<p>ಮಡಿಕೇರಿ: ಕೊಡವರ ಗೃಹ ಪ್ರವೇಶದ ಮೂಲ ಪದ್ಧತಿ ಅಳಿವಿನಂಚು ತಲುಪಿದೆ. ಇದನ್ನು ಉಳಿಸುವ ಉದ್ದೇಶದಿಂದ ಅಲ್ಲಾರಂಡ ರಂಗ ಚಾವಡಿಯ ವತಿಯಿಂದ ಸಾಕ್ಷ್ಯಚಿತ್ರವನ್ನು ನಗರದ ಹೊರವಲಯದಲ್ಲಿ ಮಂಗಳವಾರ ಚಿತ್ರೀಕರಿಸಲಾಯಿತು.<br /> <br /> ಅಲ್ಲಾರಂಡ ವಿಠಲ್ ನಂಜಪ್ಪ ಮಾರ್ಗದರ್ಶನಲ್ಲಿ ಚಿತ್ರೀಕರಣ ಸಾಗಿತು. ಅಲ್ಲಾರಂಡ ರಂಗಚಾವಡಿಯಲ್ಲಿ ಸಂಪ್ರದಾಯದಂತೆ ಹಂದಿ ಮತ್ತು ಕೋಳಿಯನ್ನು ಬಲಿ ನೀಡಲಾಯಿತು. ನಂತರ ಇಲ್ಲಿಂದ ನೂತನ ಗೃಹದೆಡೆಗೆ ಜನಾಂಗ ಬಾಂಧವರು ಮೆರವಣಿಗೆಯಲ್ಲಿ ಸಾಗಿದರು.<br /> ಹಸು ಮತ್ತು ಕರುವನ್ನು ಮುಂಚೂಣಿಯಲ್ಲಿರಿಸಿ ‘ಮನೆ ಪಾಟ್’ ಹಾಡನ್ನು ಹೇಳುತ್ತಾ ತೆರಳಿದರು.<br /> <br /> ಕೊಡವರು ಸಾಂಪ್ರದಾಯಿಕ ವೇಷಭೂಷಣ ಧಾರಿಯಾಗಿದ್ದರು. ತೊಟ್ಟಿಲಿನಲ್ಲಿ ಮಗು, ಧವಸ ಧಾನ್ಯ, ಕತ್ತಿ, ಕೋವಿ, ಬಾಳೆ ಹಣ್ಣು, ವೀಳ್ಯದೆಲೆ,ತೂಗು ದೀಪ ಇನ್ನಿತರ ಸಂಪ್ರದಾಯಿಕ ವಸ್ತುಗಳನ್ನು ಮಹಿಳೆಯರು ತಲೆಯ ಮೇಲಿರಿಸಿಕೊಂಡು ಹೆಜ್ಜೆ ಹಾಕಿದರು.<br /> ನೂತನ ಮನೆಗೆ ಒಂದು ಸುತ್ತು ಬಂದ ಹಸು ಮತ್ತು ಕರುವನ್ನು ಮೊದಲು ಗೃಹ ಪ್ರವೇಶಿಸಿದವು. ಮೆರವಣಿಗೆಯಲ್ಲಿ ಸಾಗಿ ಬಂದವರು ಅವುಗಳನ್ನು ಹಿಂಬಾಲಿಸಿದರು. ಪ್ರಮುಖರಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.<br /> <br /> ನಡೆದು ಬಂದ ಹಾದಿ: ಕೊಡವರ ಗೃಹ ಪ್ರವೇಶ ಮೂಲದಲ್ಲಿ ಸರಳವಾಗಿತ್ತು. ಮನೆಯ ಹೊರಗೆ ಹಂದಿ ಮತ್ತು ಕೋಳಿ ಬಲಿ ಕೊಡಲಾಗುತ್ತಿತ್ತು. ಮನೆ ಹೊಕ್ಕ ದುಷ್ಟ ಶಕ್ತಿಯು ಹೊರಗೆ ಬಲಿಕೊಡಲಾದ ಪ್ರಾಣಿಯ ರಕ್ತ ಹೀರಲು ಹೊರ ಬರುತ್ತವೆ ಎಂಬ ನಂಬಿಕೆ ಇತ್ತು.