<p>ಕೊಪ್ಪಳ: ಕೈಗಾರಿಕೆ ಸ್ಥಾಪನೆಗಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ರೈತರಿಗೆ ಭೂಮಿ ಮರಳಿಸುವಂತೆ ಹೈಕೋರ್ಟ್ನ ಧಾರವಾಡ ಸಂಚಾರಿ ಪೀಠ ಆದೇಶಿಸಿದ ಮೊದಲ ಪ್ರಕರಣಕ್ಕೆ ಜಿಲ್ಲೆ ಸಾಕ್ಷಿಯಾಗಿದೆ.<br /> <br /> ಎಂಎಸ್ಪಿಎಲ್ ಕಾರ್ಖಾನೆಗಾಗಿ ಕೆಎಐಡಿಬಿ ಮೂಲಕ ತಾಲ್ಲೂಕು ಹಾಲವರ್ತಿ ಬಳಿ 1,034 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಸ್ವಾಧೀನ ಪ್ರಕ್ರಿಯೆ ವಿರುದ್ಧ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ಈಗಾಗಲೇ ಕಬ್ಬಿಣ ಅದಿರು ಸಂಸ್ಕರಣ ಘಟಕ ಸ್ಥಾಪನೆ ಮಾಡಿರುವ 118 ಎಕರೆ ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಮರಳಿಸುವಂತೆ ಧಾರವಾಡದಲ್ಲಿರುವ ಹೈಕೊರ್ಟ್ ಸಂಚಾರಿ ಪೀಠ ಮಾರ್ಚ್ 22ರಂದು ತೀರ್ಪು ನೀಡಿದ್ದು ಇತಿಹಾಸ.<br /> <br /> ಕೈಗಾರಿಕೆಗಳ ತ್ಯಾಜ್ಯದಿಂದ ಭೂಮಿ ಫಲವತ್ತತೆ ಹಾಳಾಗುತ್ತಿದೆ. ಬೆಳೆ ನಾಶವಾಗುತ್ತಿದೆ ಎಂದು ರೈತರು ಧರಣಿ ನಡೆಸುವುದು ಒಂದೆಡೆಯಾದರೆ, ಬೆಳೆ ಹಾನಿ ಹಿನ್ನೆಲೆಯಲ್ಲಿ ಎಕರೆಗೆ ಇಂತಿಷ್ಟು ಪರಿಹಾರಧನ ನೀಡಿ ಪರಿಸರ-ಜಮೀನು-ಫಸಲಿಗೆ ಹಾನಿಯಾಗುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಕೈಗಾರಿಕೆಗಳು ಇನ್ನೊಂದೆಡೆ. <br /> <br /> ಇಂಥ ಸನ್ನಿವೇಶ ಎದುರಿಸುತ್ತಿರುವ ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆ ಆರಂಭಿಸುವಂತೆ ಉದ್ದಿಮೆದಾರರನ್ನು ಆಹ್ವಾನಿಸಲು ಜಿಲ್ಲೆ ಮತ್ತೊಂದು ಜಾಗತಿಕ ಹೂಡಿಕೆದಾರರ ಸಮಾವೇಶದತ್ತ ಮುಖ ಮಾಡಿದೆ.<br /> <br /> ಬೃಹತ್-ಮಧ್ಯಮ ಕೈಗಾರಿಕೆಗಳಲ್ಲಿ ಜಿಲ್ಲೆಯಲ್ಲಿ ಸದ್ಯ 15 ಕಬ್ಬಿಣ ಅದಿರು ಸಂಸ್ಕರಣ ಘಟಕಗಳಿವೆ. 6 ವಿದ್ಯುತ್ ಉತ್ಪಾದನಾ ಘಟಕಗಳಿದ್ದರೆ, ತಲಾ ಒಂದು ಸಿಮೆಂಟ್, ತಂಪು ಪಾನೀಯ ಹಾಗೂ ಅಕ್ಕಿ ಗಿರಣಿ ಇವೆ.<br /> <br /> ಬಳ್ಳಾರಿ ಜಿಲ್ಲೆ ಎನ್ಎಂಡಿಸಿಯಿಂದ ಅದಿರು ಪೂರೈಕೆಯಾಗುತ್ತಿರುವುದರಿಂದ ಈ ಘಟಕಗಳ ಉತ್ಪಾದನೆ ಈ ಮುಂಚಿನಷ್ಟು ಇಲ್ಲ. ಜಿಲ್ಲೆಯಲ್ಲಿ ಕುಷ್ಟಗಿಯಲ್ಲಿ ಮಾತ್ರ ಕೈಗಾರಿಕಾ ಪ್ರದೇಶ ಇದೆ. ಇಲ್ಲಿ ಗ್ರಾನೈಟ್ ಉದ್ದಿಮೆಗಳು ಮಾತ್ರ ಇವೆ.