<p><strong>ಕ್ರಿಕೆಟ್: ಫೈನಲ್ಗೆ ಜವಾಹರ್, ವಲ್ಚರ್ಸ್<br /> ಬೆಂಗಳೂರು:</strong> ಜವಾಹರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಕೆಎಸ್ಸಿಎ ಆಶ್ರಯದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಸೋಮವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.<br /> <br /> ಈ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿದೆ. ಭಾನುವಾರ ನಡೆದ ಸೆಮಿಫೈನಲ್ನಲ್ಲಿ ಜವಾಹರ್ ತಂಡದವರು 42 ರನ್ಗಳಿಂದ ಸೋಷಿಯಲ್ ಕ್ರಿಕೆಟರ್ಸ್ ಎದುರು ಗೆಲುವು ಸಾಧಿಸಿದರು. ಮತ್ತೊಂದು ಸೆಮಿಫೈನಲ್ನಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಆರು ವಿಕೆಟ್ಗಳಿಂದ ಬೆಂಗಳೂರು ಒಕೆಷನಲ್ಸ್ ತಂಡವನ್ನು ಮಣಿಸಿದರು.<br /> <br /> <strong>ಸಂಕ್ಷಿಪ್ತ ಸ್ಕೋರ್:</strong> ಜವಾಹರ್ ಸ್ಪೋರ್ಟ್ಸ್ ಕ್ಲಬ್: 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 (ಶಿಶಿರ್ ಭವಾನಿ 30, ಮಿರ್ ಕೌನಯನ್ ಅಬ್ಬಾಸ್ 41, ಕೆ.ಸಿ.ಅವಿನಾಶ್ 30, ಜೆ.ಸುಚಿತ್ 23, ಕೆ.ಗೌತಮ್ 33; ಕೆ.ಪಿ.ಅಪ್ಪಣ್ಣ 10ಕ್ಕೆ2); ಸೋಷಿಯಲ್ ಕ್ರಿಕೆಟರ್ಸ್: 19.2 ಓವರ್ಗಳಲ್ಲಿ 148 (ಕೆ.ಬಿ.ಪವನ್ 42, ದೀಪಕ್ ಚೌಗುಲೆ 36; ಕೆ.ಪಿ.ರೋಹನ್ 30ಕ್ಕೆ3, ಜೆ.ಸುಚಿತ್ 4ಕ್ಕೆ16, ಕೆ.ಗೌತಮ್ 36ಕ್ಕೆ2). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್ಗೆ 42 ರನ್ ಗೆಲುವು.<br /> <br /> ಬೆಂಗಳೂರು ಒಕೆಷನಲ್ಸ್: 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 (ಅಭಿಷೇಕ್ ರೆಡ್ಡಿ 42, ಸಮರ್ಥ್ ಊಟಿ 22; ಎಸ್.ಅರವಿಂದ್ 18ಕ್ಕೆ2, ಅನಿರುದ್ಧ ಜೋಶಿ 29ಕ್ಕೆ2, ಪವನ್ ದೇಶಪಾಂಡೆ 33ಕ್ಕೆ2); ವಲ್ಚರ್ಸ್ ಕ್ರಿಕೆಟ್ ಕ್ಲಬ್: 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 (ನಿಶ್ಚಿತ್ 22, ಅನಿರುದ್ಧ ಜೋಶಿ ಔಟಾಗದೆ 44, ಬಿ.ಎನ್.ಭರತ್ ಔಟಾಗದೆ 29); ಫಲಿತಾಂಶ: ವಲ್ಚರ್ಸ್ ಕ್ರಿಕೆಟ್ ಕ್ಲಬ್ಗೆ ಆರು ವಿಕೆಟ್ ಜಯ.<br /> <br /> <strong>ಚೆಸ್: ಆನಂದ್ಗೆ ಗೆಲುವು<br /> ಖಾಂಟಿ ಮನ್ಸಿಸ್ಕ್, ರಷ್ಯಾ (ಪಿಟಿಐ): </strong>ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ.