<p><strong>ಬೆಂಗಳೂರು: </strong>ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಬೆಳೆಯುವ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್ನಲ್ಲಿ ಭರವಸೆ ನೀಡಿದರು.<br /> <br /> ಪ್ರತಿಪಕ್ಷಗಳ ಸದಸ್ಯರ ಬೇಡಿಕೆ ಯಂತೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುಟ್ಕಾ ನಿಷೇಧದ ಬಳಿಕೆ ಅಡಿಕೆ ದರ ಕುಸಿದಿದೆ ಎಂಬ ವಾದದಲ್ಲಿ ಹುರುಳಿಲ್ಲ. ರಾಜ್ಯದ ಯಾವುದೇ ಮಾರುಕಟ್ಟೆಗಳಲ್ಲೂ ದರ ಕುಸಿದಿಲ್ಲ ಎಂದು ಅಂಕಿ-ಅಂಶ ನೀಡಿದರು.<br /> <br /> `ಜೂನ್ 3ರೊಳಗೆ ಗುಟ್ಕಾ ನಿಷೇಧಿಸುವುದು ಅನಿವಾರ್ಯ ಆಗಿತ್ತು. ಸುಪ್ರೀಂಕೋರ್ಟ್ ಈ ಕುರಿತು ಸ್ಪಷ್ಟವಾದ ನಿರ್ದೇಶನ ನೀಡಿತ್ತು. ಜೂನ್ 26ರೊಳಗೆ ಈ ಕುರಿತು ವರದಿ ಸಲ್ಲಿಕೆಗೆ ಕಾಲಾವಕಾಶ ಇದೆ. ಇದನ್ನು ತಪ್ಪಾಗಿ ಅರ್ಥೈಸು ವುದು ಬೇಡ. ಸರ್ಕಾರ ಸಿಗರೇಟು, ಬೀಡಿ ಲಾಬಿಗೆ ಮಣಿದಿದೆ ಎಂಬ ಟೀಕೆಗಳಲ್ಲಿ ಅರ್ಥವಿಲ್ಲ. ನಾವು ಯಾವ ಲಾಬಿಗೂ ಮಣಿಯುವುದಿಲ್ಲ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಬೆಳೆಯುವ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್ನಲ್ಲಿ ಭರವಸೆ ನೀಡಿದರು.<br /> <br /> ಪ್ರತಿಪಕ್ಷಗಳ ಸದಸ್ಯರ ಬೇಡಿಕೆ ಯಂತೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುಟ್ಕಾ ನಿಷೇಧದ ಬಳಿಕೆ ಅಡಿಕೆ ದರ ಕುಸಿದಿದೆ ಎಂಬ ವಾದದಲ್ಲಿ ಹುರುಳಿಲ್ಲ. ರಾಜ್ಯದ ಯಾವುದೇ ಮಾರುಕಟ್ಟೆಗಳಲ್ಲೂ ದರ ಕುಸಿದಿಲ್ಲ ಎಂದು ಅಂಕಿ-ಅಂಶ ನೀಡಿದರು.<br /> <br /> `ಜೂನ್ 3ರೊಳಗೆ ಗುಟ್ಕಾ ನಿಷೇಧಿಸುವುದು ಅನಿವಾರ್ಯ ಆಗಿತ್ತು. ಸುಪ್ರೀಂಕೋರ್ಟ್ ಈ ಕುರಿತು ಸ್ಪಷ್ಟವಾದ ನಿರ್ದೇಶನ ನೀಡಿತ್ತು. ಜೂನ್ 26ರೊಳಗೆ ಈ ಕುರಿತು ವರದಿ ಸಲ್ಲಿಕೆಗೆ ಕಾಲಾವಕಾಶ ಇದೆ. ಇದನ್ನು ತಪ್ಪಾಗಿ ಅರ್ಥೈಸು ವುದು ಬೇಡ. ಸರ್ಕಾರ ಸಿಗರೇಟು, ಬೀಡಿ ಲಾಬಿಗೆ ಮಣಿದಿದೆ ಎಂಬ ಟೀಕೆಗಳಲ್ಲಿ ಅರ್ಥವಿಲ್ಲ. ನಾವು ಯಾವ ಲಾಬಿಗೂ ಮಣಿಯುವುದಿಲ್ಲ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>