<p>ಬೆಂಗಳೂರು: `ಗಡಿ ನಾಡಿನಲ್ಲಿ ಕನ್ನಡವನ್ನು ಕಾಪಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ~ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಹೇಳಿದರು.<br /> <br /> ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಸಂಘರ್ಷ ಸಮಿತಿ ಬುಧವಾರ ಏರ್ಪಡಿಸಿದ್ದ ಬಹುಜನ ಕನ್ನಡಿಗರು ಪಾಕ್ಷಿಕ ಪತ್ರಿಕೆಯ ವಾರ್ಷಿಕೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಕನ್ನಡ ನಾಡು ಬಹಳ ವಿಸ್ತಾರವಾಗಿದ್ದು, ಗಡಿ ನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆ, ಕನ್ನಡ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡವನ್ನು ಬೆಳಸಬೇಕು. ಪತ್ರಿಕೆಗಳು ಈ ನಿಟ್ಟಿನಲ್ಲಿ ಕೆಲಸಮಾಡಲು ನಾಡಿನ ಎಲ್ಲ ಚಿಂತಕರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪ್ರೋತ್ಸಾಹಿಸಬೇಕಾಗಿದೆ~ ಎಂದರು.<br /> <br /> `ಸಾಹಿತ್ಯ ಚಟುವಟಿಕೆಗಳನ್ನು ನೀಡುವ ಅಪರೂಪದ ಪತ್ರಿಕೆ ಬಹುಜನ ಕನ್ನಡಿಗರು ಪತ್ರಿಕೆಯಾಗಿದೆ. ಅದರಲ್ಲಿ ನವ ಚಿಂತನಗಳನ್ನು ಕಾಣಬಹುದು~ ಎಂದರು.<br /> <br /> ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ವಸುಂಧರಾ ಭೂಪತಿ ಮಾತನಾಡಿ, `ಪತ್ರಿಕೆ ಪ್ರಾರಂಭಿಸುವುದು ಸುಲಭ ಆದರೆ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಕನ್ನಡ ಲೇಖಕಿಯರನ್ನು ಬೆಳಸುವುದು ಪತ್ರಿಕೆಯಾಗಿದ್ದು, ಹೆಚ್ಚು ನಾಡಿನ ಬಗ್ಗೆ ಚಿಂತಿಸುವ ವಿಷಯಗಳು ಪತ್ರಿಕೆಯಲ್ಲಿ ಬರಲಿ~ ಎಂದರು.<br /> <br /> <strong>ವಿರೋಧ ಬೇಡ</strong><br /> ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಪದವಿ ತರಗತಿಗೆ ರೂಪಿಸಿರುವ ಸಾಹಿತ್ಯ ಸಲ್ಲಾಪ ಭಾಗ-2 ರಲ್ಲಿ ಡಾ.ಸಬಿಹಾ ಭೂಮಿಗೌಡ ಅವರು ಬರೆದಿರುವ `ಕೋಮುವಾದ ಮತ್ತು ಮಹಿಳೆ~ ಎಂಬ ಲೇಖನ ಹಾಗೂ ಡಾ.ಶಶಿಕಲಾ ವೀರಯ್ಯಸ್ವಾಮಿ ಬರೆದಿರುವ `ಕೃಷ್ಣನ ಕುರಿತ ಕವನ~ ವನ್ನು ಪಠ್ಯದಿಂದ ತೆಗೆದುಹಾಕಬೇಕೆಂದು ಒಂದು ಸಂಘಟನೆ ಅನಗತ್ಯ ವಿವಾದ ಮಾಡಿದೆ. ಲೇಖನದಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಯಾವುದೇ ಒಂದು ಜಾತಿ, ಧರ್ಮದ ಪರವಾಗಿ ನಿಂತ ವಾದಗಳಾಗಿಲ್ಲ. ಮಹಿಳೆಯ ಪರವಾಗಿ ಮಾತನಾಡುವ ಈ ಲೇಖನಗಳಲ್ಲಿ ನೊಂದ ಮಹಿಳೆಯ ಬಗೆಗಿನ ಕಾಳಜಿಯು ಅಭಿವ್ಯಕ್ತವಾಗಿದೆ. ಇದು ಮಹಿಳೆಯರ ಮೇಲೆ ನಡೆಸಿದ ಬೌದ್ಧಿಕ ಹಲ್ಲೆ ಎಂದು ಹೇಳಬೇಕಾಗುತ್ತದೆ~ ಎಂದು ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣ ಮತ್ತು ಬಹುಜನ ಕನ್ನಡಿಗರು ಪತ್ರಿಕೆ ಸಂಪಾದಕ ರಾಮಣ್ಣ.ಎಚ್.