<p><strong>ಬೀದರ್: </strong>ನಗರ ಹೊರವಲಯದಲ್ಲಿ ವಾಯುಪಡೆ ಕೇಂದ್ರದ ಹಿಂಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೃಷ್ಣ ಮೃಗಗಳನ್ನು ಕಬ್ಬಿಣದ ಬಲೆ ಹಾಕಿ ಹಿಡಿಯುತ್ತಿರುವ ಬೆಳವಣಿಗೆ ಬೆಳಕಿಗೆ ಬಂದಿದ್ದು, ಹೀಗೆ ಇಡಲಾಗಿದ್ದ ಬಲೆಗೆ ಸಿಕ್ಕಿಕೊಂಡ ಕೃಷ್ಣಮೃಗದ ಕಾಲು ಕತ್ತರಿಸಿಹೋಗಿರುವ ಘಟನೆ ನಡೆದಿದೆ.<br /> <br /> ಕೃಷ್ಣಮೃಗದ ಹಿಂಭಾಗದ ಎಡಕಾಲು ಕೆಳಭಾಗದಲ್ಲಿ ಬಹುತೇಕ ಕತ್ತರಿಸಿಹೋಗಿದ್ದು, ಬಲಕಾಲಿಗೂ ಭಾಗಶಃ ಪೆಟ್ಟಾಗಿದೆ. ಬೆಳಿಗ್ಗೆ ಆ ಭಾಗದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೆರಳಿದ್ದ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯ ಸಿಬ್ಬಂದಿ ತೆರಳಿದಾಗ ಈ ಬೆಳವಣಿಗೆ ಕಂಡುಬಂದಿದೆ.<br /> <br /> ಬಲೆಗೆ ಸಿಕ್ಕಿಕೊಂಡು ನೋವಿನಿಂದ ನರಳುತ್ತಿದ್ದ ಕೃಷ್ಣಮೃಗವನ್ನು ಸಿಬ್ಬಂದಿಯೇ ಪಾರು ಮಾಡಿದ್ದಾರೆ. ತಕ್ಷಣವೇ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ್ದ ಡಿಆರ್ಎಫ್ಒ ಉಮಾಕಾಂತ್ ಅವರು, ಕೃಷ್ಣಮೃಗವನ್ನು ವಶಕ್ಕೆ ತೆಗೆದುಕೊಂಡಿದ್ದು, ಚಿಕಿತ್ಸೆಯನ್ನು ಕೊಡಿಸಲು ಒಯ್ದುರು.<br /> <strong><br /> ದುಷ್ಕರ್ಮಿಗಳ ಕೃತ್ಯ: </strong>ವಾಯುಪಡೆ ಕೇಂದ್ರದ ಹಿಂಭಾಗದ ಬಯಲಿನಲ್ಲಿ, ಬೆಳ್ಳೂರಿಗೆ ಸಮೀಪದಲ್ಲಿ ಸಾಮಾನ್ಯವಾಗಿ ಬೆಳಗಿನ ಹೊತ್ತು ಸಾಕಷ್ಟು ಕೃಷ್ಣಮೃಗ, ಜಿಂಕೆಗಳು ಕಂಡು ಬರುತ್ತವೆ. ಬಹುಶಃ ಇವುಗಳನ್ನು ಹಿಡಿಯಲು ಕೆಲ ದುಷ್ಕರ್ಮಿಗಳು ಕಾರ್ಯತತ್ಪರವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.<br /> <br /> `ಕೃಷ್ಣಮೃಗ ಹಿಡಿಯಲು ಕಬ್ಬಿಣದ ಬಲೆ ಹಾಕಿರುವ ಘಟನೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಇದೇ ಮೊದಲಿಗೆ ಗಮನಕ್ಕೆ ಬಂದಿದೆ. ಕಬ್ಬಿಣದ ಬಲೆಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಇಂಥ ಪ್ರಕರಣಗಳು ಘಟಿಸದಂತೆ ಗಮನಿಸಲಾಗುವುದು~ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.