<p><strong>ಹುಕ್ಕೇರಿ: </strong>ತಾಲ್ಲೂಕಿನ ಕುಂದರನಾಡಿನ ಪಾಶ್ಚಾಪುರ ಹಾಗೂ ಕುಂದರಗಿ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರೆ ಹಾಗೂ ರಥೋತ್ಸವವು ಶುಕ್ರವಾರದಿಂದ ಪ್ರಾರಂಭಗೊಂಡಿದ್ದು, ಬರುವ ಮಂಗಳವಾರದವರೆಗೆ ಜರುಗಲಿದೆ.</p>.<p>ಪಾಶ್ಚಾಪುರ ಗ್ರಾಮದಆಲೂರವ್ವ ದೇವಿಗೆ (ಮಹಾಲಕ್ಷ್ಮೀ) ವಾದ್ಯ ಮೇಳದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಉಡಿ ತುಂಬುವ ಕಾರ್ಯ ಜರುಗಿತು. <br /> <br /> ಶನಿವಾರ ಗ್ರಾಮದ ಮತ್ತು ಇತರ ಗ್ರಾಮಗಳ ಭಕ್ತರು ದೇವಿಗೆ ಉಡಿ ತುಂಬುವರು. ಮಧ್ಯಾಹ್ನ 2 ಗಂಟೆಯಿಂದ ದೇವಿಯ ಹೊನ್ನಾಟ ನಡೆಯುವುದು. <br /> <br /> ರಾತ್ರಿ 10.30 ಗಂಟೆಗೆ ಪಾಶ್ಚಾಪೂರದ ಮೇಲಿನ ಪೇಟೆಯ ಸಿ.ಆರ್. ನಿಪನಾಳ ನಾಟ್ಯ ಸಂಘದವರಿಂದ `ಧರ್ಮ ತುಂಬಿದ ಮನೆ~ ನಾಟಕವು ಬಸ್ ನಿಲ್ದಾಣದ ಹತ್ತಿರ ನಡೆಯಲಿದೆ. <br /> <br /> ಅಂದು ರಾತ್ರಿ ಕೆಳಗಿನ ಪೇಟೆಯ ಶ್ರೆ ಆಲೂರವ್ವ ನಾಟ್ಯ ಸಂಘದವರಿಂದ ರಾತ್ರಿ 10.30 ಗಂಟೆಗೆ `ರಾಧಾನ ಆಟ~ ನಾಟಕ ಆಲೂರವ್ವ ದೇವಿ ಗುಡಿಯ ಹತ್ತಿರ ನಡೆಯಲಿದೆ.<br /> <br /> ಭಾನುವಾರ ಮಧ್ಯಾಹ್ನ 12 ಗಂಟೆಗೆ ಅತಿಥಿಗಳ ಸತ್ಕಾರ ಜಾತ್ರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಮಕನ ಮರಡಿ ಶಾಸಕ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಕತ್ತಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ವಿಧಿ ಪೂರ್ವಕ ಅಲಂಕರಿಸಿದ ಲಕ್ಷ್ಮೀದೇವಿ ಕುಳಿತ ರಥೋತ್ಸವ ಗ್ರಾಮ ದೇವತೆ ಆಲೂರವ್ವನ ಗುಡಿಯಿಂದ ಪಾಶ್ಚಾಪೂರ ಬಸ್ ನಿಲ್ದಾಣದವರೆಗೆ ಜರುಗುವುದು. <br /> <br /> ಸೋಮವಾರ ಮಧ್ಯಾಹ್ನ 3 ಗಂಟೆಗೆ ಶೃಂಗರಿಸಿದ ಮಹಾಲಕ್ಷ್ಮೀ ದೇವಿಯ ರಥವನ್ನು ಬಸ್ ನಿಲ್ದಾಣದಿಂದ ಮರಳಿ ಆಲೂರವ್ವ ದೇವಿ ಗುಡಿಯವರೆಗೆ ತರಲಾಗುವುದು. <br /> <br /> ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಹಾಲಕ್ಷ್ಮೀ ದೇವಿಯ ಶ್ರೀಫಲಗಳ ಲಿಲಾವು ನಡೆಯಲಿದೆ. ರಾತ್ರಿ 10 ಗಂಟೆಯ ನಂತರ ದೇವಿಯನ್ನು ಸೀಮೆಗೆ ಸಾಗಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. <br /> <br /> ಜಾತ್ರೆಯ ಪ್ರಯುಕ್ತ ಪ್ರಸಿದ್ಧ ಪೈಲ್ವಾನರಿಂದ ಜಂಗಿ ಕುಸ್ತಿ ಜರುಗಲಿವೆ. ಘಟಪ್ರಭಾ ಪ್ರಭಾ ಶುಗರ್ಸ್ ಅಧ್ಯಕ್ಷ ಲಖನ ಜಾರಕಿಹೊಳಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ: </strong>ತಾಲ್ಲೂಕಿನ ಕುಂದರನಾಡಿನ ಪಾಶ್ಚಾಪುರ ಹಾಗೂ ಕುಂದರಗಿ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರೆ ಹಾಗೂ ರಥೋತ್ಸವವು ಶುಕ್ರವಾರದಿಂದ ಪ್ರಾರಂಭಗೊಂಡಿದ್ದು, ಬರುವ ಮಂಗಳವಾರದವರೆಗೆ ಜರುಗಲಿದೆ.