<p>ಬೆಂಗಳೂರು: ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್ ಸೇರಿದಂತೆ 13 ನೂತನ ಸಂಪುಟಗಳ ಗೆಜೆಟಿಯರ್ಗಳನ್ನು ಕರ್ನಾಟಕ ಗೆಜೆಟಿಯರ್ ಇಲಾಖೆಯು ಪ್ರಕಟಿಸಿದ್ದು, ಮಂಗಳವಾರ ಇವುಗಳನ್ನು ಲೋಕಾರ್ಪಣೆ ಮಾಡಲಾಯಿತು.<br /> <br /> ಇಲಾಖೆಯು ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್ಗಳನ್ನು ಪ್ರಕಟಿಸಿದೆ. ಪ್ರಯೋಗಾರ್ಥವಾಗಿ ಮೈಸೂರು ಜಿಲ್ಲೆಯ ತಿ. ನರಸೀಪುರ, ಮೈಸೂರು, ಪಿರಿಯಾಪಟ್ಟಣ, ಕೃಷ್ಣರಾಜನಗರ, ಹೆಗ್ಗಡದೇವನಕೋಟೆ, ಹುಣಸೂರು ಹಾಗೂ ನಂಜನಗೂಡು ತಾಲ್ಲೂಕುಗಳ ಗೆಜೆಟಿಯರ್ಗಳನ್ನು ಹೊರತಂದಿದೆ.<br /> <br /> ಹಾಗೆಯೇ ಉಡುಪಿ ಜಿಲ್ಲಾ ಗೆಜೆಟಿಯರ್ನ ಕನ್ನಡ ಆವೃತ್ತಿ (ರೂ. 422), 1807ರಲ್ಲಿ ಪ್ರಕಟವಾಗಿದ್ದ ಸರ್ ಫ್ರಾನ್ಸಿಸ್ ಬುಚನನ್ ಅವರ `ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್~ ಕೃತಿಯ ಮೂರು ಸಂಪುಟಗಳ ಮರುಮುದ್ರಣ (ರೂ 1,230/ಪ್ರತಿ ಸಂಪುಟದ ಬೆಲೆ- ರೂ 450) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೆಜೆಟಿಯರ್ನ ಇಂಗ್ಲಿಷ್ ಆವೃತ್ತಿಯನ್ನು (ರೂ 880) ಪ್ರಕಟಿಸಿದೆ. ಜತೆಗೆ ಕರ್ನಾಟಕ ಕೈಪಿಡಿ- 2011 (ರೂ 450) ಪರಿಷ್ಕೃತ ಆವೃತ್ತಿಯನ್ನು ಹೊರತಂದಿದೆ.<br /> <br /> ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 13 ಗೆಜೆಟಿಯರ್ ಸಂಪುಟಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಗೋವಿಂದ ಕಾರಜೋಳ, `ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವೆನಿಸಿರುವ ಗೆಜೆಟಿಯರ್ಗಳ ಪ್ರಕಟಣೆಗೆ ಪ್ರೋತ್ಸಾಹ ನೀಡುವ ಜತೆಗೆ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ~ ಎಂದರು.<br /> <br /> `ದೇಶ ಮತ್ತು ರಾಜ್ಯದಲ್ಲಿ ಗೆಜೆಟಿಯರ್ಗೆ ಶ್ರೀಮಂತ ಪರಂಪರೆ ಇದೆ. 1996ರಲ್ಲಿ ಇಲಾಖೆ ಹೊರತಂದ `ಕರ್ನಾಟಕ ಕೈಪಿಡಿ~ ವಿಶೇಷ ಪ್ರಕಟಣೆಯು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಗ್ರಂಥವೆಂದು ಪರಿಗಣಿಸಲ್ಪಿಟ್ಟಿದೆ. ಈ ಕೈಪಿಡಿಯ ಪರಿಷ್ಕೃತ ಆವೃತ್ತಿಯನ್ನು ಇಲಾಖೆ ಇದೀಗ ಪ್ರಕಟಿಸಿದೆ. ಇದು ಗೆಜೆಟಿಯರ್ನ ಮಹತ್ವವನ್ನು ತೋರುತ್ತದೆ. ಹಾಗಾಗಿ ಇನ್ನಷ್ಟು ಗೆಜೆಟಿಯರ್ಗಳು ಪ್ರಕಟಣೆಯಾಗಬೇಕಿದ್ದು, ಇದಕ್ಕೆ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ~ ಎಂದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, `ರಾಜ್ಯದ ಬೆಳವಣಿಗೆ, ಇತ್ತೀಚಿನ ಬದಲಾವಣೆ ಇತರೆ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಗೆಜೆಟಿಯರ್ ಮೂಲಕ ನೀಡಲಾಗುತ್ತಿದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇದು ಉಪಯುಕ್ತವೆನಿಸಿದೆ. ಅಲ್ಲದೇ ಜಿಲ್ಲೆಗಳ ಸಮಗ್ರ ದರ್ಶನ ಪಡೆಯಲು ಇದು ಸಹಕಾರಿಯಾಗಿದೆ~ ಎಂದು ಹೇಳಿದರು.<br /> <br /> `ಜಿಲ್ಲಾ ಗೆಜೆಟಿಯರ್ ಪ್ರಕಟಣೆಗಳ ಜತೆಗೆ ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್ಗಳನ್ನು ಹೊರತರಲಾಗಿದೆ. ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್ಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಇತರೆ ತಾಲ್ಲೂಕುಗಳ ಗೆಜೆಟಿಯರ್ ಪ್ರಕಟಿಸುವತ್ತ ಚಿಂತಿಸಲಾಗುವುದು. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಗೆಜೆಟಿಯರ್ ಪ್ರಕಟಣೆಗೆ ಪ್ರಯತ್ನಿಸಲಾಗುವುದು~ ಎಂದರು.<br /> <br /> ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕ ಎಸ್. ಅನೀಸ್ ಸಿರಾಜ್, ಇತಿಹಾಸ ಸಂಶೋಧಕ ಸೂರ್ಯನಾಥ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್ ಸೇರಿದಂತೆ 13 ನೂತನ ಸಂಪುಟಗಳ ಗೆಜೆಟಿಯರ್ಗಳನ್ನು ಕರ್ನಾಟಕ ಗೆಜೆಟಿಯರ್ ಇಲಾಖೆಯು ಪ್ರಕಟಿಸಿದ್ದು, ಮಂಗಳವಾರ ಇವುಗಳನ್ನು ಲೋಕಾರ್ಪಣೆ ಮಾಡಲಾಯಿತು.<br /> <br /> ಇಲಾಖೆಯು ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್ಗಳನ್ನು ಪ್ರಕಟಿಸಿದೆ. ಪ್ರಯೋಗಾರ್ಥವಾಗಿ ಮೈಸೂರು ಜಿಲ್ಲೆಯ ತಿ. ನರಸೀಪುರ, ಮೈಸೂರು, ಪಿರಿಯಾಪಟ್ಟಣ, ಕೃಷ್ಣರಾಜನಗರ, ಹೆಗ್ಗಡದೇವನಕೋಟೆ, ಹುಣಸೂರು ಹಾಗೂ ನಂಜನಗೂಡು ತಾಲ್ಲೂಕುಗಳ ಗೆಜೆಟಿಯರ್ಗಳನ್ನು ಹೊರತಂದಿದೆ.<br /> <br /> ಹಾಗೆಯೇ ಉಡುಪಿ ಜಿಲ್ಲಾ ಗೆಜೆಟಿಯರ್ನ ಕನ್ನಡ ಆವೃತ್ತಿ (ರೂ. 422), 1807ರಲ್ಲಿ ಪ್ರಕಟವಾಗಿದ್ದ ಸರ್ ಫ್ರಾನ್ಸಿಸ್ ಬುಚನನ್ ಅವರ `ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್~ ಕೃತಿಯ ಮೂರು ಸಂಪುಟಗಳ ಮರುಮುದ್ರಣ (ರೂ 1,230/ಪ್ರತಿ ಸಂಪುಟದ ಬೆಲೆ- ರೂ 450) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೆಜೆಟಿಯರ್ನ ಇಂಗ್ಲಿಷ್ ಆವೃತ್ತಿಯನ್ನು (ರೂ 880) ಪ್ರಕಟಿಸಿದೆ. ಜತೆಗೆ ಕರ್ನಾಟಕ ಕೈಪಿಡಿ- 2011 (ರೂ 450) ಪರಿಷ್ಕೃತ ಆವೃತ್ತಿಯನ್ನು ಹೊರತಂದಿದೆ.