<p>ಆ ದಿನ ಕ್ಯಾಂಪಸ್ ತುಂಬಾ ವಿದ್ಯಾರ್ಥಿಗಳದ್ದೇ ಕಾರುಬಾರು. ಎಲ್ಲೆಂದರಲ್ಲಿ ಅವರ ಹರಟೆ ಎಗ್ಗಿಲ್ಲದೆ ಸಾಗಿತ್ತು. ಒಂದೆಡೆ ಪದವಿ ಮುಗಿಸಿದ ಸಂಭ್ರಮವಿದ್ದರೆ ಇನ್ನೊಂದೆಡೆ ಕಾಲೇಜು ಬಿಡಬೇಕಾದ ಬೇಸರ. <br /> <br /> ಇತ್ತೀಚೆಗಷ್ಟೆ ನಗರದ ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ 2008-2012ರ ಸಾಲಿನ ಪದವೀಧರರ ದಿನವನ್ನು ಹಮ್ಮಿಕೊಂಡಿದ್ದ ಸಂದರ್ಭ ಅದು. ಮುಂದಿನ ಭವಿಷ್ಯ ಶುಭಕರವಾಗಿರಲೆಂದು ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಶ್ವೇತ ವರ್ಣದ ಅಂಗಿಯ ಮೇಲೆ ಕಪ್ಪು ಮಾರ್ಕರ್ ಪೆನ್ನಿನಿಂದ ನೆನಪಿನ ಸಹಿ ಹಾಕುತ್ತಿದ್ದದ್ದು ಗಮನ ಸೆಳೆಯಿತು.<br /> <br /> `ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ನಮ್ಮ ಕಾಲೇಜಿನ ಪ್ರತಿನಿಧಿಗಳಿದ್ದಂತೆ~ ಎಂಬ ಪ್ರಾಂಶುಪಾಲ ಮ್ಯಾಥ್ಯೂ ಅವರ ನುಡಿಗೆ ವಿದ್ಯಾರ್ಥಿಗಳ ಕಡೆಯಿಂದ ಹರ್ಷೋದ್ಗಾರ. <br /> ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ `ಪದವೀಧರರ ದಿನ~ ಕ್ಕೆ ಹಲವು ಅತಿಥಿಗಳೂ ಆಗಮಿಸಿದ್ದರು. <br /> <br /> ತಾಜ್ ಗೇಟ್ವೇ ವ್ಯವಸ್ಥಾಪಕ ಆಲ್ಬರ್ಟ್ ರೆಬೆಲೊ, ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಡಿ.ವಿ.ಗುರುಪ್ರಸಾದ್, ಮುಖ್ಯ ಹಣಕಾಸು ಅಧಿಕಾರಿ ವೇಣುಗೋಪಾಲ ಶಾಸ್ತ್ರಿ, ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ.ಶ್ರೀನಾಥ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.<br /> <br /> ಉತ್ತಮ ವೃತ್ತಿಪರರಾಗಬೇಕೆಂದರೆ ಉತ್ತಮ ನಾಗರಿಕರೆನಿಸಿಕೊಳ್ಳಬೇಕಾದದೂ ಅಷ್ಟೇ ಅವಶ್ಯಕ. ಈ ರೀತಿ ಇದ್ದರೆ ಮಾತ್ರ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಸಾಧ್ಯ ಎಂದು ರೆಬೆಲೊ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. <br /> <br /> ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ, ಅಂಕ, ತಾಂತ್ರಿಕ ಕೌಶಲ್ಯ ಮುಂತಾದ ವಿಷಯಗಳನ್ನು ಆಧರಿಸಿ ಬಹುಮಾನಗಳನ್ನು ನೀಡಲಾಯಿತು.ವಿದ್ಯಾರ್ಥಿನಿ ರಿಯಾ ಮುಖರ್ಜಿಗೆ `ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್~ ಬಿರುದು ಲಭಿಸಿತು. 