<br /> ನಂತರ ಮನೆಗೆ ಮುಂಡರಿಕೆ ಬಳ್ಳಿಯನ್ನು ಮನೆಗೆ ಕಟ್ಟಲಾಗುತ್ತಿತ್ತು. ಈ ಬಳ್ಳಿಯು ಮನೆಯ ಒಳಗೆ ದುಷ್ಟ ಶಕ್ತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ ಎಂದು ನಂಬಿಕೆ ಇತ್ತು ಎಂದು ವಿಠಲ್ ನಂಜಪ್ಪ ಮಾಹಿತಿ ನೀಡಿದರು.<br /> <br /> ಕೊಡಗಿನಲ್ಲಿ ಲಿಂಗರಾಜನ ಆಡಳಿತ ಅವಧಿಯಲ್ಲಿ ಕೇರಳದಿಂದ ‘ಮಲೆ ಜನಾಂಗ’ದವರನ್ನು ದೇವಾಲಯ ಪೂಜೆಗೆಂದು ಕರೆಸಲಾಗಿತ್ತು.<br /> ಇದಾದ ನಂತರ ಬ್ರಾಹ್ಮಣರನ್ನು ನೇಮಿಸಲಾಯಿತು.<br /> <br /> ಬ್ರಾಹ್ಮಣರ ಆಗಮನದಿಂದ ಕೊಡವರ ಗೃಹ ಪ್ರವೇಶ ಪದ್ಧತಿಯಲ್ಲಿ ಬದಲಾವಣೆಯಾಯಿತು. ಗಣಪತಿ ಹೋಮ ಅಥವಾ ಸತ್ಯನಾರಾಯಣ ಪೂಜೆಯ ಮೂಲಕ ಗೃಹ ಪ್ರವೇಶ ಮಾಡಲಾಗುತ್ತಿದೆ ಎನ್ನುತ್ತಾರೆ ವಿಠಲ್ ನಂಜಪ್ಪ.<br /> <br /> ಕೊಡವರ ಹಳೆಯ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪ್ರಚುರ ಪಡಿಸುವ ದೃಷ್ಟಿಯಿಂದ ಸಾಕ್ಷ್ಯಚಿತ್ರವನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.<br /> <br /> <strong>ಸಾಕ್ಷ್ಯಚಿತ್ರ ಶೀಘ್ರದಲ್ಲೇ ಬಿಡುಗಡೆ</strong><br /> ಮಡಿಕೇರಿ: ಕೊಡವ ಸಂಪ್ರದಾಯದ ಪ್ರಕಾರ ನಡೆಯುವ ‘ಮನೆ ಮಂಗಲ’ ಕುರಿತಾದ ಸಾಕ್ಷ್ಯಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದಾಗಿ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.</p>.<p>ವಿಷ್ಣು, ಅರುಣ್ ಮತ್ತು ನರೇಶ್ ಕ್ಯಾಮರಾ ಮೆನ್ಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಶೇ. 2 ರಷ್ಟು ಮಾತ್ರ ಸಂಭಾಷಣೆಯನ್ನು ಬಳಸಲಾಗಿದೆ. ಉಳಿದಂತೆ ಕೊಡವ ಜಾನಪದ ಹಾಡು ಮತ್ತು ವಾದ್ಯವನ್ನು ಉಪಯೋಗಿಸಲಾಗುತ್ತದೆ. ಮುಂದಿನ ವರ್ಷ ತ್ರಿಭಾಷಾ ಕವಿ ಐಮಾ ಮುತ್ತಣ್ಣ ಅವರ ಜೀವನ ಚರಿತ್ರೆ ಆಧಾರಿತ ಸಾಕ್ಷ್ಯಚಿತ್ರ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕೊಡವರ ಗೃಹ ಪ್ರವೇಶದ ಮೂಲ ಪದ್ಧತಿ ಅಳಿವಿನಂಚು ತಲುಪಿದೆ. ಇದನ್ನು ಉಳಿಸುವ ಉದ್ದೇಶದಿಂದ ಅಲ್ಲಾರಂಡ ರಂಗ ಚಾವಡಿಯ ವತಿಯಿಂದ ಸಾಕ್ಷ್ಯಚಿತ್ರವನ್ನು ನಗರದ ಹೊರವಲಯದಲ್ಲಿ ಮಂಗಳವಾರ ಚಿತ್ರೀಕರಿಸಲಾಯಿತು.