<br /> <br /> ಗಂಗಾವತಿಯಲ್ಲಿ 80ಕ್ಕೂ ಹೆಚ್ಚು ಅಕ್ಕಿ ಗಿರಣಿ ಇವೆ. ಕೊಪ್ಪಳ ತಾಲ್ಲೂಕಿನಲ್ಲಿ ಕಬ್ಬಿಣ ಅದಿರು ಸಂಸ್ಕರಣಾ ಘಟಕಗಳೇ ಹೆಚ್ಚು. ಯಲಬುರ್ಗಾ ತಾಲ್ಲೂಕಿನ ಕುಕನೂರಿನಲ್ಲಿ ಕೆಲವು ಗ್ರಾನೈಟ್ ಉದ್ದಿಮೆಗಳಿವೆ.<br /> <br /> ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಮ್) ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಂಸ್ಥೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಗುರುತಿಸಿದೆ. 2ಗಾರ್ಮೆಂಟ್, 2ಗ್ರಾನೈಟ್ ಹಾಗೂ 1 ಇಡ್ಲಿ ರವೆ ತಯಾರಿಕೆ ಘಟಕಗಳಿಂದ ಜಿಲ್ಲೆಯಲ್ಲಿ ರೂ 18 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಜತೆಗೆ 325 ಉದ್ಯೋಗ ಸೃಷ್ಟಿ ಅಂದಾಜಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಗಾರ್ಮೆಂಟ್ ಉದ್ದಿಮೆ ಬರುತ್ತಿರುವುದು ವಿಶೇಷ.<br /> <br /> ಆದರೆ, 2010ರ `ಜಿಮ್~ನಲ್ಲಿ ಜಿಲ್ಲೆಯಲ್ಲಿ ಒಟ್ಟು ರೂ 1,726.51 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟು 9 ಬೃಹತ್ ಕಂಪೆನಿ ಗಳಿಗೆ ಉದ್ದಿಮೆ ಸ್ಥಾಪಿಸಲು ಪರವಾನಗಿ ನೀಡಲಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಈ ಕಾರ್ಖಾನೆಗಳು ಉತ್ಪಾದನೆ ಆರಂಭಿಸಿಲ್ಲ.<br /> <br /> ಕುಷ್ಟಗಿಯಲ್ಲಿ ಗ್ರಾನೈಟ್ ಉದ್ದಿಮೆ ಸ್ಥಾಪಿಸಲು ಅವಕಾಶ ಇದೆ. ತಾಲ್ಲೂಕಿನ ಭಾಗ್ಯನಗರದಲ್ಲಿ ಕೂದಲು ಸಂಸ್ಕರಣಾ ಘಟಕ ಸ್ಥಾಪಿಸಬಹುದು. `ಬತ್ತದ ಕಣಜ~ ಗಂಗಾವತಿಯಲ್ಲಿ ಅಕ್ಕಿ ಗಿರಣಿ, ಇಡ್ಲಿ ರವಾ ತಯಾರಿಕೆ ಘಟಕ ಸ್ಥಾಪನೆಗೆ ಅವಕಾಶ ಇದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಗುಪ್ತಾ.<br /> <br /> ಕುಷ್ಟಗಿ ಗ್ರಾನೈಟ್ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಕೊಪ್ಪಳ ಇಲ್ಲವೇ ಗಿಣಿಗೇರಾದಲ್ಲಿ `ಡಂಪಿಂಗ್ ಯಾರ್ಡ್~ ನಿರ್ಮಿಸಬೇಕು, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ಗಾಗಿ ಪ್ರತ್ಯೇಕ ಫೀಡರ್, ಕೈಗಾರಿಕೆಗಳಿಗೆ ನೀರು ಪೂರೈಸಲು ಪ್ರತ್ಯೇಕ ಪೈಪ್ಲೈನ್ ಅಳವಡಿಸಬೇಕು. ರೈತರೊಂದಿಗೆ ಸಂಘರ್ಷ ಏರ್ಪಡದ ರೀತಿ ಭೂ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡಬೇಕು ಎಂಬುದೂ ಜಿಲ್ಲೆಯ ಉದ್ಯಮಿಗಳ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಕೈಗಾರಿಕೆ ಸ್ಥಾಪನೆಗಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ರೈತರಿಗೆ ಭೂಮಿ ಮರಳಿಸುವಂತೆ ಹೈಕೋರ್ಟ್ನ ಧಾರವಾಡ ಸಂಚಾರಿ ಪೀಠ ಆದೇಶಿಸಿದ ಮೊದಲ ಪ್ರಕರಣಕ್ಕೆ ಜಿಲ್ಲೆ ಸಾಕ್ಷಿಯಾಗಿದೆ.