<p><strong>ಬೆಂಗಳೂರು: </strong>ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ಕೋರಮಂಗಲದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ ಪ್ರಸ್ತಾವದ ದಾಖಲೀಕರಣಕ್ಕೆ ಬುಧವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಜೆಡಿಎಸ್ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಯಿತು.<br /> <br /> ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಅದನ್ನು ಪಾಲಿಕೆಯಲ್ಲಿ ದಾಖಲೀಕರಿಸಲು ಸಂಬಂಧಪಟ್ಟ ಪ್ರಸ್ತಾವವನ್ನು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರು ಸಭೆಯಲ್ಲಿ ಮಂಡಿಸಿದಾಗ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.<br /> <br /> ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, `ಈ ಯೋಜನೆಯಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ಖಾಸಗಿಯವರ ಪಾಲಾಗಲಿದೆ. ಬದಲಿಗೆ `ನರ್ಮ್~ ಯೋಜನೆಯಡಿ ಸಾವಿರಾರು ಮನೆಗಳನ್ನು ನಿರ್ಮಿಸಿ ಈ ಜನರಿಗೆ ಹಂಚಿಕೆ ಮಾಡಿದರೆ ಅಮೂಲ್ಯವಾದ ಆಸ್ತಿ ಪಾಲಿಕೆಯಲ್ಲೇ ಉಳಿಯಲಿದೆ.<br /> <br /> ಈ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಂಡು ಮೇಯರ್ ಅವರು ನಾಳೆಯೇ ಶಂಕುಸ್ಥಾಪನೆ ನೆರವೇರಿಸಲಿ~ ಎಂದು ಒತ್ತಾಯಿಸಿದರು.`ಹಾಗಾಗಿ ಈ ಉದ್ದೇಶಿತ ಯೋಜನೆಯ ಪ್ರಸ್ತಾವವನ್ನು ಮರು ಪರಿಶೀಲನೆಗೆ ಸರ್ಕಾರಕ್ಕೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು~ ಎಂದರು.<br /> <br /> ಶಾಸಕ ಎನ್.ಎ. ಹ್ಯಾರಿಸ್, `ಕೋರಮಂಗಲದ ಆ ಜನತೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಶೀಘ್ರವಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು. ಬಳಿಕ ಈ ಯೋಜನೆಯ ಪ್ರಸ್ತಾವವನ್ನು ಪಾಲಿಕೆಯಲ್ಲಿ ದಾಖಲೀಕರಣ ಮಾಡಲು ಸಭೆ ಒಪ್ಪಿಗೆ ನೀಡಿತು.<br /> <br /> <strong>ಯೋಜನೆ ಬಗ್ಗೆ ಒಂದಿಷ್ಟು ವಿವರ:</strong> ಪಾಲಿಕೆಯು 1987ರಿಂದ 1992ರ ಅವಧಿಯಲ್ಲಿ ಕೋರಮಂಗಲದಲ್ಲಿ ಇಡಬ್ಲ್ಯೂಎಸ್ ಕುಟುಂಬಗಳಿಗೆ 42 ಬಹುಮಹಡಿ ಕಟ್ಟಡಗಳಲ್ಲಿ 1,512 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿತ್ತು. ಆದರೆ, ಶಿಥಿಲಗೊಂಡಿದ್ದ ಕೆಲವು ಕಟ್ಟಡ ಸಮುಚ್ಚಯಗಳು ಕುಸಿದು ಬಿದ್ದವು. ಆ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು.<br /> <br /> ಅದರಂತೆ ಒಟ್ಟು 15 ಎಕರೆ ಪ್ರದೇಶದ ಪೈಕಿ 8 ಎಕರೆ ಪ್ರದೇಶದಲ್ಲಿ 1640 ಮನೆಗಳನ್ನು ನಿರ್ಮಿಸುವುದು. ಬಾಕಿ ಉಳಿದ ಏಳು ಎಕರೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲಾಯಿತು. ವಸತಿ ಗೃಹಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಪಾಲುದಾರ ಖಾಸಗಿ ಸಂಸ್ಥೆಯೇ ನಿರ್ವಹಿಸುವುದಕ್ಕೆ ಷರತ್ತು ವಿಧಿಸಲು ತೀರ್ಮಾನಿಸಲಾಗಿತ್ತು.<br /> <br /> 30 ವರ್ಷಗಳ ಬಳಿಕ ವಸತಿ ಸಂಕೀರ್ಣದಲ್ಲಿ ಶೇ 50ರಷ್ಟು ಭಾಗವನ್ನು ಯಥಾಸ್ಥಿತಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಬೇಕು. ಬಾಕಿ ಉಳಿದ ಶೇ 50ರಷ್ಟು ಭಾಗವನ್ನು ಖಾಸಗಿ ಬಿಡ್ದಾರರಿಗೆ ಬಿಟ್ಟುಕೊಡಲು ಉದ್ದೇಶಿಸಲಾಗಿತ್ತು.<br /> <br /> ಈ ಯೋಜನೆಗೆ ಸಂಬಂಧಪಟ್ಟಂತೆ 12-10-2004ರಂದು ಪಾಲಿಕೆ ಟೆಂಡರ್ ಪ್ರಕಟಣೆ ಹೊರಡಿಸಿತ್ತು. ಈ ಯೋಜನೆಯ ಪ್ರಸ್ತಾವವನ್ನು ಹಿಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ತಿರಸ್ಕರಿಸಿದ್ದರು ಎನ್ನಲಾಗಿದೆ. ಟೆಂಡರ್ ಹಾಗೂ ಇತರೆ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆ ನಡೆದಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲು ಏರಿತ್ತು.<br /> <br /> ಅಂತಿಮವಾಗಿ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದ್ದು, ಪ್ರಸ್ತಾಪಿತ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು 12-10-2010ರಂದು ಒಪ್ಪಿಗೆ ನೀಡಿದೆ. ಈ ಆದೇಶವನ್ನು ಪಾಲಿಕೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಪಾಲಿಕೆಗೆ ರವಾನಿಸಿದೆ.<br /> <br /> <strong>ಮುಖ್ಯಾಂಶಗಳು</strong><br /> <strong>ಜೆಡಿಎಸ್ ವಿರೋಧದ ನಡುವೆಯೂ ಪ್ರಸ್ತಾವದ ದಾಖಲೀಕರಣಕ್ಕೆ ಒಪ್ಪಿಗೆ<br /> ಆಡಳಿತ ಪಕ್ಷದ ನಾಯಕರಿಂದ ಸಭೆಯಲ್ಲಿ ಮಂಡನೆ<br /> ನರ್ಮ ಯೋಜನೆಯಡಿ ಮನೆಗಳನ್ನು ನಿರ್ಮಿಸಿ, ಹಂಚಲಿ- ಪದ್ಮನಾಭ ರೆಡ್ಡಿ<br /> ಶೀಘ್ರ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು- ಶಾಸಕ ಎನ್.ಎ.ಹ್ಯಾರಿಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ಕೋರಮಂಗಲದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ ಪ್ರಸ್ತಾವದ ದಾಖಲೀಕರಣಕ್ಕೆ ಬುಧವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಜೆಡಿಎಸ್ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಯಿತು.<br /> <br /> ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಅದನ್ನು ಪಾಲಿಕೆಯಲ್ಲಿ ದಾಖಲೀಕರಿಸಲು ಸಂಬಂಧಪಟ್ಟ ಪ್ರಸ್ತಾವವನ್ನು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರು ಸಭೆಯಲ್ಲಿ ಮಂಡಿಸಿದಾಗ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.<br /> <br /> ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, `ಈ ಯೋಜನೆಯಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ಖಾಸಗಿಯವರ ಪಾಲಾಗಲಿದೆ. ಬದಲಿಗೆ `ನರ್ಮ್~ ಯೋಜನೆಯಡಿ ಸಾವಿರಾರು ಮನೆಗಳನ್ನು ನಿರ್ಮಿಸಿ ಈ ಜನರಿಗೆ ಹಂಚಿಕೆ ಮಾಡಿದರೆ ಅಮೂಲ್ಯವಾದ ಆಸ್ತಿ ಪಾಲಿಕೆಯಲ್ಲೇ ಉಳಿಯಲಿದೆ.<br /> <br /> ಈ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಂಡು ಮೇಯರ್ ಅವರು ನಾಳೆಯೇ ಶಂಕುಸ್ಥಾಪನೆ ನೆರವೇರಿಸಲಿ~ ಎಂದು ಒತ್ತಾಯಿಸಿದರು.`ಹಾಗಾಗಿ ಈ ಉದ್ದೇಶಿತ ಯೋಜನೆಯ ಪ್ರಸ್ತಾವವನ್ನು ಮರು ಪರಿಶೀಲನೆಗೆ ಸರ್ಕಾರಕ್ಕೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು~ ಎಂದರು.