</p>.<p>ಪಾಶ್ಚಾಪುರ ಗ್ರಾಮದಆಲೂರವ್ವ ದೇವಿಗೆ (ಮಹಾಲಕ್ಷ್ಮೀ) ವಾದ್ಯ ಮೇಳದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಉಡಿ ತುಂಬುವ ಕಾರ್ಯ ಜರುಗಿತು. <br /> <br /> ಶನಿವಾರ ಗ್ರಾಮದ ಮತ್ತು ಇತರ ಗ್ರಾಮಗಳ ಭಕ್ತರು ದೇವಿಗೆ ಉಡಿ ತುಂಬುವರು. ಮಧ್ಯಾಹ್ನ 2 ಗಂಟೆಯಿಂದ ದೇವಿಯ ಹೊನ್ನಾಟ ನಡೆಯುವುದು. <br /> <br /> ರಾತ್ರಿ 10.30 ಗಂಟೆಗೆ ಪಾಶ್ಚಾಪೂರದ ಮೇಲಿನ ಪೇಟೆಯ ಸಿ.ಆರ್. ನಿಪನಾಳ ನಾಟ್ಯ ಸಂಘದವರಿಂದ `ಧರ್ಮ ತುಂಬಿದ ಮನೆ~ ನಾಟಕವು ಬಸ್ ನಿಲ್ದಾಣದ ಹತ್ತಿರ ನಡೆಯಲಿದೆ. <br /> <br /> ಅಂದು ರಾತ್ರಿ ಕೆಳಗಿನ ಪೇಟೆಯ ಶ್ರೆ ಆಲೂರವ್ವ ನಾಟ್ಯ ಸಂಘದವರಿಂದ ರಾತ್ರಿ 10.30 ಗಂಟೆಗೆ `ರಾಧಾನ ಆಟ~ ನಾಟಕ ಆಲೂರವ್ವ ದೇವಿ ಗುಡಿಯ ಹತ್ತಿರ ನಡೆಯಲಿದೆ.<br /> <br /> ಭಾನುವಾರ ಮಧ್ಯಾಹ್ನ 12 ಗಂಟೆಗೆ ಅತಿಥಿಗಳ ಸತ್ಕಾರ ಜಾತ್ರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಮಕನ ಮರಡಿ ಶಾಸಕ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಕತ್ತಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ವಿಧಿ ಪೂರ್ವಕ ಅಲಂಕರಿಸಿದ ಲಕ್ಷ್ಮೀದೇವಿ ಕುಳಿತ ರಥೋತ್ಸವ ಗ್ರಾಮ ದೇವತೆ ಆಲೂರವ್ವನ ಗುಡಿಯಿಂದ ಪಾಶ್ಚಾಪೂರ ಬಸ್ ನಿಲ್ದಾಣದವರೆಗೆ ಜರುಗುವುದು. <br /> <br /> ಸೋಮವಾರ ಮಧ್ಯಾಹ್ನ 3 ಗಂಟೆಗೆ ಶೃಂಗರಿಸಿದ ಮಹಾಲಕ್ಷ್ಮೀ ದೇವಿಯ ರಥವನ್ನು ಬಸ್ ನಿಲ್ದಾಣದಿಂದ ಮರಳಿ ಆಲೂರವ್ವ ದೇವಿ ಗುಡಿಯವರೆಗೆ ತರಲಾಗುವುದು. <br /> <br /> ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಹಾಲಕ್ಷ್ಮೀ ದೇವಿಯ ಶ್ರೀಫಲಗಳ ಲಿಲಾವು ನಡೆಯಲಿದೆ. ರಾತ್ರಿ 10 ಗಂಟೆಯ ನಂತರ ದೇವಿಯನ್ನು ಸೀಮೆಗೆ ಸಾಗಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. <br /> <br /> ಜಾತ್ರೆಯ ಪ್ರಯುಕ್ತ ಪ್ರಸಿದ್ಧ ಪೈಲ್ವಾನರಿಂದ ಜಂಗಿ ಕುಸ್ತಿ ಜರುಗಲಿವೆ. ಘಟಪ್ರಭಾ ಪ್ರಭಾ ಶುಗರ್ಸ್ ಅಧ್ಯಕ್ಷ ಲಖನ ಜಾರಕಿಹೊಳಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>