<p><strong>ಗಂಗಾವತಿ:</strong> ತಾಲ್ಲೂಕಿನ ಶ್ರೀರಾಮನಗರದಲ್ಲಿ ಕ್ರೈಸ್ತರು ನಡೆಸುತ್ತಿರುವ ಚೀಯೂನ್ ಹಬ್ಬ ಕೇವಲ ಧಾರ್ಮಿಕ ಜಾಗೃತಿ ಸಭೆ ಹಬ್ಬ ಅಲ್ಲ. ಅದರ ಬದಲಿಗೆ ಮತಾಂತರ ಮಾಡುವ ಹಬ್ಬವಾಗಿ ನಡೆಯುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ. <br /> <br /> ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಚೀಯೂನ್ ಹಬ್ಬದ ಬಗ್ಗೆ ನಿಗಾ ವಹಿಸುವಂತೆ ಒತ್ತಾಯಿಸಿದರು.<br /> <br /> ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಕೆಲ ಕ್ರೈಸ್ತ ಮಿಶನರಿಗಳು ಸಾಕಷ್ಟು ಆರ್ಥಿಕ ಸಹಾಯ ಪಡೆದು ದೇಶದಲ್ಲಿ ಮತಾಂತರ ನಡೆಸುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಕನಕಗಿರಿಯಲ್ಲಿ ನಡೆದ ಪ್ರಕರಣ. <br /> <br /> ಬೆಂಗಳೂರಿನ ಸುನಿಲ್, ಟಿ.ಡಬ್ಲೂ.ಡಿ. ಸಂಸ್ಥೆಯ ಜಾನಪಾಲ್, ವೈ. ಜಾನಪಾಲ್, ಪಾಸ್ಟರ್ ಸಾಲೋಮನ್ ಅವರು ಪಿಡಬ್ಲೂಡಿಯ ರಾಜೇಶ ವಸ್ತ್ರದ ಅವರ ಸಹಾಯದಿಂದ ಗ್ರಾಮದ ಶ್ರೀಮಂತರ ಮನೆತನ ಹೆಣ್ಣು ಮಗಳಿಗೆ ಸಂಮೋಹನ ಮಾಡಿ ವಂಚಿಸಿದ್ದರು. <br /> <br /> ಇದು ಜನರ ನೆನಪಿನಿಂದ ಅಳಿಯುವ ಮುನ್ನವೇ ಅನಿಲ್ಕುಮಾರ್ ಮತ್ತವರ ತಂಡ ಚೀಯೂನ್ ಹಬ್ಬದ ನೆಪದಲ್ಲಿ ಶ್ರೀರಾಮನಗರದಲ್ಲಿ ಅಸಹಾಯಕ ಬಡವರನ್ನು ಮತಾಂತರ ಪ್ರಕ್ರಿಯೆಗೆ ಒಳಪಡಿಸುತ್ತಿದ್ದಾರೆ ಎಂದು ಸಂಘಟಕರು ಆರೋಪಿಸಿದರು. <br /> <br /> ವೇದಿಕೆಯಲ್ಲಿ ಹಣ, ಬಟ್ಟೆ, ಗ್ರಹೋಪಯೋಗಿ ವಸ್ತು ಕಾಣಿಕೆಯಾಗಿ ನೀಡುವುದನ್ನು ತಡೆಯಬೇಕು, ಹಿಂದು ಧರ್ಮದ ಅವಹೇಳನ ಸಲ್ಲ. ಪವಾಡದಂತ ಕಾರ್ಯ ಕೈಬಿಡಬೇಕು, ಮತಾಂತರಕ್ಕೆ ಪ್ರಚೋದಿಸುವುದು ಕೈಬಿಡುವಂತೆ ಒತ್ತಾಯಿಸಲಾಯಿತು. <br /> <br /> ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಹೇರೂರು, ಸಹ ಸಂಚಾಲಕ ನೀಲಕಂಠಪ್ಪ ನಾಗಶೆಟ್ಟಿ, ಜಗದೀಶ ಹೇರೂರು, ಸಿದ್ದರಾಮಗೌಳಿ, ಶಿವು ಅರಿಕೇರಿ, ಮಲ್ಲಿಕಾರ್ಜುನ, ಮದನಕುಮಾರ, ಸಂದೇಶ ಕುಮಾರ, ಚಂದ್ರು ಇತರರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ತಾಲ್ಲೂಕಿನ ಶ್ರೀರಾಮನಗರದಲ್ಲಿ ಕ್ರೈಸ್ತರು ನಡೆಸುತ್ತಿರುವ ಚೀಯೂನ್ ಹಬ್ಬ ಕೇವಲ ಧಾರ್ಮಿಕ ಜಾಗೃತಿ ಸಭೆ ಹಬ್ಬ ಅಲ್ಲ. ಅದರ ಬದಲಿಗೆ ಮತಾಂತರ ಮಾಡುವ ಹಬ್ಬವಾಗಿ ನಡೆಯುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ. <br /> <br /> ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಚೀಯೂನ್ ಹಬ್ಬದ ಬಗ್ಗೆ ನಿಗಾ ವಹಿಸುವಂತೆ ಒತ್ತಾಯಿಸಿದರು.<br /> <br /> ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಕೆಲ ಕ್ರೈಸ್ತ ಮಿಶನರಿಗಳು ಸಾಕಷ್ಟು ಆರ್ಥಿಕ ಸಹಾಯ ಪಡೆದು ದೇಶದಲ್ಲಿ ಮತಾಂತರ ನಡೆಸುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಕನಕಗಿರಿಯಲ್ಲಿ ನಡೆದ ಪ್ರಕರಣ. <br /> <br /> ಬೆಂಗಳೂರಿನ ಸುನಿಲ್, ಟಿ.ಡಬ್ಲೂ.ಡಿ. ಸಂಸ್ಥೆಯ ಜಾನಪಾಲ್, ವೈ. ಜಾನಪಾಲ್, ಪಾಸ್ಟರ್ ಸಾಲೋಮನ್ ಅವರು ಪಿಡಬ್ಲೂಡಿಯ ರಾಜೇಶ ವಸ್ತ್ರದ ಅವರ ಸಹಾಯದಿಂದ ಗ್ರಾಮದ ಶ್ರೀಮಂತರ ಮನೆತನ ಹೆಣ್ಣು ಮಗಳಿಗೆ ಸಂಮೋಹನ ಮಾಡಿ ವಂಚಿಸಿದ್ದರು. <br /> <br /> ಇದು ಜನರ ನೆನಪಿನಿಂದ ಅಳಿಯುವ ಮುನ್ನವೇ ಅನಿಲ್ಕುಮಾರ್ ಮತ್ತವರ ತಂಡ ಚೀಯೂನ್ ಹಬ್ಬದ ನೆಪದಲ್ಲಿ ಶ್ರೀರಾಮನಗರದಲ್ಲಿ ಅಸಹಾಯಕ ಬಡವರನ್ನು ಮತಾಂತರ ಪ್ರಕ್ರಿಯೆಗೆ ಒಳಪಡಿಸುತ್ತಿದ್ದಾರೆ ಎಂದು ಸಂಘಟಕರು ಆರೋಪಿಸಿದರು. <br /> <br /> ವೇದಿಕೆಯಲ್ಲಿ ಹಣ, ಬಟ್ಟೆ, ಗ್ರಹೋಪಯೋಗಿ ವಸ್ತು ಕಾಣಿಕೆಯಾಗಿ ನೀಡುವುದನ್ನು ತಡೆಯಬೇಕು, ಹಿಂದು ಧರ್ಮದ ಅವಹೇಳನ ಸಲ್ಲ. ಪವಾಡದಂತ ಕಾರ್ಯ ಕೈಬಿಡಬೇಕು, ಮತಾಂತರಕ್ಕೆ ಪ್ರಚೋದಿಸುವುದು ಕೈಬಿಡುವಂತೆ ಒತ್ತಾಯಿಸಲಾಯಿತು. <br /> <br /> ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಹೇರೂರು, ಸಹ ಸಂಚಾಲಕ ನೀಲಕಂಠಪ್ಪ ನಾಗಶೆಟ್ಟಿ, ಜಗದೀಶ ಹೇರೂರು, ಸಿದ್ದರಾಮಗೌಳಿ, ಶಿವು ಅರಿಕೇರಿ, ಮಲ್ಲಿಕಾರ್ಜುನ, ಮದನಕುಮಾರ, ಸಂದೇಶ ಕುಮಾರ, ಚಂದ್ರು ಇತರರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>