<p><strong>ಬೆಂಗಳೂರು</strong>: ನಗರದ ಕ್ರೀಡಾ ಸಂಸ್ಥೆಗಳು/ಕ್ಲಬ್ಗಳ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕ್ರೀಡಾ ತರಬೇತಿ ಶಿಬಿರಗಳ ವಿವರಗಳು ಇಂತಿವೆ.<br /> <br /> <strong>ಕ್ರಿಕೆಟ್: ರಘು </strong>ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ 9ನೇ ವರ್ಷದ ಕ್ರಿಕೆಟ್ ಬೇಸಿಗೆ ಶಿಬಿರವು ಏಪ್ರಿಲ್ 4ರಿಂದ ಮೇ 20ರ ವರೆಗೆ ಹಾಗೂ ಜೂನ್ 12ರಿಂದ 2013ರ ಫೆಬ್ರುವರಿ 17ರ ವರೆಗೆ ವಾರ್ಷಿಕ ಶಿಬಿರ ಜರುಗಲಿದೆ.<br /> <br /> ಮಾಗಡಿ ಮುಖ್ಯರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಶಾಲಾ ಮೈದಾನದಲ್ಲಿ ಶಿಬಿರ ನಡೆಯಲಿದೆ. ರಘು ಸ್ಪೋರ್ಟ್ಸ್, ನಂ. 180, ಕೆಳಗಿನ ಮಹಡಿ, ಸಂಜೀವಿನಿ ಬಿಲ್ಡಿಂಗ್, ದೊಡ್ಡಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಕೊಟ್ಟಿಗೆಪಾಳ್ಯ, ಬೆಂಗಳೂರು ಇಲ್ಲಿ ಅರ್ಜಿಗಳು ಸಿಗುತ್ತವೆ.<br /> <br /> ಹೆಚ್ಚಿನ ಮಾಹಿತಿಗೆ ಮುಖ್ಯ ತರಬೇತುದಾರ ಆರ್. ರಾಘವೇಂದ್ರ 9845104498 ಹಾಗೂ 9964595852 ಇಲ್ಲಿ ವ್ಯವಹರಿಸಿ.<br /> <br /> <strong>ಕ್ರಿಕೆಟ್: </strong>ದೊಡ್ಡ ಗಣೇಶ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ ಏಪ್ರಿಲ್ 2ರಿಂದ ಬೇಸಿಗೆ ಹಾಗೂ ವಾರ್ಷಿಕ ಕ್ರಿಕೆಟ್ ಶಿಬಿರ ಆರಂಭವಾಗಲಿದೆ.<br /> <br /> ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತರಬೇತಿ ನೀಡಲಿದ್ದಾರೆ. ಹೇಸರಘಟ್ಟದ ಮುಖ್ಯರಸ್ತೆಯಲ್ಲಿರುವ ಬಾಗಲಕುಂಟೆ ಪಿ.ಯು. ಕಾಲೇಜಿನ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೊಡ್ಡ ಗಣೇಶ್ 9844022207, ಮಲ್ಲಿಕಾರ್ಜುನ 9964088652, ನವನೀತ್ 9663210096, ಮಂಜುನಾಥ್ 7259191744 ಹಾಗೂ ಶ್ರೀಕುಮಾರ್ 9886843370 ಇಲ್ಲಿಗೆ ಸಂಪರ್ಕಿಸಬಹುದು.<br /> <br /> <strong>ಟೇಬಲ್ ಟೆನಿಸ್:</strong> ಸ್ಟಾರ್ ಟೇಬಲ್ ಟೆನಿಸ್ ಅಕಾಡೆಮಿ ವತಿಯಿಂದ ಮಾರ್ಚ್ 31ರಿಂದ ಏಪ್ರಿಲ್ 30ರ ವರೆಗೆ ಹಾಗೂ ಮೇ 1ರಿಂದ 28ರ ವರೆಗೆ ಎರಡು ಹಂತದಲ್ಲಿ ಬೇಸಿಗೆ ಟೇಬಲ್ ಟೆನಿಸ್ ಶಿಬಿರ ಜರುಗಲಿದೆ.<br /> <br /> 195 `ಎ~, 4ನೇ ಬ್ಲಾಕ್, 56ನೇ ಕ್ರಾಸ್, ರಾಜಾಜಿನಗರ, ಬೆಂಗಳೂರು-560010 ಇಲ್ಲಿ ಶಿಬಿರ ನಡೆಯಲಿದೆ. ಭಾಗವಹಿಸಲು ಆಸಕ್ತಿ ಹೊಂದಿದವರು ಅಕಾಡೆಮಿಯ ಗೌರವ ಕಾರ್ಯದರ್ಶಿ ಎಂ. ಶಶಿಧರನ್ 9844701696 ಅವರನ್ನು ಸಂಪರ್ಕಿಸವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.<br /> <br /> ಕ್ರಿಕೆಟ್: ಆರ್.