<p>ಮೈಸೂರು: ಪೋಷಕ ನಟರಾಗಿ, ಮೇಷ್ಟ್ರು, ಮನೆ ಯಜಮಾನ, ಹಿರಿಯಣ್ಣ, ಖಳನಾಯಕನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ ಡಾ.ಕೆ.ಎಸ್.ಅಶ್ವಥ್ ಅವರನ್ನು ಸ್ನೇಹಿತರು, ಅಭಿಮಾನಿಗಳು ಮನದುಂಬಿ ನೆನೆದರು. <br /> <br /> `ನಾಗರಹಾವು~ ಚಿತ್ರದಲ್ಲಿ ಮೇಷ್ಟ್ರು ಪಾತ್ರದ ಮೂಲಕ ಕನ್ನಡಿಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿದಿರುವ ಅಶ್ವಥ್ ಅವರಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ `ಗೀತ ನಮನ~ ಸಲ್ಲಿಸಲಾಯಿತು. <br /> <br /> ಅಶ್ವಥ್ ಅವರ 88 ನೇ ಜನ್ಮದಿನ ಪ್ರಯುಕ್ತ ವಾರ್ತಾ ಇಲಾಖೆ ಸಹಯೋಗ ದೊಂದಿಗೆ ಕಲಾಮಂದಿ ರದಲ್ಲಿ ನಡೆದ `ಕರ್ಮಯೋಗಿ ನಮ್ಮ ಚಾಮಯ್ಯ ಮೇಷ್ಟ್ರು~ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮದಲ್ಲಿ ಚಾಮಯ್ಯ ಮೇಷ್ಟ್ರು ಅಭಿಮಾನಿಗಳು, ಶಿಷ್ಯವೃಂದ ಅಪಾರ ಸಂಖ್ಯೆಯಲ್ಲಿ ನೆರೆದಿತ್ತು. <br /> <br /> ಅಶ್ವಥ್ ನಟಿಸಿದ ಹಳೆಯ ಚಿತ್ರಗಳ ಗೀತೆಗಳನ್ನು ಯುವ ಗಾಯಕರು ಹಾಡುವ ಮೂಲಕ ರಂಜಿಸಿದರು. ಅಶ್ವತ್ಥ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಯಕರ ತಂಡ `ನಮ್ಮ ಮಕ್ಕಳು~ ಚಿತ್ರದ `ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ~ ಹಾಡುತ್ತಿದ್ದಂತೆ ತಂದೆಯನ್ನು ನೆನೆದ ಶಂಕರ್ ಅಶ್ವಥ್ ಕಂಬನಿಗರೆದು ಗದ್ಗದಿತರಾದರು. ಅಶ್ವಥ್ ಅವರ ಕುಟುಂಬದವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. `ಅಶ್ವಥ್ ಮತ್ತೆ ಹುಟ್ಟಿ ಬಾ ಚಾಮಯ್ಯ ಮತ್ತೆ ಹುಟ್ಟಿ ಬಾ..~ ಗಾಯನ ಸಭಾಂಗಣದಲ್ಲಿ ಮೊಳಗಿತು.<br /> <br /> ಯುವ ಗಾಯಕ ವ್ಯಾಸರಾಜ್ `ಜಗದೀಶನಾಡುವ ಜಗವೇ ನಾಟಕ ರಂಗ~ ಗಾನ ಲಹರಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯುವ ಗಾಯಕಿ `ಭಾರತ ಭೂಶಿರ ಮಂದಿರ ಸುಂದರಿ..~ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಸ್ವರ್ಣಗೌರಿ ಚಿತ್ರದ `ನಟವರ ಗಂಗಾಧರ ಉಮಾಶಂಕರ..