<br /> <br /> ಭಾನುವಾರ ನಡೆದ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆನಂದ್ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ಅವರನ್ನು ಮಣಿಸಿದರು. ಹಾಗಾಗಿ ಅವರಿಗೆ ಪೂರ್ಣ ಪಾಯಿಂಟ್ ಲಭಿಸಿತು. ಭಾರತದ ಈ ಆಟಗಾರನ ಬಳಿ ಈಗ ಒಟ್ಟು ಆರು ಪಾಯಿಂಟ್ಗಳಿವೆ. ಉಳಿದ ಆಟಗಾರರಿಗಿಂತ ಆನಂದ್ ಈಗ ಒಂದು ಪಾಯಿಂಟ್ ಹೆಚ್ಚು ಹೊಂದಿದ್ದಾರೆ.<br /> <br /> ಎರಡನೇ ಸ್ಥಾನದಲ್ಲಿರುವ ಅರ್ಮೇನಿಯಾದ ಲೆವೋನ್ ಅರೋನಿಯನ್ (5 ಪಾಯಿಂಟ್) ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದರು. ಅವರು ಅಜರ್ಬೈಜಾನ್ನ ಶಖ್ರಿಯಾರ್ ಮಮೆದ್ಯಾರೋವ್ ಎದುರು ಸೋಲು ಕಂಡರು.<br /> <br /> ರಷ್ಯಾದ ಸರ್ಜಿ ಕರ್ಜಾಕಿನ್ ತಮ್ಮ ದೇಶದವರೇ ಆದ ವ್ಲಾಡಿಮಿರ್ ಕ್ರಾಮ್ನಿಕ್ಗೆ ಆಘಾತ ನೀಡಿದರು. ರಷ್ಯಾದ ಡಿಮಿಟ್ರಿ ಆ್ಯಂಡ್ರಿಕಿನ್ ಹಾಗೂ ಪೀಟರ್ ಸ್ವಿಡ್ಲರ್ ನಡುವಿನ ಪಂದ್ಯ ಡ್ರಾ ಆಯಿತು. ಈ ಟೂರ್ನಿಯಲ್ಲಿ ಇನ್ನೂ ಐದು ಸುತ್ತುಗಳ ಆಟ ಬಾಕಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ರಿಕೆಟ್: ಫೈನಲ್ಗೆ ಜವಾಹರ್, ವಲ್ಚರ್ಸ್<br /> ಬೆಂಗಳೂರು:</strong> ಜವಾಹರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಕೆಎಸ್ಸಿಎ ಆಶ್ರಯದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಸೋಮವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.<br /> <br /> ಈ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿದೆ. ಭಾನುವಾರ ನಡೆದ ಸೆಮಿಫೈನಲ್ನಲ್ಲಿ ಜವಾಹರ್ ತಂಡದವರು 42 ರನ್ಗಳಿಂದ ಸೋಷಿಯಲ್ ಕ್ರಿಕೆಟರ್ಸ್ ಎದುರು ಗೆಲುವು ಸಾಧಿಸಿದರು. ಮತ್ತೊಂದು ಸೆಮಿಫೈನಲ್ನಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಆರು ವಿಕೆಟ್ಗಳಿಂದ ಬೆಂಗಳೂರು ಒಕೆಷನಲ್ಸ್ ತಂಡವನ್ನು ಮಣಿಸಿದರು.<br /> <br /> <strong>ಸಂಕ್ಷಿಪ್ತ ಸ್ಕೋರ್:</strong> ಜವಾಹರ್ ಸ್ಪೋರ್ಟ್ಸ್ ಕ್ಲಬ್: 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 (ಶಿಶಿರ್ ಭವಾನಿ 30, ಮಿರ್ ಕೌನಯನ್ ಅಬ್ಬಾಸ್ 41, ಕೆ.ಸಿ.ಅವಿನಾಶ್ 30, ಜೆ.ಸುಚಿತ್ 23, ಕೆ.