ಕೆ. ಕ್ರಿಕೆಟ್ ಅಕಾಡೆಮಿ ಏಪ್ರಿಲ್ 1ರಿಂದ ಮೇ 30ರ ವರೆಗೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಬಾಲಕ ಹಾಗೂ ಬಾಲಕಿಯರಿಗಾಗಿ ಬೇಸಿಗೆ ತರಬೇತಿಶಿಬಿರ ಹಮ್ಮಿಕೊಂಡಿದೆ. <br /> <br /> 7 ವರ್ಷ ಮೇಲ್ಪಟ್ಟ ಹಾಗೂ 20 ವರ್ಷದವರೆಗಿನರಿಗೆ ತರಬೇತಿ ದೊರೆಯಲಿದೆ. ಆಸಕ್ತರು ಆರ್. ಕೃಷ್ಣಪ್ಪ 9141802852 ಇಲ್ಲಿ ವ್ಯವಹರಿಸಬಹುದು.<br /> <br /> ಕ್ರಿಕೆಟ್: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 1ರಿಂದ ಮೇ 27ರ ವರೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರ ಜರುಗಲಿದೆ.<br /> <br /> ಪ್ರತಿ ದಿನ ಬೆಳಿಗ್ಗೆ 6.30ರಿಂದ 9.30ರ ವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪದ್ಮನಾಭನ್ 9845731561 ಇಲ್ಲವೇ <a href="mailto:Padhud@rediffmail.com">Padhud@rediffmail.com</a> ಸಂಪರ್ಕಿಸಬಹುದು.<br /> <br /> <strong>ರುದ್ರೇಶ್ಗೆ ಜಿಲ್ಲಾ ಪ್ರಶಸ್ತಿ</strong><br /> ಬೆಂಗಳೂರು: ಅತ್ತಿಬೆಲೆಯ ಶ್ರೀಜಯಭಾರತಿ ಸಹಕಾರ ಪ್ರೌಢಶಾಲಾಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಎಚ್. ರುದ್ರೇಶ್ ಅವರಿಗೆ 2011-12ನೇ ಸಾಲಿನ ಜಿಲ್ಲಾ ಮಟ್ಟದ `ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ~ ಪ್ರಶಸ್ತಿ ಲಭಿಸಿದೆ.<br /> <br /> ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ನಾಗರಾಜನ್ ಅವರು ಇತ್ತೀಚಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಕ್ರೀಡಾ ಸಂಸ್ಥೆಗಳು/ಕ್ಲಬ್ಗಳ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕ್ರೀಡಾ ತರಬೇತಿ ಶಿಬಿರಗಳ ವಿವರಗಳು ಇಂತಿವೆ.<br /> <br /> <strong>ಕ್ರಿಕೆಟ್: ರಘು </strong>ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ 9ನೇ ವರ್ಷದ ಕ್ರಿಕೆಟ್ ಬೇಸಿಗೆ ಶಿಬಿರವು ಏಪ್ರಿಲ್ 4ರಿಂದ ಮೇ 20ರ ವರೆಗೆ ಹಾಗೂ ಜೂನ್ 12ರಿಂದ 2013ರ ಫೆಬ್ರುವರಿ 17ರ ವರೆಗೆ ವಾರ್ಷಿಕ ಶಿಬಿರ ಜರುಗಲಿದೆ.<br /> <br /> ಮಾಗಡಿ ಮುಖ್ಯರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಶಾಲಾ ಮೈದಾನದಲ್ಲಿ ಶಿಬಿರ ನಡೆಯಲಿದೆ. ರಘು ಸ್ಪೋರ್ಟ್ಸ್, ನಂ. 180, ಕೆಳಗಿನ ಮಹಡಿ, ಸಂಜೀವಿನಿ ಬಿಲ್ಡಿಂಗ್, ದೊಡ್ಡಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಕೊಟ್ಟಿಗೆಪಾಳ್ಯ, ಬೆಂಗಳೂರು ಇಲ್ಲಿ ಅರ್ಜಿಗಳು ಸಿಗುತ್ತವೆ.<br /> <br /> ಹೆಚ್ಚಿನ ಮಾಹಿತಿಗೆ ಮುಖ್ಯ ತರಬೇತುದಾರ ಆರ್. ರಾಘವೇಂದ್ರ 9845104498 ಹಾಗೂ 9964595852 ಇಲ್ಲಿ ವ್ಯವಹರಿಸಿ.<br /> <br /> <strong>ಕ್ರಿಕೆಟ್: </strong>ದೊಡ್ಡ ಗಣೇಶ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ ಏಪ್ರಿಲ್ 2ರಿಂದ ಬೇಸಿಗೆ ಹಾಗೂ ವಾರ್ಷಿಕ ಕ್ರಿಕೆಟ್ ಶಿಬಿರ ಆರಂಭವಾಗಲಿದೆ.