<p><strong>`ಶಾಂತಿ ಸಂವತ್ಸರವಾಗಲಿ~<br /> ನವದೆಹಲಿ, ಜ. 25</strong> - ಪ್ರಸ್ತುತ ವರ್ಷವೂ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಹಾಗೂ ನಮ್ಮ ದೇಶದ ಮತ್ತು ಜನತೆಯ ಅಭಿವೃದ್ಧಿಯ ವರ್ಷವಾಗಲೆಂಬ ಆಶಯವನ್ನು ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದರು ಗಣರಾಜ್ಯ ದಿನದಂದು ರಾಷ್ಟ್ರಕ್ಕಿತ್ತ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.<br /> <br /> `ನಮ್ಮ ಈ 13ನೆಯ ಗಣರಾಜ್ಯ ದಿನೋತ್ಸವದ ಸಂದರ್ಭದಲ್ಲಿ ನಾನು ನಮ್ಮ ಎಲ್ಲ ದೇಶಬಾಂಧವರನ್ನೂ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನೂ ಅಭಿನಂದಿಸುತ್ತೇನೆ. ಬರುವ ವರ್ಷದಲ್ಲಿ ಅವರೆಲ್ಲರಿಗೂ ಸುಖ ಸಂತೋಷಗಳು ಲಭಿಸಲೆಂದು ಹಾರೈಸುತ್ತೇನೆ~ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.<br /> <br /> <strong>ಕಾಂಗ್ರೆಸ್ಸಿಗೆ ಪ್ರಥಮ ಜಯಗಳು<br /> ಬೆಂಗಳೂರು, ಜ. 25</strong> - ಹುಣಸೂರು ಕ್ಷೇತ್ರದಿಂದ ಶ್ರೀ ಡಿ. ದೇವರಾಜೇ ಅರಸ್, ಬಿಜಾಪುರ ಜಿಲ್ಲೆಯ ತಾಳಿಕೋಟೆ ಕ್ಷೇತ್ರದಿಂದ ಶ್ರೀ ಜಿ. ಎನ್. ಪಾಟೀಲ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡು 1962ರ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪ್ರಥಮ ಎರಡು ಜಯಗಳನ್ನು ಗಳಿಸಿಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ಶಾಂತಿ ಸಂವತ್ಸರವಾಗಲಿ~<br /> ನವದೆಹಲಿ, ಜ. 25</strong> - ಪ್ರಸ್ತುತ ವರ್ಷವೂ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಹಾಗೂ ನಮ್ಮ ದೇಶದ ಮತ್ತು ಜನತೆಯ ಅಭಿವೃದ್ಧಿಯ ವರ್ಷವಾಗಲೆಂಬ ಆಶಯವನ್ನು ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದರು ಗಣರಾಜ್ಯ ದಿನದಂದು ರಾಷ್ಟ್ರಕ್ಕಿತ್ತ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.<br /> <br /> `ನಮ್ಮ ಈ 13ನೆಯ ಗಣರಾಜ್ಯ ದಿನೋತ್ಸವದ ಸಂದರ್ಭದಲ್ಲಿ ನಾನು ನಮ್ಮ ಎಲ್ಲ ದೇಶಬಾಂಧವರನ್ನೂ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನೂ ಅಭಿನಂದಿಸುತ್ತೇನೆ. ಬರುವ ವರ್ಷದಲ್ಲಿ ಅವರೆಲ್ಲರಿಗೂ ಸುಖ ಸಂತೋಷಗಳು ಲಭಿಸಲೆಂದು ಹಾರೈಸುತ್ತೇನೆ~ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.<br /> <br /> <strong>ಕಾಂಗ್ರೆಸ್ಸಿಗೆ ಪ್ರಥಮ ಜಯಗಳು<br /> ಬೆಂಗಳೂರು, ಜ. 25</strong> - ಹುಣಸೂರು ಕ್ಷೇತ್ರದಿಂದ ಶ್ರೀ ಡಿ. ದೇವರಾಜೇ ಅರಸ್, ಬಿಜಾಪುರ ಜಿಲ್ಲೆಯ ತಾಳಿಕೋಟೆ ಕ್ಷೇತ್ರದಿಂದ ಶ್ರೀ ಜಿ. ಎನ್. ಪಾಟೀಲ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡು 1962ರ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪ್ರಥಮ ಎರಡು ಜಯಗಳನ್ನು ಗಳಿಸಿಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>