<p>`ಟೌತ್ವ~ ಪ್ರಾಪ್ತಿಯ ನಂತರವೂ ಆಗೀಗ ತನ್ನ ಗುರುಗಳಾದ ಆಲ್-ಹಾಲ್ರ ಆಶ್ರಮಕ್ಕೆ ಬರುತ್ತಿದ್ದ ಟಾ-ರಸ ಮಹರ್ಷಿಗಳು ಬಂದಾಗಲೆಲ್ಲಾ ಅಲ್ಲಿರುವ ವಿದ್ಯಾರ್ಥಿಗಳನ್ನು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದರು. <br /> <br /> ಈ ಚಟುವಟಿಕೆಗಳೆಲ್ಲವೂ ಬಹಳ ಸಾಮಾನ್ಯವಾದುವೇ ಆಗಿದ್ದರೂ ಅದಕ್ಕಿರುವ ಆಧ್ಯಾತ್ಮಿಕ ಆಯಾಮ ವನ್ನು ಟಾ-ರಸರು ವಿವರಿಸುತ್ತಿದ್ದರು. ಇದರಿಂದಾಗಿ ಅವರು ಏನೇ ಹೇಳಿದರೂ ಅದರಲ್ಲೇನೋ ಕಲಿಯುವುದಿದೆ ಎಂಬ ಆಸೆಯಿಂದ ಎಲ್ಲರೂ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. <br /> <br /> ಒಮ್ಮೆ ಕಲ್ಯಾಣಪ್ಪನೂ ಸೇರಿದಂತೆ ಕೆಲವರನ್ನು ಮಧ್ಯಾಹ್ನದ ಅಡುಗೆಗೆ ಅನುಕೂಲ ವಾಗುವಂತೆ ತರಕಾರಿ ಹೆಚ್ಚಲು ಹೇಳಿದರು. ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರ ಬಳಿ ಟಾ-ರಸ ಮಹರ್ಷಿಗಳು ಒಂದು ಪ್ರಶ್ನೆ ಕೇಳಿದರು. `ನೀವೇಕೆ ತರಕಾರಿ ಹೆಚ್ಚುತ್ತಿದ್ದೀರಿ ಎಂಬುದನ್ನು ನೀವು ಈ ತನಕ ಕಲಿತ ವಿದ್ಯೆಯ ಬೆಳಕಿನಲ್ಲಿ ವಿವರಿಸಿ~.<br /> <br /> ಮೊದಲನೆಯವ ಉತ್ತರಿಸಿದ- `ತರಕಾರಿಯನ್ನು ಕತ್ತರಿಸುವ ಮೂಲಕ ಅದರ ಬಳಕೆಯನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿದ್ದೇನೆ~.<br /> <br /> ಟಾ-ರಸರಿಗೆ ಸಂತೋಷವಾಯಿತು. `ನಿನಗೆ ಪ್ರಪಂಚದ ಎಲ್ಲ ವಿದ್ಯಮಾನಗಳೂ ಬಿಡಿಬಿಡಿಯಾಗಿ ಸ್ಪಷ್ಟವಾಗಿ ಗೋಚರಿಸುತ್ತವೆ~ ಎಂದು ಮುಂದಿನವನ ಉತ್ತರಕ್ಕಾಗಿ ಕಾದರು.<br /> <br /> ಎರಡನೆಯ ಹೇಳಿದ- `ಸಾರು, ಪಲ್ಯ, ಗೊಜ್ಜು ಮುಂತಾದುವುಗಳ ನಡುವಣ ವ್ಯತ್ಯಾಸಗಳೆಲ್ಲವೂ ನಾವು ತುಂಡರಿಸುವ ತರಕಾರಿಯ ತುಂಡಿನ ಗಾತ್ರವನ್ನು ಅವಲಂಬಿಸಿರುತ್ತದೆ~.