2011ನೇ ಸಾಲಿನಲ್ಲಿ ರ್ಯಾಂಕ್ ಪಡೆದ ಕೀರ್ತನಾ ಗಣೇಶ್ ಮತ್ತು ವಿದ್ಯಾಲಕ್ಷ್ಮಿ ಇವರನ್ನೂ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸ್ವಯಂ ರಚಿತ ಸಂಗೀತ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ತೆರೆಬಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ ದಿನ ಕ್ಯಾಂಪಸ್ ತುಂಬಾ ವಿದ್ಯಾರ್ಥಿಗಳದ್ದೇ ಕಾರುಬಾರು. ಎಲ್ಲೆಂದರಲ್ಲಿ ಅವರ ಹರಟೆ ಎಗ್ಗಿಲ್ಲದೆ ಸಾಗಿತ್ತು. ಒಂದೆಡೆ ಪದವಿ ಮುಗಿಸಿದ ಸಂಭ್ರಮವಿದ್ದರೆ ಇನ್ನೊಂದೆಡೆ ಕಾಲೇಜು ಬಿಡಬೇಕಾದ ಬೇಸರ. <br /> <br /> ಇತ್ತೀಚೆಗಷ್ಟೆ ನಗರದ ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ 2008-2012ರ ಸಾಲಿನ ಪದವೀಧರರ ದಿನವನ್ನು ಹಮ್ಮಿಕೊಂಡಿದ್ದ ಸಂದರ್ಭ ಅದು. ಮುಂದಿನ ಭವಿಷ್ಯ ಶುಭಕರವಾಗಿರಲೆಂದು ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಶ್ವೇತ ವರ್ಣದ ಅಂಗಿಯ ಮೇಲೆ ಕಪ್ಪು ಮಾರ್ಕರ್ ಪೆನ್ನಿನಿಂದ ನೆನಪಿನ ಸಹಿ ಹಾಕುತ್ತಿದ್ದದ್ದು ಗಮನ ಸೆಳೆಯಿತು.<br /> <br /> `ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ನಮ್ಮ ಕಾಲೇಜಿನ ಪ್ರತಿನಿಧಿಗಳಿದ್ದಂತೆ~ ಎಂಬ ಪ್ರಾಂಶುಪಾಲ ಮ್ಯಾಥ್ಯೂ ಅವರ ನುಡಿಗೆ ವಿದ್ಯಾರ್ಥಿಗಳ ಕಡೆಯಿಂದ ಹರ್ಷೋದ್ಗಾರ. <br /> ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ `ಪದವೀಧರರ ದಿನ~ ಕ್ಕೆ ಹಲವು ಅತಿಥಿಗಳೂ ಆಗಮಿಸಿದ್ದರು. <br /> <br /> ತಾಜ್ ಗೇಟ್ವೇ ವ್ಯವಸ್ಥಾಪಕ ಆಲ್ಬರ್ಟ್ ರೆಬೆಲೊ, ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಡಿ.ವಿ.ಗುರುಪ್ರಸಾದ್, ಮುಖ್ಯ ಹಣಕಾಸು ಅಧಿಕಾರಿ ವೇಣುಗೋಪಾಲ ಶಾಸ್ತ್ರಿ, ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ.ಶ್ರೀನಾಥ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.<br /> <br /> ಉತ್ತಮ ವೃತ್ತಿಪರರಾಗಬೇಕೆಂದರೆ ಉತ್ತಮ ನಾಗರಿಕರೆನಿಸಿಕೊಳ್ಳಬೇಕಾದದೂ ಅಷ್ಟೇ ಅವಶ್ಯಕ. ಈ ರೀತಿ ಇದ್ದರೆ ಮಾತ್ರ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಸಾಧ್ಯ ಎಂದು ರೆಬೆಲೊ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. <br /> <br /> ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ, ಅಂಕ, ತಾಂತ್ರಿಕ ಕೌಶಲ್ಯ ಮುಂತಾದ ವಿಷಯಗಳನ್ನು ಆಧರಿಸಿ ಬಹುಮಾನಗಳನ್ನು ನೀಡಲಾಯಿತು.ವಿದ್ಯಾರ್ಥಿನಿ ರಿಯಾ ಮುಖರ್ಜಿಗೆ `ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್~ ಬಿರುದು ಲಭಿಸಿತು. 2011ನೇ ಸಾಲಿನಲ್ಲಿ ರ್ಯಾಂಕ್ ಪಡೆದ ಕೀರ್ತನಾ ಗಣೇಶ್ ಮತ್ತು ವಿದ್ಯಾಲಕ್ಷ್ಮಿ ಇವರನ್ನೂ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸ್ವಯಂ ರಚಿತ ಸಂಗೀತ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ತೆರೆಬಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>