<p><strong>ಬೆಂಗಳೂರು: </strong>ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಮಿಸಿರುವ ಅಂತರರಾಷ್ಟ್ರೀಯ ದರ್ಜೆಯ ಸೌಲಭ್ಯ ಹೊಂದಿರುವ `ರಾಯಲ್ ಚಾಲೆಂಜರ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ~ ಸೋಮವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. <br /> <br /> ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಈ ಅಕಾಡೆಮಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಹೈಟೆಕ್ ತಂತ್ರಜ್ಞಾನ ಬಳಸಿ ಕೋಚಿಂಗ್ ನೀಡಲು ಸಂಸ್ಥೆ ಮುಂದಾಗಿರುವ `ಕಾಗ್ನಿಟೀವ್ ವಿಡಿಯೊ ಬೇಸ್ಡ್ ಕೋಚಿಂಗ್~ (ಸಿವಿಬಿಸಿ) ತಂತ್ರಜ್ಞಾನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಬಳಿಕ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸಿಎಂ ಬ್ಯಾಟಿಂಗ್ ಕೂಡ ಮಾಡಿದರು. ಎರಡು ಎಸೆತ ಎದುರಿಸಿದ ಅವರಿಗೆ ರೋಜರ್ ಬಿನ್ನಿ ಬೌಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬ್ಯಾಟಿಂಗ್ ಬಗ್ಗೆ ಕೆಲವೊಂದು ಸಲಹೆ ನೀಡಿದರು.<br /> <br /> ನೂತನ ಅಕಾಡೆಮಿಗೆ ಶುಭ ಕೋರಿದ ಸದಾನಂದ ಗೌಡ, `ಅಕಾಡೆಮಿಗೆ ಯಾವುದೇ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಭಾರತ ತಂಡದಲ್ಲಿ ಕರ್ನಾಟಕದ ಹೆಚ್ಚಿನಆಟಗಾರರು ಆಡಲಿ~ ಎಂದರು. <br /> <br /> ಈ ಅಕಾಡೆಮಿಯಲ್ಲಿ 14ರಿಂದ 19 ವರ್ಷ ವಯಸ್ಸಿನೊಳಗಿನ 420 ಆಟಗಾರರಿಗೆ ತರಬೇತಿ ನೀಡಲಾಗುತ್ತದೆ. `ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು, ತುಮಕೂರು ಹಾಗೂ ಹುಬ್ಬಳ್ಳಿಗೂ ಅಕಾಡೆಮಿಯನ್ನು ವಿಸ್ತರಿಸಲಾಗುವುದು~ ಎಂದು ಶ್ರೀನಾಥ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಮಿಸಿರುವ ಅಂತರರಾಷ್ಟ್ರೀಯ ದರ್ಜೆಯ ಸೌಲಭ್ಯ ಹೊಂದಿರುವ `ರಾಯಲ್ ಚಾಲೆಂಜರ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ~ ಸೋಮವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. <br /> <br /> ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಈ ಅಕಾಡೆಮಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಹೈಟೆಕ್ ತಂತ್ರಜ್ಞಾನ ಬಳಸಿ ಕೋಚಿಂಗ್ ನೀಡಲು ಸಂಸ್ಥೆ ಮುಂದಾಗಿರುವ `ಕಾಗ್ನಿಟೀವ್ ವಿಡಿಯೊ ಬೇಸ್ಡ್ ಕೋಚಿಂಗ್~ (ಸಿವಿಬಿಸಿ) ತಂತ್ರಜ್ಞಾನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಬಳಿಕ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸಿಎಂ ಬ್ಯಾಟಿಂಗ್ ಕೂಡ ಮಾಡಿದರು. ಎರಡು ಎಸೆತ ಎದುರಿಸಿದ ಅವರಿಗೆ ರೋಜರ್ ಬಿನ್ನಿ ಬೌಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬ್ಯಾಟಿಂಗ್ ಬಗ್ಗೆ ಕೆಲವೊಂದು ಸಲಹೆ ನೀಡಿದರು.<br /> <br /> ನೂತನ ಅಕಾಡೆಮಿಗೆ ಶುಭ ಕೋರಿದ ಸದಾನಂದ ಗೌಡ, `ಅಕಾಡೆಮಿಗೆ ಯಾವುದೇ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಭಾರತ ತಂಡದಲ್ಲಿ ಕರ್ನಾಟಕದ ಹೆಚ್ಚಿನಆಟಗಾರರು ಆಡಲಿ~ ಎಂದರು. <br /> <br /> ಈ ಅಕಾಡೆಮಿಯಲ್ಲಿ 14ರಿಂದ 19 ವರ್ಷ ವಯಸ್ಸಿನೊಳಗಿನ 420 ಆಟಗಾರರಿಗೆ ತರಬೇತಿ ನೀಡಲಾಗುತ್ತದೆ. `ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು, ತುಮಕೂರು ಹಾಗೂ ಹುಬ್ಬಳ್ಳಿಗೂ ಅಕಾಡೆಮಿಯನ್ನು ವಿಸ್ತರಿಸಲಾಗುವುದು~ ಎಂದು ಶ್ರೀನಾಥ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>