<br /> <br /> ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 13 ಗೆಜೆಟಿಯರ್ ಸಂಪುಟಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಗೋವಿಂದ ಕಾರಜೋಳ, `ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವೆನಿಸಿರುವ ಗೆಜೆಟಿಯರ್ಗಳ ಪ್ರಕಟಣೆಗೆ ಪ್ರೋತ್ಸಾಹ ನೀಡುವ ಜತೆಗೆ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ~ ಎಂದರು.<br /> <br /> `ದೇಶ ಮತ್ತು ರಾಜ್ಯದಲ್ಲಿ ಗೆಜೆಟಿಯರ್ಗೆ ಶ್ರೀಮಂತ ಪರಂಪರೆ ಇದೆ. 1996ರಲ್ಲಿ ಇಲಾಖೆ ಹೊರತಂದ `ಕರ್ನಾಟಕ ಕೈಪಿಡಿ~ ವಿಶೇಷ ಪ್ರಕಟಣೆಯು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಗ್ರಂಥವೆಂದು ಪರಿಗಣಿಸಲ್ಪಿಟ್ಟಿದೆ. ಈ ಕೈಪಿಡಿಯ ಪರಿಷ್ಕೃತ ಆವೃತ್ತಿಯನ್ನು ಇಲಾಖೆ ಇದೀಗ ಪ್ರಕಟಿಸಿದೆ. ಇದು ಗೆಜೆಟಿಯರ್ನ ಮಹತ್ವವನ್ನು ತೋರುತ್ತದೆ. ಹಾಗಾಗಿ ಇನ್ನಷ್ಟು ಗೆಜೆಟಿಯರ್ಗಳು ಪ್ರಕಟಣೆಯಾಗಬೇಕಿದ್ದು, ಇದಕ್ಕೆ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ~ ಎಂದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, `ರಾಜ್ಯದ ಬೆಳವಣಿಗೆ, ಇತ್ತೀಚಿನ ಬದಲಾವಣೆ ಇತರೆ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಗೆಜೆಟಿಯರ್ ಮೂಲಕ ನೀಡಲಾಗುತ್ತಿದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇದು ಉಪಯುಕ್ತವೆನಿಸಿದೆ. ಅಲ್ಲದೇ ಜಿಲ್ಲೆಗಳ ಸಮಗ್ರ ದರ್ಶನ ಪಡೆಯಲು ಇದು ಸಹಕಾರಿಯಾಗಿದೆ~ ಎಂದು ಹೇಳಿದರು.<br /> <br /> `ಜಿಲ್ಲಾ ಗೆಜೆಟಿಯರ್ ಪ್ರಕಟಣೆಗಳ ಜತೆಗೆ ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್ಗಳನ್ನು ಹೊರತರಲಾಗಿದೆ. ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್ಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಇತರೆ ತಾಲ್ಲೂಕುಗಳ ಗೆಜೆಟಿಯರ್ ಪ್ರಕಟಿಸುವತ್ತ ಚಿಂತಿಸಲಾಗುವುದು. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಗೆಜೆಟಿಯರ್ ಪ್ರಕಟಣೆಗೆ ಪ್ರಯತ್ನಿಸಲಾಗುವುದು~ ಎಂದರು.<br /> <br /> ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕ ಎಸ್. ಅನೀಸ್ ಸಿರಾಜ್, ಇತಿಹಾಸ ಸಂಶೋಧಕ ಸೂರ್ಯನಾಥ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>