<p>ಕೈವಾರ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ್ದ ಒಂದು ಕೋಟಿ ರೂ ಅನುದಾನವನ್ನು ಧರ್ಮಾಧಿಕಾರಿ ಎಂ. ಆರ್. ಜಯರಾಂ ನಿರಾಕರಿಸಿದ ಕ್ರಮವನ್ನು ಲೇಖಕ ಸಿ. ಎಸ್. ದ್ವಾರಕನಾಥ್ ಪ್ರಜಾವಾಣಿಗೆ ಬರೆದ ಪತ್ರದಲ್ಲಿ ಸ್ವಾಗತಿಸಿದ್ದಾರೆ. <br /> ಆದರೆ ಕ್ಷೇತ್ರದ ಆಡಳಿತದ ಬಗ್ಗೆ ಅವರು ಸಲ್ಲದ ಟೀಕೆಗಳನ್ನು ಮಾಡಿದ್ದಾರೆ.<br /> <br /> ದ್ವಾರಕಾನಾಥ್ ಅವರ ಬಳಿ ಕೈವಾರ ಕ್ಷೇತ್ರದ ಪರಂಪರೆಯ ಬಗ್ಗೆ ದಾಖಲೆಗಳಿದ್ದರೆ ಅದನ್ನು ಪ್ರಕಟಿಸಲಿ. ಅದನ್ನು ಬಿಟ್ಟು ಜಾತಿ ಮತ್ತು ಕುಟುಂಬ ರಾಜಕಾರಣದ ಆರೋಪಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಗತಿಗೆ ಅಡ್ಡಿ ಮಾಡುವುದು ಬೇಡ. <br /> <br /> ದಿ. ಎಂ. ಎಸ್. ರಾಮಯ್ಯ ಮತ್ತು ಅವರ ಮಗ ಎಂ. ಆರ್. ಜಯರಾಂ ಅವರು ಸೇವಾ ಮನೋಭಾವದಿಂದ ದುಡಿದಿದ್ದಾರೆ. ಕ್ಷೇತ್ರದಲ್ಲಿ ದೈನಂದಿನ ಪೂಜಾ ಕೈಂಕರ್ಯ, ಉಚಿತ ಸಾಮೂಹಿಕ ವಿವಾಹ, ಉಚಿತ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಹಂತದಲ್ಲಿ ಕ್ಷೇತ್ರದ ಆಡಳಿತದ ಬಗ್ಗೆ ಅಪಸ್ವರ ಎತ್ತಿ ಒಳ್ಳೆಯ ಕೆಲಸಗಳಿಗೆ ಅಡ್ಡಿ ಮಾಡುವುದು ಬೇಡ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೈವಾರ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ್ದ ಒಂದು ಕೋಟಿ ರೂ ಅನುದಾನವನ್ನು ಧರ್ಮಾಧಿಕಾರಿ ಎಂ. ಆರ್. ಜಯರಾಂ ನಿರಾಕರಿಸಿದ ಕ್ರಮವನ್ನು ಲೇಖಕ ಸಿ. ಎಸ್. ದ್ವಾರಕನಾಥ್ ಪ್ರಜಾವಾಣಿಗೆ ಬರೆದ ಪತ್ರದಲ್ಲಿ ಸ್ವಾಗತಿಸಿದ್ದಾರೆ. <br /> ಆದರೆ ಕ್ಷೇತ್ರದ ಆಡಳಿತದ ಬಗ್ಗೆ ಅವರು ಸಲ್ಲದ ಟೀಕೆಗಳನ್ನು ಮಾಡಿದ್ದಾರೆ.<br /> <br /> ದ್ವಾರಕಾನಾಥ್ ಅವರ ಬಳಿ ಕೈವಾರ ಕ್ಷೇತ್ರದ ಪರಂಪರೆಯ ಬಗ್ಗೆ ದಾಖಲೆಗಳಿದ್ದರೆ ಅದನ್ನು ಪ್ರಕಟಿಸಲಿ. ಅದನ್ನು ಬಿಟ್ಟು ಜಾತಿ ಮತ್ತು ಕುಟುಂಬ ರಾಜಕಾರಣದ ಆರೋಪಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಗತಿಗೆ ಅಡ್ಡಿ ಮಾಡುವುದು ಬೇಡ. <br /> <br /> ದಿ. ಎಂ. ಎಸ್. ರಾಮಯ್ಯ ಮತ್ತು ಅವರ ಮಗ ಎಂ. ಆರ್. ಜಯರಾಂ ಅವರು ಸೇವಾ ಮನೋಭಾವದಿಂದ ದುಡಿದಿದ್ದಾರೆ. ಕ್ಷೇತ್ರದಲ್ಲಿ ದೈನಂದಿನ ಪೂಜಾ ಕೈಂಕರ್ಯ, ಉಚಿತ ಸಾಮೂಹಿಕ ವಿವಾಹ, ಉಚಿತ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಹಂತದಲ್ಲಿ ಕ್ಷೇತ್ರದ ಆಡಳಿತದ ಬಗ್ಗೆ ಅಪಸ್ವರ ಎತ್ತಿ ಒಳ್ಳೆಯ ಕೆಲಸಗಳಿಗೆ ಅಡ್ಡಿ ಮಾಡುವುದು ಬೇಡ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>