<p><strong>ತುಮಕೂರು:</strong> ವಿನಾಃ ಕಾರಣ ಕಾನೂನಿನ ಕೊಂಕು ತೆಗೆಯುವ ಸರ್ಕಾರಿ ನೌಕರರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಕಿಡಿಕಾರಿದರು.<br /> <br /> ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸರ್ಕಾರದ ನೂತನ ಯೋಜನೆಯಾದ ಸಾರ್ವಜನಿಕ ಸೇವೆಗಳ ಖಾತರಿ `ಸಕಾಲ~ಕ್ಕೆ ಚಾಲನೆ ನೀಡಿ ಮಾತನಾಡಿ, ಮಂತ್ರಿಗಳಿಂದ ಅನುಮೋದನೆ ಸಿಕ್ಕರೂ ಕೆಲವು ದಾಖಲೆಗಳನ್ನು ಸಹಿ ಹಾಕುವಾಗ ಎರಡನೇ ದರ್ಜೆ ಗುಮಾಸ್ತ ಸೇರಿದಂತೆ ಅಧಿಕಾರಿಗಳು ವಿನಾಃ ಕಾರಣ ಕಾನೂನಿನ ಕೊಂಕು ತೆಗೆದು ಯೋಜನೆ ಜಾರಿಯಾಗದಂತೆ ತಡೆಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ.<br /> <br /> ಇಂಥ ಸಿಬ್ಬಂದಿ, ಅಧಿಕಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಏರಿಸಬೇಕು ಎಂದರು.<br /> ಸರ್ಕಾರಿ ಕಚೇರಿಗೆ ಬರುವ ಹಳ್ಳಿ ಜನರನ್ನು ಗದರಿ ಅಟ್ಟಲಾಗುತ್ತದೆ. ಇದು ಹೆತ್ತ ತಂದೆ-ತಾಯಿಗೆ ಮಾಡುವ ಅವಮಾನ, ಇದೊಂದು ನಯವಂಚಕತನ, ಮೋಸಗಾರಿಕೆ. ರಾಜಕಾರಣಿಗಳನ್ನು ಅಧಿಕಾರಿಶಾಹಿ ಹೆಚ್ಚಾಗಿ ಬಳಸಿಕೊಂಡು ಸೋಮಾರಿಗಳಾಗಿದ್ದಾರೆ. ಈ ಸೋಮಾರಿತನದ ಜಾಡ್ಯ ದೇಶದೆಲ್ಲೆಡೆ ಇದೆ. ಇದರ ಪರಿಣಾಮವೇ `ಸಕಾಲ~ ಜಾರಿಯಾಗಿದೆ. ಅಧಿಕಾರಿಗಳ ಮನಸ್ಸು ಪರಿವರ್ತನೆಯಾಗದಿದ್ದರೆ ಇಂಥ ಸಾವಿರ `ಸಕಾಲ~ ಒಂದರೂ ಪ್ರಯೋಜನವಿಲ್ಲ ಎಂದು ಹೇಳಿದರು.<br /> <br /> ಪ್ರಾಮಾಣಿಕರು, ಮರ್ಯಾದಸ್ಥರು, ಹಗಲು ರಾತ್ರಿ ಕೆಲಸ ಮಾಡುವ ಒಂದಷ್ಟು ಅಧಿಕಾರಿ, ಸಿಬ್ಬಂದಿ ಇಂದಿಗೂ ಇದ್ದಾರೆ. ಆದರೆ ರಾಜಕೀಯ ಪುಢಾರಿಗಳು ಹೇಳಿದ ಕೆಲಸ ಮಾಡದಿದ್ದರೆ ಇವರು ಮೊದಲ ಬಲಿಪಶು ಆಗುವವರು ಎಂದು ವಿಷಾದಿಸಿದರು.<br /> <br /> ಒಟ್ಟು ಹನ್ನೊಂದು ಇಲಾಖೆಗಳ 151 ಸೇವೆಗಳು `ಸಕಾಲ~ದ ವ್ಯಾಪ್ತಿಗೆ ಒಳಪಡುತ್ತವೆ. ಪ್ರತಿ ಇಲಾಖೆಗೆ ಅರ್ಜಿ ನೀಡಿ ಅವರಿಂದ ಸ್ವೀಕೃತಿ ತೆಗೆದುಕೊಂಡ ಕ್ಷಣವೇ ಅರ್ಜಿ ಅಂತರ್ಜಾಲದಲ್ಲಿ ದಾಖಲುಗೊಂಡು ರಾಜ್ಯ ಮಟ್ಟದ `ಸಕಾಲ~ ಕೇಂದ್ರದಲ್ಲೂ ದಾಖಲಾಗುತ್ತದೆ. <br /> <br /> ಅರ್ಜಿದಾರರನಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಪ್ರತಿ ತಿಂಗಳು ರಾಜ್ಯ ಮಟ್ಟದ ಅಧಿಕಾರಿಗಳು ಯೋಜನೆಯ ಜಾರಿಯ ಕುರಿತು ಮಾಹಿತಿ ಸಂಗ್ರಹಿಸುವರು. ಯಾವ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ಸಮರ್ಪಕವಾಗಿಲ್ಲ, ಅಂಥ ಇಲಾಖೆ ಮುಖ್ಯಸ್ಥರಿಗೆ ಈ ಸಂಬಂಧ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.<br /> <br /> ಶಾಸಕ ಎಸ್.