<p>ಡಾ. ಡಿ.ಟಿ. ಕೃಷ್ಣಮೂರ್ತಿ ವೃತ್ತಿಯಿಂದ ವೈದ್ಯರು. ಮೂಗು, ಗಂಟಲು, ಕಿವಿ ರೋಗತಜ್ಞರಂತೆ. ಜೋಗ, ಶಿವಮೊಗ್ಗ ಇಲ್ಲೆಲ್ಲ ಅವರ ಕಾರ್ಯಾಚರಣೆ. ಇಂಜೆಕ್ಷನ್, ಗುಳಿಗೆಗಳಾಚೆಗೂ ವೈದ್ಯರ ಜಗತ್ತು ದೊಡ್ಡದಾಗಿರುವಂತಿದೆ. ಆ ಜಗತ್ತಿನ ದರ್ಶನಕ್ಕೆ `ಕೊಳಲು~ (<a href="http://dtkmurthy.blogspot.in">http://dtkmurthy.blogspot.in</a>) ಬ್ಲಾಗಿಗೆ ಎಡತಾಕಬೇಕು. <br /> <br /> ತಮ್ಮ ಕೊಳಲನ್ನು `ಕನ್ನಡದ ಕೊರಳು~ ಎಂದು ಡಾ. ಮೂರ್ತಿ ಕರೆದುಕೊಂಡಿದ್ದಾರೆ. ಈ ಕೊರಳಿನಿಂದ ಏನೆಲ್ಲ ಪ್ರಕಟಗೊಂಡಿದೆ ಎಂದು ಹುಡುಕಾಡಿದರೆ ಬರಹಗಳ ಸುಗ್ಗಿಯ ಕಣವೇ ಎದುರಾಗುತ್ತದೆ. ಎಲ್ಲೋ ಓದಿದ ಬರಹದ ನೆನಪು, ಕೇಳಿದ ಸ್ವಾರಸ್ಯಕರ ಸಂಗತಿಗಳ ನಿರೂಪಣೆ, ಒಂದು ಹಾಸ್ಯದ ಪ್ರಸಂಗ, ಪುಸ್ತಕ-ಪತ್ರಿಕೆಯೊಂದರ ಬರಹದ ತುಣುಕು- <br /> <br /> ಹೀಗೆ, `ಕೊಳಲು~ ಬ್ಲಾಗು ಸಂಪದ್ಭರಿತ. ಕಾಲೇಜು ದಿನಗಳಲ್ಲಿ ಓದಿದ ಗೊರೂರರ ಕಥೆಯನ್ನು ನೆನಪಿನಿಂದಲೇ ಮರು ನಿರೂಪಿಸುವ ಡಾಕ್ಟ್ರು, `ನಿಮ್ಮ ಮನಸ್ಸು ಸುಂದರವಾಗಿದ್ದರೆ ಜಗತ್ತೂ ಸುಂದರ~ ಎಂದು ಹೇಳಬಲ್ಲರು. ಹೇಳಿಕೇಳಿ, ಅಧ್ಯಾತ್ಮ ಎಂದರೆ ಅವರಿಗೆ ಇಷ್ಟವಂತೆ. ಆ ಕಾರಣದಿಂದಲೇ ವ್ಯಕ್ತಿತ್ವವನ್ನು ಸುಂದರಗೊಳಿಸಿಕೊಳ್ಳುವ ಬಗ್ಗೆ ಅವರ ಬರಹಗಳು ತುಡಿಯುತ್ತವೆ.<br /> <br /> ಓದು, ಬರಹ, ಚಿತ್ರಕಲೆ, ಸಂಗೀತವೂ ಕೃಷ್ಣಮೂರ್ತಿ ಅವರಿಗೆ ಇಷ್ಟವಂತೆ. ಕನ್ನಡದಲ್ಲಿ ರಾಜಕುಮಾರರ ಸಿನಿಮಾ ಅಂದರೆ, ಹಿಂದಿಯಲ್ಲಿ ಶಮ್ಮಿ ಕಪೂರನ ಚಿತ್ರಗಳೆಂದರೆ ಮೈಯೆಲ್ಲಾ ಕಣ್ಣಾಗುತ್ತಾರಂತೆ. ಈ ಆಸಕ್ತಿಗಳೆಲ್ಲ ಅವರ ಬರಹಗಳಲ್ಲೂ ಮೂಡಿಬಂದಿವೆ, `ಕೊಳಲು~ ಬ್ಲಾಗನ್ನು ಚೆಲುವಾಗಿಸಿವೆ.<br /> <br /> ಕೃಷ್ಣಮೂರ್ತಿ ಡಾಕ್ಟ್ರಿಗೆ ಹಾಸ್ಯಪ್ರಜ್ಞೆ ಹರಿತವಾಗಿದೆ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ: ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ. ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ. `ಪರವಾಗಿಲ್ಲಾ ಬುಡಿ ಸಾ~ ಎಂದ. ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ. <br /> <br /> ಕಾರಣ ಕೇಳಿದರೆ `ಹಾಸನದಲ್ಲಿ ಮಳೆ ಆಗೈತೆ ಸಾ...!~ ಎಂದ. ನಾನು, `ಅರೆ... ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ~ ಎಂದೆ. ಅದಕ್ಕವನು `ಅಯ್ಯೋ... ನಿಮಗೆ ಎಂಗೆ ಎಳಾದು ಸಾ...! ಪೈಲ್ಸ್... ಆಗೈತೆ~ ಎಂದ. `ಆಸನದಲ್ಲಿ ಮೊಳೆ~ ಅನ್ನೋದು ಅವನ ಬಾಯಲ್ಲಿ `ಹಾಸನದಲ್ಲಿ ಮಳೆ~ ಆಗಿತ್ತು.<br /> `ಕೊಳಲು~ ಬರಹಗಳ ಕಣದಿಂದ ಮತ್ತೊಂದು ತುಣುಕು ಇಲ್ಲಿದೆ ನೋಡಿ:<br /> <br /> ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಪರಿಚಿತರೊಬ್ಬರು ಹೇಳಿದ್ದು. ಮೂಲಾ ನಕ್ಷತ್ರದ ಹುಡುಗಿಯೊಬ್ಬಳಿಗೆ ಮದುವೆ ಆಗುವುದು ಕಷ್ಟವಾಗಿತ್ತು. ಹುಡುಗಿಯ ಚಿಕ್ಕಪ್ಪ ಬುದ್ಧಿವಂತ, ಗಟ್ಟಿಗ ಮತ್ತು ಒಳ್ಳೆಯ ಮಾತುಗಾರ. ಹೇಗೋ ಮಾಡಿ ಒಂದು ಒಳ್ಳೆಯ ಸಂಬಂಧ ಕುದುರಿಸಿದರು. ಮದುವೆಯೂ ಆಗಿ ಹೋಯಿತು.<br /> <br /> ಸುಖ ಸಂಸಾರ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಹುಡುಗಿಯ ಅತ್ತೆ ಹೃದಯಾಘಾತದಿಂದ ತೀರಿ ಹೋದರು. `ಹುಡುಗಿಯ ಕಾಲ್ಗುಣ ಸರಿ ಇಲ್ಲ, ಅದಕ್ಕೇ ಹೀಗಾಯಿತು~ ಅಂತ ಹುಡುಗನ ಮನೆಯವರು ಕಿರಿ ಕಿರಿ ಶುರು ಮಾಡಿ, ಮದುವೆ ಮಾಡಿಸಿದ ಹುಡುಗಿಯ ಚಿಕ್ಕಪ್ಪನನ್ನು ಕರೆಸಿ ಕ್ಯಾತೆ ತೆಗೆದರು.</p>.<p>ಹುಡುಗಿಯ ಚಿಕ್ಕಪ್ಪ ಸ್ವಲ್ಪವೂ ವಿಚಲಿತನಾಗದೆ- `ಈಗೇನಾಯಿತು? ಒಳ್ಳೆಯದೇ ಆಗಿದೆಯಲ್ಲ! ಹುಡುಗಿಯ ಕಾಲ್ಗುಣದಿಂದ ಹುಡುಗಿಯ ಅತ್ತೆಗೆ ಮುತ್ತೈದೆ ಸಾವು ಬಂದಿದೆ! ಇದಕ್ಕಿಂತ ಪುಣ್ಯ ಬೇಕೇ?~ ಎಂದು ಬಾಂಬ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದರಂತೆ.<br /> <br /> ಅವರ ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಗೆ `ವಾಹ್~ ಎನಬೇಕು! ಆ ವ್ಯಕ್ತಿ ಈಗ ಇಲ್ಲ. ಆದರೆ ಅವರು ಬಾಳು ಹಸನಾಗಿಸಿದ ಆ ಹೆಣ್ಣು, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸುಖವಾಗಿದ್ದಾರೆ~. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಾ. ಡಿ.