<br /> <br /> ಅಲ್ಲಾರಂಡ ವಿಠಲ್ ನಂಜಪ್ಪ ಮಾರ್ಗದರ್ಶನಲ್ಲಿ ಚಿತ್ರೀಕರಣ ಸಾಗಿತು. ಅಲ್ಲಾರಂಡ ರಂಗಚಾವಡಿಯಲ್ಲಿ ಸಂಪ್ರದಾಯದಂತೆ ಹಂದಿ ಮತ್ತು ಕೋಳಿಯನ್ನು ಬಲಿ ನೀಡಲಾಯಿತು. ನಂತರ ಇಲ್ಲಿಂದ ನೂತನ ಗೃಹದೆಡೆಗೆ ಜನಾಂಗ ಬಾಂಧವರು ಮೆರವಣಿಗೆಯಲ್ಲಿ ಸಾಗಿದರು.<br /> ಹಸು ಮತ್ತು ಕರುವನ್ನು ಮುಂಚೂಣಿಯಲ್ಲಿರಿಸಿ ‘ಮನೆ ಪಾಟ್’ ಹಾಡನ್ನು ಹೇಳುತ್ತಾ ತೆರಳಿದರು.<br /> <br /> ಕೊಡವರು ಸಾಂಪ್ರದಾಯಿಕ ವೇಷಭೂಷಣ ಧಾರಿಯಾಗಿದ್ದರು. ತೊಟ್ಟಿಲಿನಲ್ಲಿ ಮಗು, ಧವಸ ಧಾನ್ಯ, ಕತ್ತಿ, ಕೋವಿ, ಬಾಳೆ ಹಣ್ಣು, ವೀಳ್ಯದೆಲೆ,ತೂಗು ದೀಪ ಇನ್ನಿತರ ಸಂಪ್ರದಾಯಿಕ ವಸ್ತುಗಳನ್ನು ಮಹಿಳೆಯರು ತಲೆಯ ಮೇಲಿರಿಸಿಕೊಂಡು ಹೆಜ್ಜೆ ಹಾಕಿದರು.<br /> ನೂತನ ಮನೆಗೆ ಒಂದು ಸುತ್ತು ಬಂದ ಹಸು ಮತ್ತು ಕರುವನ್ನು ಮೊದಲು ಗೃಹ ಪ್ರವೇಶಿಸಿದವು. ಮೆರವಣಿಗೆಯಲ್ಲಿ ಸಾಗಿ ಬಂದವರು ಅವುಗಳನ್ನು ಹಿಂಬಾಲಿಸಿದರು. ಪ್ರಮುಖರಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.<br /> <br /> ನಡೆದು ಬಂದ ಹಾದಿ: ಕೊಡವರ ಗೃಹ ಪ್ರವೇಶ ಮೂಲದಲ್ಲಿ ಸರಳವಾಗಿತ್ತು. ಮನೆಯ ಹೊರಗೆ ಹಂದಿ ಮತ್ತು ಕೋಳಿ ಬಲಿ ಕೊಡಲಾಗುತ್ತಿತ್ತು. ಮನೆ ಹೊಕ್ಕ ದುಷ್ಟ ಶಕ್ತಿಯು ಹೊರಗೆ ಬಲಿಕೊಡಲಾದ ಪ್ರಾಣಿಯ ರಕ್ತ ಹೀರಲು ಹೊರ ಬರುತ್ತವೆ ಎಂಬ ನಂಬಿಕೆ ಇತ್ತು.<br /> ನಂತರ ಮನೆಗೆ ಮುಂಡರಿಕೆ ಬಳ್ಳಿಯನ್ನು ಮನೆಗೆ ಕಟ್ಟಲಾಗುತ್ತಿತ್ತು. ಈ ಬಳ್ಳಿಯು ಮನೆಯ ಒಳಗೆ ದುಷ್ಟ ಶಕ್ತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ ಎಂದು ನಂಬಿಕೆ ಇತ್ತು ಎಂದು ವಿಠಲ್ ನಂಜಪ್ಪ ಮಾಹಿತಿ ನೀಡಿದರು.