<p>ಮೈಸೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ಅಭಯಾರಣ್ಯದಿಂದ ಸುಜ್ಜಿಲು ಮರಗಳನ್ನು ತಮಿಳುನಾಡಿನ ಮಂದಿ ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯುತ್ತಿದ್ದರೂ ರಾಜ್ಯ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ.<br /> <br /> ಈ ಕೃತ್ಯದಿಂದಾಗಿ ಕಾವೇರಿ ಅಭಯಾರಣ್ಯದ ಗೋಪಿನಾಥಂ ವಲಯದ ಪಾಲಾರ್ ಬೀಟ್ ಅಡಿಪಾಲಾರ್ ಬೆಟ್ಟದಲ್ಲಿ ಸುಮಾರು 400ಕ್ಕೂ ಹೆಚ್ಚು ಸುಜ್ಜಿಲು ಮರಗಳು ಕೊಂಬೆಗಳಿಲ್ಲದೆ ಬೋಳು ಬೋಳಾಗಿ ಕಾಣುತ್ತಿವೆ. <br /> <br /> ಇನ್ನು ಕೆಲವು ಮರಗಳ ಕಾಂಡಗಳು ಮಾತ್ರ ಉಳಿದಿವೆ. ಸುಜ್ಜಿಲು ಮರದ ಎಲೆ, ಅಂಟು ಮತ್ತು ಕೊಂಬೆಗಳನ್ನು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ತಮಿಳುನಾಡಿನವರು ರಾಜ್ಯದ ಅರಣ್ಯಕ್ಕೆ ಸೇರಿದ ಸುಜ್ಜಿಲು ಮರಗಳಿಗೆ ಲಗ್ಗೆ ಇಟ್ಟಿದ್ದಾರೆ. ಈ ಕುರಿತು ಕಾವೇರಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಗ್ ಅವರನ್ನು ವಿಚಾರಿಸಿದರೆ `ಆ ಬಗ್ಗೆ ನನಗೇನೂ ಮಾಹಿತಿ ಇಲ್ಲ~ ಎನ್ನುತ್ತಾರೆ.<br /> <br /> ಸುಜ್ಜಿಲು ಮರದ ವೈಜ್ಞಾನಿಕ ಹೆಸರು `ಅಲ್ಬಿಝಿಯ ಅಮರ~ (ಅ್ಝಚಿಜ್ಢಿಜಿ ಞಚ್ಟ). ಇದು ಬಹುಉಪಯೋಗಿ ಮರ.ಈ ಮರದ ಎಲೆಯ ಪುಡಿಯನ್ನು ಸೀಗೆಪುಡಿಯಂತೆ ಸ್ನಾನಕ್ಕೆ ಬಳಸಲಾಗುತ್ತದೆ. ಮರದ ಎಲೆಯಲ್ಲಿ ಇರುವ `ಸಪೊನಿನ್~(ಖಟ್ಞಜ್ಞಿ) ಎಂಬ ರಾಸಾಯನಿಕಕ್ಕೆ ಜಿಡ್ಡು ಹಾಗೂ ಕೊಳೆಯನ್ನು ಸ್ವಚ್ಛಗೊಳಿಸುವ ಗುಣ ಇದೆ. ಜವಳಿ ಉದ್ಯಮದಲ್ಲಿ ನೈಸರ್ಗಿಕ ಬಣ್ಣಕ್ಕೂ ಈ ಮರದ ಉತ್ಪನ್ನವನ್ನು ಬಳಸಲಾಗುತ್ತಿದೆ.ಮರದಿಂದ ಒಸರುವ ಅಂಟಿಗೆ ಸಿಹಿ ಸೇರಿಸಿ ಕೆಲವು ಆಹಾರ ಪದಾರ್ಥಗಳಲ್ಲೂ ಬಳಸಲಾಗುತ್ತದೆ. ಮರದ ಕೊಂಬೆಯನ್ನು ಇಟ್ಟಿಗೆ ಸುಡಲು ಸಹ ಬಳಸಲಾಗುತ್ತದೆ.