<p>ಸಿರುಗುಪ್ಪ: ಬತ್ತದ ಫಸಲು ತೆನೆ ಕಟ್ಟದೇ ಇರುವ ರೈತರ ಜಮೀನಿಗೆ ಮಂಗಳವಾರ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.<br /> <br /> ತಾಲ್ಲೂಕಿನ ದರೂರು ಗ್ರಾಮದಲ್ಲಿ ಬೇಸಿಗೆ ಹಂಗಾಮಿನಲ್ಲಿ ರೈತರು ನೀರಾವರಿ ಜಮೀನಿನಲ್ಲಿ ನಾಟಿ ಮಾಡಿದ ನಾಗಾರ್ಜುನ ಕಂಪನಿಯ ಕಾವೇರಿ ಸೋನ ಬತ್ತದ ತಳಿ ಅವಧಿ ಮೀರಿದರೂ ತೆನೆ ಕಟ್ಟಿದೇ ಇರುವ ವರದಿಯನ್ನು `ಪ್ರಜಾವಾಣಿ~ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.<br /> <br /> ಆ ಪ್ರದೇಶಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೇಸಾಯ, ಕೀಟ, ಬೀಜ ತಳಿ, ರೋಗ ತಜ್ಞರ ವಿಜ್ಞಾನಿಗಳ ತಂಡ ಖುದ್ದು ಭೇಟಿ ನೀಡಿ ಫಸಲು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು. <br /> <br /> ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ಸಿ.ಆರ್.ಚಂದ್ರಶೇಖರ್, ವಿಜ್ಞಾನಿಗಳ ತಂಡದ ಮಹಮ್ಮದ್ ಇಬ್ರಾಹಿಂ ಮಾತನಾಡಿ, ಬತ್ತದ ಮಾಹಿತಿಯನ್ನು ರೈತರಿಂದ ಪಡೆದಿದ್ದೇವೆ ಇದರ ಸಾಧಕ-ಬಾಧಕಗಳ ಬಗ್ಗೆ ಅಧ್ಯನ ನಡೆಸಿ ತೆನೆ ಕಟ್ಟದಿರುವ ಬತ್ತದ ಫಸಲಿನ ವರದಿಯನ್ನು ಕೇಂದ್ರ ವಿಶ್ವವಿದ್ಯಾಲಯಕ್ಕೆ ಒಂದೆರೆಡು ದಿನಗಳಲ್ಲಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. <br /> <br /> ಕೃಷಿ ವಿಜ್ಞಾನಿಗಳಾದ ಡಾ.ಮಸ್ತಾನ್ರೆಡ್ಡಿ, ಡಾ.ಗುರುಪ್ರಸಾದ್, ಡಾ.ಎಸ್.ಬಿ.ಗೌಡರ್, ಕರೂರು ಕೃಷಿ ಇಲಾಖೆ ಸಹಾಯಕ ಸುಬಾನ್ಸಾಬ್, ಮಾರುತಿ ಪ್ರಸಾದ್ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರುಗುಪ್ಪ: ಬತ್ತದ ಫಸಲು ತೆನೆ ಕಟ್ಟದೇ ಇರುವ ರೈತರ ಜಮೀನಿಗೆ ಮಂಗಳವಾರ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.<br /> <br /> ತಾಲ್ಲೂಕಿನ ದರೂರು ಗ್ರಾಮದಲ್ಲಿ ಬೇಸಿಗೆ ಹಂಗಾಮಿನಲ್ಲಿ ರೈತರು ನೀರಾವರಿ ಜಮೀನಿನಲ್ಲಿ ನಾಟಿ ಮಾಡಿದ ನಾಗಾರ್ಜುನ ಕಂಪನಿಯ ಕಾವೇರಿ ಸೋನ ಬತ್ತದ ತಳಿ ಅವಧಿ ಮೀರಿದರೂ ತೆನೆ ಕಟ್ಟಿದೇ ಇರುವ ವರದಿಯನ್ನು `ಪ್ರಜಾವಾಣಿ~ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.<br /> <br /> ಆ ಪ್ರದೇಶಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೇಸಾಯ, ಕೀಟ, ಬೀಜ ತಳಿ, ರೋಗ ತಜ್ಞರ ವಿಜ್ಞಾನಿಗಳ ತಂಡ ಖುದ್ದು ಭೇಟಿ ನೀಡಿ ಫಸಲು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು. <br /> <br /> ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ಸಿ.ಆರ್.ಚಂದ್ರಶೇಖರ್, ವಿಜ್ಞಾನಿಗಳ ತಂಡದ ಮಹಮ್ಮದ್ ಇಬ್ರಾಹಿಂ ಮಾತನಾಡಿ, ಬತ್ತದ ಮಾಹಿತಿಯನ್ನು ರೈತರಿಂದ ಪಡೆದಿದ್ದೇವೆ ಇದರ ಸಾಧಕ-ಬಾಧಕಗಳ ಬಗ್ಗೆ ಅಧ್ಯನ ನಡೆಸಿ ತೆನೆ ಕಟ್ಟದಿರುವ ಬತ್ತದ ಫಸಲಿನ ವರದಿಯನ್ನು ಕೇಂದ್ರ ವಿಶ್ವವಿದ್ಯಾಲಯಕ್ಕೆ ಒಂದೆರೆಡು ದಿನಗಳಲ್ಲಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. <br /> <br /> ಕೃಷಿ ವಿಜ್ಞಾನಿಗಳಾದ ಡಾ.ಮಸ್ತಾನ್ರೆಡ್ಡಿ, ಡಾ.ಗುರುಪ್ರಸಾದ್, ಡಾ.ಎಸ್.ಬಿ.ಗೌಡರ್, ಕರೂರು ಕೃಷಿ ಇಲಾಖೆ ಸಹಾಯಕ ಸುಬಾನ್ಸಾಬ್, ಮಾರುತಿ ಪ್ರಸಾದ್ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>