<p>ಮಂಡ್ಯ: ವಿಚಾರಣಾಧೀನ ಕೈದಿಗಳಿಂದಲೇ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ಇಲ್ಲಿನ ಜಿಲ್ಲಾ ಕೇಂದ್ರ ಉಪ ಕಾರಾಗೃಹದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.<br /> <br /> ಖಾರಾ, ಬೆಣ್ಣೆ, ಕೊಬ್ಬರಿ ಬಿಸ್ಕತ್ತು, ಬ್ರೆಡ್, ಬನ್, ತರಕಾರಿ ಮತ್ತು ಮೊಟ್ಟೆ ಪಫ್, ದಿಲ್ಪಸಂದ್, ಕ್ರೀಮ್ ಬನ್, ಕೇಕ್ ಸೇರಿದಂತೆ ಸುಮಾರು 15 ಬಗೆಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.<br /> <br /> ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಪಳಗಿರುವ ಮೈಸೂರಿನ ಕಾರಾಗೃಹ ದಲ್ಲಿನ ಮೂರು ಮಂದಿ ಸಜಾ ಬಂಧಿಗಳು, ಮಂಡ್ಯದ ಕಾರಾಗೃಹ ದಲ್ಲಿರುವ ಆಸಕ್ತ ಐದು ಮಂದಿ ವಿಚಾರಣಾಧೀನ ಕೈದಿಗಳಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ.<br /> <br /> ಬೇಕರಿ ಉತ್ಪನ್ನ ತಯಾರಿಕೆಗೆ ಬೇಕಾಗುವ ಎಲೆಕ್ಟ್ರಿಕಲ್ ಮೆಷಿನ್ಗಾಗಿ ಸುಮಾರು ₨ 1 ಲಕ್ಷ ಮತ್ತು ಕೊಠಡಿ ನವೀಕರಣಕ್ಕಾಗಿ ಸುಮಾರು ₨ 1 ಲಕ್ಷ ವ್ಯಯ ಮಾಡಲಾಗಿದೆ.<br /> <br /> ‘ಉತ್ಪನ್ನಗಳ ತಯಾರಿಕೆಗೆ ಮುನ್ನ ಹದ ಮಾಡಿಕೊಳ್ಳುವುದು, ಉತ್ಪನ್ನದ ಅಗತ್ಯಕ್ಕೆ ತಕ್ಕಂತೆ ಉಷ್ಣಾಂಶವನ್ನು ಯಂತ್ರದಲ್ಲಿ ಹೊಂದಾಣಿಕೆ ಮಾಡುವುದು ಸೇರಿದಂತೆ ಇತರೆ ಕೆಲಸವನ್ನು ಹೇಳಿಕೊಡಲಾಗುತ್ತಿದೆ. ಆಸಕ್ತಿಯಿಂದ ಅವರೂ ಕಲಿಯುತ್ತಿದ್ದಾರೆ’ ಎಂದು ತರಬೇತಿ ನೀಡುತ್ತಿರುವ ಸಜಾ ಬಂಧಿ ಪ್ರತಿಕ್ರಿಯಿಸಿದರು.<br /> <br /> ಕಾರಾಗೃಹದ ಅಧೀಕ್ಷಕ ಎಂ. ಸುಂದರ್ ಮಾತನಾಡಿ, ‘ಇಲ್ಲಿ ತಯಾರಿಸುವ ಎಲ್ಲ ಉತ್ಪನ್ನಗಳನ್ನು ‘ಪರಿವರ್ತನ’ ಹೆಸರಿನಲ್ಲಿ ತಯಾರಿಸ ಲಾಗುತ್ತಿದೆ. ವಿಚಾರಾಣಾಧೀನ ಕೈದಿಗಳು ಕಾರಾಗೃಹದಿಂದ ‘ಪರಿವರ್ತನೆ’ಗೊಂಡು ಹೊರಹೋದ ಬಳಿಕ, ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ಉತ್ಪನ್ನಗಳಿಗೆ ಈ ಹೆಸರನ್ನಿ ಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.<br /> <br /> ‘ಶುಚಿ, ರುಚಿ ಮತ್ತು ಉತ್ತಮ ಗುಣಮಟ್ಟವನ್ನು ನಾವು ತಯಾರಿಸುವ ಉತ್ಪನ್ನಗಳಲ್ಲಿ ಕಾಯ್ದುಕೊಳ್ಳುತ್ತೇವೆ. ಕಾರಾಗೃಹದ ಆವರಣದಲ್ಲಿಯೇ ಅಂಗಡಿ ಮಳಿಗೆ ತೆರೆಯುವ ಆಲೋಚನೆಯೂ ಇದೆ. ಆದಾಯ ಮುಖ್ಯವಲ್ಲ. ತರಬೇತಿ ಪಡೆದು ಹೊರಹೋಗುವವರು ಸ್ವಉದ್ಯೋಗ ಮಾಡಬೇಕು ಎನ್ನುವುದು ಇದರ ಉದ್ದೇಶ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ವಿಚಾರಣಾಧೀನ ಕೈದಿಗಳಿಂದಲೇ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ಇಲ್ಲಿನ ಜಿಲ್ಲಾ ಕೇಂದ್ರ ಉಪ ಕಾರಾಗೃಹದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.