<br /> <br /> ರಾಜ್ಯದ ಅಡಿಪಾಲಾರ್ ಬೆಟ್ಟ ಮತ್ತು ತಮಿಳುನಾಡಿನ ಕಾರಕಾಡು ಹಾಗೂ ಗೋವಿಂದಪಾಡಿ ನಡುವೆ ಕಾವೇರಿ ನದಿ ಹರಿಯುತ್ತಿದೆ. ಕಾರಕಾಡು ಹಾಗೂ ಗೋವಿಂದಪಾಡಿಯಲ್ಲಿ ಸುಜ್ಜಿಲು ಪುಡಿ, ಆ ಮರದ ಅಂಟು ಬಳಕೆಗೆ ಸಂಬಂಧಿಸಿದ ಹಲವು ಗುಡಿ ಕೈಗಾರಿಕೆಗಳಿವೆ. ಅಲ್ಲದೇ ಇಟ್ಟಿಗೆ ತಯಾರಿಸುವ ತಾಣಗಳು ಹೆಚ್ಚಾಗಿವೆ. ಅಲ್ಲಿನ ಬೇಡಿಕೆಗಳನ್ನು ಪೂರೈಸಲು ರಾಜ್ಯದ ಅರಣ್ಯ ಸಂಪತ್ತನ್ನು ತಮಿಳುನಾಡಿನ ಜನರು ಲೂಟಿ ಮಾಡುತ್ತಿದ್ದಾರೆ.<br /> <br /> ಒಂದು ಬಾರಿಗೆ 15ರಿಂದ 20 ಮಂದಿ ಕಾವೇರಿ ನದಿ ದಾಟಿ ಬಂದು ಅಡಿಪಾಲಾರ್ ಬೆಟ್ಟ ಹತ್ತುತ್ತಾರೆ. ಬೆಟ್ಟದಿಂದ ಮರದ ಎಲೆ ಹಾಗೂ ಕೊಂಬೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಿ ಕಾವೇರಿ ನದಿ ದಡದಿಂದ ತೆಪ್ಪದಲ್ಲಿ ತಮಿಳುನಾಡು ಗಡಿಗೆ ದಾಟಿಸುತ್ತಿದ್ದಾರೆ.<br /> <br /> `ಅಡಿಪಾಲಾರ್ ಬೆಟ್ಟದಲ್ಲಿ ಕಾಡಾನೆಗಳಿಗೆ ಉತ್ತಮ ಆಹಾರ ಹಾಗೂ ನೀರು ಲಭ್ಯವಿದೆ. ಇದು ಆನೆಗಳ ಅತ್ಯುತ್ತಮ ಆವಾಸ ಸ್ಥಾನವೂ ಹೌದು. ಲೂಟಿಗಾರರ ಹಾವಳಿಯಿಂದ ಬೆಟ್ಟದಲ್ಲಿ ಆನೆಗಳಿಗೂ ಕಿರಿಕಿರಿ ತಪ್ಪಿದ್ದಲ್ಲ~ ಎನ್ನುತ್ತಾರೆ ಸ್ಥಳೀಯ ರಾಮಪುರ ಗ್ರಾಮ ಪಂಚಾಯಿತಿ ಸದಸ್ಯೆ ಮುತ್ತುರಾಜಮ್ಮ.<br /> <br /> ತಮಿಳರ ಈ ಚಟುವಟಿಕೆ ನಡೆಯುವುದು ಮುಂಗಾರು ಅವಧಿಯಲ್ಲೇ ಹೆಚ್ಚು. ಏಕೆಂದರೆ ಮಳೆಯ ಕಾರಣ ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದ ಕಡೆಗೆ ಅಷ್ಟಾಗಿ ಸುಳಿಯುವುದಿಲ್ಲ. ಹಾಗಾಗಿ ತಮಿಳುನಾಡಿನ ಉದ್ಯಮಕ್ಕೆ ರಾಜ್ಯದ ಸಂಪನ್ಮೂಲ ಬಳಕೆಯಾಗುತ್ತಿದೆ. ಈ ಮೂಲಕ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಉತ್ಪನ್ನಗಳನ್ನು ಬಳಸುವವರು ಅವರೇ. ಲಾಭ ಪಡೆಯುವವರು ಅವರೇ. ರಾಜ್ಯಕ್ಕೆ ಉಳಿದಿರುವುದು ಸಂಪನ್ಮೂಲ ನಷ್ಟ ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ಅಭಯಾರಣ್ಯದಿಂದ ಸುಜ್ಜಿಲು ಮರಗಳನ್ನು ತಮಿಳುನಾಡಿನ ಮಂದಿ ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯುತ್ತಿದ್ದರೂ ರಾಜ್ಯ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ.<br /> <br /> ಈ ಕೃತ್ಯದಿಂದಾಗಿ ಕಾವೇರಿ ಅಭಯಾರಣ್ಯದ ಗೋಪಿನಾಥಂ ವಲಯದ ಪಾಲಾರ್ ಬೀಟ್ ಅಡಿಪಾಲಾರ್ ಬೆಟ್ಟದಲ್ಲಿ ಸುಮಾರು 400ಕ್ಕೂ ಹೆಚ್ಚು ಸುಜ್ಜಿಲು ಮರಗಳು ಕೊಂಬೆಗಳಿಲ್ಲದೆ ಬೋಳು ಬೋಳಾಗಿ ಕಾಣುತ್ತಿವೆ. <br /> <br /> ಇನ್ನು ಕೆಲವು ಮರಗಳ ಕಾಂಡಗಳು ಮಾತ್ರ ಉಳಿದಿವೆ. ಸುಜ್ಜಿಲು ಮರದ ಎಲೆ, ಅಂಟು ಮತ್ತು ಕೊಂಬೆಗಳನ್ನು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ತಮಿಳುನಾಡಿನವರು ರಾಜ್ಯದ ಅರಣ್ಯಕ್ಕೆ ಸೇರಿದ ಸುಜ್ಜಿಲು ಮರಗಳಿಗೆ ಲಗ್ಗೆ ಇಟ್ಟಿದ್ದಾರೆ. ಈ ಕುರಿತು ಕಾವೇರಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಗ್ ಅವರನ್ನು ವಿಚಾರಿಸಿದರೆ `ಆ ಬಗ್ಗೆ ನನಗೇನೂ ಮಾಹಿತಿ ಇಲ್ಲ~ ಎನ್ನುತ್ತಾರೆ.<br /> <br /> ಸುಜ್ಜಿಲು ಮರದ ವೈಜ್ಞಾನಿಕ ಹೆಸರು `ಅಲ್ಬಿಝಿಯ ಅಮರ~ (ಅ್ಝಚಿಜ್ಢಿಜಿ ಞಚ್ಟ). ಇದು ಬಹುಉಪಯೋಗಿ ಮರ.ಈ ಮರದ ಎಲೆಯ ಪುಡಿಯನ್ನು ಸೀಗೆಪುಡಿಯಂತೆ ಸ್ನಾನಕ್ಕೆ ಬಳಸಲಾಗುತ್ತದೆ. ಮರದ ಎಲೆಯಲ್ಲಿ ಇರುವ `ಸಪೊನಿನ್~(ಖಟ್ಞಜ್ಞಿ) ಎಂಬ ರಾಸಾಯನಿಕಕ್ಕೆ ಜಿಡ್ಡು ಹಾಗೂ ಕೊಳೆಯನ್ನು ಸ್ವಚ್ಛಗೊಳಿಸುವ ಗುಣ ಇದೆ. ಜವಳಿ ಉದ್ಯಮದಲ್ಲಿ ನೈಸರ್ಗಿಕ ಬಣ್ಣಕ್ಕೂ ಈ ಮರದ ಉತ್ಪನ್ನವನ್ನು ಬಳಸಲಾಗುತ್ತಿದೆ.ಮರದಿಂದ ಒಸರುವ ಅಂಟಿಗೆ ಸಿಹಿ ಸೇರಿಸಿ ಕೆಲವು ಆಹಾರ ಪದಾರ್ಥಗಳಲ್ಲೂ ಬಳಸಲಾಗುತ್ತದೆ. ಮರದ ಕೊಂಬೆಯನ್ನು ಇಟ್ಟಿಗೆ ಸುಡಲು ಸಹ ಬಳಸಲಾಗುತ್ತದೆ.