<p><strong>ಬೆಂಗಳೂರು: </strong>ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮಸಹಾಯಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಶನಿವಾರ ಧರಣಿ ನಡೆಸಿದರು.<br /> <br /> ಸಂಘದ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ `ರಾಜ್ಯ ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕರ ಹುದ್ದೆಗೆ ನಮ್ಮನ್ನು ಆಯ್ಕೆ ಮಾಡಿ 33 ವರ್ಷಗಳು ಕಳೆದು ಹೋಗಿವೆ. ಆದರೆ, 100 ರಿಂದ 3,500 ರೂಪಾಯಿ ವೇತನ ನೀಡುತ್ತಿರುವುದು ಬಿಟ್ಟರೆ ಇನ್ನೂ ನಮ್ಮನ್ನು `ಡಿ~ ದರ್ಜೆಯ ನೌಕರರು ಎಂದು ಪರಿಗಣಿಸಿಲ್ಲ. <br /> <br /> 2007ರಲ್ಲಿಯೇ ಗ್ರಾಮ ಸಹಾಯಕ ನೌಕರರ ಹುದ್ದೆಖಾಯಂಗೊಳಿಸಲಾ ಗಿದೆ. ಆದರೆ, ವೇತನ ಪರಿಷ್ಕರಣೆ ಮಾತ್ರ ಆಗಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಪರಿಗಣಿಸಿಲ್ಲ. ನಮ್ಮನ್ನು `ಡಿ~ ದರ್ಜೆಯ ನೌಕರರೆಂದು ಪರಿಗಣಿಸಿ ಅವರಿಗೆ ನೀಡುವಷ್ಟು ವೇತನವನ್ನು ನೀಡಬೇಕು ಎಂದರು.<br /> <br /> 1993ರ ಸರ್ಕಾರದ ಆದೇಶದಂತೆ, ಸೇವೆಯಲ್ಲಿರುವ ಕಾರ್ಮಿಕ ಮರಣ ಹೊಂದಿದರೆ ಹಾಗೂ ನಿವೃತ್ತಿ ಹೊಂದಿದರೆ ಅವನ ಕುಟುಂಬದ ಸದಸ್ಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ನಿವೃತ್ತ ಗ್ರಾಮಸಹಾಯಕರಿಗೆ ಒಂದು ಲಕ್ಷ ನಿವೃತ್ತಿ ವೇತನ ಹಾಗೂ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.<br /> <br /> ಸಂಘದ ಉಪಾಧ್ಯಕ್ಷ ಬಿ.ಪುಟ್ಟಮಾದಯ್ಯ, ಟಿ.ವಾಸು, ಜನಾರ್ದನ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮಸಹಾಯಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಶನಿವಾರ ಧರಣಿ ನಡೆಸಿದರು.<br /> <br /> ಸಂಘದ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ `ರಾಜ್ಯ ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕರ ಹುದ್ದೆಗೆ ನಮ್ಮನ್ನು ಆಯ್ಕೆ ಮಾಡಿ 33 ವರ್ಷಗಳು ಕಳೆದು ಹೋಗಿವೆ. ಆದರೆ, 100 ರಿಂದ 3,500 ರೂಪಾಯಿ ವೇತನ ನೀಡುತ್ತಿರುವುದು ಬಿಟ್ಟರೆ ಇನ್ನೂ ನಮ್ಮನ್ನು `ಡಿ~ ದರ್ಜೆಯ ನೌಕರರು ಎಂದು ಪರಿಗಣಿಸಿಲ್ಲ. <br /> <br /> 2007ರಲ್ಲಿಯೇ ಗ್ರಾಮ ಸಹಾಯಕ ನೌಕರರ ಹುದ್ದೆಖಾಯಂಗೊಳಿಸಲಾ ಗಿದೆ. ಆದರೆ, ವೇತನ ಪರಿಷ್ಕರಣೆ ಮಾತ್ರ ಆಗಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಪರಿಗಣಿಸಿಲ್ಲ. ನಮ್ಮನ್ನು `ಡಿ~ ದರ್ಜೆಯ ನೌಕರರೆಂದು ಪರಿಗಣಿಸಿ ಅವರಿಗೆ ನೀಡುವಷ್ಟು ವೇತನವನ್ನು ನೀಡಬೇಕು ಎಂದರು.<br /> <br /> 1993ರ ಸರ್ಕಾರದ ಆದೇಶದಂತೆ, ಸೇವೆಯಲ್ಲಿರುವ ಕಾರ್ಮಿಕ ಮರಣ ಹೊಂದಿದರೆ ಹಾಗೂ ನಿವೃತ್ತಿ ಹೊಂದಿದರೆ ಅವನ ಕುಟುಂಬದ ಸದಸ್ಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ನಿವೃತ್ತ ಗ್ರಾಮಸಹಾಯಕರಿಗೆ ಒಂದು ಲಕ್ಷ ನಿವೃತ್ತಿ ವೇತನ ಹಾಗೂ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.<br /> <br /> ಸಂಘದ ಉಪಾಧ್ಯಕ್ಷ ಬಿ.ಪುಟ್ಟಮಾದಯ್ಯ, ಟಿ.ವಾಸು, ಜನಾರ್ದನ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>