<p><strong>ಬೆಂಗಳೂರು: </strong>ರಾಜ್ಯದ 15 ಜಿಲ್ಲೆಗಳು ಮತ್ತು ಒಂದು ಪೊಲೀಸ್ ಕಮೀಷನರೇ ಟ್ ವ್ಯಾಪ್ತಿಯಲ್ಲಿ ಎರಡನೇ ಹಂತದ ಗ್ರಾಮಪಂಚಾಯಿತಿ ಚುನಾವಣೆಯ ಮತದಾನ ಬಿರುಸಿನಿಂದ ಆರಂಭವಾಗಿದೆ.</p>.<p>ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ ಎಂದು ಸ್ಥಳೀಯ ಸುದ್ದಿ ಮೂಲಗಳು ತಿಳಿಸಿವೆ.<br /> <br /> ರಾಯಚೂರು, ದಾವಣಗೆರೆಯಲ್ಲಿ ಚಿತ್ರದುರ್ಗದಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ಜರುಗಿವೆ. ರಾಯಚೂರಿನ ಕ್ಯಾದಿಗೇರೆ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿರುವುದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ.<br /> <br /> ಮತದಾನ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ.<br /> <br /> ಭದ್ರತೆಗಾಗಿ 19 ಪೊಲೀಸ್ ವರಿಷ್ಠಾಧಿಕಾರಿಗಳು, 10 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 87 ಡಿವೈಎಸ್ಪಿ, 235 ಇನ್ಸ್ಪೆಕ್ಟರ್ಗಳು, 1780 ಸಬ್ ಇನ್ಸ್ಪೆಕ್ಟರ್ಗಳು ಹಾಗೂ 1778 ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳು ಸೇರಿದಂತೆ ಒಟ್ಟು 20,109 ಮಂದಿಯನ್ನು ನಿಯೋಜಿಸಲಾಗಿದೆ.<br /> <br /> ಜತೆಗೆ ಗೃಹ ರಕ್ಷಕ ದಳದ 9115 ಸಿಬ್ಬಂದಿ, 278 ಕೆಎಸ್ಆರ್ಪಿ,ಸಿಎಆರ್, ಡಿಎಆರ್ ತುಕಡಿಗಳು ಹಾಗೂ ಕೇರಳ ರಾಜ್ಯ ಸಶಸ್ತ್ರ ಮೀಸಲು ಪಡೆಯ 3 ತುಕಡಿಗಳು ಚುನಾವಣಾ ಭದ್ರತಾ ಕಾರ್ಯ ನಿರ್ವಹಿಸಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.</p>.<p>ಅಂಕಿ ಅಂಶ<br /> 19,079 ಒಟ್ಟು ಮತಗಟ್ಟೆ<br /> 3,294 ಅತಿ ಸೂಕ್ಷ್ಮ ಮತಗಟ್ಟೆ<br /> 4,607 ಸೂಕ್ಷ್ಮ ಮತಗಟ್ಟೆ<br /> 11,178 ಸಾಮಾನ್ಯ ಮತಗಟ್ಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ 15 ಜಿಲ್ಲೆಗಳು ಮತ್ತು ಒಂದು ಪೊಲೀಸ್ ಕಮೀಷನರೇ ಟ್ ವ್ಯಾಪ್ತಿಯಲ್ಲಿ ಎರಡನೇ ಹಂತದ ಗ್ರಾಮಪಂಚಾಯಿತಿ ಚುನಾವಣೆಯ ಮತದಾನ ಬಿರುಸಿನಿಂದ ಆರಂಭವಾಗಿದೆ.</p>.<p>ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ ಎಂದು ಸ್ಥಳೀಯ ಸುದ್ದಿ ಮೂಲಗಳು ತಿಳಿಸಿವೆ.<br /> <br /> ರಾಯಚೂರು, ದಾವಣಗೆರೆಯಲ್ಲಿ ಚಿತ್ರದುರ್ಗದಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ಜರುಗಿವೆ. ರಾಯಚೂರಿನ ಕ್ಯಾದಿಗೇರೆ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿರುವುದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ.<br /> <br /> ಮತದಾನ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ.<br /> <br /> ಭದ್ರತೆಗಾಗಿ 19 ಪೊಲೀಸ್ ವರಿಷ್ಠಾಧಿಕಾರಿಗಳು, 10 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 87 ಡಿವೈಎಸ್ಪಿ, 235 ಇನ್ಸ್ಪೆಕ್ಟರ್ಗಳು, 1780 ಸಬ್ ಇನ್ಸ್ಪೆಕ್ಟರ್ಗಳು ಹಾಗೂ 1778 ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳು ಸೇರಿದಂತೆ ಒಟ್ಟು 20,109 ಮಂದಿಯನ್ನು ನಿಯೋಜಿಸಲಾಗಿದೆ.<br /> <br /> ಜತೆಗೆ ಗೃಹ ರಕ್ಷಕ ದಳದ 9115 ಸಿಬ್ಬಂದಿ, 278 ಕೆಎಸ್ಆರ್ಪಿ,ಸಿಎಆರ್, ಡಿಎಆರ್ ತುಕಡಿಗಳು ಹಾಗೂ ಕೇರಳ ರಾಜ್ಯ ಸಶಸ್ತ್ರ ಮೀಸಲು ಪಡೆಯ 3 ತುಕಡಿಗಳು ಚುನಾವಣಾ ಭದ್ರತಾ ಕಾರ್ಯ ನಿರ್ವಹಿಸಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.</p>.<p>ಅಂಕಿ ಅಂಶ<br /> 19,079 ಒಟ್ಟು ಮತಗಟ್ಟೆ<br /> 3,294 ಅತಿ ಸೂಕ್ಷ್ಮ ಮತಗಟ್ಟೆ<br /> 4,607 ಸೂಕ್ಷ್ಮ ಮತಗಟ್ಟೆ<br /> 11,178 ಸಾಮಾನ್ಯ ಮತಗಟ್ಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>