<br /> <br /> ಎಂಎಸ್ಪಿಎಲ್ ಕಾರ್ಖಾನೆಗಾಗಿ ಕೆಎಐಡಿಬಿ ಮೂಲಕ ತಾಲ್ಲೂಕು ಹಾಲವರ್ತಿ ಬಳಿ 1,034 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಸ್ವಾಧೀನ ಪ್ರಕ್ರಿಯೆ ವಿರುದ್ಧ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ಈಗಾಗಲೇ ಕಬ್ಬಿಣ ಅದಿರು ಸಂಸ್ಕರಣ ಘಟಕ ಸ್ಥಾಪನೆ ಮಾಡಿರುವ 118 ಎಕರೆ ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಮರಳಿಸುವಂತೆ ಧಾರವಾಡದಲ್ಲಿರುವ ಹೈಕೊರ್ಟ್ ಸಂಚಾರಿ ಪೀಠ ಮಾರ್ಚ್ 22ರಂದು ತೀರ್ಪು ನೀಡಿದ್ದು ಇತಿಹಾಸ.<br /> <br /> ಕೈಗಾರಿಕೆಗಳ ತ್ಯಾಜ್ಯದಿಂದ ಭೂಮಿ ಫಲವತ್ತತೆ ಹಾಳಾಗುತ್ತಿದೆ. ಬೆಳೆ ನಾಶವಾಗುತ್ತಿದೆ ಎಂದು ರೈತರು ಧರಣಿ ನಡೆಸುವುದು ಒಂದೆಡೆಯಾದರೆ, ಬೆಳೆ ಹಾನಿ ಹಿನ್ನೆಲೆಯಲ್ಲಿ ಎಕರೆಗೆ ಇಂತಿಷ್ಟು ಪರಿಹಾರಧನ ನೀಡಿ ಪರಿಸರ-ಜಮೀನು-ಫಸಲಿಗೆ ಹಾನಿಯಾಗುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಕೈಗಾರಿಕೆಗಳು ಇನ್ನೊಂದೆಡೆ. <br /> <br /> ಇಂಥ ಸನ್ನಿವೇಶ ಎದುರಿಸುತ್ತಿರುವ ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆ ಆರಂಭಿಸುವಂತೆ ಉದ್ದಿಮೆದಾರರನ್ನು ಆಹ್ವಾನಿಸಲು ಜಿಲ್ಲೆ ಮತ್ತೊಂದು ಜಾಗತಿಕ ಹೂಡಿಕೆದಾರರ ಸಮಾವೇಶದತ್ತ ಮುಖ ಮಾಡಿದೆ.<br /> <br /> ಬೃಹತ್-ಮಧ್ಯಮ ಕೈಗಾರಿಕೆಗಳಲ್ಲಿ ಜಿಲ್ಲೆಯಲ್ಲಿ ಸದ್ಯ 15 ಕಬ್ಬಿಣ ಅದಿರು ಸಂಸ್ಕರಣ ಘಟಕಗಳಿವೆ. 6 ವಿದ್ಯುತ್ ಉತ್ಪಾದನಾ ಘಟಕಗಳಿದ್ದರೆ, ತಲಾ ಒಂದು ಸಿಮೆಂಟ್, ತಂಪು ಪಾನೀಯ ಹಾಗೂ ಅಕ್ಕಿ ಗಿರಣಿ ಇವೆ.<br /> <br /> ಬಳ್ಳಾರಿ ಜಿಲ್ಲೆ ಎನ್ಎಂಡಿಸಿಯಿಂದ ಅದಿರು ಪೂರೈಕೆಯಾಗುತ್ತಿರುವುದರಿಂದ ಈ ಘಟಕಗಳ ಉತ್ಪಾದನೆ ಈ ಮುಂಚಿನಷ್ಟು ಇಲ್ಲ. ಜಿಲ್ಲೆಯಲ್ಲಿ ಕುಷ್ಟಗಿಯಲ್ಲಿ ಮಾತ್ರ ಕೈಗಾರಿಕಾ ಪ್ರದೇಶ ಇದೆ. ಇಲ್ಲಿ ಗ್ರಾನೈಟ್ ಉದ್ದಿಮೆಗಳು ಮಾತ್ರ ಇವೆ.