<br /> <br /> ಖಾರಾ, ಬೆಣ್ಣೆ, ಕೊಬ್ಬರಿ ಬಿಸ್ಕತ್ತು, ಬ್ರೆಡ್, ಬನ್, ತರಕಾರಿ ಮತ್ತು ಮೊಟ್ಟೆ ಪಫ್, ದಿಲ್ಪಸಂದ್, ಕ್ರೀಮ್ ಬನ್, ಕೇಕ್ ಸೇರಿದಂತೆ ಸುಮಾರು 15 ಬಗೆಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.<br /> <br /> ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಪಳಗಿರುವ ಮೈಸೂರಿನ ಕಾರಾಗೃಹ ದಲ್ಲಿನ ಮೂರು ಮಂದಿ ಸಜಾ ಬಂಧಿಗಳು, ಮಂಡ್ಯದ ಕಾರಾಗೃಹ ದಲ್ಲಿರುವ ಆಸಕ್ತ ಐದು ಮಂದಿ ವಿಚಾರಣಾಧೀನ ಕೈದಿಗಳಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ.<br /> <br /> ಬೇಕರಿ ಉತ್ಪನ್ನ ತಯಾರಿಕೆಗೆ ಬೇಕಾಗುವ ಎಲೆಕ್ಟ್ರಿಕಲ್ ಮೆಷಿನ್ಗಾಗಿ ಸುಮಾರು ₨ 1 ಲಕ್ಷ ಮತ್ತು ಕೊಠಡಿ ನವೀಕರಣಕ್ಕಾಗಿ ಸುಮಾರು ₨ 1 ಲಕ್ಷ ವ್ಯಯ ಮಾಡಲಾಗಿದೆ.<br /> <br /> ‘ಉತ್ಪನ್ನಗಳ ತಯಾರಿಕೆಗೆ ಮುನ್ನ ಹದ ಮಾಡಿಕೊಳ್ಳುವುದು, ಉತ್ಪನ್ನದ ಅಗತ್ಯಕ್ಕೆ ತಕ್ಕಂತೆ ಉಷ್ಣಾಂಶವನ್ನು ಯಂತ್ರದಲ್ಲಿ ಹೊಂದಾಣಿಕೆ ಮಾಡುವುದು ಸೇರಿದಂತೆ ಇತರೆ ಕೆಲಸವನ್ನು ಹೇಳಿಕೊಡಲಾಗುತ್ತಿದೆ. ಆಸಕ್ತಿಯಿಂದ ಅವರೂ ಕಲಿಯುತ್ತಿದ್ದಾರೆ’ ಎಂದು ತರಬೇತಿ ನೀಡುತ್ತಿರುವ ಸಜಾ ಬಂಧಿ ಪ್ರತಿಕ್ರಿಯಿಸಿದರು.<br /> <br /> ಕಾರಾಗೃಹದ ಅಧೀಕ್ಷಕ ಎಂ. ಸುಂದರ್ ಮಾತನಾಡಿ, ‘ಇಲ್ಲಿ ತಯಾರಿಸುವ ಎಲ್ಲ ಉತ್ಪನ್ನಗಳನ್ನು ‘ಪರಿವರ್ತನ’ ಹೆಸರಿನಲ್ಲಿ ತಯಾರಿಸ ಲಾಗುತ್ತಿದೆ. ವಿಚಾರಾಣಾಧೀನ ಕೈದಿಗಳು ಕಾರಾಗೃಹದಿಂದ ‘ಪರಿವರ್ತನೆ’ಗೊಂಡು ಹೊರಹೋದ ಬಳಿಕ, ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ಉತ್ಪನ್ನಗಳಿಗೆ ಈ ಹೆಸರನ್ನಿ ಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.<br /> <br /> ‘ಶುಚಿ, ರುಚಿ ಮತ್ತು ಉತ್ತಮ ಗುಣಮಟ್ಟವನ್ನು ನಾವು ತಯಾರಿಸುವ ಉತ್ಪನ್ನಗಳಲ್ಲಿ ಕಾಯ್ದುಕೊಳ್ಳುತ್ತೇವೆ. ಕಾರಾಗೃಹದ ಆವರಣದಲ್ಲಿಯೇ ಅಂಗಡಿ ಮಳಿಗೆ ತೆರೆಯುವ ಆಲೋಚನೆಯೂ ಇದೆ. ಆದಾಯ ಮುಖ್ಯವಲ್ಲ. ತರಬೇತಿ ಪಡೆದು ಹೊರಹೋಗುವವರು ಸ್ವಉದ್ಯೋಗ ಮಾಡಬೇಕು ಎನ್ನುವುದು ಇದರ ಉದ್ದೇಶ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>