<p><strong>ಕೆಂಭಾವಿ:</strong> ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಬುಧವಾರ ಮಂಗವೊಂದು ಮೃತಪಟ್ಟಿದ್ದು, ಬಡಾವಣೆಯ ಜನ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ನಡೆಸಿದರು. <br /> <br /> ಕಳೆದ ಹಲವು ವರ್ಷಗಳಿಂದ ಬಡಾವಣೆಯಲ್ಲಿಯೇ ವಾಸವಾಗಿದ್ದ ಈ ಮಂಗ, ದಿನವಿಡೀ ಎಲ್ಲಿ ಸುತ್ತಿದರೂ ರಾತ್ರಿಯಾಗುತ್ತಿದಂತೆಯೇ ಬಡಾವಣೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂದು ಕುಮಾರ ಹೇಳುತ್ತಾರೆ. <br /> <br /> ಈವರೆಗೂ ಯಾರೊಬ್ಬರಿಗೂ ಕಾಟ ನೀಡದ ಈ ಮಂಗ ಬಡಾವಣೆಯ ಜನರ ಗೆಳೆಯನಾಗಿತ್ತು. ಕೆಲ ದಿನಗಳ ಹಿಂದೆ ನಾಯಿಯೊಂದು ಕಚ್ಚಿದ್ದರಿಂದ ಈ ಮಂಗ ಅನಾರೋಗ್ಯದಿಂದ ಬಳಲುತ್ತಿತ್ತು. ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದೆ ಎಂದು ಬಡಾವಣೆಯ ಜನ ಹೇಳುತ್ತಾರೆ. <br /> <br /> ಮೃತಪಟ್ಟ ಮಂಗ ಹನುಮಾನ ದೇವರ ಸ್ವರೂಪ ಎಂದು ತಿಳಿದ ಜನ ಅದ್ದೂರಿ ಮೆರವಣಿಗೆ ಮಾಡಿದರು. ಟಂಟಂ ಮೇಲೆ ಕೂರಿಸಿ ಬಡಾವಣೆಯ ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. <br /> ಮಂಗ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಿದ ಯುವಕರು, ಅದೇ ಸ್ಥಳದಲ್ಲಿ ಆಂಜನೇಯ ದೇವಸ್ಥಾನ ನಿರ್ಮಿಸುವುದಾಗಿ ಹೇಳಿದರು.<br /> <br /> ನಿಂಗಪ್ಪ ಕುಂಬಾರ, ಗುರು ಕುಂಬಾರ, ತಿಪ್ಪಣ್ಣ ಕುಂಬಾರ, ಭೋಗಪ್ಪ ಗುಬ್ಯಾಡ, ಸಂಗಯ್ಯ ಮುತ್ಯಾ, ಮಲ್ಲಯ್ಯ ಸ್ವಾಮಿ, ಶಿವು ತುಂಬಗಿ, ಸಂಜೀವರೆಡ್ಡಿ, ಭೀಮನಗೌಡ ಕಾಚಾಪುರ ಶ್ರೀಶೈಲ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಬುಧವಾರ ಮಂಗವೊಂದು ಮೃತಪಟ್ಟಿದ್ದು, ಬಡಾವಣೆಯ ಜನ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ನಡೆಸಿದರು. <br /> <br /> ಕಳೆದ ಹಲವು ವರ್ಷಗಳಿಂದ ಬಡಾವಣೆಯಲ್ಲಿಯೇ ವಾಸವಾಗಿದ್ದ ಈ ಮಂಗ, ದಿನವಿಡೀ ಎಲ್ಲಿ ಸುತ್ತಿದರೂ ರಾತ್ರಿಯಾಗುತ್ತಿದಂತೆಯೇ ಬಡಾವಣೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂದು ಕುಮಾರ ಹೇಳುತ್ತಾರೆ. <br /> <br /> ಈವರೆಗೂ ಯಾರೊಬ್ಬರಿಗೂ ಕಾಟ ನೀಡದ ಈ ಮಂಗ ಬಡಾವಣೆಯ ಜನರ ಗೆಳೆಯನಾಗಿತ್ತು. ಕೆಲ ದಿನಗಳ ಹಿಂದೆ ನಾಯಿಯೊಂದು ಕಚ್ಚಿದ್ದರಿಂದ ಈ ಮಂಗ ಅನಾರೋಗ್ಯದಿಂದ ಬಳಲುತ್ತಿತ್ತು. ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದೆ ಎಂದು ಬಡಾವಣೆಯ ಜನ ಹೇಳುತ್ತಾರೆ. <br /> <br /> ಮೃತಪಟ್ಟ ಮಂಗ ಹನುಮಾನ ದೇವರ ಸ್ವರೂಪ ಎಂದು ತಿಳಿದ ಜನ ಅದ್ದೂರಿ ಮೆರವಣಿಗೆ ಮಾಡಿದರು. ಟಂಟಂ ಮೇಲೆ ಕೂರಿಸಿ ಬಡಾವಣೆಯ ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. <br /> ಮಂಗ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಿದ ಯುವಕರು, ಅದೇ ಸ್ಥಳದಲ್ಲಿ ಆಂಜನೇಯ ದೇವಸ್ಥಾನ ನಿರ್ಮಿಸುವುದಾಗಿ ಹೇಳಿದರು.<br /> <br /> ನಿಂಗಪ್ಪ ಕುಂಬಾರ, ಗುರು ಕುಂಬಾರ, ತಿಪ್ಪಣ್ಣ ಕುಂಬಾರ, ಭೋಗಪ್ಪ ಗುಬ್ಯಾಡ, ಸಂಗಯ್ಯ ಮುತ್ಯಾ, ಮಲ್ಲಯ್ಯ ಸ್ವಾಮಿ, ಶಿವು ತುಂಬಗಿ, ಸಂಜೀವರೆಡ್ಡಿ, ಭೀಮನಗೌಡ ಕಾಚಾಪುರ ಶ್ರೀಶೈಲ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>