<p><strong>ಬೆಂಗಳೂರು: </strong>ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಖಾದಿಧಾರಿಗಳೊಂದಿಗೆ ಕಾವಿ ಧಾರಿಗಳೂ ಸೋಮವಾರ ಭೇಟಿ ನೀಡಿ ತಮ್ಮ `ಶುಭ ಹಾರೈಕೆ~ ಮತ್ತು `ಆಶೀರ್ವಾದ~ಗಳನ್ನು ನೀಡಿದರು.<br /> <br /> ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಬಿ.ಪಿ.ಹರೀಶ್, ಆನಂದ್ಸಿಂಗ್, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದ ಪ್ರಮುಖರು.<br /> <br /> ಮಠಾಧೀಶರ ಪಟ್ಟಿಯಲ್ಲಿ ರಂಭಾಪುರಿ ಬಾಳೆಹೊನ್ನೂರ ಮಠದ ವೀರಸೋಮೇಶ್ವರ ಸ್ವಾಮೀಜಿ, ವಿಭೂತಿಪುರ, ಯಡಿಯೂರು, ಶಿವಗಂಗೆ, ಹೆಮ್ಮಿಗನೂರು, ಯಲಸೂರು ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, `ಮಾನವೀಯತೆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವದಿಸಲು ಬಂದಿದ್ದೆವು. ಅವರಿಗೆ ದೇವರು ಶ್ರೇಯಸ್ಸು ನೀಡಲಿ~ ಎಂದರು.ಎಸ್.ಎ.ರಾಮದಾಸ್, `ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವುದನ್ನು ಹೊರತುಪಡಿಸಿ ಬೇರೇನೂ ಮಾಡಲಾಗುವುದಿಲ್ಲ~ ಎಂದರು.<br /> <br /> ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿದ್ದರಿಂದ ಯಡಿಯೂರಪ್ಪ ಅವರ ಭದ್ರತೆಗಾಗಿ 150ಕ್ಕೂ ಅಧಿಕ ಸಿವಿಲ್ ಮತ್ತು ಮೀಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. <br /> <br /> <strong>ಬೆಂಬಲಿಗರ ಬಲವಂತದ ಪ್ರವೇಶ!<br /> <br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು: </strong>ಆಸ್ಪತ್ರೆಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಕ್ಕಾಗಿ ಸಚಿವ ರೇಣುಕಾಚಾರ್ಯ ವಾರ್ಡ್ ಪ್ರವೇಶಿಸಿದರು. <br /> <br /> ಅವರ ಹಿಂದಿದ್ದ ಹಲವು ಬೆಂಬಲಿಗರಿಗೆ ಸ್ಥಳದಲ್ಲಿದ್ದ ಪೊಲೀಸರು ಪ್ರವೇಶ ನಿರಾಕರಿಸಿದರು. ಆದರೆ ಇದನ್ನು ಲೆಕ್ಕಿಸದ `ಬೆಂಬಲಿಗರು~ ವಾರ್ಡ್ ಪ್ರವೇಶಿಸಿಯೇ ಬಿಟ್ಟರು. ಇದಕ್ಕೆ ಪೂರಕವಾಗಿ ರೇಣುಕಾಚಾರ್ಯ ತಮ್ಮ ಬೆಂಬಲಿಗರನ್ನು ಒಳಬಿಡುವಂತೆ ಸನ್ನೆ ಮಾಡಿದರು!<br /> <br /> ಇನ್ನೊಂದು ಸಂದರ್ಭದಲ್ಲಿ, ಕೆಲವೇ ನಿಮಿಷಗಳ ಅಂತರದಲ್ಲಿ `ಗರಿಗರಿ ಬಟ್ಟೆ~ ತೊಟ್ಟ ಹಲವರು ಯಾರಿಗೂ ಹೇಳದೇ ಕೇಳದೇ ವಾರ್ಡ್ ಒಳಗೆ ನಡೆದರು. ಪೊಲೀಸರು ಅಡ್ಡಿಪಡಿಸುವುದಿರಲಿ, ಯಾರೆಂದು ಕೇಳುವ ಯತ್ನವನ್ನೂ ಮಾಡಲಿಲ್ಲ. ಆದರೆ ಹಾಗೆ ಹೋದವರನ್ನು ಸಿಟ್ಟಿನಿಂದ ಮನಸ್ಸಿನಲ್ಲೇ ಶಪಿಸುತ್ತಿದ್ದರು. <br /> <br /> ಮಾಜಿ ಮುಖ್ಯಮಂತ್ರಿಯೊಬ್ಬರು ದಾಖಲಾಗಿದ್ದರಿಂದ ಆಸ್ಪತ್ರೆಗೆ ಬರುವವರಿಗೆ ಇದು ಕುತೂಹಲದ ಕೇಂದ್ರವಾಗಿತ್ತು. ಹಲವು ನರ್ಸ್ಗಳು ಹಾಗೂ ಇತರ ಸಿಬ್ಬಂದಿ ತಮ್ಮ ಕೆಲಸದ ಪಾಳಿ ಮುಗಿದಿದ್ದರೂ ಮುಂದೆ ಏನಾಗುತ್ತದೋ ನೋಡೋಣ ಎಂದು ಕಾಯುತ್ತಿದ್ದರು. <br /> <br /> ಯಡಿಯೂರಪ್ಪ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವೈದ್ಯರ ಮತ್ತು ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಮುಖಂಡರ `ಬೈಟ್~ ಪಡೆಯಲು ಕಾಯುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು, ರೋಗಿಗಳನ್ನು ಕೊಂಡೊಯ್ಯುವ ಸ್ಟ್ರೆಚರ್ ಅನ್ನೇ ತಮ್ಮ ಮೈಕ್ಗಳನ್ನು ಇಡುವುದಕ್ಕಾಗಿ ಬಳಸಿಕೊಂಡಿದ್ದರು!<br /> <br /> ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರು ವಾರ್ಡ್ನಲ್ಲೇ ಬಹುಹೊತ್ತಿನ ತನಕ ಇದ್ದು, ತಂದೆಯ ಯೋಗಕ್ಷೇಮ ವಿಚಾರಿಸಿದರು. ಒಟ್ಟು 20 ವಾರ್ಡ್ಗಳಿರುವ ಮೂರನೇ ಮಹಡಿಯ ತೀವ್ರ ನಿಗಾ ಘಟಕದ 304ನೇ ವಾರ್ಡ್ನಲ್ಲಿ 275041ನೇ ಸಂಖ್ಯೆಯ ಒಳರೋಗಿಯಾಗಿ ಯಡಿಯೂರಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಇತರ ರೋಗಿಗಳು ಹಾಗೂ ಸಂಬಂಧಿಕರಿಗೆ ಅಂಥ ತೊಂದರೆಯೇನು ಆಗಲಿಲ್ಲ. ಆದರೆ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ನಿರಂತರವಾಗಿ ಬರುತ್ತಿದ್ದುದರಿಂದ ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ರೋಗಿಗಳ ಸಂಬಂಧಿಕರನ್ನು ಪೊಲೀಸರು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಡುತ್ತಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಖಾದಿಧಾರಿಗಳೊಂದಿಗೆ ಕಾವಿ ಧಾರಿಗಳೂ ಸೋಮವಾರ ಭೇಟಿ ನೀಡಿ ತಮ್ಮ `ಶುಭ ಹಾರೈಕೆ~ ಮತ್ತು `ಆಶೀರ್ವಾದ~ಗಳನ್ನು ನೀಡಿದರು.<br /> <br /> ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಬಿ.ಪಿ.ಹರೀಶ್, ಆನಂದ್ಸಿಂಗ್, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದ ಪ್ರಮುಖರು.<br /> <br /> ಮಠಾಧೀಶರ ಪಟ್ಟಿಯಲ್ಲಿ ರಂಭಾಪುರಿ ಬಾಳೆಹೊನ್ನೂರ ಮಠದ ವೀರಸೋಮೇಶ್ವರ ಸ್ವಾಮೀಜಿ, ವಿಭೂತಿಪುರ, ಯಡಿಯೂರು, ಶಿವಗಂಗೆ, ಹೆಮ್ಮಿಗನೂರು, ಯಲಸೂರು ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, `ಮಾನವೀಯತೆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವದಿಸಲು ಬಂದಿದ್ದೆವು. ಅವರಿಗೆ ದೇವರು ಶ್ರೇಯಸ್ಸು ನೀಡಲಿ~ ಎಂದರು.ಎಸ್.ಎ.ರಾಮದಾಸ್, `ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವುದನ್ನು ಹೊರತುಪಡಿಸಿ ಬೇರೇನೂ ಮಾಡಲಾಗುವುದಿಲ್ಲ~ ಎಂದರು.<br /> <br /> ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿದ್ದರಿಂದ ಯಡಿಯೂರಪ್ಪ ಅವರ ಭದ್ರತೆಗಾಗಿ 150ಕ್ಕೂ ಅಧಿಕ ಸಿವಿಲ್ ಮತ್ತು ಮೀಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. <br /> <br /> <strong>ಬೆಂಬಲಿಗರ ಬಲವಂತದ ಪ್ರವೇಶ!