<p><strong>ಮೈಸೂರು:</strong> `ಎಚ್.ಡಿ.ಕೋಟೆ ತಾಲ್ಲೂಕು ಹುಣಸೇಕುಪ್ಪೆ ಹಾಡಿಯ ಭೀಮಸೇನನ ಪುತ್ರಿ ನೀಲಾವತಿಯನ್ನು 2012-13 ನೇ ಸಾಲಿಗೆ ಅಂತರಸಂತೆಯ ಪ್ರೌಢಶಾಲೆಗೆ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ ಸ್ಪಷ್ಟಪಡಿಸಿದ್ದಾರೆ.<br /> <br /> ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು `2012 ಮಾರ್ಚ್ 13 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಕುಟುಂಬ ನಿರ್ವಹಣೆಗೆ ಶಾಲೆ ಬಿಟ್ಟ ಬಾಲೆ ವಿಶೇಷ ವರದಿಯನ್ನು ಆಧರಿಸಿ ಎಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಲಾವತಿ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ನೀಲಾವತಿ 2009-10 ರಲ್ಲಿ ಸತ್ತಿಗೆಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡಿ ಉತ್ತೀರ್ಣಳಾಗಿದ್ದಾಳೆ. <br /> <br /> ನಂತರ ಈಕೆಯ ಮನೆಯ ಅಸಹಾಯಕ ಪರಿಸ್ಥಿತಿಯಿಂದಾಗಿ ಕೊಡಗು ಜಿಲ್ಲೆಗೆ ಗುಳೆ ಹೋಗಿದ್ದು, ನಂತರ ಊರಿಗೆ ಹಿಂತಿರುಗಿ ಬಂದಿದ್ದಳು. ಆಗ ಶಾಲೆಗೆ ಸೇರಲು ಸಿದ್ಧಳಿದ್ದು, ಆದರೆ ಪರೀಕ್ಷಾ ಸಮಯವಾಗಿರುವುದರಿಂದ ಈಕೆಯನ್ನು 2012-13 ನೇ ಸಾಲಿಗೆ 8 ನೇ ತರಗತಿಗೆ ಸೇರಿಸಲು ಹಾಗೂ ಅಂತರಸಂತೆಯಲ್ಲಿರುವ ಗಿರಿಜನ ವಸತಿ ನಿಲಯಕ್ಕೆ ಸೇರಿಸಲು ಚರ್ಚಿಸಿ ಕ್ರಮವಹಿಸಲಾಗಿದೆ~ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> `ಎಚ್.ಡಿ.ಕೋಟೆ ತಾಲ್ಲೂಕು ಹುಣಸೇಕುಪ್ಪೆ ಹಾಡಿಯ ಭೀಮಸೇನನ ಪುತ್ರಿ ನೀಲಾವತಿಯನ್ನು 2012-13 ನೇ ಸಾಲಿಗೆ ಅಂತರಸಂತೆಯ ಪ್ರೌಢಶಾಲೆಗೆ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ ಸ್ಪಷ್ಟಪಡಿಸಿದ್ದಾರೆ.<br /> <br /> ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು `2012 ಮಾರ್ಚ್ 13 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಕುಟುಂಬ ನಿರ್ವಹಣೆಗೆ ಶಾಲೆ ಬಿಟ್ಟ ಬಾಲೆ ವಿಶೇಷ ವರದಿಯನ್ನು ಆಧರಿಸಿ ಎಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಲಾವತಿ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ನೀಲಾವತಿ 2009-10 ರಲ್ಲಿ ಸತ್ತಿಗೆಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡಿ ಉತ್ತೀರ್ಣಳಾಗಿದ್ದಾಳೆ. <br /> <br /> ನಂತರ ಈಕೆಯ ಮನೆಯ ಅಸಹಾಯಕ ಪರಿಸ್ಥಿತಿಯಿಂದಾಗಿ ಕೊಡಗು ಜಿಲ್ಲೆಗೆ ಗುಳೆ ಹೋಗಿದ್ದು, ನಂತರ ಊರಿಗೆ ಹಿಂತಿರುಗಿ ಬಂದಿದ್ದಳು. ಆಗ ಶಾಲೆಗೆ ಸೇರಲು ಸಿದ್ಧಳಿದ್ದು, ಆದರೆ ಪರೀಕ್ಷಾ ಸಮಯವಾಗಿರುವುದರಿಂದ ಈಕೆಯನ್ನು 2012-13 ನೇ ಸಾಲಿಗೆ 8 ನೇ ತರಗತಿಗೆ ಸೇರಿಸಲು ಹಾಗೂ ಅಂತರಸಂತೆಯಲ್ಲಿರುವ ಗಿರಿಜನ ವಸತಿ ನಿಲಯಕ್ಕೆ ಸೇರಿಸಲು ಚರ್ಚಿಸಿ ಕ್ರಮವಹಿಸಲಾಗಿದೆ~ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>