<br /> <br /> ಗಂಗಾವತಿಯಲ್ಲಿ 80ಕ್ಕೂ ಹೆಚ್ಚು ಅಕ್ಕಿ ಗಿರಣಿ ಇವೆ. ಕೊಪ್ಪಳ ತಾಲ್ಲೂಕಿನಲ್ಲಿ ಕಬ್ಬಿಣ ಅದಿರು ಸಂಸ್ಕರಣಾ ಘಟಕಗಳೇ ಹೆಚ್ಚು. ಯಲಬುರ್ಗಾ ತಾಲ್ಲೂಕಿನ ಕುಕನೂರಿನಲ್ಲಿ ಕೆಲವು ಗ್ರಾನೈಟ್ ಉದ್ದಿಮೆಗಳಿವೆ.<br /> <br /> ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಮ್) ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಂಸ್ಥೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಗುರುತಿಸಿದೆ. 2ಗಾರ್ಮೆಂಟ್, 2ಗ್ರಾನೈಟ್ ಹಾಗೂ 1 ಇಡ್ಲಿ ರವೆ ತಯಾರಿಕೆ ಘಟಕಗಳಿಂದ ಜಿಲ್ಲೆಯಲ್ಲಿ ರೂ 18 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಜತೆಗೆ 325 ಉದ್ಯೋಗ ಸೃಷ್ಟಿ ಅಂದಾಜಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಗಾರ್ಮೆಂಟ್ ಉದ್ದಿಮೆ ಬರುತ್ತಿರುವುದು ವಿಶೇಷ.<br /> <br /> ಆದರೆ, 2010ರ `ಜಿಮ್~ನಲ್ಲಿ ಜಿಲ್ಲೆಯಲ್ಲಿ ಒಟ್ಟು ರೂ 1,726.51 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟು 9 ಬೃಹತ್ ಕಂಪೆನಿ ಗಳಿಗೆ ಉದ್ದಿಮೆ ಸ್ಥಾಪಿಸಲು ಪರವಾನಗಿ ನೀಡಲಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಈ ಕಾರ್ಖಾನೆಗಳು ಉತ್ಪಾದನೆ ಆರಂಭಿಸಿಲ್ಲ.<br /> <br /> ಕುಷ್ಟಗಿಯಲ್ಲಿ ಗ್ರಾನೈಟ್ ಉದ್ದಿಮೆ ಸ್ಥಾಪಿಸಲು ಅವಕಾಶ ಇದೆ. ತಾಲ್ಲೂಕಿನ ಭಾಗ್ಯನಗರದಲ್ಲಿ ಕೂದಲು ಸಂಸ್ಕರಣಾ ಘಟಕ ಸ್ಥಾಪಿಸಬಹುದು. `ಬತ್ತದ ಕಣಜ~ ಗಂಗಾವತಿಯಲ್ಲಿ ಅಕ್ಕಿ ಗಿರಣಿ, ಇಡ್ಲಿ ರವಾ ತಯಾರಿಕೆ ಘಟಕ ಸ್ಥಾಪನೆಗೆ ಅವಕಾಶ ಇದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಗುಪ್ತಾ.<br /> <br /> ಕುಷ್ಟಗಿ ಗ್ರಾನೈಟ್ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಕೊಪ್ಪಳ ಇಲ್ಲವೇ ಗಿಣಿಗೇರಾದಲ್ಲಿ `ಡಂಪಿಂಗ್ ಯಾರ್ಡ್~ ನಿರ್ಮಿಸಬೇಕು, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ಗಾಗಿ ಪ್ರತ್ಯೇಕ ಫೀಡರ್, ಕೈಗಾರಿಕೆಗಳಿಗೆ ನೀರು ಪೂರೈಸಲು ಪ್ರತ್ಯೇಕ ಪೈಪ್ಲೈನ್ ಅಳವಡಿಸಬೇಕು. ರೈತರೊಂದಿಗೆ ಸಂಘರ್ಷ ಏರ್ಪಡದ ರೀತಿ ಭೂ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡಬೇಕು ಎಂಬುದೂ ಜಿಲ್ಲೆಯ ಉದ್ಯಮಿಗಳ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>