<br /> <br /> ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತರಬೇತಿ ನೀಡಲಿದ್ದಾರೆ. ಹೇಸರಘಟ್ಟದ ಮುಖ್ಯರಸ್ತೆಯಲ್ಲಿರುವ ಬಾಗಲಕುಂಟೆ ಪಿ.ಯು. ಕಾಲೇಜಿನ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೊಡ್ಡ ಗಣೇಶ್ 9844022207, ಮಲ್ಲಿಕಾರ್ಜುನ 9964088652, ನವನೀತ್ 9663210096, ಮಂಜುನಾಥ್ 7259191744 ಹಾಗೂ ಶ್ರೀಕುಮಾರ್ 9886843370 ಇಲ್ಲಿಗೆ ಸಂಪರ್ಕಿಸಬಹುದು.<br /> <br /> <strong>ಟೇಬಲ್ ಟೆನಿಸ್:</strong> ಸ್ಟಾರ್ ಟೇಬಲ್ ಟೆನಿಸ್ ಅಕಾಡೆಮಿ ವತಿಯಿಂದ ಮಾರ್ಚ್ 31ರಿಂದ ಏಪ್ರಿಲ್ 30ರ ವರೆಗೆ ಹಾಗೂ ಮೇ 1ರಿಂದ 28ರ ವರೆಗೆ ಎರಡು ಹಂತದಲ್ಲಿ ಬೇಸಿಗೆ ಟೇಬಲ್ ಟೆನಿಸ್ ಶಿಬಿರ ಜರುಗಲಿದೆ.<br /> <br /> 195 `ಎ~, 4ನೇ ಬ್ಲಾಕ್, 56ನೇ ಕ್ರಾಸ್, ರಾಜಾಜಿನಗರ, ಬೆಂಗಳೂರು-560010 ಇಲ್ಲಿ ಶಿಬಿರ ನಡೆಯಲಿದೆ. ಭಾಗವಹಿಸಲು ಆಸಕ್ತಿ ಹೊಂದಿದವರು ಅಕಾಡೆಮಿಯ ಗೌರವ ಕಾರ್ಯದರ್ಶಿ ಎಂ. ಶಶಿಧರನ್ 9844701696 ಅವರನ್ನು ಸಂಪರ್ಕಿಸವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.<br /> <br /> ಕ್ರಿಕೆಟ್: ಆರ್.ಕೆ. ಕ್ರಿಕೆಟ್ ಅಕಾಡೆಮಿ ಏಪ್ರಿಲ್ 1ರಿಂದ ಮೇ 30ರ ವರೆಗೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಬಾಲಕ ಹಾಗೂ ಬಾಲಕಿಯರಿಗಾಗಿ ಬೇಸಿಗೆ ತರಬೇತಿಶಿಬಿರ ಹಮ್ಮಿಕೊಂಡಿದೆ. <br /> <br /> 7 ವರ್ಷ ಮೇಲ್ಪಟ್ಟ ಹಾಗೂ 20 ವರ್ಷದವರೆಗಿನರಿಗೆ ತರಬೇತಿ ದೊರೆಯಲಿದೆ. ಆಸಕ್ತರು ಆರ್. ಕೃಷ್ಣಪ್ಪ 9141802852 ಇಲ್ಲಿ ವ್ಯವಹರಿಸಬಹುದು.<br /> <br /> ಕ್ರಿಕೆಟ್: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 1ರಿಂದ ಮೇ 27ರ ವರೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರ ಜರುಗಲಿದೆ.<br /> <br /> ಪ್ರತಿ ದಿನ ಬೆಳಿಗ್ಗೆ 6.30ರಿಂದ 9.30ರ ವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪದ್ಮನಾಭನ್ 9845731561 ಇಲ್ಲವೇ <a href="mailto:Padhud@rediffmail.com">Padhud@rediffmail.com</a> ಸಂಪರ್ಕಿಸಬಹುದು.<br /> <br /> <strong>ರುದ್ರೇಶ್ಗೆ ಜಿಲ್ಲಾ ಪ್ರಶಸ್ತಿ</strong><br /> ಬೆಂಗಳೂರು: ಅತ್ತಿಬೆಲೆಯ ಶ್ರೀಜಯಭಾರತಿ ಸಹಕಾರ ಪ್ರೌಢಶಾಲಾಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಎಚ್. ರುದ್ರೇಶ್ ಅವರಿಗೆ 2011-12ನೇ ಸಾಲಿನ ಜಿಲ್ಲಾ ಮಟ್ಟದ `ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ~ ಪ್ರಶಸ್ತಿ ಲಭಿಸಿದೆ.<br /> <br /> ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ನಾಗರಾಜನ್ ಅವರು ಇತ್ತೀಚಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>