<p><strong>ಹಿರೇಕೆರೂರ: </strong>ಕೆಲವು ಕಾಳು ಕಟ್ಟುವ ಹಂತದಲ್ಲಿವೆ, ಇನ್ನು ಕೆಲವು ಆಳೆತ್ತರ ಬೆಳೆದಿವೆ. ಮತ್ತೆ ಕೆಲವು ಮೊಳಕೆಯ ಹಂತದಲ್ಲಿವೆ. ಇದು ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಗೋವಿನ ಜೋಳದ ಚಿತ್ರಣ. ವಿಳಂಬವಾಗಿ ಆರಂಭವಾದ ಮಳೆ ಹಾಗೂ ಅಸಮಾನ ಮಳೆಯ ಹಂಚಿಕೆ ಇದಕ್ಕೆ ಕಾರಣ.<br /> <br /> ಮಳೆಗಾಲ ವಿಳಂಬವಾಗಿದ್ದರಿಂದ ಬರ ದಲ್ಲಿಯೇ ಬಹಳಷ್ಟು ರೈತರು ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದರು. ಸೂಕ್ತ ಹದವಿಲ್ಲದೇ ಕಾಳುಗಳು ಸರಿ ಯಾಗಿ ಹುಟ್ಟಲಿಲ್ಲ, ಹತ್ತಕ್ಕೆ ಒಂದು ಕಾಳು ಹುಟ್ಟಿತು. <br /> ಇದು ರೈತರನ್ನು ಮತ್ತಷ್ಟು ಸಂಕಟಕ್ಕೆ ಈಡು ಮಾಡಿತು. <br /> <br /> ಅನಿವಾರ್ಯವಾಗಿ ಬಹಳಷ್ಟು ರೈತರು ಇದನ್ನು ಕುಂಟೆ ಹೊಡೆದು ಮತ್ತೆ ಬಿತ್ತನೆ ಮಾಡಿದ್ದಾರೆ, ಇನ್ನೂ ಕೆಲವರು ಬಿತ್ತನೆ ಮಾಡುತ್ತಿದ್ದಾರೆ. ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಸಕಾಲದಲ್ಲಿ ಗೋವಿನ ಜೋಳವನ್ನು ಬಿತ್ತನೆ ಮಾಡಿ ಕೊಂಡಿದ್ದಾರೆ. ಆದರೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ಪರಿತಪಿಸುತ್ತಿದ್ದಾರೆ. <br /> <br /> ಕಳೆದ ಒಂದು ವಾರದಿಂದ ಹಂಸ ಭಾವಿ ಮತ್ತು ಹಿರೇಕೆರೂರ ಹೋಬಳಿ ಯಲ್ಲಿ ಹದ ಮಳೆಯಾಗಿರುವುದು ರೈತರ ಕೃಷಿ ಚಟುವಟಿಕೆ ಹೆಚ್ಚಲು ಕಾರಣವಾಗಿದೆ. <br /> <br /> ಹತ್ತಿ ಹಾಗೂ ಗೋವಿನ ಜೋಳ ವನ್ನು ಹರಗುವ ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ರಟ್ಟೀಹಳ್ಳಿ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದ್ದು, ಒಳ್ಳೆಯ ಹದ ಮಳೆಯ ನಿರೀಕ್ಷೆಯಲ್ಲಿ ರುವ ರೈತರು ಬಿತ್ತನೆಯ ಅಂತಿಮ ಹಂತದಲ್ಲಿದ್ದಾರೆ.<br /> <br /> ಒಂದು ದಶಕದಿಂದ ಈಚೆಗೆ ತಾಲ್ಲೂ ಕಿನಲ್ಲಿ ಬಿತ್ತನೆ ಕ್ಷೇತ್ರದ ಶೇ.90ರಷ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆಯಾಗುತ್ತಿವೆ. ಈ ವರ್ಷ ಸಕಾಲ ದಲ್ಲಿ ಮಳೆಯಾಗದೇ ಇರುವುದರಿಂದ ಬಿ.ಟಿ.ಹತ್ತಿ ಬಿತ್ತನೆ ಮಾಡಲು ಹೊಲ ವನ್ನು ಸಿದ್ಧಗೊಳಿಸಿದ್ದ ರೈತರು ತಮ್ಮ ನಿರ್ಧಾರ ಬದಲಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ.<br /> <br /> ಬೆಳೆಗಳಿಗೆ ಯೂರಿಯಾ ಗೊಬ್ಬರ ಕೊಡಲು ರೈತರು ಮುಂದಾಗಿದ್ದಾರೆ. ಸಾಕಷ್ಟು ಗೊಬ್ಬರದ ಲಭ್ಯತೆ ಇಲ್ಲದೇ ರೈತರು ಅಂಗಡಿಯಿಂದ ಅಂಗಡಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದ್ದು, ಕೆಲವು ವರ್ತಕರು ಕಳಪೆ ಗೊಬ್ಬರ ನೀಡಿ ರುವ ಬಗ್ಗೆ ಕೃಷಿ ಇಲಾಖೆಗೆ ದೂರುಗಳು ಸಹ ಬಂದಿವೆ. <br /> <br /> ಇನ್ನು ಕೆಲವು ವರ್ತಕರು ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಗೊಬ್ಬರದ ಜೊತೆ ಅನಗತ್ಯವಾಗಿ ಬೇರೆ ವಸ್ತುವನ್ನು (ಝಿಂಕ್, ಸಲ್ಫರ್ ಮೊದಲಾದವು) ಕಡ್ಡಾಯವಾಗಿ ಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಅನಗತ್ಯ ಆರ್ಥಿಕ ಹೊರೆಯಾ ಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಕಂಡೂ ಕಾಣದಂತಿದ್ದು, ಅವರೂ ವರ್ತಕ ರೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ: </strong>ಕೆಲವು ಕಾಳು ಕಟ್ಟುವ ಹಂತದಲ್ಲಿವೆ, ಇನ್ನು ಕೆಲವು ಆಳೆತ್ತರ ಬೆಳೆದಿವೆ. ಮತ್ತೆ ಕೆಲವು ಮೊಳಕೆಯ ಹಂತದಲ್ಲಿವೆ. ಇದು ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಗೋವಿನ ಜೋಳದ ಚಿತ್ರಣ. ವಿಳಂಬವಾಗಿ ಆರಂಭವಾದ ಮಳೆ ಹಾಗೂ ಅಸಮಾನ ಮಳೆಯ ಹಂಚಿಕೆ ಇದಕ್ಕೆ ಕಾರಣ.