<p>‘ನೊಬೆಲ್ ಕಪ್ ಸಿಗದಿದ್ದರೂ ಶಾಂತಿ ಸ್ಥಾಪನೆ ಕೆಲಸ ಮುಂದುವರಿಸ್ತೀನಿ ಅಂತ ಟ್ರಂಪಣ್ಣ ಘೋಷಣೆ ಮಾಡ್ಯಾನೆ. ಇನ್ಮುಂದೆ ಭೂಲೋಕದಲ್ಲಿ ಎಲ್ಲೂ ಜಗಳಾ ಅನ್ನೂದೆ ಇರಂಗಿಲ್ಲ!’ ಬೆಕ್ಕಣ್ಣ ಅಭಿಮಾನದಿಂದ ಹೇಳಿತು.</p><p>‘ಸೋತು ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೂ ಮಂದಿ ಅಂವಾ’ ಎಂದೆ ನಾನು.</p><p>‘ಅಂವಾ ಎಲ್ಲಿ ಕೆಳಕ್ಕೆ ಬಿದ್ದಾನೆ? ಅಂವಾ ಅಗದಿ ಭಯಂಕರ ಮ್ಯಾಲೆ ಅದಾನೆ! ವೆನಿಜುವೆಲಾದ ಮಚಾದೊ ತನಗೆ ಕೊಟ್ಟ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪಣ್ಣನಿಗೇ ಸಮರ್ಪಣೆ ಮಾಡ್ಯಾಳೆ! ರಷ್ಯಾದ ಪುಟಿನಂಕಲ್ಲೂ ನಮ್ ಟ್ರಂಪಣ್ಣನ್ನ ಹೊಗಳ್ಯಾನೆ.’ ಬೆಕ್ಕಣ್ಣ ಬಲು ಉತ್ಸಾಹದಿಂದ ವರ್ಣಿಸಿತು. </p><p>‘ಹಂಗಾರೆ ಟ್ರಂಪಣ್ಣ ಉಕ್ರೇನ್–ರಷ್ಯಾ ಯುದ್ಧನೂ ನಿಲ್ಲಿಸತಾನೇನು?’ ನಾನು ಕೆಣಕಿದೆ.</p><p>‘ಖಂಡಿತಾ ನಿಲ್ಲಸತಾನೆ!’ ಬೆಕ್ಕಣ್ಣ ಭರವಸೆಯಿಂದ ನುಡಿಯಿತು.</p><p>‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತ. ಈಗ ಊರ ಉಸಾಬರಿ ಬಿಡು. ನಮ್ ದೇಶದಾಗೆ ಶಾಂತಿ<br>ಸ್ಥಾಪನೆ ಮಾಡೋರು ಯಾರು ಅಂತ ವಿಚಾರ ಮಾಡೂಣು’ ಎಂದೆ.</p><p>‘ನಮ್ ದೇಶದಾಗೆ ಎಲ್ಲಿ ಸಂಘರ್ಷ ನಡೆದೈತಿ? ಯಾರು ಜಗಳಾ ಮಾಡಾಕೆ ಹತ್ಯಾರೆ? ಕಳೆದ ಹನ್ನೊಂದು ವರ್ಷದಿಂದ ಎಲ್ಲಾ ಕಡಿಗಿ ಶಾಂತೀನೆ ತಾಂಡವವಾಡತೈತಿ! ಜಗಳ, ಸಂಘರ್ಷ ಇಂತಾವೆಲ್ಲ ಈಗ ಬರೇ ಶಬ್ದಕೋಶದ ಪದಗಳು!’ ಬೆಕ್ಕಣ್ಣ ವಾದಿಸಿತು.</p><p>‘ಸಿಎಎ ಕಾಯ್ದೆ ವಿರೋಧಿಸಿ ದಿಲ್ಲೀವಳಗೆ ಹೋರಾಟ ನಡೆಸಿದ್ರು. ಹೊಸ ಕೃಷಿ ಕಾಯ್ದೆ ಪ್ರತಿಭಟಿಸಿ ರೈತರು ವರ್ಷಾನುಗಟ್ಟಲೆ ಹೋರಾಟ ಮಾಡಿದ್ರು. ಮಣಿಪುರ ಸಂಘರ್ಷ ಇನ್ನಾ ಬಗೆಹರಿದಿಲ್ಲ. ಇಷ್ಟಲ್ಲದೇ ಚಿಕ್ಕಪುಟ್ಟ ಸಂಘರ್ಷಗಳು ಎಲ್ಲಾ ರಾಜ್ಯದಾಗೆ ನಡೀತಾನೆ ಇರತಾವು.’ ನಾನೂ ಬಿಡದೇ ವಾದಿಸಿದೆ.</p><p>‘ಮನಿ ಅಂದ್ ಮ್ಯಾಲೆ ಸಣ್ಣಪುಟ್ಟ ಮನಸ್ತಾಪ ಇರೂದೆ. ಇವೆಲ್ಲ ವಿಪಕ್ಷಗಳ ಹುನ್ನಾರ ಅಷ್ಟೇ’ ಎಂದ ಬೆಕ್ಕಣ್ಣ<br>‘ಚಿಂತ್ಯಾಕ ಮಾಡುತ್ತಿದ್ದಿ, ವಿಶ್ವಗುರುವಿದ್ದಾನೆ’ ಎಂದು<br>ಭಜನೆ ಹಾಡಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೊಬೆಲ್ ಕಪ್ ಸಿಗದಿದ್ದರೂ ಶಾಂತಿ ಸ್ಥಾಪನೆ ಕೆಲಸ ಮುಂದುವರಿಸ್ತೀನಿ ಅಂತ ಟ್ರಂಪಣ್ಣ ಘೋಷಣೆ ಮಾಡ್ಯಾನೆ. ಇನ್ಮುಂದೆ ಭೂಲೋಕದಲ್ಲಿ ಎಲ್ಲೂ ಜಗಳಾ ಅನ್ನೂದೆ ಇರಂಗಿಲ್ಲ!’ ಬೆಕ್ಕಣ್ಣ ಅಭಿಮಾನದಿಂದ ಹೇಳಿತು.</p><p>‘ಸೋತು ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೂ ಮಂದಿ ಅಂವಾ’ ಎಂದೆ ನಾನು.</p><p>‘ಅಂವಾ ಎಲ್ಲಿ ಕೆಳಕ್ಕೆ ಬಿದ್ದಾನೆ? ಅಂವಾ ಅಗದಿ ಭಯಂಕರ ಮ್ಯಾಲೆ ಅದಾನೆ! ವೆನಿಜುವೆಲಾದ ಮಚಾದೊ ತನಗೆ ಕೊಟ್ಟ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪಣ್ಣನಿಗೇ ಸಮರ್ಪಣೆ ಮಾಡ್ಯಾಳೆ! ರಷ್ಯಾದ ಪುಟಿನಂಕಲ್ಲೂ ನಮ್ ಟ್ರಂಪಣ್ಣನ್ನ ಹೊಗಳ್ಯಾನೆ.’ ಬೆಕ್ಕಣ್ಣ ಬಲು ಉತ್ಸಾಹದಿಂದ ವರ್ಣಿಸಿತು. </p><p>‘ಹಂಗಾರೆ ಟ್ರಂಪಣ್ಣ ಉಕ್ರೇನ್–ರಷ್ಯಾ ಯುದ್ಧನೂ ನಿಲ್ಲಿಸತಾನೇನು?’ ನಾನು ಕೆಣಕಿದೆ.</p><p>‘ಖಂಡಿತಾ ನಿಲ್ಲಸತಾನೆ!’ ಬೆಕ್ಕಣ್ಣ ಭರವಸೆಯಿಂದ ನುಡಿಯಿತು.</p><p>‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತ. ಈಗ ಊರ ಉಸಾಬರಿ ಬಿಡು. ನಮ್ ದೇಶದಾಗೆ ಶಾಂತಿ<br>ಸ್ಥಾಪನೆ ಮಾಡೋರು ಯಾರು ಅಂತ ವಿಚಾರ ಮಾಡೂಣು’ ಎಂದೆ.</p><p>‘ನಮ್ ದೇಶದಾಗೆ ಎಲ್ಲಿ ಸಂಘರ್ಷ ನಡೆದೈತಿ? ಯಾರು ಜಗಳಾ ಮಾಡಾಕೆ ಹತ್ಯಾರೆ? ಕಳೆದ ಹನ್ನೊಂದು ವರ್ಷದಿಂದ ಎಲ್ಲಾ ಕಡಿಗಿ ಶಾಂತೀನೆ ತಾಂಡವವಾಡತೈತಿ! ಜಗಳ, ಸಂಘರ್ಷ ಇಂತಾವೆಲ್ಲ ಈಗ ಬರೇ ಶಬ್ದಕೋಶದ ಪದಗಳು!’ ಬೆಕ್ಕಣ್ಣ ವಾದಿಸಿತು.</p><p>‘ಸಿಎಎ ಕಾಯ್ದೆ ವಿರೋಧಿಸಿ ದಿಲ್ಲೀವಳಗೆ ಹೋರಾಟ ನಡೆಸಿದ್ರು. ಹೊಸ ಕೃಷಿ ಕಾಯ್ದೆ ಪ್ರತಿಭಟಿಸಿ ರೈತರು ವರ್ಷಾನುಗಟ್ಟಲೆ ಹೋರಾಟ ಮಾಡಿದ್ರು. ಮಣಿಪುರ ಸಂಘರ್ಷ ಇನ್ನಾ ಬಗೆಹರಿದಿಲ್ಲ. ಇಷ್ಟಲ್ಲದೇ ಚಿಕ್ಕಪುಟ್ಟ ಸಂಘರ್ಷಗಳು ಎಲ್ಲಾ ರಾಜ್ಯದಾಗೆ ನಡೀತಾನೆ ಇರತಾವು.’ ನಾನೂ ಬಿಡದೇ ವಾದಿಸಿದೆ.</p><p>‘ಮನಿ ಅಂದ್ ಮ್ಯಾಲೆ ಸಣ್ಣಪುಟ್ಟ ಮನಸ್ತಾಪ ಇರೂದೆ. ಇವೆಲ್ಲ ವಿಪಕ್ಷಗಳ ಹುನ್ನಾರ ಅಷ್ಟೇ’ ಎಂದ ಬೆಕ್ಕಣ್ಣ<br>‘ಚಿಂತ್ಯಾಕ ಮಾಡುತ್ತಿದ್ದಿ, ವಿಶ್ವಗುರುವಿದ್ದಾನೆ’ ಎಂದು<br>ಭಜನೆ ಹಾಡಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>