<p><strong>ಬೆಟ್ಟದಪುರ (ಮೈಸೂರು ಜಿಲ್ಲೆ):</strong> ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಇಲ್ಲಿನ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಿ ದೇವರ ದರ್ಶನ ಪಡೆದರು.</p>.<p>ಬರೋಬ್ಬರಿ 3,108 ಮೆಟ್ಟಿಲುಗಳಿರುವ ಈ ಬೆಟ್ಟವನ್ನು ಅವರು ಇದೇ ಮೊದಲ ಬಾರಿಗೆ ಹತ್ತಿದರು. ಬೆಳಿಗ್ಗೆಯೇ ಬಂದ ಅವರು, ‘ದೀಪಾವಳಿ ಅಮಾವಾಸ್ಯೆ’ ನಿಮಿತ್ತ ಭಕ್ತರೊಂದಿಗೆ ಚುಮುಚುಮು ಚಳಿ ಹಾಗೂ ಮಂಜಿನ ನಡುವೆ ಬೆಟ್ಟ ಏರಿ, ಇಳಿದರು. </p>.<p>‘ದೇವರ ದರ್ಶನ ಧನ್ಯತಾ ಭಾವ ಮೂಡಿಸಿತು. ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸಿದ್ದೇನೆ. ಬೆಟ್ಟದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಬದ್ಧನಿದ್ದೇನೆ’ ಎಂದು ಹೇಳಿದರು.</p>
<p><strong>ಬೆಟ್ಟದಪುರ (ಮೈಸೂರು ಜಿಲ್ಲೆ):</strong> ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಇಲ್ಲಿನ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಿ ದೇವರ ದರ್ಶನ ಪಡೆದರು.</p>.<p>ಬರೋಬ್ಬರಿ 3,108 ಮೆಟ್ಟಿಲುಗಳಿರುವ ಈ ಬೆಟ್ಟವನ್ನು ಅವರು ಇದೇ ಮೊದಲ ಬಾರಿಗೆ ಹತ್ತಿದರು. ಬೆಳಿಗ್ಗೆಯೇ ಬಂದ ಅವರು, ‘ದೀಪಾವಳಿ ಅಮಾವಾಸ್ಯೆ’ ನಿಮಿತ್ತ ಭಕ್ತರೊಂದಿಗೆ ಚುಮುಚುಮು ಚಳಿ ಹಾಗೂ ಮಂಜಿನ ನಡುವೆ ಬೆಟ್ಟ ಏರಿ, ಇಳಿದರು. </p>.<p>‘ದೇವರ ದರ್ಶನ ಧನ್ಯತಾ ಭಾವ ಮೂಡಿಸಿತು. ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸಿದ್ದೇನೆ. ಬೆಟ್ಟದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಬದ್ಧನಿದ್ದೇನೆ’ ಎಂದು ಹೇಳಿದರು.</p>