<br /> <br /> ಮಳೆಗಾಲ ವಿಳಂಬವಾಗಿದ್ದರಿಂದ ಬರ ದಲ್ಲಿಯೇ ಬಹಳಷ್ಟು ರೈತರು ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದರು. ಸೂಕ್ತ ಹದವಿಲ್ಲದೇ ಕಾಳುಗಳು ಸರಿ ಯಾಗಿ ಹುಟ್ಟಲಿಲ್ಲ, ಹತ್ತಕ್ಕೆ ಒಂದು ಕಾಳು ಹುಟ್ಟಿತು. <br /> ಇದು ರೈತರನ್ನು ಮತ್ತಷ್ಟು ಸಂಕಟಕ್ಕೆ ಈಡು ಮಾಡಿತು. <br /> <br /> ಅನಿವಾರ್ಯವಾಗಿ ಬಹಳಷ್ಟು ರೈತರು ಇದನ್ನು ಕುಂಟೆ ಹೊಡೆದು ಮತ್ತೆ ಬಿತ್ತನೆ ಮಾಡಿದ್ದಾರೆ, ಇನ್ನೂ ಕೆಲವರು ಬಿತ್ತನೆ ಮಾಡುತ್ತಿದ್ದಾರೆ. ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಸಕಾಲದಲ್ಲಿ ಗೋವಿನ ಜೋಳವನ್ನು ಬಿತ್ತನೆ ಮಾಡಿ ಕೊಂಡಿದ್ದಾರೆ. ಆದರೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ಪರಿತಪಿಸುತ್ತಿದ್ದಾರೆ. <br /> <br /> ಕಳೆದ ಒಂದು ವಾರದಿಂದ ಹಂಸ ಭಾವಿ ಮತ್ತು ಹಿರೇಕೆರೂರ ಹೋಬಳಿ ಯಲ್ಲಿ ಹದ ಮಳೆಯಾಗಿರುವುದು ರೈತರ ಕೃಷಿ ಚಟುವಟಿಕೆ ಹೆಚ್ಚಲು ಕಾರಣವಾಗಿದೆ. <br /> <br /> ಹತ್ತಿ ಹಾಗೂ ಗೋವಿನ ಜೋಳ ವನ್ನು ಹರಗುವ ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ರಟ್ಟೀಹಳ್ಳಿ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದ್ದು, ಒಳ್ಳೆಯ ಹದ ಮಳೆಯ ನಿರೀಕ್ಷೆಯಲ್ಲಿ ರುವ ರೈತರು ಬಿತ್ತನೆಯ ಅಂತಿಮ ಹಂತದಲ್ಲಿದ್ದಾರೆ.<br /> <br /> ಒಂದು ದಶಕದಿಂದ ಈಚೆಗೆ ತಾಲ್ಲೂ ಕಿನಲ್ಲಿ ಬಿತ್ತನೆ ಕ್ಷೇತ್ರದ ಶೇ.90ರಷ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆಯಾಗುತ್ತಿವೆ. ಈ ವರ್ಷ ಸಕಾಲ ದಲ್ಲಿ ಮಳೆಯಾಗದೇ ಇರುವುದರಿಂದ ಬಿ.ಟಿ.ಹತ್ತಿ ಬಿತ್ತನೆ ಮಾಡಲು ಹೊಲ ವನ್ನು ಸಿದ್ಧಗೊಳಿಸಿದ್ದ ರೈತರು ತಮ್ಮ ನಿರ್ಧಾರ ಬದಲಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ.<br /> <br /> ಬೆಳೆಗಳಿಗೆ ಯೂರಿಯಾ ಗೊಬ್ಬರ ಕೊಡಲು ರೈತರು ಮುಂದಾಗಿದ್ದಾರೆ. ಸಾಕಷ್ಟು ಗೊಬ್ಬರದ ಲಭ್ಯತೆ ಇಲ್ಲದೇ ರೈತರು ಅಂಗಡಿಯಿಂದ ಅಂಗಡಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದ್ದು, ಕೆಲವು ವರ್ತಕರು ಕಳಪೆ ಗೊಬ್ಬರ ನೀಡಿ ರುವ ಬಗ್ಗೆ ಕೃಷಿ ಇಲಾಖೆಗೆ ದೂರುಗಳು ಸಹ ಬಂದಿವೆ. <br /> <br /> ಇನ್ನು ಕೆಲವು ವರ್ತಕರು ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಗೊಬ್ಬರದ ಜೊತೆ ಅನಗತ್ಯವಾಗಿ ಬೇರೆ ವಸ್ತುವನ್ನು (ಝಿಂಕ್, ಸಲ್ಫರ್ ಮೊದಲಾದವು) ಕಡ್ಡಾಯವಾಗಿ ಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಅನಗತ್ಯ ಆರ್ಥಿಕ ಹೊರೆಯಾ ಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಕಂಡೂ ಕಾಣದಂತಿದ್ದು, ಅವರೂ ವರ್ತಕ ರೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>