<br /> <br /> ಟಾ-ರಸರು ಅರೆಕ್ಷಣ ಚಿಂತಿಸಿ `ನಿನ್ನ ತರ್ಕಕ್ಕೆ ನಿಲುಕದ ಯಾವುದೂ ಸೃಷ್ಟಿಯಲ್ಲಿ ಇರಲಾರದು~ ಎಂದು ಮುಂದಿನವನ ಉತ್ತರ ನಿರೀಕ್ಷಿಸಿದರು.<br /> <br /> ಮೂರನೆಯವ ಹೇಳಿದ `ಪೂರ್ಣರೂಪದಲ್ಲಿದ್ದಾಗ ಕಾಣುವ ಹೊರಗಣ ಸೌಂದರ್ಯ ದೃಷ್ಟಿಗ್ರಾಹ್ಯವಾಗಿರುತ್ತದೆ. ಆದರೆ ತುಂಡರಿಸಿ ಸಾರು ಮಾಡಿದ ಮೇಲೆ ತರಕಾರಿ ಸೌಂದರ್ಯ ಜಿಹ್ವಾಗ್ರಾಹ್ಯವಾಗಿರುತ್ತದೆ~<br /> <br /> ಟಾ-ರಸರಿಗೆ ಬಹಳ ಸಂತೋಷವಾಗಿ `ನಿನಗೆ ಅರಿಯದ ಗ್ರಹಿಕೆಯ ಸೂಕ್ಷ್ಮಗಳಿಲ್ಲ~ ಎಂದು ಮುಂದಿನ ಉತ್ತರಕ್ಕಾಗಿ ಕಲ್ಯಾಣಪ್ಪನತ್ತ ನೋಡಿದರು.<br /> <br /> ತರಕಾರಿ ಕತ್ತರಿಸುವುದರಲ್ಲಿ ಮಗ್ನನಾಗಿದ್ದ ಅವನು ಕೆಲಸ ನಿಲ್ಲಿಸದೆಯೇ ಉತ್ತರಿಸಿದ `ನಾನು ತರಕಾರಿ ಹೆಚ್ಚುವುದಕ್ಕಾಗಿ ತರಕಾರಿ ಹೆಚ್ಚುತ್ತಿದ್ದೇನೆ!~<br /> <br /> ಟಾ-ರಸ ಮಹರ್ಷಿಗಳು ತಕ್ಷಣವೇ ಕಲ್ಯಾಣಪ್ಪನ ಕಾಲಬುಡದಲ್ಲಿ ಕುಳಿತು `ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವೆಯಾ?~ ಎಂದು ಕೇಳಿದರು.<br /> <br /> <strong>ಅರಿವಿನ ಆಳ</strong><br /> ಬಹಳಷ್ಟು ಅಧ್ಯಾತ್ಮದ ಪುಸ್ತಕಗಳನ್ನು ಓದಿಕೊಂಡು ತನ್ನನ್ನು ತಾನು ಅರಿಯಲು ಹೊರಟವನೊಬ್ಬ ಕಲ್ಯಾಣಪ್ಪನಿಗೆ ಗಾಂಧಿ ಬಜಾರ್ನ ಪುಸ್ತಕದ ಅಂಗಡಿಯಲ್ಲಿ ಭೇಟಿಯಾದ. ಸುಮ್ಮನೆ ಪುಸ್ತಕಗಳನ್ನು ನೋಡುತ್ತಾ ಅವುಗಳನ್ನು ಓದದೆಯೇ ತಾನೆಷ್ಟು ಸಂತೋಷವಾಗಿದ್ದೇನೆಂದು ಹೆಮ್ಮೆ ಪಡುತ್ತಿದ್ದ ಕಲ್ಯಾಣಪ್ಪನನ್ನು ಆ `ಅರಿವಿನ ಹುಡುಕಾಟದ~ ಆಸಾಮಿ ಮಾತಿಗೆಳೆದ. <br /> <br /> `ನಾನು ಎಲ್ಲಾ ಆಚಾರ್ಯರ ಕೃತಿಗಳನ್ನು ಓದಿದೆ. ಎಲ್ಲಾ ತತ್ವಜ್ಞರ ಕೃತಿಗಳೂ ಈಗ ಮುಗಿಯುತ್ತಾ ಬಂದವು. ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನೂ ಓದಿ ಮುಗಿಸಿದೆ. ಅವುಗಳೆಲ್ಲಾ ಒಂದೇ ರೀತಿ ಇವೆ. ಇಷ್ಟಾಗಿಯೂ ನಾನು ಮಾತ್ರ ಮೊದಲಿನ ಹಾಗೆಯೇ ಇದ್ದೇನೆ.~<br /> <br /> ಕಲ್ಯಾಣಪ್ಪನಿಗೆ ಆತನ ಸಮಸ್ಯೆ ಅರ್ಥವಾಗದೆ `ನಾನು ನಿಮ್ಮಷ್ಟು ಓದಿದವನಲ್ಲ. ಮೊದಲಿನ ಹಾಗೆಯೇ ಇದ್ದೀನಿ ಎಂದರಲ್ಲ. ಮೊದಲು ಹೇಗೆ ಇದ್ದಿರಿ~ ಎಂದು ಕೇಳಿದ.<br /> ಇದಕ್ಕೆ ಉತ್ತರಿಸಿದ ಓದಾಳಿ ವ್ಯಕ್ತಿ `ಈಗ ಇರುವಂತೆಯೇ ದಡ್ಡನೂ ಮೂರ್ಖನೂ ಜಗತ್ತನ್ನು ಅಷ್ಟೇನೂ ಅರಿಯದವನೂ ಆಗಿದ್ದೆ~.<br /> <br /> ಕಲ್ಯಾಣಪ್ಪ ಮರು ಪ್ರಶ್ನೆ ಎಸೆದ `ಮೊದಲು ಹಾಗಿದ್ದಿರಿ ಎಂದು ನಿಮಗೆ ಆಗಲೇ ಅನ್ನಿಸಿತ್ತೇ ಅಥವಾ ಇಷ್ಟೆಲ್ಲಾ ಓದಿ ತಿಳಿದುಕೊಂಡ ಮೇಲೆ ಅರಿವಾಯಿತೇ?~ ಆ ಓದಾಳಿಗೆ ಅರಿವು ಎಂದರೇನೆಂದು ಅರ್ಥವಾಯಿತು. -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಟೌತ್ವ~ ಪ್ರಾಪ್ತಿಯ ನಂತರವೂ ಆಗೀಗ ತನ್ನ ಗುರುಗಳಾದ ಆಲ್-ಹಾಲ್ರ ಆಶ್ರಮಕ್ಕೆ ಬರುತ್ತಿದ್ದ ಟಾ-ರಸ ಮಹರ್ಷಿಗಳು ಬಂದಾಗಲೆಲ್ಲಾ ಅಲ್ಲಿರುವ ವಿದ್ಯಾರ್ಥಿಗಳನ್ನು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದರು. <br /> <br /> ಈ ಚಟುವಟಿಕೆಗಳೆಲ್ಲವೂ ಬಹಳ ಸಾಮಾನ್ಯವಾದುವೇ ಆಗಿದ್ದರೂ ಅದಕ್ಕಿರುವ ಆಧ್ಯಾತ್ಮಿಕ ಆಯಾಮ ವನ್ನು ಟಾ-ರಸರು ವಿವರಿಸುತ್ತಿದ್ದರು. ಇದರಿಂದಾಗಿ ಅವರು ಏನೇ ಹೇಳಿದರೂ ಅದರಲ್ಲೇನೋ ಕಲಿಯುವುದಿದೆ ಎಂಬ ಆಸೆಯಿಂದ ಎಲ್ಲರೂ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. <br /> <br /> ಒಮ್ಮೆ ಕಲ್ಯಾಣಪ್ಪನೂ ಸೇರಿದಂತೆ ಕೆಲವರನ್ನು ಮಧ್ಯಾಹ್ನದ ಅಡುಗೆಗೆ ಅನುಕೂಲ ವಾಗುವಂತೆ ತರಕಾರಿ ಹೆಚ್ಚಲು ಹೇಳಿದರು. ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರ ಬಳಿ ಟಾ-ರಸ ಮಹರ್ಷಿಗಳು ಒಂದು ಪ್ರಶ್ನೆ ಕೇಳಿದರು. `ನೀವೇಕೆ ತರಕಾರಿ ಹೆಚ್ಚುತ್ತಿದ್ದೀರಿ ಎಂಬುದನ್ನು ನೀವು ಈ ತನಕ ಕಲಿತ ವಿದ್ಯೆಯ ಬೆಳಕಿನಲ್ಲಿ ವಿವರಿಸಿ~.<br /> <br /> ಮೊದಲನೆಯವ ಉತ್ತರಿಸಿದ- `ತರಕಾರಿಯನ್ನು ಕತ್ತರಿಸುವ ಮೂಲಕ ಅದರ ಬಳಕೆಯನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿದ್ದೇನೆ~.<br /> <br /> ಟಾ-ರಸರಿಗೆ ಸಂತೋಷವಾಯಿತು. `ನಿನಗೆ ಪ್ರಪಂಚದ ಎಲ್ಲ ವಿದ್ಯಮಾನಗಳೂ ಬಿಡಿಬಿಡಿಯಾಗಿ ಸ್ಪಷ್ಟವಾಗಿ ಗೋಚರಿಸುತ್ತವೆ~ ಎಂದು ಮುಂದಿನವನ ಉತ್ತರಕ್ಕಾಗಿ ಕಾದರು.<br /> <br /> ಎರಡನೆಯ ಹೇಳಿದ- `ಸಾರು, ಪಲ್ಯ, ಗೊಜ್ಜು ಮುಂತಾದುವುಗಳ ನಡುವಣ ವ್ಯತ್ಯಾಸಗಳೆಲ್ಲವೂ ನಾವು ತುಂಡರಿಸುವ ತರಕಾರಿಯ ತುಂಡಿನ ಗಾತ್ರವನ್ನು ಅವಲಂಬಿಸಿರುತ್ತದೆ~.<br /> <br /> ಟಾ-ರಸರು ಅರೆಕ್ಷಣ ಚಿಂತಿಸಿ `ನಿನ್ನ ತರ್ಕಕ್ಕೆ ನಿಲುಕದ ಯಾವುದೂ ಸೃಷ್ಟಿಯಲ್ಲಿ ಇರಲಾರದು~ ಎಂದು ಮುಂದಿನವನ ಉತ್ತರ ನಿರೀಕ್ಷಿಸಿದರು.<br /> <br /> ಮೂರನೆಯವ ಹೇಳಿದ `ಪೂರ್ಣರೂಪದಲ್ಲಿದ್ದಾಗ ಕಾಣುವ ಹೊರಗಣ ಸೌಂದರ್ಯ ದೃಷ್ಟಿಗ್ರಾಹ್ಯವಾಗಿರುತ್ತದೆ. ಆದರೆ ತುಂಡರಿಸಿ ಸಾರು ಮಾಡಿದ ಮೇಲೆ ತರಕಾರಿ ಸೌಂದರ್ಯ ಜಿಹ್ವಾಗ್ರಾಹ್ಯವಾಗಿರುತ್ತದೆ~<br /> <br /> ಟಾ-ರಸರಿಗೆ ಬಹಳ ಸಂತೋಷವಾಗಿ `ನಿನಗೆ ಅರಿಯದ ಗ್ರಹಿಕೆಯ ಸೂಕ್ಷ್ಮಗಳಿಲ್ಲ~ ಎಂದು ಮುಂದಿನ ಉತ್ತರಕ್ಕಾಗಿ ಕಲ್ಯಾಣಪ್ಪನತ್ತ ನೋಡಿದರು.<br /> <br /> ತರಕಾರಿ ಕತ್ತರಿಸುವುದರಲ್ಲಿ ಮಗ್ನನಾಗಿದ್ದ ಅವನು ಕೆಲಸ ನಿಲ್ಲಿಸದೆಯೇ ಉತ್ತರಿಸಿದ `ನಾನು ತರಕಾರಿ ಹೆಚ್ಚುವುದಕ್ಕಾಗಿ ತರಕಾರಿ ಹೆಚ್ಚುತ್ತಿದ್ದೇನೆ!