಿಯನ್ನೇ ಬಳಸಿಕೊಳ್ಳಲಾಗಿದೆ. ಇದು ಸ್ಪಷ್ಟ ಕೃತಿಚೌರ್ಯ~ ಎಂದು `ಪ್ರಜಾವಾಣಿ~ ಬಳಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು. <br /> <br /> ` ಯಾರದೋ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಇಂತಹ ಕೆಲವು ಬ್ಯಾರಿಗಳಿಂದಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ~ ಎಂದು ಕಿಡಿಕಾರಿದರು.<br /> <br /> ಪ್ರಶಸ್ತಿ ಬಂದಿತ್ತು: `ಚಂದ್ರಗಿರಿ ತೀರದಲ್ಲಿ ಕೃತಿ ತಮಿಳಿನಲ್ಲಿ 2002ರಲ್ಲಿ ~ಜಮಿಲಾ~ ಎಂಬ ಸಿನಿಮಾ ಆಗಿತ್ತು. 2002ರಲ್ಲಿ ತಮಿಳುನಾಡು ಸರ್ಕಾರ ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿತ್ತು. ಒಂದು ಬಾರಿ ಪ್ರಶಸ್ತಿ ದೊರಕಿದ ಕಥೆಯನ್ನು ಆಧರಿಸಿದ ಸಿನಿಮಾವನ್ನು ಹೇಗೆ ಮತ್ತೊಮ್ಮೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ~ ಎಂದು ಪ್ರಶ್ನಿಸಿದರು. <br /> <br /> <strong>ಒಪ್ಪಂದ:</strong> `ಈ ಕೃತಿಯನ್ನು ಬೇರೆಯವರಿಗೆ ಸಿನಿಮಾ ಮಾಡಲು ಕೊಡುವುದಿಲ್ಲ ಎಂದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಸಿ) ಜತೆ ಒಪ್ಪಂದ ಮಾಡಿಕೊಂಡಿದ್ದೆ. ಈ ಒಪ್ಪಂದ 2015ರವರೆಗೆ ಜಾರಿಯಲ್ಲಿರುತ್ತದೆ. ಕೃತಿಚೌರ್ಯ ಮಾಡಿದ ಬಗ್ಗೆ ಎನ್ಎಫ್ಡಿಸಿಗೂ ಪತ್ರ ಬರೆದು ತಿಳಿಸಿದ್ದೆ. ಅವರಿಂದಲೂ ಪ್ರತಿಕ್ರಿಯೆ ಬಂದಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು. <br /> <br /> `ಚಿತ್ರದ ನಿರ್ಮಾಪಕ ಅಲ್ತಾಫ್ ಕೃತ್ಯದ ಬಗ್ಗೆ ರಾಜ್ಯ ಚಲನಚಿತ್ರ ಮಂಡಳಿಗೂ ದೂರು ಸಲ್ಲಿಸಿದ್ದೆ. ಆಗ ಅಧ್ಯಕ್ಷರಾಗಿದ್ದ ಜಯಮಾಲಾ ಸಿನಿಮಾ ನಿರ್ಮಾಣ ಮಾಡದಂತೆ ತಡೆಹಿಡಿದಿದ್ದರು. ಅಲ್ತಾಫ್ ನನ್ನ ಕಾಲಿಗೆ ಬಿದ್ದು ಕ್ಷಮಿಸಿ ಎಂದು ಬೇಡಿಕೊಂಡ. ಆದರೂ ಅನುಮತಿ ನೀಡಿರಲಿಲ್ಲ~ ಎಂದರು. <br /> <br /> `ಕೃತಿಚೌರ್ಯ ವಿರುದ್ಧ ಮಂಗಳೂರಿನ ನ್ಯಾಯಾಲಯದ ಮೊರೆ ಹೋಗಿದ್ದೆ. ಈ ವಯಸ್ಸಿನಲ್ಲಿ ಅಲೆದಾಟ, ರಗಳೆ ಬೇಡ ಎಂದು ತೀರ್ಮಾನಿಸಿ ಮೊಕದ್ದಮೆ ಹಿಂದೆ ಪಡೆದೆ. ಆದರೆ, ನನಗೆ ನ್ಯಾಯಾಲಯದಲ್ಲಿ ಸೋಲಾಗಿದೆ ಎಂದು ಅಲ್ತಾಫ್ ತಪ್ಪು ಮಾಹಿತಿ ನೀಡುತ್ತಿದ್ದಾನೆ~ ಎಂದರು.