<p><strong>`ವಿಶ್ವಸಂಸ್ಥೆ ನಿರ್ಣಯಗಳನ್ನು ಪಾಲಿಸದ ತಪ್ಪು ಪಾಕಿಸ್ತಾನದ್ದು~</strong></p>.<p><strong>ನವದೆಹಲಿ, ಏ. 25 -</strong> `ಕಾಶ್ಮೀರದಲ್ಲಿ ಪಾಕಿಸ್ತಾನದ ಆಕ್ರಮಣವನ್ನು ಕೊನೆಗಾಣಿಸಲು ಬಲ ಪ್ರಯೋಗ ಮಾಡದೆ ಭಾರತ ಸಹನೆ, ತಾಳ್ಮೆಯಿಂದಿದೆ. ಆದರೆ ಪಾಕಿಸ್ತಾನವೇ ಆಕ್ರಮಣ ಮುಂದುವರಿಸಿ, ಭಾರತದ ಪ್ರದೇಶಗಳನ್ನು ಪುನಃ ಆಕ್ರಮಿಸಲು ಅವಕಾಶ ಕೊಡುವುದಿಲ್ಲ~ ಎಂದು ಭಾರತ ಪಾಕಿಸ್ತಾನಕ್ಕೆ ಮತ್ತೆ ಎಚ್ಚರಿಕೆ ನೀಡಿದೆ.</p>.<p>`ಕಾಶ್ಮೀರ ಸಂಬಂಧದಲ್ಲಿ ಭಾರತ ವಿಶ್ವಸಂಸ್ಥೆಯ ನಿರ್ಣಯಗಳನ್ನು ಗೌರವಿಸಿಲ್ಲ~ ಎಂಬ ಪಾಕ್ ಅಪಪ್ರಚಾರಕ್ಕೆ ಉತ್ತರ ರೂಪವಾಗಿ ಭಾರತ ಸರ್ಕಾರ `ಕಾಶ್ಮೀರ ಪರಿಸ್ಥಿತಿಯ ಮುಖ್ಯಾಂಶಗಳು~ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸಿದೆ.</p>.<p><strong>ಭಾರತಕ್ಕೆ ಚೀಣಾದ ಪ್ರತಿಭಟನೆ</strong></p>.<p><strong>ಪೀಕಿಂಗ್, ಏ. 25 -</strong> ಚೀಣಾದ ಇನ್ನಷ್ಟು ಪ್ರದೇಶದಲ್ಲಿ ಭಾರತ ದುರಾಕ್ರಮಣ ನಡೆಸಿದೆಯೆಂದು ಪ್ರಕಟಿಸಿರುವ ಪತ್ರದಲ್ಲಿ ಭಾರತದ `ಈ ಕ್ರಮ~ದ ವಿರುದ್ಧ ಚೀಣಾ ಉಗ್ರವಾಗಿ ಪ್ರತಿಭಟಿಸಿದೆಯೆಂದು ನವ ಚೀಣಾ ವಾರ್ತಾ ಸಂಸ್ಥೆ ತಿಳಿಸಿದೆ.<br /> ಈ ಪತ್ರದಲ್ಲಿ `ಭಾರತದ ಪಡೆಗಳು ಪದೇ ಪದೇ ಭಾರತ - ಚೀಣ ಪಶ್ಚಿಮ ಗಡಿಯ ಮೇಲೆ ಆಕ್ರಮಣ ನಡೆಸುತ್ತಿದೆ. ಭಾರತ ಇಂತಹ ಅತಿಕ್ರಮಣ ಗಡಿ ಉಲ್ಲಂಘನೆ~ ಎಂಬುದಾಗಿಯೂ ಚೀಣ ತನ್ನ ಪ್ರತಿಭಟನಾ ಪತ್ರದಲ್ಲಿ ಭಾರತಕ್ಕೆ ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ವಿಶ್ವಸಂಸ್ಥೆ ನಿರ್ಣಯಗಳನ್ನು ಪಾಲಿಸದ ತಪ್ಪು ಪಾಕಿಸ್ತಾನದ್ದು~</strong></p>.<p><strong>ನವದೆಹಲಿ, ಏ. 25 -</strong> `ಕಾಶ್ಮೀರದಲ್ಲಿ ಪಾಕಿಸ್ತಾನದ ಆಕ್ರಮಣವನ್ನು ಕೊನೆಗಾಣಿಸಲು ಬಲ ಪ್ರಯೋಗ ಮಾಡದೆ ಭಾರತ ಸಹನೆ, ತಾಳ್ಮೆಯಿಂದಿದೆ. ಆದರೆ ಪಾಕಿಸ್ತಾನವೇ ಆಕ್ರಮಣ ಮುಂದುವರಿಸಿ, ಭಾರತದ ಪ್ರದೇಶಗಳನ್ನು ಪುನಃ ಆಕ್ರಮಿಸಲು ಅವಕಾಶ ಕೊಡುವುದಿಲ್ಲ~ ಎಂದು ಭಾರತ ಪಾಕಿಸ್ತಾನಕ್ಕೆ ಮತ್ತೆ ಎಚ್ಚರಿಕೆ ನೀಡಿದೆ.</p>.<p>`ಕಾಶ್ಮೀರ ಸಂಬಂಧದಲ್ಲಿ ಭಾರತ ವಿಶ್ವಸಂಸ್ಥೆಯ ನಿರ್ಣಯಗಳನ್ನು ಗೌರವಿಸಿಲ್ಲ~ ಎಂಬ ಪಾಕ್ ಅಪಪ್ರಚಾರಕ್ಕೆ ಉತ್ತರ ರೂಪವಾಗಿ ಭಾರತ ಸರ್ಕಾರ `ಕಾಶ್ಮೀರ ಪರಿಸ್ಥಿತಿಯ ಮುಖ್ಯಾಂಶಗಳು~ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸಿದೆ.</p>.<p><strong>ಭಾರತಕ್ಕೆ ಚೀಣಾದ ಪ್ರತಿಭಟನೆ</strong></p>.<p><strong>ಪೀಕಿಂಗ್, ಏ. 25 -</strong> ಚೀಣಾದ ಇನ್ನಷ್ಟು ಪ್ರದೇಶದಲ್ಲಿ ಭಾರತ ದುರಾಕ್ರಮಣ ನಡೆಸಿದೆಯೆಂದು ಪ್ರಕಟಿಸಿರುವ ಪತ್ರದಲ್ಲಿ ಭಾರತದ `ಈ ಕ್ರಮ~ದ ವಿರುದ್ಧ ಚೀಣಾ ಉಗ್ರವಾಗಿ ಪ್ರತಿಭಟಿಸಿದೆಯೆಂದು ನವ ಚೀಣಾ ವಾರ್ತಾ ಸಂಸ್ಥೆ ತಿಳಿಸಿದೆ.<br /> ಈ ಪತ್ರದಲ್ಲಿ `ಭಾರತದ ಪಡೆಗಳು ಪದೇ ಪದೇ ಭಾರತ - ಚೀಣ ಪಶ್ಚಿಮ ಗಡಿಯ ಮೇಲೆ ಆಕ್ರಮಣ ನಡೆಸುತ್ತಿದೆ. ಭಾರತ ಇಂತಹ ಅತಿಕ್ರಮಣ ಗಡಿ ಉಲ್ಲಂಘನೆ~ ಎಂಬುದಾಗಿಯೂ ಚೀಣ ತನ್ನ ಪ್ರತಿಭಟನಾ ಪತ್ರದಲ್ಲಿ ಭಾರತಕ್ಕೆ ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>