<br /> <br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು: </strong>ಆಸ್ಪತ್ರೆಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಕ್ಕಾಗಿ ಸಚಿವ ರೇಣುಕಾಚಾರ್ಯ ವಾರ್ಡ್ ಪ್ರವೇಶಿಸಿದರು. <br /> <br /> ಅವರ ಹಿಂದಿದ್ದ ಹಲವು ಬೆಂಬಲಿಗರಿಗೆ ಸ್ಥಳದಲ್ಲಿದ್ದ ಪೊಲೀಸರು ಪ್ರವೇಶ ನಿರಾಕರಿಸಿದರು. ಆದರೆ ಇದನ್ನು ಲೆಕ್ಕಿಸದ `ಬೆಂಬಲಿಗರು~ ವಾರ್ಡ್ ಪ್ರವೇಶಿಸಿಯೇ ಬಿಟ್ಟರು. ಇದಕ್ಕೆ ಪೂರಕವಾಗಿ ರೇಣುಕಾಚಾರ್ಯ ತಮ್ಮ ಬೆಂಬಲಿಗರನ್ನು ಒಳಬಿಡುವಂತೆ ಸನ್ನೆ ಮಾಡಿದರು!<br /> <br /> ಇನ್ನೊಂದು ಸಂದರ್ಭದಲ್ಲಿ, ಕೆಲವೇ ನಿಮಿಷಗಳ ಅಂತರದಲ್ಲಿ `ಗರಿಗರಿ ಬಟ್ಟೆ~ ತೊಟ್ಟ ಹಲವರು ಯಾರಿಗೂ ಹೇಳದೇ ಕೇಳದೇ ವಾರ್ಡ್ ಒಳಗೆ ನಡೆದರು. ಪೊಲೀಸರು ಅಡ್ಡಿಪಡಿಸುವುದಿರಲಿ, ಯಾರೆಂದು ಕೇಳುವ ಯತ್ನವನ್ನೂ ಮಾಡಲಿಲ್ಲ. ಆದರೆ ಹಾಗೆ ಹೋದವರನ್ನು ಸಿಟ್ಟಿನಿಂದ ಮನಸ್ಸಿನಲ್ಲೇ ಶಪಿಸುತ್ತಿದ್ದರು. <br /> <br /> ಮಾಜಿ ಮುಖ್ಯಮಂತ್ರಿಯೊಬ್ಬರು ದಾಖಲಾಗಿದ್ದರಿಂದ ಆಸ್ಪತ್ರೆಗೆ ಬರುವವರಿಗೆ ಇದು ಕುತೂಹಲದ ಕೇಂದ್ರವಾಗಿತ್ತು. ಹಲವು ನರ್ಸ್ಗಳು ಹಾಗೂ ಇತರ ಸಿಬ್ಬಂದಿ ತಮ್ಮ ಕೆಲಸದ ಪಾಳಿ ಮುಗಿದಿದ್ದರೂ ಮುಂದೆ ಏನಾಗುತ್ತದೋ ನೋಡೋಣ ಎಂದು ಕಾಯುತ್ತಿದ್ದರು. <br /> <br /> ಯಡಿಯೂರಪ್ಪ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವೈದ್ಯರ ಮತ್ತು ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಮುಖಂಡರ `ಬೈಟ್~ ಪಡೆಯಲು ಕಾಯುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು, ರೋಗಿಗಳನ್ನು ಕೊಂಡೊಯ್ಯುವ ಸ್ಟ್ರೆಚರ್ ಅನ್ನೇ ತಮ್ಮ ಮೈಕ್ಗಳನ್ನು ಇಡುವುದಕ್ಕಾಗಿ ಬಳಸಿಕೊಂಡಿದ್ದರು!<br /> <br /> ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರು ವಾರ್ಡ್ನಲ್ಲೇ ಬಹುಹೊತ್ತಿನ ತನಕ ಇದ್ದು, ತಂದೆಯ ಯೋಗಕ್ಷೇಮ ವಿಚಾರಿಸಿದರು. ಒಟ್ಟು 20 ವಾರ್ಡ್ಗಳಿರುವ ಮೂರನೇ ಮಹಡಿಯ ತೀವ್ರ ನಿಗಾ ಘಟಕದ 304ನೇ ವಾರ್ಡ್ನಲ್ಲಿ 275041ನೇ ಸಂಖ್ಯೆಯ ಒಳರೋಗಿಯಾಗಿ ಯಡಿಯೂರಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಇತರ ರೋಗಿಗಳು ಹಾಗೂ ಸಂಬಂಧಿಕರಿಗೆ ಅಂಥ ತೊಂದರೆಯೇನು ಆಗಲಿಲ್ಲ. ಆದರೆ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ನಿರಂತರವಾಗಿ ಬರುತ್ತಿದ್ದುದರಿಂದ ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ರೋಗಿಗಳ ಸಂಬಂಧಿಕರನ್ನು ಪೊಲೀಸರು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಡುತ್ತಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>