ಟಿ. ಕೃಷ್ಣಮೂರ್ತಿ ವೃತ್ತಿಯಿಂದ ವೈದ್ಯರು. ಮೂಗು, ಗಂಟಲು, ಕಿವಿ ರೋಗತಜ್ಞರಂತೆ. ಜೋಗ, ಶಿವಮೊಗ್ಗ ಇಲ್ಲೆಲ್ಲ ಅವರ ಕಾರ್ಯಾಚರಣೆ. ಇಂಜೆಕ್ಷನ್, ಗುಳಿಗೆಗಳಾಚೆಗೂ ವೈದ್ಯರ ಜಗತ್ತು ದೊಡ್ಡದಾಗಿರುವಂತಿದೆ. ಆ ಜಗತ್ತಿನ ದರ್ಶನಕ್ಕೆ `ಕೊಳಲು~ (<a href="http://dtkmurthy.blogspot.in">http://dtkmurthy.blogspot.in</a>) ಬ್ಲಾಗಿಗೆ ಎಡತಾಕಬೇಕು. <br /> <br /> ತಮ್ಮ ಕೊಳಲನ್ನು `ಕನ್ನಡದ ಕೊರಳು~ ಎಂದು ಡಾ. ಮೂರ್ತಿ ಕರೆದುಕೊಂಡಿದ್ದಾರೆ. ಈ ಕೊರಳಿನಿಂದ ಏನೆಲ್ಲ ಪ್ರಕಟಗೊಂಡಿದೆ ಎಂದು ಹುಡುಕಾಡಿದರೆ ಬರಹಗಳ ಸುಗ್ಗಿಯ ಕಣವೇ ಎದುರಾಗುತ್ತದೆ. ಎಲ್ಲೋ ಓದಿದ ಬರಹದ ನೆನಪು, ಕೇಳಿದ ಸ್ವಾರಸ್ಯಕರ ಸಂಗತಿಗಳ ನಿರೂಪಣೆ, ಒಂದು ಹಾಸ್ಯದ ಪ್ರಸಂಗ, ಪುಸ್ತಕ-ಪತ್ರಿಕೆಯೊಂದರ ಬರಹದ ತುಣುಕು- <br /> <br /> ಹೀಗೆ, `ಕೊಳಲು~ ಬ್ಲಾಗು ಸಂಪದ್ಭರಿತ. ಕಾಲೇಜು ದಿನಗಳಲ್ಲಿ ಓದಿದ ಗೊರೂರರ ಕಥೆಯನ್ನು ನೆನಪಿನಿಂದಲೇ ಮರು ನಿರೂಪಿಸುವ ಡಾಕ್ಟ್ರು, `ನಿಮ್ಮ ಮನಸ್ಸು ಸುಂದರವಾಗಿದ್ದರೆ ಜಗತ್ತೂ ಸುಂದರ~ ಎಂದು ಹೇಳಬಲ್ಲರು. ಹೇಳಿಕೇಳಿ, ಅಧ್ಯಾತ್ಮ ಎಂದರೆ ಅವರಿಗೆ ಇಷ್ಟವಂತೆ. ಆ ಕಾರಣದಿಂದಲೇ ವ್ಯಕ್ತಿತ್ವವನ್ನು ಸುಂದರಗೊಳಿಸಿಕೊಳ್ಳುವ ಬಗ್ಗೆ ಅವರ ಬರಹಗಳು ತುಡಿಯುತ್ತವೆ.<br /> <br /> ಓದು, ಬರಹ, ಚಿತ್ರಕಲೆ, ಸಂಗೀತವೂ ಕೃಷ್ಣಮೂರ್ತಿ ಅವರಿಗೆ ಇಷ್ಟವಂತೆ. ಕನ್ನಡದಲ್ಲಿ ರಾಜಕುಮಾರರ ಸಿನಿಮಾ ಅಂದರೆ, ಹಿಂದಿಯಲ್ಲಿ ಶಮ್ಮಿ ಕಪೂರನ ಚಿತ್ರಗಳೆಂದರೆ ಮೈಯೆಲ್ಲಾ ಕಣ್ಣಾಗುತ್ತಾರಂತೆ. ಈ ಆಸಕ್ತಿಗಳೆಲ್ಲ ಅವರ ಬರಹಗಳಲ್ಲೂ ಮೂಡಿಬಂದಿವೆ, `ಕೊಳಲು~ ಬ್ಲಾಗನ್ನು ಚೆಲುವಾಗಿಸಿವೆ.<br /> <br /> ಕೃಷ್ಣಮೂರ್ತಿ ಡಾಕ್ಟ್ರಿಗೆ ಹಾಸ್ಯಪ್ರಜ್ಞೆ ಹರಿತವಾಗಿದೆ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ: ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ. ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ. `ಪರವಾಗಿಲ್ಲಾ ಬುಡಿ ಸಾ~ ಎಂದ. ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ. <br /> <br /> ಕಾರಣ ಕೇಳಿದರೆ `ಹಾಸನದಲ್ಲಿ ಮಳೆ ಆಗೈತೆ ಸಾ...!~ ಎಂದ. ನಾನು, `ಅರೆ... ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ~ ಎಂದೆ. ಅದಕ್ಕವನು `ಅಯ್ಯೋ... ನಿಮಗೆ ಎಂಗೆ ಎಳಾದು ಸಾ...! ಪೈಲ್ಸ್... ಆಗೈತೆ~ ಎಂದ. `ಆಸನದಲ್ಲಿ ಮೊಳೆ~ ಅನ್ನೋದು ಅವನ ಬಾಯಲ್ಲಿ `ಹಾಸನದಲ್ಲಿ ಮಳೆ~ ಆಗಿತ್ತು.<br /> `ಕೊಳಲು~ ಬರಹಗಳ ಕಣದಿಂದ ಮತ್ತೊಂದು ತುಣುಕು ಇಲ್ಲಿದೆ ನೋಡಿ:<br /> <br /> ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಪರಿಚಿತರೊಬ್ಬರು ಹೇಳಿದ್ದು. ಮೂಲಾ ನಕ್ಷತ್ರದ ಹುಡುಗಿಯೊಬ್ಬಳಿಗೆ ಮದುವೆ ಆಗುವುದು ಕಷ್ಟವಾಗಿತ್ತು. ಹುಡುಗಿಯ ಚಿಕ್ಕಪ್ಪ ಬುದ್ಧಿವಂತ, ಗಟ್ಟಿಗ ಮತ್ತು ಒಳ್ಳೆಯ ಮಾತುಗಾರ. ಹೇಗೋ ಮಾಡಿ ಒಂದು ಒಳ್ಳೆಯ ಸಂಬಂಧ ಕುದುರಿಸಿದರು. ಮದುವೆಯೂ ಆಗಿ ಹೋಯಿತು.<br /> <br /> ಸುಖ ಸಂಸಾರ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಹುಡುಗಿಯ ಅತ್ತೆ ಹೃದಯಾಘಾತದಿಂದ ತೀರಿ ಹೋದರು. `ಹುಡುಗಿಯ ಕಾಲ್ಗುಣ ಸರಿ ಇಲ್ಲ, ಅದಕ್ಕೇ ಹೀಗಾಯಿತು~ ಅಂತ ಹುಡುಗನ ಮನೆಯವರು ಕಿರಿ ಕಿರಿ ಶುರು ಮಾಡಿ, ಮದುವೆ ಮಾಡಿಸಿದ ಹುಡುಗಿಯ ಚಿಕ್ಕಪ್ಪನನ್ನು ಕರೆಸಿ ಕ್ಯಾತೆ ತೆಗೆದರು.</p>.<p>ಹುಡುಗಿಯ ಚಿಕ್ಕಪ್ಪ ಸ್ವಲ್ಪವೂ ವಿಚಲಿತನಾಗದೆ- `ಈಗೇನಾಯಿತು? ಒಳ್ಳೆಯದೇ ಆಗಿದೆಯಲ್ಲ! ಹುಡುಗಿಯ ಕಾಲ್ಗುಣದಿಂದ ಹುಡುಗಿಯ ಅತ್ತೆಗೆ ಮುತ್ತೈದೆ ಸಾವು ಬಂದಿದೆ! ಇದಕ್ಕಿಂತ ಪುಣ್ಯ ಬೇಕೇ?~ ಎಂದು ಬಾಂಬ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದರಂತೆ.<br /> <br /> ಅವರ ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಗೆ `ವಾಹ್~ ಎನಬೇಕು! ಆ ವ್ಯಕ್ತಿ ಈಗ ಇಲ್ಲ. ಆದರೆ ಅವರು ಬಾಳು ಹಸನಾಗಿಸಿದ ಆ ಹೆಣ್ಣು, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸುಖವಾಗಿದ್ದಾರೆ~. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>