ಕೋಡಿಹೊಸಳ್ಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಗಡಿ ನಾಡಿನಲ್ಲಿ ಕನ್ನಡವನ್ನು ಕಾಪಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ~ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಹೇಳಿದರು.<br /> <br /> ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಸಂಘರ್ಷ ಸಮಿತಿ ಬುಧವಾರ ಏರ್ಪಡಿಸಿದ್ದ ಬಹುಜನ ಕನ್ನಡಿಗರು ಪಾಕ್ಷಿಕ ಪತ್ರಿಕೆಯ ವಾರ್ಷಿಕೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಕನ್ನಡ ನಾಡು ಬಹಳ ವಿಸ್ತಾರವಾಗಿದ್ದು, ಗಡಿ ನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆ, ಕನ್ನಡ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡವನ್ನು ಬೆಳಸಬೇಕು. ಪತ್ರಿಕೆಗಳು ಈ ನಿಟ್ಟಿನಲ್ಲಿ ಕೆಲಸಮಾಡಲು ನಾಡಿನ ಎಲ್ಲ ಚಿಂತಕರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪ್ರೋತ್ಸಾಹಿಸಬೇಕಾಗಿದೆ~ ಎಂದರು.<br /> <br /> `ಸಾಹಿತ್ಯ ಚಟುವಟಿಕೆಗಳನ್ನು ನೀಡುವ ಅಪರೂಪದ ಪತ್ರಿಕೆ ಬಹುಜನ ಕನ್ನಡಿಗರು ಪತ್ರಿಕೆಯಾಗಿದೆ. ಅದರಲ್ಲಿ ನವ ಚಿಂತನಗಳನ್ನು ಕಾಣಬಹುದು~ ಎಂದರು.<br /> <br /> ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ವಸುಂಧರಾ ಭೂಪತಿ ಮಾತನಾಡಿ, `ಪತ್ರಿಕೆ ಪ್ರಾರಂಭಿಸುವುದು ಸುಲಭ ಆದರೆ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಕನ್ನಡ ಲೇಖಕಿಯರನ್ನು ಬೆಳಸುವುದು ಪತ್ರಿಕೆಯಾಗಿದ್ದು, ಹೆಚ್ಚು ನಾಡಿನ ಬಗ್ಗೆ ಚಿಂತಿಸುವ ವಿಷಯಗಳು ಪತ್ರಿಕೆಯಲ್ಲಿ ಬರಲಿ~ ಎಂದರು.<br /> <br /> <strong>ವಿರೋಧ ಬೇಡ</strong><br /> ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಪದವಿ ತರಗತಿಗೆ ರೂಪಿಸಿರುವ ಸಾಹಿತ್ಯ ಸಲ್ಲಾಪ ಭಾಗ-2 ರಲ್ಲಿ ಡಾ.ಸಬಿಹಾ ಭೂಮಿಗೌಡ ಅವರು ಬರೆದಿರುವ `ಕೋಮುವಾದ ಮತ್ತು ಮಹಿಳೆ~ ಎಂಬ ಲೇಖನ ಹಾಗೂ ಡಾ.ಶಶಿಕಲಾ ವೀರಯ್ಯಸ್ವಾಮಿ ಬರೆದಿರುವ `ಕೃಷ್ಣನ ಕುರಿತ ಕವನ~ ವನ್ನು ಪಠ್ಯದಿಂದ ತೆಗೆದುಹಾಕಬೇಕೆಂದು ಒಂದು ಸಂಘಟನೆ ಅನಗತ್ಯ ವಿವಾದ ಮಾಡಿದೆ. ಲೇಖನದಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಯಾವುದೇ ಒಂದು ಜಾತಿ, ಧರ್ಮದ ಪರವಾಗಿ ನಿಂತ ವಾದಗಳಾಗಿಲ್ಲ. ಮಹಿಳೆಯ ಪರವಾಗಿ ಮಾತನಾಡುವ ಈ ಲೇಖನಗಳಲ್ಲಿ ನೊಂದ ಮಹಿಳೆಯ ಬಗೆಗಿನ ಕಾಳಜಿಯು ಅಭಿವ್ಯಕ್ತವಾಗಿದೆ. ಇದು ಮಹಿಳೆಯರ ಮೇಲೆ ನಡೆಸಿದ ಬೌದ್ಧಿಕ ಹಲ್ಲೆ ಎಂದು ಹೇಳಬೇಕಾಗುತ್ತದೆ~ ಎಂದು ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣ ಮತ್ತು ಬಹುಜನ ಕನ್ನಡಿಗರು ಪತ್ರಿಕೆ ಸಂಪಾದಕ ರಾಮಣ್ಣ.ಎಚ್.ಕೋಡಿಹೊಸಳ್ಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>