<p>ನಾಪೋಕ್ಲು: ನೆರೆಯ ತುಳುನಾಡಿನಲ್ಲಿ ಆಟಿ ಹದಿನೆಂಟು ಎಂದು ಆಟಿ ತಿಂಗಳ ವಿಶೇಷವನ್ನು ಆಚರಿಸಿದರೆ ಕೊಡಗು ಜಿಲ್ಲೆಯ ಜನರು ಕೃಷಿ ಚಟುವಟಿಕೆಯ ಭಾಗವಾಗಿ ಕಕ್ಕಡ ಹದಿನೆಂಟನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಿದರು. <br /> <br /> ನಾಪೋಕ್ಲುವಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಮದ್ದುಸೊಪ್ಪಿನ ಪಾಯಸ ತಯಾರಿಸಿ ಸೇವಿಸಲಾಯಿತು. ತೋಟಗಳಿಂದ ಸಂಗ್ರಹಿಸಿ ತಂದ ಮದ್ದು ಸೊಪ್ಪನ್ನು ಶುಕ್ರವಾರ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. <br /> <br /> ಕಕ್ಕಡ ಮಾಸ ಅಥವಾ ಆಟಿ ತಿಂಗಳ ಹದಿನೆಂಟನೇ ದಿನದಂದು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಅನಂತರ ಮದ್ದು ಸೊಪ್ಪಿನ ಪಾಯಸ ಮಾತ್ರವಲ್ಲ ಹಲ್ವ, ಸಿಹಿ ಅನ್ನ, ಮತ್ತಿತರ ಖಾದ್ಯಗಳನ್ನು ತಯಾರಿಸಿ ಸೇವಿಸುವ ಕ್ರಮವೂ ಅಲ್ಲಲ್ಲಿ ರೂಢಿಯಲ್ಲಿದೆ. <br /> <br /> ಮದ್ದು ಸೊಪ್ಪು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಕಕ್ಕಡ ತಿಂಗಳ ಆರಂಭದ ದಿನದಿಂದ ಮದ್ದುಬನದ ಗಿಡದಲ್ಲಿ ಒಂದೊಂದೇ ಔಷಧೀಯ ಗುಣಗಳು ಸೇರಲಾರಂಭಿಸುತ್ತವೆ ಎಂಬ ನಂಬಿಕೆ ಇದೆ. <br /> <br /> ಹದಿನೆಂಟನೇ ದಿನದಂದು ಹದಿನೆಂಟು ಬಗೆಯ ಔಷಧೀಯ ಗುಣಗಳು ಸೇರಿದ ಆ ಸೊಪ್ಪನ್ನು ಬಳಸಿ ಪಾಯಸ ಇಲ್ಲವೇ ಅನ್ನದ ಅಡುಗೆ ತಯಾರಿಸಿ ಸವಿಯುತ್ತಾರೆ. <br /> <br /> ಮದ್ದು ಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಆ ನೀರನ್ನು ಸೋಸಿ ಕಡು ನೇರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ ರವೆ, ಸಕ್ಕರೆ ಮತ್ತು ತುಪ್ಪ ಸೇರಿಸಿ ಬಾತ್ ತಯಾರಿಸಲಾಗುತ್ತದೆ. ಇಲ್ಲವೇ ಆ ನೀರಿನಲ್ಲಿ ಅಕ್ಕಿ ಬೆಲ್ಲ ಕಾಯಿತುರಿ ಸೇರಿಸಿ ಪಾಯಸ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ, ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮದ್ದು ಸೊಪ್ಪಿನ ಪಾಯಸವಾಗಲಿ, ಬರ್ಫಿಯಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ. <br /> <br /> ಕೊಡಗಿನ ಶೀತ ಹವಾಮಾನದಲ್ಲಿ ಮಳೆಯ ಕೃಷಿ ಚಟುವಟಿಕೆಯ ನಡುವೆ ಮದ್ದು ಸೊಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣದಿಂದ ಎಲ್ಲೆಡೆ ಅದನ್ನು ಬಳಸಲಾಗುತ್ತದೆ ಎನ್ನುತ್ತಾರೆ ಹಿರಿಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಪೋಕ್ಲು: ನೆರೆಯ ತುಳುನಾಡಿನಲ್ಲಿ ಆಟಿ ಹದಿನೆಂಟು ಎಂದು ಆಟಿ ತಿಂಗಳ ವಿಶೇಷವನ್ನು ಆಚರಿಸಿದರೆ ಕೊಡಗು ಜಿಲ್ಲೆಯ ಜನರು ಕೃಷಿ ಚಟುವಟಿಕೆಯ ಭಾಗವಾಗಿ ಕಕ್ಕಡ ಹದಿನೆಂಟನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಿದರು. <br /> <br /> ನಾಪೋಕ್ಲುವಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಮದ್ದುಸೊಪ್ಪಿನ ಪಾಯಸ ತಯಾರಿಸಿ ಸೇವಿಸಲಾಯಿತು. ತೋಟಗಳಿಂದ ಸಂಗ್ರಹಿಸಿ ತಂದ ಮದ್ದು ಸೊಪ್ಪನ್ನು ಶುಕ್ರವಾರ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. <br /> <br /> ಕಕ್ಕಡ ಮಾಸ ಅಥವಾ ಆಟಿ ತಿಂಗಳ ಹದಿನೆಂಟನೇ ದಿನದಂದು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಅನಂತರ ಮದ್ದು ಸೊಪ್ಪಿನ ಪಾಯಸ ಮಾತ್ರವಲ್ಲ ಹಲ್ವ, ಸಿಹಿ ಅನ್ನ, ಮತ್ತಿತರ ಖಾದ್ಯಗಳನ್ನು ತಯಾರಿಸಿ ಸೇವಿಸುವ ಕ್ರಮವೂ ಅಲ್ಲಲ್ಲಿ ರೂಢಿಯಲ್ಲಿದೆ. <br /> <br /> ಮದ್ದು ಸೊಪ್ಪು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಕಕ್ಕಡ ತಿಂಗಳ ಆರಂಭದ ದಿನದಿಂದ ಮದ್ದುಬನದ ಗಿಡದಲ್ಲಿ ಒಂದೊಂದೇ ಔಷಧೀಯ ಗುಣಗಳು ಸೇರಲಾರಂಭಿಸುತ್ತವೆ ಎಂಬ ನಂಬಿಕೆ ಇದೆ. <br /> <br /> ಹದಿನೆಂಟನೇ ದಿನದಂದು ಹದಿನೆಂಟು ಬಗೆಯ ಔಷಧೀಯ ಗುಣಗಳು ಸೇರಿದ ಆ ಸೊಪ್ಪನ್ನು ಬಳಸಿ ಪಾಯಸ ಇಲ್ಲವೇ ಅನ್ನದ ಅಡುಗೆ ತಯಾರಿಸಿ ಸವಿಯುತ್ತಾರೆ. <br /> <br /> ಮದ್ದು ಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಆ ನೀರನ್ನು ಸೋಸಿ ಕಡು ನೇರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ ರವೆ, ಸಕ್ಕರೆ ಮತ್ತು ತುಪ್ಪ ಸೇರಿಸಿ ಬಾತ್ ತಯಾರಿಸಲಾಗುತ್ತದೆ. ಇಲ್ಲವೇ ಆ ನೀರಿನಲ್ಲಿ ಅಕ್ಕಿ ಬೆಲ್ಲ ಕಾಯಿತುರಿ ಸೇರಿಸಿ ಪಾಯಸ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ, ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮದ್ದು ಸೊಪ್ಪಿನ ಪಾಯಸವಾಗಲಿ, ಬರ್ಫಿಯಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ. <br /> <br /> ಕೊಡಗಿನ ಶೀತ ಹವಾಮಾನದಲ್ಲಿ ಮಳೆಯ ಕೃಷಿ ಚಟುವಟಿಕೆಯ ನಡುವೆ ಮದ್ದು ಸೊಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣದಿಂದ ಎಲ್ಲೆಡೆ ಅದನ್ನು ಬಳಸಲಾಗುತ್ತದೆ ಎನ್ನುತ್ತಾರೆ ಹಿರಿಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>