<br /> <br /> ಆದರೆ `ಕೃತಿಚೌರ್ಯ ಆರೋಪ ಮಾಡಿ ನ್ಯಾಯಾಲಯಕ್ಕೆ ಹೋಗುವವರೆಗೆ ನನಗೆ ಸಾರಾ ಅಬೂಬಕ್ಕರ್ ಎಂಬ ಲೇಖಕಿ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ~ ಎಂದು `ಬ್ಯಾರಿ~ ಚಿತ್ರ ನಿರ್ಮಾಪಕ ಟಿ.ಎಚ್.ಅಲ್ತಾಫ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.</p>.<p><br /> <br /> ಸಿನಿಮಾ ಬ್ಯಾನರ್ನಲ್ಲಿ ಕಥೆಗಾರ ಹೆಸರು ಹಾಕಿದ ಇರ್ಫಾನ್ ಚೊಕ್ಕಬೆಟ್ಟು ಅವರ ಕೃತಿ ಹಾಜರುಪಡಿಸಲು ನ್ಯಾಯಾಲಯ ಸೂಚಿಸಿತ್ತು. ಈವರೆಗೂ ಕೃತಿ ಹಾಜರುಪಡಿಸಿಲ್ಲ. ಇರ್ಫಾನ್ಗೆ ಕನ್ನಡದಲ್ಲಿ ಸರಿಯಾಗಿ ಬರೆಯಲು ಬರುತ್ತದಾ ಎಂಬುದನ್ನು ಮೊದಲು ನೋಡಿಕೊಳ್ಳಲಿ~ ಎಂದು ಸಾರಾ ಸಿಟ್ಟಾದರು.<br /> <br /> <strong>ಸಾರಾ ಗೊತ್ತೇ ಇರಲಿಲ್ಲ: </strong><br /> ~ಅವರಿಗೆ ವಯಸ್ಸಾಗಿದೆ. ಕೃತಿ ಚೌರ್ಯ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಿನಿಮಾ ವಿರುದ್ಧ ತುಂಬಾ ಅಪಪ್ರಚಾರ ಮಾಡಿದ್ದಾರೆ. ಇದೊಂದು ರೀತಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುವ ಯತ್ನ~ ಎಂದು ಆರೋಪಿಸಿದರು.<br /> <br /> ~ನಮ್ಮ ಊರಿನ ಘಟನೆ ಆಧರಿಸಿ ಬ್ಯಾರಿ ಸಿನಿಮಾ ಕಥೆ ಹೆಣೆಯಲಾಗಿದೆ. ಅಲ್ಲಿಯ ಸಮಸ್ಯೆ ನಾನೇ ನಿಂತು ಸರಿಪಡಿಸಿದ್ದೆ. ಇರ್ಫಾನ್ಗೆ ಘಟನೆ ವಿವರಿಸಿ ಕಥೆ ಬರೆದುಕೊಡುವಂತೆ ವಿನಂತಿಸಿದ್ದೆ. ಸಿನಿಮಾ ನೋಡಿದವರೂ ಇದು ಸಾರಾ ಅವರ ಕಥೆಯಲ್ಲ ಎಂದಿದ್ದಾರೆ. ನಾನೇಕೆ ಕೃತಿಚೌರ್ಯ ಮಾಡಲಿ~ ಎಂದು ಪ್ರಶ್ನಿಸಿದರು. <br /> <br /> ~ಬ್ಯಾರಿ ಸಮುದಾಯದಲ್ಲಿ ಬೊಳುವಾರು ಮಹಮ್ಮದ್ ಕುಂಞ, ಫಕೀರ್ ಅಹ್ಮದ್ ಕಟ್ಪಾಡಿ, ಮಹಮ್ಮದ್ ಬಡ್ಡೂರು ಅವರಂತಹ ಉತ್ತಮ ಕಥೆಗಾರರಿದ್ದಾರೆ. ಅಗತ್ಯ ಎನಿಸಿದ್ದರೆ ಅವರ ಕಾದಂಬರಿಗಳನ್ನೇ ಸಿನಿಮಾ ಮಾಡುತ್ತಿದ್ದೆ~ ಎಂದು ಮಾತು ಮುಗಿಸಿದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>