~ ಗೀತೆಯನ್ನು ಗಾಯಕ ನಾಗಮಂಗಲ ಶ್ರೀನಿವಾಸ್ ಹಾಡಿ ರಂಜಿಸಿದರು.<br /> <br /> ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣು ಅವರು `ಕೋಹಿ ಹೋತಾ ಜಿಸ್ ಕೋ ಅಪ್ನೆ..~ ಹಿಂದಿಗೀತೆಯನ್ನು ಹಾಡುವಾಗ ಅಶ್ವಥ್ ಇದನ್ನು ಕೇಳಿಸಿಕೊಂಡು ಮತ್ತೆ ಹಾಡುವಂತೆ ಕೇಳಿಕೊಂಡಿದ್ದರಂತೆ. ಅಶ್ವಥ್ ಅವರ ನೆಚ್ಚಿನ ಗೀತೆಯಾದ ಇದೇ ಹಾಡನ್ನು ಗುರುರಾಜ್ ಹಾಡಿ ಮನಸೂರೆಗೊಂಡರು. ಅಶ್ವಥ್ ಅವರ ಮತ್ತೊಂದು ನೆಚ್ಚಿನ ಗೀತೆ `ತುಜೆ ಸೂರಜ್ ವೊ ಚಂದಾ...~ ಗೀತೆಯನ್ನು ಗಾಯಕ ಮೈಸೂರು ರಮೇಶ್ ಸುಶ್ರಾವ್ಯವಾಗಿ ಹಾಡಿ ಚಪ್ಪಾಳೆ ಗಿಟ್ಟಿಸಿದರು.<br /> <br /> ಶ್ರಾವಣ ಬಂತು ಚಿತ್ರದ `ಇದೇ ರಾಗದಲ್ಲಿ...~, ಶರಪಂಜರ ಚಿತ್ರದ `ಉತ್ತರ ಧ್ರುವದಿಂದ, ದಕ್ಷಿಣ ಧ್ರುವಕು..~ ಗೀತೆಗಳನ್ನು ಗಾಯಕರಾದ ರಮೇಶ್-ಜ್ಯೋತಿ ಮತ್ತು ವ್ಯಾಸರಾಜ-ಜ್ಯೋತಿ ಹಾಡಿದರು. ಹಳೆಯ ಚಿತ್ರದ ಗೀತೆಗಳ ಲಹರಿ ಸಭಾಂಗಣದಲ್ಲಿ ಒಂದೊಂದೇ ಹರಿಯತೊಡಗಿದರೆ, ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿತ್ತು.<br /> <br /> `ಅಶ್ವಥ್ ಶಿಸ್ತಿನ ಸಿಪಾಯಿಯಾಗಿದ್ದರು. ನಾವಿಬ್ಬರು ಸಸ್ಯಹಾರಿಗಳಾಗಿದ್ದರಿಂದ ಬಹುತೇಕ ಚಿತ್ರೀಕರಣಗಳಲ್ಲಿ ಒಂದೇ ಕೊಠಡಿಯಲ್ಲಿ ಇರುತ್ತಿದ್ದೆವು. ಒಮ್ಮೆ ದೋಸೆ ಮೆಲ್ಲಲು ಹೋದಾಗ ಬೇರೆಯವರು ಹಣ ನೀಡಿದ್ದರಿಂದ ಅಶ್ವಥ್ ನನ್ನ ಮೇಲೆ ಮುನಿಸಿಕೊಂಡರು. ಅಂದಿನಿಂದ ನಮ್ಮ ಸ್ನೇಹ ಗಟ್ಟಿಯಾಯಿತು~ ಎಂದು ಹಿರಿಯ ನಟ ಲೋಕನಾಥ್ ನೆನಪಿಸಿಕೊಂಡರು.<br /> <br /> `ಅಶ್ವಥ್ ಯಾರೆಂಬುದು ಹಿಂದಿನ ಪೀಳಿಗೆಗೆ ಗೊತ್ತಿದೆ. ಆದರೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಅದನ್ನು ಗೊತ್ತು ಮಾಡಿಸುವ ಕೆಲಸ ಮಾಡಬೇಕಿದೆ. ಅಶ್ವಥ್ ಅವರ ಕುರಿತು ಪುಸ್ತಕಗಳನ್ನು ಹೊರತರುವ ಜೊತೆಗೆ ಅವರ ಚಿತ್ರಗಳನ್ನು ತೋರಿಸಬೇಕು~ ಎಂದು ಸಲಹೆ ನೀಡಿದರು. ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಪೋಷಕ ನಟರಾಗಿ, ಮೇಷ್ಟ್ರು, ಮನೆ ಯಜಮಾನ, ಹಿರಿಯಣ್ಣ, ಖಳನಾಯಕನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ ಡಾ.ಕೆ.ಎಸ್.ಅಶ್ವಥ್ ಅವರನ್ನು ಸ್ನೇಹಿತರು, ಅಭಿಮಾನಿಗಳು ಮನದುಂಬಿ ನೆನೆದರು. <br /> <br /> `ನಾಗರಹಾವು~ ಚಿತ್ರದಲ್ಲಿ ಮೇಷ್ಟ್ರು ಪಾತ್ರದ ಮೂಲಕ ಕನ್ನಡಿಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿದಿರುವ ಅಶ್ವಥ್ ಅವರಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ `ಗೀತ ನಮನ~ ಸಲ್ಲಿಸಲಾಯಿತು. <br /> <br /> ಅಶ್ವಥ್ ಅವರ 88 ನೇ ಜನ್ಮದಿನ ಪ್ರಯುಕ್ತ ವಾರ್ತಾ ಇಲಾಖೆ ಸಹಯೋಗ ದೊಂದಿಗೆ ಕಲಾಮಂದಿ ರದಲ್ಲಿ ನಡೆದ `ಕರ್ಮಯೋಗಿ ನಮ್ಮ ಚಾಮಯ್ಯ ಮೇಷ್ಟ್ರು~ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮದಲ್ಲಿ ಚಾಮಯ್ಯ ಮೇಷ್ಟ್ರು ಅಭಿಮಾನಿಗಳು, ಶಿಷ್ಯವೃಂದ ಅಪಾರ ಸಂಖ್ಯೆಯಲ್ಲಿ ನೆರೆದಿತ್ತು. <br /> <br /> ಅಶ್ವಥ್ ನಟಿಸಿದ ಹಳೆಯ ಚಿತ್ರಗಳ ಗೀತೆಗಳನ್ನು ಯುವ ಗಾಯಕರು ಹಾಡುವ ಮೂಲಕ ರಂಜಿಸಿದರು. ಅಶ್ವತ್ಥ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಯಕರ ತಂಡ `ನಮ್ಮ ಮಕ್ಕಳು~ ಚಿತ್ರದ `ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ~ ಹಾಡುತ್ತಿದ್ದಂತೆ ತಂದೆಯನ್ನು ನೆನೆದ ಶಂಕರ್ ಅಶ್ವಥ್ ಕಂಬನಿಗರೆದು ಗದ್ಗದಿತರಾದರು. ಅಶ್ವಥ್ ಅವರ ಕುಟುಂಬದವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. `ಅಶ್ವಥ್ ಮತ್ತೆ ಹುಟ್ಟಿ ಬಾ ಚಾಮಯ್ಯ ಮತ್ತೆ ಹುಟ್ಟಿ ಬಾ..~ ಗಾಯನ ಸಭಾಂಗಣದಲ್ಲಿ ಮೊಳಗಿತು.<br /> <br /> ಯುವ ಗಾಯಕ ವ್ಯಾಸರಾಜ್ `ಜಗದೀಶನಾಡುವ ಜಗವೇ ನಾಟಕ ರಂಗ~ ಗಾನ ಲಹರಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯುವ ಗಾಯಕಿ `ಭಾರತ ಭೂಶಿರ ಮಂದಿರ ಸುಂದರಿ..~ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಸ್ವರ್ಣಗೌರಿ ಚಿತ್ರದ `ನಟವರ ಗಂಗಾಧರ ಉಮಾಶಂಕರ..