ಶಿವಣ್ಣ, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಮೋಹನ್ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ವಿನಾಃ ಕಾರಣ ಕಾನೂನಿನ ಕೊಂಕು ತೆಗೆಯುವ ಸರ್ಕಾರಿ ನೌಕರರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಕಿಡಿಕಾರಿದರು.<br /> <br /> ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸರ್ಕಾರದ ನೂತನ ಯೋಜನೆಯಾದ ಸಾರ್ವಜನಿಕ ಸೇವೆಗಳ ಖಾತರಿ `ಸಕಾಲ~ಕ್ಕೆ ಚಾಲನೆ ನೀಡಿ ಮಾತನಾಡಿ, ಮಂತ್ರಿಗಳಿಂದ ಅನುಮೋದನೆ ಸಿಕ್ಕರೂ ಕೆಲವು ದಾಖಲೆಗಳನ್ನು ಸಹಿ ಹಾಕುವಾಗ ಎರಡನೇ ದರ್ಜೆ ಗುಮಾಸ್ತ ಸೇರಿದಂತೆ ಅಧಿಕಾರಿಗಳು ವಿನಾಃ ಕಾರಣ ಕಾನೂನಿನ ಕೊಂಕು ತೆಗೆದು ಯೋಜನೆ ಜಾರಿಯಾಗದಂತೆ ತಡೆಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ.<br /> <br /> ಇಂಥ ಸಿಬ್ಬಂದಿ, ಅಧಿಕಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಏರಿಸಬೇಕು ಎಂದರು.<br /> ಸರ್ಕಾರಿ ಕಚೇರಿಗೆ ಬರುವ ಹಳ್ಳಿ ಜನರನ್ನು ಗದರಿ ಅಟ್ಟಲಾಗುತ್ತದೆ. ಇದು ಹೆತ್ತ ತಂದೆ-ತಾಯಿಗೆ ಮಾಡುವ ಅವಮಾನ, ಇದೊಂದು ನಯವಂಚಕತನ, ಮೋಸಗಾರಿಕೆ. ರಾಜಕಾರಣಿಗಳನ್ನು ಅಧಿಕಾರಿಶಾಹಿ ಹೆಚ್ಚಾಗಿ ಬಳಸಿಕೊಂಡು ಸೋಮಾರಿಗಳಾಗಿದ್ದಾರೆ. ಈ ಸೋಮಾರಿತನದ ಜಾಡ್ಯ ದೇಶದೆಲ್ಲೆಡೆ ಇದೆ. ಇದರ ಪರಿಣಾಮವೇ `ಸಕಾಲ~ ಜಾರಿಯಾಗಿದೆ. ಅಧಿಕಾರಿಗಳ ಮನಸ್ಸು ಪರಿವರ್ತನೆಯಾಗದಿದ್ದರೆ ಇಂಥ ಸಾವಿರ `ಸಕಾಲ~ ಒಂದರೂ ಪ್ರಯೋಜನವಿಲ್ಲ ಎಂದು ಹೇಳಿದರು.<br /> <br /> ಪ್ರಾಮಾಣಿಕರು, ಮರ್ಯಾದಸ್ಥರು, ಹಗಲು ರಾತ್ರಿ ಕೆಲಸ ಮಾಡುವ ಒಂದಷ್ಟು ಅಧಿಕಾರಿ, ಸಿಬ್ಬಂದಿ ಇಂದಿಗೂ ಇದ್ದಾರೆ. ಆದರೆ ರಾಜಕೀಯ ಪುಢಾರಿಗಳು ಹೇಳಿದ ಕೆಲಸ ಮಾಡದಿದ್ದರೆ ಇವರು ಮೊದಲ ಬಲಿಪಶು ಆಗುವವರು ಎಂದು ವಿಷಾದಿಸಿದರು.<br /> <br /> ಒಟ್ಟು ಹನ್ನೊಂದು ಇಲಾಖೆಗಳ 151 ಸೇವೆಗಳು `ಸಕಾಲ~ದ ವ್ಯಾಪ್ತಿಗೆ ಒಳಪಡುತ್ತವೆ. ಪ್ರತಿ ಇಲಾಖೆಗೆ ಅರ್ಜಿ ನೀಡಿ ಅವರಿಂದ ಸ್ವೀಕೃತಿ ತೆಗೆದುಕೊಂಡ ಕ್ಷಣವೇ ಅರ್ಜಿ ಅಂತರ್ಜಾಲದಲ್ಲಿ ದಾಖಲುಗೊಂಡು ರಾಜ್ಯ ಮಟ್ಟದ `ಸಕಾಲ~ ಕೇಂದ್ರದಲ್ಲೂ ದಾಖಲಾಗುತ್ತದೆ. <br /> <br /> ಅರ್ಜಿದಾರರನಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಪ್ರತಿ ತಿಂಗಳು ರಾಜ್ಯ ಮಟ್ಟದ ಅಧಿಕಾರಿಗಳು ಯೋಜನೆಯ ಜಾರಿಯ ಕುರಿತು ಮಾಹಿತಿ ಸಂಗ್ರಹಿಸುವರು. ಯಾವ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ಸಮರ್ಪಕವಾಗಿಲ್ಲ, ಅಂಥ ಇಲಾಖೆ ಮುಖ್ಯಸ್ಥರಿಗೆ ಈ ಸಂಬಂಧ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.<br /> <br /> ಶಾಸಕ ಎಸ್.ಶಿವಣ್ಣ, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಮೋಹನ್ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>