<br /> <strong><br /> ಶಸ್ತ್ರಚಿಕಿತ್ಸೆ: </strong>ಕೃಷ್ಣಮೃಗಕ್ಕೆ ಬಳಿಕ ಶಸ್ತ್ರಚಿಕಿತ್ಸೆ ನೆರವೇರಿಸಿ, ಕಾಲಿಗೆ ರಾಡ್ ಅಳವಡಿಸಿದ್ದು, ಗುಣಮುಖ ಆಗುವವರೆಗೆ ದೇವ ದೇವವನದ ಭಾಗದಲ್ಲಿ ಬಿಡಲಾಗುವುದು ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ನಗರ ಹೊರವಲಯದಲ್ಲಿ ವಾಯುಪಡೆ ಕೇಂದ್ರದ ಹಿಂಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೃಷ್ಣ ಮೃಗಗಳನ್ನು ಕಬ್ಬಿಣದ ಬಲೆ ಹಾಕಿ ಹಿಡಿಯುತ್ತಿರುವ ಬೆಳವಣಿಗೆ ಬೆಳಕಿಗೆ ಬಂದಿದ್ದು, ಹೀಗೆ ಇಡಲಾಗಿದ್ದ ಬಲೆಗೆ ಸಿಕ್ಕಿಕೊಂಡ ಕೃಷ್ಣಮೃಗದ ಕಾಲು ಕತ್ತರಿಸಿಹೋಗಿರುವ ಘಟನೆ ನಡೆದಿದೆ.<br /> <br /> ಕೃಷ್ಣಮೃಗದ ಹಿಂಭಾಗದ ಎಡಕಾಲು ಕೆಳಭಾಗದಲ್ಲಿ ಬಹುತೇಕ ಕತ್ತರಿಸಿಹೋಗಿದ್ದು, ಬಲಕಾಲಿಗೂ ಭಾಗಶಃ ಪೆಟ್ಟಾಗಿದೆ. ಬೆಳಿಗ್ಗೆ ಆ ಭಾಗದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೆರಳಿದ್ದ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯ ಸಿಬ್ಬಂದಿ ತೆರಳಿದಾಗ ಈ ಬೆಳವಣಿಗೆ ಕಂಡುಬಂದಿದೆ.<br /> <br /> ಬಲೆಗೆ ಸಿಕ್ಕಿಕೊಂಡು ನೋವಿನಿಂದ ನರಳುತ್ತಿದ್ದ ಕೃಷ್ಣಮೃಗವನ್ನು ಸಿಬ್ಬಂದಿಯೇ ಪಾರು ಮಾಡಿದ್ದಾರೆ. ತಕ್ಷಣವೇ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ್ದ ಡಿಆರ್ಎಫ್ಒ ಉಮಾಕಾಂತ್ ಅವರು, ಕೃಷ್ಣಮೃಗವನ್ನು ವಶಕ್ಕೆ ತೆಗೆದುಕೊಂಡಿದ್ದು, ಚಿಕಿತ್ಸೆಯನ್ನು ಕೊಡಿಸಲು ಒಯ್ದುರು.<br /> <strong><br /> ದುಷ್ಕರ್ಮಿಗಳ ಕೃತ್ಯ: </strong>ವಾಯುಪಡೆ ಕೇಂದ್ರದ ಹಿಂಭಾಗದ ಬಯಲಿನಲ್ಲಿ, ಬೆಳ್ಳೂರಿಗೆ ಸಮೀಪದಲ್ಲಿ ಸಾಮಾನ್ಯವಾಗಿ ಬೆಳಗಿನ ಹೊತ್ತು ಸಾಕಷ್ಟು ಕೃಷ್ಣಮೃಗ, ಜಿಂಕೆಗಳು ಕಂಡು ಬರುತ್ತವೆ. ಬಹುಶಃ ಇವುಗಳನ್ನು ಹಿಡಿಯಲು ಕೆಲ ದುಷ್ಕರ್ಮಿಗಳು ಕಾರ್ಯತತ್ಪರವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.<br /> <br /> `ಕೃಷ್ಣಮೃಗ ಹಿಡಿಯಲು ಕಬ್ಬಿಣದ ಬಲೆ ಹಾಕಿರುವ ಘಟನೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಇದೇ ಮೊದಲಿಗೆ ಗಮನಕ್ಕೆ ಬಂದಿದೆ. ಕಬ್ಬಿಣದ ಬಲೆಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಇಂಥ ಪ್ರಕರಣಗಳು ಘಟಿಸದಂತೆ ಗಮನಿಸಲಾಗುವುದು~ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.<br /> <strong><br /> ಶಸ್ತ್ರಚಿಕಿತ್ಸೆ: </strong>ಕೃಷ್ಣಮೃಗಕ್ಕೆ ಬಳಿಕ ಶಸ್ತ್ರಚಿಕಿತ್ಸೆ ನೆರವೇರಿಸಿ, ಕಾಲಿಗೆ ರಾಡ್ ಅಳವಡಿಸಿದ್ದು, ಗುಣಮುಖ ಆಗುವವರೆಗೆ ದೇವ ದೇವವನದ ಭಾಗದಲ್ಲಿ ಬಿಡಲಾಗುವುದು ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>