<p><strong>ಬೆಂಗಳೂರು: </strong>ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೊಳಿಸಲು ಬ್ಯಾಂಕುಗಳು ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಉಪ ಗವರ್ನರ್ ಶ್ಯಾಮಲಾ ಗೋಪಿನಾಥ್ ಹೇಳಿದರು. <br /> <br /> ಸೋಮವಾರ ಇಲ್ಲಿ ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆ `ಕ್ಯಾನ್ಮೊಬೈಲ್~ಗೆ ಚಾಲನೆ ನೀಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಮುಂದೆ ಬರಬೇಕು, ಇದಕ್ಕೆ ಸಂಬಂಧಿಸಿದಂತೆ `ಆರ್ಬಿಐ~ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದರು. <br /> <br /> `ಕ್ಯಾನ್ ಮೊಬೈಲ್~ ಗ್ರಾಹಕ ಸ್ನೇಹಿಯಾಗಿದ್ದು, ಸುರಕ್ಷಿತ ಮತ್ತು ತ್ವರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮನ್ ಅಭಿಪ್ರಾಯಪಟ್ಟರು. `ಗ್ರಾಹಕರು ಯಾವ ಸಮಯದಲ್ಲಿ, ಎಲ್ಲಿಂದ ಬೇಕಾದರೂ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಇದು 24*7 ನಂತೆ ಕಾರ್ಯನಿರ್ವಹಿಸುತ್ತದೆ. ಖಾತೆ ಉಳಿತಾಯ ಪರಿಶೀಲನೆ, ನಗದು ವರ್ಗಾವಣೆ ಸೇರಿದಂತೆ ಬಹುವಿಧ ಸೌಲಭ್ಯಗಳನ್ನು ಒಳಗೊಂಡಿದೆ~ ಎಂದರು. <br /> <br /> `ಕ್ಯಾನ್ ಮೊಬೈಲ್~ನ ನೊಂದಾಯಿತ ಗ್ರಾಹಕರು ಕೊನೆಯ ಐದು ವಹಿವಾಟಿನ ವಿವರಗಳನ್ನು ಮೊಬೈಲ್ ಮೂಲಕ ಪರಿಶೀಲಿಸಬಹುದು. ಅಂತರ ಬ್ಯಾಂಕ್ ಮೊಬೈಲ್ ಪಾವತಿ (ಐಎಂಪಿಎಸ್) ಸೌಲಭ್ಯದಡಿ `ಜಿಪಿಆರ್ಎಸ್~ ಮತ್ತು `ಜಾವಾ~ ಸೌಲಭ್ಯ ಇರುವ ಮೊಬೈಲ್ಗಳಲ್ಲಿ 50 ಸಾವಿರದವರೆಗೆ ಹಾಗೂ ಉಳಿದ ಹ್ಯಾಂಡ್ಸೆಟ್ಗಳಲ್ಲಿ ರೂ 5 ಸಾವಿರದವರೆಗೆ ನಗದು ವರ್ಗಾವಣೆ ಮಾಡಬಹುದು. ಸದ್ಯ ಬ್ಯಾಂಕ್ ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂದರು. <br /> <br /> `ಆರ್ಬಿಐ~ ಪ್ರಾದೇಶಿಕ ನಿರ್ದೇಶಕ ಪಿ. ವಿಜಯಭಾಸ್ಕರ್ ಮತ್ತಿತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೊಳಿಸಲು ಬ್ಯಾಂಕುಗಳು ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಉಪ ಗವರ್ನರ್ ಶ್ಯಾಮಲಾ ಗೋಪಿನಾಥ್ ಹೇಳಿದರು. <br /> <br /> ಸೋಮವಾರ ಇಲ್ಲಿ ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆ `ಕ್ಯಾನ್ಮೊಬೈಲ್~ಗೆ ಚಾಲನೆ ನೀಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಮುಂದೆ ಬರಬೇಕು, ಇದಕ್ಕೆ ಸಂಬಂಧಿಸಿದಂತೆ `ಆರ್ಬಿಐ~ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದರು. <br /> <br /> `ಕ್ಯಾನ್ ಮೊಬೈಲ್~ ಗ್ರಾಹಕ ಸ್ನೇಹಿಯಾಗಿದ್ದು, ಸುರಕ್ಷಿತ ಮತ್ತು ತ್ವರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮನ್ ಅಭಿಪ್ರಾಯಪಟ್ಟರು. `ಗ್ರಾಹಕರು ಯಾವ ಸಮಯದಲ್ಲಿ, ಎಲ್ಲಿಂದ ಬೇಕಾದರೂ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಇದು 24*7 ನಂತೆ ಕಾರ್ಯನಿರ್ವಹಿಸುತ್ತದೆ. ಖಾತೆ ಉಳಿತಾಯ ಪರಿಶೀಲನೆ, ನಗದು ವರ್ಗಾವಣೆ ಸೇರಿದಂತೆ ಬಹುವಿಧ ಸೌಲಭ್ಯಗಳನ್ನು ಒಳಗೊಂಡಿದೆ~ ಎಂದರು. <br /> <br /> `ಕ್ಯಾನ್ ಮೊಬೈಲ್~ನ ನೊಂದಾಯಿತ ಗ್ರಾಹಕರು ಕೊನೆಯ ಐದು ವಹಿವಾಟಿನ ವಿವರಗಳನ್ನು ಮೊಬೈಲ್ ಮೂಲಕ ಪರಿಶೀಲಿಸಬಹುದು. ಅಂತರ ಬ್ಯಾಂಕ್ ಮೊಬೈಲ್ ಪಾವತಿ (ಐಎಂಪಿಎಸ್) ಸೌಲಭ್ಯದಡಿ `ಜಿಪಿಆರ್ಎಸ್~ ಮತ್ತು `ಜಾವಾ~ ಸೌಲಭ್ಯ ಇರುವ ಮೊಬೈಲ್ಗಳಲ್ಲಿ 50 ಸಾವಿರದವರೆಗೆ ಹಾಗೂ ಉಳಿದ ಹ್ಯಾಂಡ್ಸೆಟ್ಗಳಲ್ಲಿ ರೂ 5 ಸಾವಿರದವರೆಗೆ ನಗದು ವರ್ಗಾವಣೆ ಮಾಡಬಹುದು. ಸದ್ಯ ಬ್ಯಾಂಕ್ ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂದರು. <br /> <br /> `ಆರ್ಬಿಐ~ ಪ್ರಾದೇಶಿಕ ನಿರ್ದೇಶಕ ಪಿ. ವಿಜಯಭಾಸ್ಕರ್ ಮತ್ತಿತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>