<p><strong>ನವದೆಹಲಿ:</strong> ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲುತ್ತಿದ್ದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ರಾಜೀನಾಮೆ ನೀಡಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.</p><p>ಗೌತಮ್ ಗಂಭೀರ್ ಅವರ ವಿರುದ್ಧ ಬರುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಗವಾಸ್ಕರ್ ‘ತಂಡವನ್ನು ಸಿದ್ಧಪಡಿಸುವುದು ಮಾತ್ರ ಕೋಚ್ ಕೆಲಸ. ಮೈದಾನದಲ್ಲಿ ಪ್ರದರ್ಶನ ನೀಡಬೇಕಿರುವುದು ಆಟಗಾರರೇ ಹೊರತು ಕೋಚ್ ಅಲ್ಲ’ ಎಂದು ಹೇಳಿದ್ದಾರೆ.</p><p>ಗಂಭೀರ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕಳೆದ 16 ತಿಂಗಳ ಅವಧಿಯಲ್ಲಿ ಮೂರನೇ ಟೆಸ್ಟ್ ಸರಣಿಯಲ್ಲಿ ಸೋತಿದೆ. ನ್ಯೂಜಿಲೆಂಡ್ ವಿರುದ್ಧ 0-3, ಆಸ್ಟ್ರೇಲಿಯಾ ವಿರುದ್ಧ 1-3 ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ 0–2 ಅಂತರದಿಂದ ಸೋತಿದೆ.</p><p>‘ಗಂಭೀರ್ ಒಬ್ಬ ಅನುಭವಿ ತರಬೇತುದಾರ. ಅವರು ತಂಡವನ್ನು ಸಿದ್ಧಪಡಿಸಬಹುದು. ಆದರೆ, ಮೈದಾನದಲ್ಲಿ ಪ್ರದರ್ಶನ ನೀಡಬೇಕಾದವರು ಆಟಗಾರರು’ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.</p><p>’ಈಗಿನ ಸೋಲುಗಳಿಗೆ ಗಂಭೀರ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವವರಿಗೆ ನನ್ನ ಪ್ರಶ್ನೆ ಏನು ಅಂದರೆ, ಗಂಭೀರ್ ನೇತೃತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ನೀವು ಏನು ಮಾಡಿದ್ದೀರಿ? ಅವರ ಅಡಿಯಲ್ಲಿ ಏಷ್ಯಾಕಪ್ ಗೆದ್ದಾಗ ಏನು ಹೇಳಿದ್ದೀರಿ? </p><p>‘ಗೆದ್ದಾಗ ಗಂಭೀರ್ ಅವರನ್ನು ತರಬೇತುದಾರರನ್ನಾಗಿ ಜೀವನದ ಕೊನೆವರೆಗೂ ನೇಮಿಸಿ ಎಂದು ನೀವು ಕೇಳಿದ್ರಾ?. ನೀವು ಅಂದು ಹಾಗೆ ಹೇಳಿಲ್ಲ. ಆದರೆ, ತಂಡ ಸೋಲುತ್ತಿದ್ದಂತೆ ಅವರ ರಾಜೀನಾಮೆ ಕೇಳುತ್ತಿದ್ದೀರಿ ಇದು ಎಷ್ಟು ಸರಿ’? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.</p>.IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು.ಟೀಂ ಇಂಡಿಯಾ ವೈಫಲ್ಯ: ಕೋಚ್ ಪರ ಇವರದ್ದು ’ಗಂಭೀರ‘ ಬ್ಯಾಟಿಂಗ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲುತ್ತಿದ್ದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ರಾಜೀನಾಮೆ ನೀಡಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.</p><p>ಗೌತಮ್ ಗಂಭೀರ್ ಅವರ ವಿರುದ್ಧ ಬರುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಗವಾಸ್ಕರ್ ‘ತಂಡವನ್ನು ಸಿದ್ಧಪಡಿಸುವುದು ಮಾತ್ರ ಕೋಚ್ ಕೆಲಸ. ಮೈದಾನದಲ್ಲಿ ಪ್ರದರ್ಶನ ನೀಡಬೇಕಿರುವುದು ಆಟಗಾರರೇ ಹೊರತು ಕೋಚ್ ಅಲ್ಲ’ ಎಂದು ಹೇಳಿದ್ದಾರೆ.</p><p>ಗಂಭೀರ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕಳೆದ 16 ತಿಂಗಳ ಅವಧಿಯಲ್ಲಿ ಮೂರನೇ ಟೆಸ್ಟ್ ಸರಣಿಯಲ್ಲಿ ಸೋತಿದೆ. ನ್ಯೂಜಿಲೆಂಡ್ ವಿರುದ್ಧ 0-3, ಆಸ್ಟ್ರೇಲಿಯಾ ವಿರುದ್ಧ 1-3 ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ 0–2 ಅಂತರದಿಂದ ಸೋತಿದೆ.</p><p>‘ಗಂಭೀರ್ ಒಬ್ಬ ಅನುಭವಿ ತರಬೇತುದಾರ. ಅವರು ತಂಡವನ್ನು ಸಿದ್ಧಪಡಿಸಬಹುದು. ಆದರೆ, ಮೈದಾನದಲ್ಲಿ ಪ್ರದರ್ಶನ ನೀಡಬೇಕಾದವರು ಆಟಗಾರರು’ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.</p><p>’ಈಗಿನ ಸೋಲುಗಳಿಗೆ ಗಂಭೀರ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವವರಿಗೆ ನನ್ನ ಪ್ರಶ್ನೆ ಏನು ಅಂದರೆ, ಗಂಭೀರ್ ನೇತೃತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ನೀವು ಏನು ಮಾಡಿದ್ದೀರಿ? ಅವರ ಅಡಿಯಲ್ಲಿ ಏಷ್ಯಾಕಪ್ ಗೆದ್ದಾಗ ಏನು ಹೇಳಿದ್ದೀರಿ? </p><p>‘ಗೆದ್ದಾಗ ಗಂಭೀರ್ ಅವರನ್ನು ತರಬೇತುದಾರರನ್ನಾಗಿ ಜೀವನದ ಕೊನೆವರೆಗೂ ನೇಮಿಸಿ ಎಂದು ನೀವು ಕೇಳಿದ್ರಾ?. ನೀವು ಅಂದು ಹಾಗೆ ಹೇಳಿಲ್ಲ. ಆದರೆ, ತಂಡ ಸೋಲುತ್ತಿದ್ದಂತೆ ಅವರ ರಾಜೀನಾಮೆ ಕೇಳುತ್ತಿದ್ದೀರಿ ಇದು ಎಷ್ಟು ಸರಿ’? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.</p>.IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು.ಟೀಂ ಇಂಡಿಯಾ ವೈಫಲ್ಯ: ಕೋಚ್ ಪರ ಇವರದ್ದು ’ಗಂಭೀರ‘ ಬ್ಯಾಟಿಂಗ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>