ಕೃಷ್ಣಮೃಗ ಬೇಟೆ: 6 ಮಂದಿ ಬಂಧನ
ಧರ್ಮಪುರ (ಚಿತ್ರದುರ್ಗ ಜಿಲ್ಲೆ): ಸಮೀಪದ ಹೊಸಕೆರೆ ಗ್ರಾಮದ ಬಳಿ ಶನಿವಾರ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ.
ಬೆಂಗಳೂರಿನ ರಪೀಕ್ ಮಹಮ್ಮದ್, ಬೇಗ್, ಅಬ್ಬಾಸ್ ಹೈದರ್ ಹಾಗೂ ಶಿರಾದ ಹುಸೇನ್ ಆಲಿ, ಚಂದ್ರಶೇಖರ್ ಮತ್ತು ನಾಗರಾಜ್ ಬಂಧಿತರು. ಇವರಲ್ಲಿ ಬೇಗ್ ಎಂಜಿನಿಯರ್ ಪದವೀಧರ. ಅವರು ಲೈಸನ್ಸ್ ಪಡೆದಿರುವ ಎರಡು ರೈಫಲ್ಗಳನ್ನು ಹೊಂದಿದ್ದು, ಮಾಂಸಕ್ಕಾಗಿ ಕೃಷ್ಣಮೃಗ ಬೇಟೆಗೆ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳಿಂದ ಒಟ್ಟು 26 ಗುಂಡುಗಳು, 2 ರೈಫಲ್, 1 ಕ್ಯಾಮೆರಾ, ಒಂದು ಬೈನಾಕ್ಯುಲರ್ ಹಾಗೂ ಟಾಟಾ ಸುಮೊ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.