<br /> <br /> ರಾಜ್ಯದ ಅಡಿಪಾಲಾರ್ ಬೆಟ್ಟ ಮತ್ತು ತಮಿಳುನಾಡಿನ ಕಾರಕಾಡು ಹಾಗೂ ಗೋವಿಂದಪಾಡಿ ನಡುವೆ ಕಾವೇರಿ ನದಿ ಹರಿಯುತ್ತಿದೆ. ಕಾರಕಾಡು ಹಾಗೂ ಗೋವಿಂದಪಾಡಿಯಲ್ಲಿ ಸುಜ್ಜಿಲು ಪುಡಿ, ಆ ಮರದ ಅಂಟು ಬಳಕೆಗೆ ಸಂಬಂಧಿಸಿದ ಹಲವು ಗುಡಿ ಕೈಗಾರಿಕೆಗಳಿವೆ. ಅಲ್ಲದೇ ಇಟ್ಟಿಗೆ ತಯಾರಿಸುವ ತಾಣಗಳು ಹೆಚ್ಚಾಗಿವೆ. ಅಲ್ಲಿನ ಬೇಡಿಕೆಗಳನ್ನು ಪೂರೈಸಲು ರಾಜ್ಯದ ಅರಣ್ಯ ಸಂಪತ್ತನ್ನು ತಮಿಳುನಾಡಿನ ಜನರು ಲೂಟಿ ಮಾಡುತ್ತಿದ್ದಾರೆ.<br /> <br /> ಒಂದು ಬಾರಿಗೆ 15ರಿಂದ 20 ಮಂದಿ ಕಾವೇರಿ ನದಿ ದಾಟಿ ಬಂದು ಅಡಿಪಾಲಾರ್ ಬೆಟ್ಟ ಹತ್ತುತ್ತಾರೆ. ಬೆಟ್ಟದಿಂದ ಮರದ ಎಲೆ ಹಾಗೂ ಕೊಂಬೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಿ ಕಾವೇರಿ ನದಿ ದಡದಿಂದ ತೆಪ್ಪದಲ್ಲಿ ತಮಿಳುನಾಡು ಗಡಿಗೆ ದಾಟಿಸುತ್ತಿದ್ದಾರೆ.<br /> <br /> `ಅಡಿಪಾಲಾರ್ ಬೆಟ್ಟದಲ್ಲಿ ಕಾಡಾನೆಗಳಿಗೆ ಉತ್ತಮ ಆಹಾರ ಹಾಗೂ ನೀರು ಲಭ್ಯವಿದೆ. ಇದು ಆನೆಗಳ ಅತ್ಯುತ್ತಮ ಆವಾಸ ಸ್ಥಾನವೂ ಹೌದು. ಲೂಟಿಗಾರರ ಹಾವಳಿಯಿಂದ ಬೆಟ್ಟದಲ್ಲಿ ಆನೆಗಳಿಗೂ ಕಿರಿಕಿರಿ ತಪ್ಪಿದ್ದಲ್ಲ~ ಎನ್ನುತ್ತಾರೆ ಸ್ಥಳೀಯ ರಾಮಪುರ ಗ್ರಾಮ ಪಂಚಾಯಿತಿ ಸದಸ್ಯೆ ಮುತ್ತುರಾಜಮ್ಮ.<br /> <br /> ತಮಿಳರ ಈ ಚಟುವಟಿಕೆ ನಡೆಯುವುದು ಮುಂಗಾರು ಅವಧಿಯಲ್ಲೇ ಹೆಚ್ಚು. ಏಕೆಂದರೆ ಮಳೆಯ ಕಾರಣ ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದ ಕಡೆಗೆ ಅಷ್ಟಾಗಿ ಸುಳಿಯುವುದಿಲ್ಲ. ಹಾಗಾಗಿ ತಮಿಳುನಾಡಿನ ಉದ್ಯಮಕ್ಕೆ ರಾಜ್ಯದ ಸಂಪನ್ಮೂಲ ಬಳಕೆಯಾಗುತ್ತಿದೆ. ಈ ಮೂಲಕ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಉತ್ಪನ್ನಗಳನ್ನು ಬಳಸುವವರು ಅವರೇ. ಲಾಭ ಪಡೆಯುವವರು ಅವರೇ. ರಾಜ್ಯಕ್ಕೆ ಉಳಿದಿರುವುದು ಸಂಪನ್ಮೂಲ ನಷ್ಟ ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>