<br /> <br /> ಶಾಸಕ ಎನ್.ಎ. ಹ್ಯಾರಿಸ್, `ಕೋರಮಂಗಲದ ಆ ಜನತೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಶೀಘ್ರವಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು. ಬಳಿಕ ಈ ಯೋಜನೆಯ ಪ್ರಸ್ತಾವವನ್ನು ಪಾಲಿಕೆಯಲ್ಲಿ ದಾಖಲೀಕರಣ ಮಾಡಲು ಸಭೆ ಒಪ್ಪಿಗೆ ನೀಡಿತು.<br /> <br /> <strong>ಯೋಜನೆ ಬಗ್ಗೆ ಒಂದಿಷ್ಟು ವಿವರ:</strong> ಪಾಲಿಕೆಯು 1987ರಿಂದ 1992ರ ಅವಧಿಯಲ್ಲಿ ಕೋರಮಂಗಲದಲ್ಲಿ ಇಡಬ್ಲ್ಯೂಎಸ್ ಕುಟುಂಬಗಳಿಗೆ 42 ಬಹುಮಹಡಿ ಕಟ್ಟಡಗಳಲ್ಲಿ 1,512 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿತ್ತು. ಆದರೆ, ಶಿಥಿಲಗೊಂಡಿದ್ದ ಕೆಲವು ಕಟ್ಟಡ ಸಮುಚ್ಚಯಗಳು ಕುಸಿದು ಬಿದ್ದವು. ಆ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು.<br /> <br /> ಅದರಂತೆ ಒಟ್ಟು 15 ಎಕರೆ ಪ್ರದೇಶದ ಪೈಕಿ 8 ಎಕರೆ ಪ್ರದೇಶದಲ್ಲಿ 1640 ಮನೆಗಳನ್ನು ನಿರ್ಮಿಸುವುದು. ಬಾಕಿ ಉಳಿದ ಏಳು ಎಕರೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲಾಯಿತು. ವಸತಿ ಗೃಹಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಪಾಲುದಾರ ಖಾಸಗಿ ಸಂಸ್ಥೆಯೇ ನಿರ್ವಹಿಸುವುದಕ್ಕೆ ಷರತ್ತು ವಿಧಿಸಲು ತೀರ್ಮಾನಿಸಲಾಗಿತ್ತು.<br /> <br /> 30 ವರ್ಷಗಳ ಬಳಿಕ ವಸತಿ ಸಂಕೀರ್ಣದಲ್ಲಿ ಶೇ 50ರಷ್ಟು ಭಾಗವನ್ನು ಯಥಾಸ್ಥಿತಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಬೇಕು. ಬಾಕಿ ಉಳಿದ ಶೇ 50ರಷ್ಟು ಭಾಗವನ್ನು ಖಾಸಗಿ ಬಿಡ್ದಾರರಿಗೆ ಬಿಟ್ಟುಕೊಡಲು ಉದ್ದೇಶಿಸಲಾಗಿತ್ತು.<br /> <br /> ಈ ಯೋಜನೆಗೆ ಸಂಬಂಧಪಟ್ಟಂತೆ 12-10-2004ರಂದು ಪಾಲಿಕೆ ಟೆಂಡರ್ ಪ್ರಕಟಣೆ ಹೊರಡಿಸಿತ್ತು. ಈ ಯೋಜನೆಯ ಪ್ರಸ್ತಾವವನ್ನು ಹಿಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ತಿರಸ್ಕರಿಸಿದ್ದರು ಎನ್ನಲಾಗಿದೆ. ಟೆಂಡರ್ ಹಾಗೂ ಇತರೆ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆ ನಡೆದಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲು ಏರಿತ್ತು.<br /> <br /> ಅಂತಿಮವಾಗಿ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದ್ದು, ಪ್ರಸ್ತಾಪಿತ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು 12-10-2010ರಂದು ಒಪ್ಪಿಗೆ ನೀಡಿದೆ. ಈ ಆದೇಶವನ್ನು ಪಾಲಿಕೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಪಾಲಿಕೆಗೆ ರವಾನಿಸಿದೆ.<br /> <br /> <strong>ಮುಖ್ಯಾಂಶಗಳು</strong><br /> <strong>ಜೆಡಿಎಸ್ ವಿರೋಧದ ನಡುವೆಯೂ ಪ್ರಸ್ತಾವದ ದಾಖಲೀಕರಣಕ್ಕೆ ಒಪ್ಪಿಗೆ<br /> ಆಡಳಿತ ಪಕ್ಷದ ನಾಯಕರಿಂದ ಸಭೆಯಲ್ಲಿ ಮಂಡನೆ<br /> ನರ್ಮ ಯೋಜನೆಯಡಿ ಮನೆಗಳನ್ನು ನಿರ್ಮಿಸಿ, ಹಂಚಲಿ- ಪದ್ಮನಾಭ ರೆಡ್ಡಿ<br /> ಶೀಘ್ರ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು- ಶಾಸಕ ಎನ್.ಎ.ಹ್ಯಾರಿಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>