~ ಗೀತೆಯನ್ನು ಗಾಯಕ ನಾಗಮಂಗಲ ಶ್ರೀನಿವಾಸ್ ಹಾಡಿ ರಂಜಿಸಿದರು.<br /> <br /> ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣು ಅವರು `ಕೋಹಿ ಹೋತಾ ಜಿಸ್ ಕೋ ಅಪ್ನೆ..~ ಹಿಂದಿಗೀತೆಯನ್ನು ಹಾಡುವಾಗ ಅಶ್ವಥ್ ಇದನ್ನು ಕೇಳಿಸಿಕೊಂಡು ಮತ್ತೆ ಹಾಡುವಂತೆ ಕೇಳಿಕೊಂಡಿದ್ದರಂತೆ. ಅಶ್ವಥ್ ಅವರ ನೆಚ್ಚಿನ ಗೀತೆಯಾದ ಇದೇ ಹಾಡನ್ನು ಗುರುರಾಜ್ ಹಾಡಿ ಮನಸೂರೆಗೊಂಡರು. ಅಶ್ವಥ್ ಅವರ ಮತ್ತೊಂದು ನೆಚ್ಚಿನ ಗೀತೆ `ತುಜೆ ಸೂರಜ್ ವೊ ಚಂದಾ...~ ಗೀತೆಯನ್ನು ಗಾಯಕ ಮೈಸೂರು ರಮೇಶ್ ಸುಶ್ರಾವ್ಯವಾಗಿ ಹಾಡಿ ಚಪ್ಪಾಳೆ ಗಿಟ್ಟಿಸಿದರು.<br /> <br /> ಶ್ರಾವಣ ಬಂತು ಚಿತ್ರದ `ಇದೇ ರಾಗದಲ್ಲಿ...~, ಶರಪಂಜರ ಚಿತ್ರದ `ಉತ್ತರ ಧ್ರುವದಿಂದ, ದಕ್ಷಿಣ ಧ್ರುವಕು..~ ಗೀತೆಗಳನ್ನು ಗಾಯಕರಾದ ರಮೇಶ್-ಜ್ಯೋತಿ ಮತ್ತು ವ್ಯಾಸರಾಜ-ಜ್ಯೋತಿ ಹಾಡಿದರು. ಹಳೆಯ ಚಿತ್ರದ ಗೀತೆಗಳ ಲಹರಿ ಸಭಾಂಗಣದಲ್ಲಿ ಒಂದೊಂದೇ ಹರಿಯತೊಡಗಿದರೆ, ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿತ್ತು.<br /> <br /> `ಅಶ್ವಥ್ ಶಿಸ್ತಿನ ಸಿಪಾಯಿಯಾಗಿದ್ದರು. ನಾವಿಬ್ಬರು ಸಸ್ಯಹಾರಿಗಳಾಗಿದ್ದರಿಂದ ಬಹುತೇಕ ಚಿತ್ರೀಕರಣಗಳಲ್ಲಿ ಒಂದೇ ಕೊಠಡಿಯಲ್ಲಿ ಇರುತ್ತಿದ್ದೆವು. ಒಮ್ಮೆ ದೋಸೆ ಮೆಲ್ಲಲು ಹೋದಾಗ ಬೇರೆಯವರು ಹಣ ನೀಡಿದ್ದರಿಂದ ಅಶ್ವಥ್ ನನ್ನ ಮೇಲೆ ಮುನಿಸಿಕೊಂಡರು. ಅಂದಿನಿಂದ ನಮ್ಮ ಸ್ನೇಹ ಗಟ್ಟಿಯಾಯಿತು~ ಎಂದು ಹಿರಿಯ ನಟ ಲೋಕನಾಥ್ ನೆನಪಿಸಿಕೊಂಡರು.<br /> <br /> `ಅಶ್ವಥ್ ಯಾರೆಂಬುದು ಹಿಂದಿನ ಪೀಳಿಗೆಗೆ ಗೊತ್ತಿದೆ. ಆದರೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಅದನ್ನು ಗೊತ್ತು ಮಾಡಿಸುವ ಕೆಲಸ ಮಾಡಬೇಕಿದೆ. ಅಶ್ವಥ್ ಅವರ ಕುರಿತು ಪುಸ್ತಕಗಳನ್ನು ಹೊರತರುವ ಜೊತೆಗೆ ಅವರ ಚಿತ್ರಗಳನ್ನು ತೋರಿಸಬೇಕು~ ಎಂದು ಸಲಹೆ ನೀಡಿದರು. ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>