~<br /> <br /> ಟಾ-ರಸ ಮಹರ್ಷಿಗಳು ತಕ್ಷಣವೇ ಕಲ್ಯಾಣಪ್ಪನ ಕಾಲಬುಡದಲ್ಲಿ ಕುಳಿತು `ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವೆಯಾ?~ ಎಂದು ಕೇಳಿದರು.<br /> <br /> <strong>ಅರಿವಿನ ಆಳ</strong><br /> ಬಹಳಷ್ಟು ಅಧ್ಯಾತ್ಮದ ಪುಸ್ತಕಗಳನ್ನು ಓದಿಕೊಂಡು ತನ್ನನ್ನು ತಾನು ಅರಿಯಲು ಹೊರಟವನೊಬ್ಬ ಕಲ್ಯಾಣಪ್ಪನಿಗೆ ಗಾಂಧಿ ಬಜಾರ್ನ ಪುಸ್ತಕದ ಅಂಗಡಿಯಲ್ಲಿ ಭೇಟಿಯಾದ. ಸುಮ್ಮನೆ ಪುಸ್ತಕಗಳನ್ನು ನೋಡುತ್ತಾ ಅವುಗಳನ್ನು ಓದದೆಯೇ ತಾನೆಷ್ಟು ಸಂತೋಷವಾಗಿದ್ದೇನೆಂದು ಹೆಮ್ಮೆ ಪಡುತ್ತಿದ್ದ ಕಲ್ಯಾಣಪ್ಪನನ್ನು ಆ `ಅರಿವಿನ ಹುಡುಕಾಟದ~ ಆಸಾಮಿ ಮಾತಿಗೆಳೆದ. <br /> <br /> `ನಾನು ಎಲ್ಲಾ ಆಚಾರ್ಯರ ಕೃತಿಗಳನ್ನು ಓದಿದೆ. ಎಲ್ಲಾ ತತ್ವಜ್ಞರ ಕೃತಿಗಳೂ ಈಗ ಮುಗಿಯುತ್ತಾ ಬಂದವು. ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನೂ ಓದಿ ಮುಗಿಸಿದೆ. ಅವುಗಳೆಲ್ಲಾ ಒಂದೇ ರೀತಿ ಇವೆ. ಇಷ್ಟಾಗಿಯೂ ನಾನು ಮಾತ್ರ ಮೊದಲಿನ ಹಾಗೆಯೇ ಇದ್ದೇನೆ.~<br /> <br /> ಕಲ್ಯಾಣಪ್ಪನಿಗೆ ಆತನ ಸಮಸ್ಯೆ ಅರ್ಥವಾಗದೆ `ನಾನು ನಿಮ್ಮಷ್ಟು ಓದಿದವನಲ್ಲ. ಮೊದಲಿನ ಹಾಗೆಯೇ ಇದ್ದೀನಿ ಎಂದರಲ್ಲ. ಮೊದಲು ಹೇಗೆ ಇದ್ದಿರಿ~ ಎಂದು ಕೇಳಿದ.<br /> ಇದಕ್ಕೆ ಉತ್ತರಿಸಿದ ಓದಾಳಿ ವ್ಯಕ್ತಿ `ಈಗ ಇರುವಂತೆಯೇ ದಡ್ಡನೂ ಮೂರ್ಖನೂ ಜಗತ್ತನ್ನು ಅಷ್ಟೇನೂ ಅರಿಯದವನೂ ಆಗಿದ್ದೆ~.<br /> <br /> ಕಲ್ಯಾಣಪ್ಪ ಮರು ಪ್ರಶ್ನೆ ಎಸೆದ `ಮೊದಲು ಹಾಗಿದ್ದಿರಿ ಎಂದು ನಿಮಗೆ ಆಗಲೇ ಅನ್ನಿಸಿತ್ತೇ ಅಥವಾ ಇಷ್ಟೆಲ್ಲಾ ಓದಿ ತಿಳಿದುಕೊಂಡ ಮೇಲೆ ಅರಿವಾಯಿತೇ?~ ಆ ಓದಾಳಿಗೆ ಅರಿವು ಎಂದರೇನೆಂದು ಅರ್ಥವಾಯಿತು. -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>