<p><strong>ಗಾಂಧಿನಗರ (ಪಿಟಿಐ):</strong> ಕಳೆದೊಂದು ದಶಕದಿಂದ ಖಾಲಿ ಇದ್ದ ಗುಜರಾತ್ ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ಬೂಚ್ ಅವರನ್ನು ನೇಮಕಮಾಡಿ ರಾಜ್ಯಪಾಲರಾದ ಕಮಲಾ ಬೇನಿವಾಲ್ ಆದೇಶ ಹೊರಡಿಸಿದ್ದಾರೆ.<br /> <br /> ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಧಾನಸಭೆ ಸ್ಪೀಕರ್ ವಾಜು ವಾಲಾ ಸಮ್ಮುಖ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ. ಬೂಚ್ ಅಧಿಕಾರ ಸ್ವೀಕರಿಸಿದರು.<br /> <br /> ಈ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಆರ್.ಎಂ.ಸೋನಿ ಅವರ ಅಧಿಕಾರಾವಧಿ 2003ರ ಡಿಸೆಂಬರ್ಗೆ ಕೊನೆಗೊಂಡಿದ್ದು ನಂತರ ಈ ಸ್ಥಾನ ಖಾಲಿ ಉಳಿದಿತ್ತು. ಲೋಕಾಯುಕ್ತರ ಹುದ್ದೆಗೆ ನೇಮಕಮಾಡುವ ಸಂಬಂಧ ರಾಜ್ಯಪಾಲರ ಜತೆ ಮೋದಿ ಸರ್ಕಾರ 2011ರಿಂದಲೇ ಸಂಘರ್ಷ ನಡೆಸುತ್ತಿತ್ತು.<br /> ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಪದೇ ಪದೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ತಮ್ಮದೇ ರಾಜ್ಯದಲ್ಲಿ ಹತ್ತು ವರ್ಷಗಳಿಂದ ಲೋಕಾಯುಕ್ತರನ್ನು ನೇಮಕಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿರೋಧಪಕ್ಷ ಕಾಂಗ್ರೆಸ್ನಿಂದ ಹಲವು ಬಾರಿ ವಾಗ್ದಾಳಿಗೆ ಒಳಗಾಗಿದ್ದರು.<br /> <br /> ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ನಿವೃತ್ತ ನ್ಯಾ. ಆರ್.ಎ. ಮೆಹ್ತಾ ಅವರನ್ನು 2011ರ ಆ. 25ರಂದು ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದ ರಾಜ್ಯಪಾಲರ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಇದಾದ ನಂತರ ಅಧಿಕಾರವಹಿಸಿಕೊಳ್ಳಲು ನ್ಯಾ.ಮೆಹ್ತಾ ನಿರಾಕರಿಸಿದ್ದರಿಂದ ಬಿಕ್ಕಟ್ಟು ಉಲ್ಬಣಿಸಿತ್ತು. ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಈ ಕದನ ಸುಪ್ರೀಂಕೋರ್ಟ್ ತಲುಪಿದ್ದು ಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಂಧಿನಗರ (ಪಿಟಿಐ):</strong> ಕಳೆದೊಂದು ದಶಕದಿಂದ ಖಾಲಿ ಇದ್ದ ಗುಜರಾತ್ ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ಬೂಚ್ ಅವರನ್ನು ನೇಮಕಮಾಡಿ ರಾಜ್ಯಪಾಲರಾದ ಕಮಲಾ ಬೇನಿವಾಲ್ ಆದೇಶ ಹೊರಡಿಸಿದ್ದಾರೆ.<br /> <br /> ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಧಾನಸಭೆ ಸ್ಪೀಕರ್ ವಾಜು ವಾಲಾ ಸಮ್ಮುಖ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ. ಬೂಚ್ ಅಧಿಕಾರ ಸ್ವೀಕರಿಸಿದರು.<br /> <br /> ಈ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಆರ್.ಎಂ.ಸೋನಿ ಅವರ ಅಧಿಕಾರಾವಧಿ 2003ರ ಡಿಸೆಂಬರ್ಗೆ ಕೊನೆಗೊಂಡಿದ್ದು ನಂತರ ಈ ಸ್ಥಾನ ಖಾಲಿ ಉಳಿದಿತ್ತು. ಲೋಕಾಯುಕ್ತರ ಹುದ್ದೆಗೆ ನೇಮಕಮಾಡುವ ಸಂಬಂಧ ರಾಜ್ಯಪಾಲರ ಜತೆ ಮೋದಿ ಸರ್ಕಾರ 2011ರಿಂದಲೇ ಸಂಘರ್ಷ ನಡೆಸುತ್ತಿತ್ತು.<br /> ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಪದೇ ಪದೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ತಮ್ಮದೇ ರಾಜ್ಯದಲ್ಲಿ ಹತ್ತು ವರ್ಷಗಳಿಂದ ಲೋಕಾಯುಕ್ತರನ್ನು ನೇಮಕಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿರೋಧಪಕ್ಷ ಕಾಂಗ್ರೆಸ್ನಿಂದ ಹಲವು ಬಾರಿ ವಾಗ್ದಾಳಿಗೆ ಒಳಗಾಗಿದ್ದರು.<br /> <br /> ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ನಿವೃತ್ತ ನ್ಯಾ. ಆರ್.ಎ. ಮೆಹ್ತಾ ಅವರನ್ನು 2011ರ ಆ. 25ರಂದು ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದ ರಾಜ್ಯಪಾಲರ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಇದಾದ ನಂತರ ಅಧಿಕಾರವಹಿಸಿಕೊಳ್ಳಲು ನ್ಯಾ.ಮೆಹ್ತಾ ನಿರಾಕರಿಸಿದ್ದರಿಂದ ಬಿಕ್ಕಟ್ಟು ಉಲ್ಬಣಿಸಿತ್ತು. ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಈ ಕದನ ಸುಪ್ರೀಂಕೋರ್ಟ್ ತಲುಪಿದ್ದು ಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>