ಗೌತಮ್ 33; ಕೆ.ಪಿ.ಅಪ್ಪಣ್ಣ 10ಕ್ಕೆ2); ಸೋಷಿಯಲ್ ಕ್ರಿಕೆಟರ್ಸ್: 19.2 ಓವರ್ಗಳಲ್ಲಿ 148 (ಕೆ.ಬಿ.ಪವನ್ 42, ದೀಪಕ್ ಚೌಗುಲೆ 36; ಕೆ.ಪಿ.ರೋಹನ್ 30ಕ್ಕೆ3, ಜೆ.ಸುಚಿತ್ 4ಕ್ಕೆ16, ಕೆ.ಗೌತಮ್ 36ಕ್ಕೆ2). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್ಗೆ 42 ರನ್ ಗೆಲುವು.<br /> <br /> ಬೆಂಗಳೂರು ಒಕೆಷನಲ್ಸ್: 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 (ಅಭಿಷೇಕ್ ರೆಡ್ಡಿ 42, ಸಮರ್ಥ್ ಊಟಿ 22; ಎಸ್.ಅರವಿಂದ್ 18ಕ್ಕೆ2, ಅನಿರುದ್ಧ ಜೋಶಿ 29ಕ್ಕೆ2, ಪವನ್ ದೇಶಪಾಂಡೆ 33ಕ್ಕೆ2); ವಲ್ಚರ್ಸ್ ಕ್ರಿಕೆಟ್ ಕ್ಲಬ್: 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 (ನಿಶ್ಚಿತ್ 22, ಅನಿರುದ್ಧ ಜೋಶಿ ಔಟಾಗದೆ 44, ಬಿ.ಎನ್.ಭರತ್ ಔಟಾಗದೆ 29); ಫಲಿತಾಂಶ: ವಲ್ಚರ್ಸ್ ಕ್ರಿಕೆಟ್ ಕ್ಲಬ್ಗೆ ಆರು ವಿಕೆಟ್ ಜಯ.<br /> <br /> <strong>ಚೆಸ್: ಆನಂದ್ಗೆ ಗೆಲುವು<br /> ಖಾಂಟಿ ಮನ್ಸಿಸ್ಕ್, ರಷ್ಯಾ (ಪಿಟಿಐ): </strong>ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ.<br /> <br /> ಭಾನುವಾರ ನಡೆದ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆನಂದ್ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ಅವರನ್ನು ಮಣಿಸಿದರು. ಹಾಗಾಗಿ ಅವರಿಗೆ ಪೂರ್ಣ ಪಾಯಿಂಟ್ ಲಭಿಸಿತು. ಭಾರತದ ಈ ಆಟಗಾರನ ಬಳಿ ಈಗ ಒಟ್ಟು ಆರು ಪಾಯಿಂಟ್ಗಳಿವೆ. ಉಳಿದ ಆಟಗಾರರಿಗಿಂತ ಆನಂದ್ ಈಗ ಒಂದು ಪಾಯಿಂಟ್ ಹೆಚ್ಚು ಹೊಂದಿದ್ದಾರೆ.<br /> <br /> ಎರಡನೇ ಸ್ಥಾನದಲ್ಲಿರುವ ಅರ್ಮೇನಿಯಾದ ಲೆವೋನ್ ಅರೋನಿಯನ್ (5 ಪಾಯಿಂಟ್) ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದರು. ಅವರು ಅಜರ್ಬೈಜಾನ್ನ ಶಖ್ರಿಯಾರ್ ಮಮೆದ್ಯಾರೋವ್ ಎದುರು ಸೋಲು ಕಂಡರು.<br /> <br /> ರಷ್ಯಾದ ಸರ್ಜಿ ಕರ್ಜಾಕಿನ್ ತಮ್ಮ ದೇಶದವರೇ ಆದ ವ್ಲಾಡಿಮಿರ್ ಕ್ರಾಮ್ನಿಕ್ಗೆ ಆಘಾತ ನೀಡಿದರು. ರಷ್ಯಾದ ಡಿಮಿಟ್ರಿ ಆ್ಯಂಡ್ರಿಕಿನ್ ಹಾಗೂ ಪೀಟರ್ ಸ್ವಿಡ್ಲರ್ ನಡುವಿನ ಪಂದ್ಯ ಡ್ರಾ ಆಯಿತು. ಈ ಟೂರ್ನಿಯಲ್ಲಿ ಇನ್ನೂ ಐದು ಸುತ್ತುಗಳ ಆಟ ಬಾಕಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>