<br /> <br /> ಕೊಡಗಿನಲ್ಲಿ ಲಿಂಗರಾಜನ ಆಡಳಿತ ಅವಧಿಯಲ್ಲಿ ಕೇರಳದಿಂದ ‘ಮಲೆ ಜನಾಂಗ’ದವರನ್ನು ದೇವಾಲಯ ಪೂಜೆಗೆಂದು ಕರೆಸಲಾಗಿತ್ತು.<br /> ಇದಾದ ನಂತರ ಬ್ರಾಹ್ಮಣರನ್ನು ನೇಮಿಸಲಾಯಿತು.<br /> <br /> ಬ್ರಾಹ್ಮಣರ ಆಗಮನದಿಂದ ಕೊಡವರ ಗೃಹ ಪ್ರವೇಶ ಪದ್ಧತಿಯಲ್ಲಿ ಬದಲಾವಣೆಯಾಯಿತು. ಗಣಪತಿ ಹೋಮ ಅಥವಾ ಸತ್ಯನಾರಾಯಣ ಪೂಜೆಯ ಮೂಲಕ ಗೃಹ ಪ್ರವೇಶ ಮಾಡಲಾಗುತ್ತಿದೆ ಎನ್ನುತ್ತಾರೆ ವಿಠಲ್ ನಂಜಪ್ಪ.<br /> <br /> ಕೊಡವರ ಹಳೆಯ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪ್ರಚುರ ಪಡಿಸುವ ದೃಷ್ಟಿಯಿಂದ ಸಾಕ್ಷ್ಯಚಿತ್ರವನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.<br /> <br /> <strong>ಸಾಕ್ಷ್ಯಚಿತ್ರ ಶೀಘ್ರದಲ್ಲೇ ಬಿಡುಗಡೆ</strong><br /> ಮಡಿಕೇರಿ: ಕೊಡವ ಸಂಪ್ರದಾಯದ ಪ್ರಕಾರ ನಡೆಯುವ ‘ಮನೆ ಮಂಗಲ’ ಕುರಿತಾದ ಸಾಕ್ಷ್ಯಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದಾಗಿ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.</p>.<p>ವಿಷ್ಣು, ಅರುಣ್ ಮತ್ತು ನರೇಶ್ ಕ್ಯಾಮರಾ ಮೆನ್ಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಶೇ. 2 ರಷ್ಟು ಮಾತ್ರ ಸಂಭಾಷಣೆಯನ್ನು ಬಳಸಲಾಗಿದೆ. ಉಳಿದಂತೆ ಕೊಡವ ಜಾನಪದ ಹಾಡು ಮತ್ತು ವಾದ್ಯವನ್ನು ಉಪಯೋಗಿಸಲಾಗುತ್ತದೆ. ಮುಂದಿನ ವರ್ಷ ತ್ರಿಭಾಷಾ ಕವಿ ಐಮಾ ಮುತ್ತಣ್ಣ ಅವರ ಜೀವನ ಚರಿತ್ರೆ ಆಧಾರಿತ ಸಾಕ್ಷ್ಯಚಿತ್ರ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>