<p>ಸಾಮಾಜಿಕ ಕತೆಗಳ ಮಧ್ಯೆ ಪೌರಾಣಿಕ, ಐತಿಹಾಸಿಕ ಕತೆಗಳನ್ನಿಟ್ಟಾಗ ಅದಕ್ಕೆ ದೊರೆಯುವ ಮಹತ್ವವೇ ಬೇರೆ. ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸರಿಯಾಗಿ ರಾತ್ರಿ ಎಂಟೂವರೆಗೆ `ಕೆಳದಿ ಚೆನ್ನಮ್ಮ~ ಮೂಡಿ ಬರುತ್ತಾಳೆ. ಹದಿನೇಳನೇ ಶತಮಾನದ ಮಲೆನಾಡಿನ ರಾಣಿಯ ಕತೆ ಅದು. <br /> <br /> ಟಿ.ಎಸ್.ನಾಗಾಭರಣ ನಿರ್ದೇಶನದ ಈ ಧಾರಾವಾಹಿಯಲ್ಲಿ ಚೆನ್ನಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ಕರಾವಳಿ ಬೆಡಗಿ ಸಂಗೀತಾ ಶೆಟ್ಟಿ.<br /> <br /> ನಾಗಾಭರಣ ಕಚೇರಿಯಿಂದ ಧಾರಾವಾಹಿಯ ಆಡಿಷನ್ ಕುರಿತ ಪ್ರಸ್ತಾಪ ಬಂತು. ಆಗಲೂ ಸಂಗೀತಾ ಅವರಿಗೆ ಚೆನ್ನಮ್ಮನ ಪಾತ್ರಕ್ಕೆ ಆಯ್ಕೆಯಾಗುವ ನಂಬಿಕೆ ಇರಲಿಲ್ಲ. ಅಷ್ಟು ದೊಡ್ಡ ಪಾತ್ರಕ್ಕೆ ಅನುಭವಿಯೊಬ್ಬರು ಆಯ್ಕೆಯಾಗಬಹುದು ಎಂದೇ ಭಾವಿಸಿದ್ದರು.<br /> <br /> ಆದರೆ ಹೊಸಬರಿಗೆ ಅವಕಾಶ ಕೊಡುವ ಮನಸ್ಸು ನಾಗಾಭರಣರಿಗೆ. ಸಂಗೀತಾ ಪಾಲಿಗೆ ಇದು ವರದಾನವಾಯಿತು. ಬೇರೆ ಪಾತ್ರ ನಿರೀಕ್ಷಿಸಿದ್ದ ಅವರಿಗೆ `ರಾಣಿ ಪಟ್ಟ~ವೇ ಒಲಿಯಿತು. ಇದು ಮಾಮೂಲಿ ಅಭಿನಯವಂತೂ ಅಲ್ಲವೇ ಅಲ್ಲ ಎಂಬುದು ಮೊದಲ ದಿನವೇ ತಿಳಿಯಿತು. <br /> <br /> ನಾಗಭರಣರು ಕುದುರೆ ಸವಾರಿ, ಕತ್ತಿ ವರಸೆ ಕಲಿಯಬೇಕು ಎಂದು ಬೋಧಿಸಿದ್ದರು. ಅದರಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ಕುದುರೆ ಸವಾರಿಯ ತಾಲೀಮು ನಡೆಯಿತು. ಮೊದಲ ದಿನದ ಚಿತ್ರೀಕರಣದ ವೇಳೆ ಕುದುರೆ ಮೇಲಿನಿಂದ ಬಿದ್ದದ್ದೂ ಆಯಿತು. ಈಗ ಸಂಗೀತಾ ಸವಾರಿ ಪ್ರವೀಣೆಯಾಗಿದ್ದಾರೆ. <br /> <br /> ಚೆನ್ನಮ್ಮನದು ಸಾಮಾನ್ಯ ಹೆಣ್ಣುಮಗಳೊಬ್ಬಳು ಅಸಾಮಾನ್ಯಳಾಗಿ ಹೊರಹೊಮ್ಮಿದ ಕತೆ ಎಂದು ಬಣ್ಣಿಸುತ್ತಾರೆ ಸಂಗೀತಾ. ತನ್ನ ಧೈರ್ಯ ಸಾಹಸದ ಮೂಲಕ ದೊರೆ ಸೋಮಶೇಖರ ನಾಯಕನ ಮನ ಗೆಲ್ಲುತ್ತಾಳೆ ಆಕೆ.<br /> <br /> ಪಟ್ಟದಿಂದ ಅವಳನ್ನು ದೂರವಿಡಲು ಹುನ್ನಾರ ನಡೆಯುತ್ತದೆ. ಕೊಲೆಯ ಸಂಚು ನಡೆಯುತ್ತದೆ. ಬದುಕಿದ್ದು ಸತ್ತಂತಿರುವ ಅರಸನೊಂದಿಗೆ ಅವಳು ಬಾಳ್ವೆ ನಡೆಸುತ್ತಾಳೆ. ಮಗಳಾಗಿ, ಹೆಂಡತಿಯಾಗಿ ರಾಜ್ಯವೊಂದಕ್ಕೆ ಒಡತಿಯಾಗಿ ವೈವಿಧ್ಯಮಯ ಆಯಾಮಗಳನ್ನು ಪಾತ್ರ ಹೊಂದಿದೆ ಎನ್ನುತ್ತಾರೆ ಅವರು. <br /> <br /> ಅಂದಹಾಗೆ ಸಂಗೀತಾ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಧಾರಾವಾಹಿಯ ಮೂಲಕವಲ್ಲ, ಚಿತ್ರರಂಗದ ಮುಖೇನ. ತುಳುವಿನ `ಬಿರ್ಸೆ~ ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ. ನಂತರ `ರಾಮಸೇತು~ ಕನ್ನಡ ಚಿತ್ರದಲ್ಲಿ ನಾಯಕಿ. `ಜಾಲಿಡೇಸ್~, `ಪ್ರತಿಕ್ಷಣ~ ಹಾಗೂ ಲಂಬಾಣಿ ಭಾಷೆಯ `ಸೋನಾ~ ಹೀಗೆ ಸಾಲು ಸಾಲು ಚಿತ್ರಗಳು ಬಂದು ಹೋದವು. `ಜಾಲಿಡೇಸ್~ ಹೊರತುಪಡಿಸಿದರೆ ಎಲ್ಲಾ ಚಿತ್ರಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೂ ಟೇಕಾಫ್ ಆಗುವುದು ಕಷ್ಟದ ಕೆಲಸವಾಯಿತು. ಅಷ್ಟಿಷ್ಟು ಹೆಸರು ತಂದುಕೊಟ್ಟದ್ದು `ಸೋನಾ~ ಮಾತ್ರ. <br /> <br /> ಪಾತ್ರಗಳ ಆಯ್ಕೆಯಲ್ಲಿ ಗಮನ ಹರಿಸದಿದ್ದುದು ಇದಕ್ಕೆ ಕಾರಣವಂತೆ. ಈಗ ಬಂದ ಪಾತ್ರಗಳನ್ನೆಲ್ಲಾ ಒಪ್ಪುವುದಕ್ಕಿಂತ `ಚೂಸಿ~ ಆಗುವುದು ಮೇಲು ಅನ್ನಿಸಿದೆ ಅವರಿಗೆ. ದೊಡ್ಡ ಬ್ಯಾನರ್ನ ಚಿತ್ರಗಳು ಅಥವಾ ಉತ್ತಮ ನಾಯಕರು ಜತೆ ಅಭಿನಯಿಸಬೇಕು ಎಂಬ ಆಸೆ ಅವರದು. <br /> <br /> ಧಾರಾವಾಹಿಯತ್ತ ಅವರು ಮುಖ ಮಾಡಿದ್ದು `ಪ್ಯಾಟೆ ಹುಡ್ಗೀರ ಹಳ್ಳಿ ಲೈಫು~ ರಿಯಾಲಿಟಿ ಕಾರ್ಯಕ್ರಮದ ಮೂಲಕ. ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಂಗೀತಾರನ್ನು ಜನ ಗುರುತಿಸಿದ್ದು ಈ ಕಾರ್ಯಕ್ರಮದ ಮುಖಾಂತರ. ಆಮೇಲೆ `ಕೃಷ್ಣ ರುಕ್ಮಿಣಿ~ ಧಾರಾವಾಹಿ ಅವರ ಕೈ ಹಿಡಿಯಿತು. ಜನ್ಮಾಂತರದ ಪ್ರೇಮದ ಎಳೆ ಹೊಂದಿದ್ದ ಧಾರಾವಾಹಿ ಅದು. ಸತ್ಯಭಾಮಾ ಪಾತ್ರದ ಮೂಲಕ ನಾಡಿನ ಮನೆಮನಗಳ ಗಮನ ಸೆಳೆದರು. <br /> <br /> ಮರಳಿ ಸಿನಿಮಾಗೆ ಅವಕಾಶ ದೊರೆತರೆ ಎಂಬ ಪ್ರಶ್ನೆಗೆ ಸದ್ಯಕ್ಕೆ `ಕೆಳದಿ~ಯೇ ನನ್ನ ಧ್ಯಾನ ಎನ್ನುತ್ತಾರೆ ಆಕೆ. ಹಿರಿತೆರೆಗಿಂತಲೂ ಕಿರುತೆರೆಯಲ್ಲಿ ಬೆಲೆಯಿದೆ ಎಂಬುದು ಅವರು ಕಂಡುಕೊಂಡಿರುವ ಅನುಭವ. ಅವರ ಪ್ರಕಾರ ಹಿರಿತೆರೆಯಿಂದ ಕಿರುತೆರೆಗೆ ಕಾಲಿಡುವುದು ಹಿಂಬಡ್ತಿಯಲ್ಲ. ಇದೇ ಬೇರೆ ಮಾಧ್ಯಮ ಅದೇ ಬೇರೆ ಮಾಧ್ಯಮ ಎಂಬ ವ್ಯಾಖ್ಯಾನ ಅವರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾಜಿಕ ಕತೆಗಳ ಮಧ್ಯೆ ಪೌರಾಣಿಕ, ಐತಿಹಾಸಿಕ ಕತೆಗಳನ್ನಿಟ್ಟಾಗ ಅದಕ್ಕೆ ದೊರೆಯುವ ಮಹತ್ವವೇ ಬೇರೆ. ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸರಿಯಾಗಿ ರಾತ್ರಿ ಎಂಟೂವರೆಗೆ `ಕೆಳದಿ ಚೆನ್ನಮ್ಮ~ ಮೂಡಿ ಬರುತ್ತಾಳೆ. ಹದಿನೇಳನೇ ಶತಮಾನದ ಮಲೆನಾಡಿನ ರಾಣಿಯ ಕತೆ ಅದು. <br /> <br /> ಟಿ.ಎಸ್.ನಾಗಾಭರಣ ನಿರ್ದೇಶನದ ಈ ಧಾರಾವಾಹಿಯಲ್ಲಿ ಚೆನ್ನಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ಕರಾವಳಿ ಬೆಡಗಿ ಸಂಗೀತಾ ಶೆಟ್ಟಿ.<br /> <br /> ನಾಗಾಭರಣ ಕಚೇರಿಯಿಂದ ಧಾರಾವಾಹಿಯ ಆಡಿಷನ್ ಕುರಿತ ಪ್ರಸ್ತಾಪ ಬಂತು. ಆಗಲೂ ಸಂಗೀತಾ ಅವರಿಗೆ ಚೆನ್ನಮ್ಮನ ಪಾತ್ರಕ್ಕೆ ಆಯ್ಕೆಯಾಗುವ ನಂಬಿಕೆ ಇರಲಿಲ್ಲ. ಅಷ್ಟು ದೊಡ್ಡ ಪಾತ್ರಕ್ಕೆ ಅನುಭವಿಯೊಬ್ಬರು ಆಯ್ಕೆಯಾಗಬಹುದು ಎಂದೇ ಭಾವಿಸಿದ್ದರು.<br /> <br /> ಆದರೆ ಹೊಸಬರಿಗೆ ಅವಕಾಶ ಕೊಡುವ ಮನಸ್ಸು ನಾಗಾಭರಣರಿಗೆ. ಸಂಗೀತಾ ಪಾಲಿಗೆ ಇದು ವರದಾನವಾಯಿತು. ಬೇರೆ ಪಾತ್ರ ನಿರೀಕ್ಷಿಸಿದ್ದ ಅವರಿಗೆ `ರಾಣಿ ಪಟ್ಟ~ವೇ ಒಲಿಯಿತು. ಇದು ಮಾಮೂಲಿ ಅಭಿನಯವಂತೂ ಅಲ್ಲವೇ ಅಲ್ಲ ಎಂಬುದು ಮೊದಲ ದಿನವೇ ತಿಳಿಯಿತು. <br /> <br /> ನಾಗಭರಣರು ಕುದುರೆ ಸವಾರಿ, ಕತ್ತಿ ವರಸೆ ಕಲಿಯಬೇಕು ಎಂದು ಬೋಧಿಸಿದ್ದರು. ಅದರಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ಕುದುರೆ ಸವಾರಿಯ ತಾಲೀಮು ನಡೆಯಿತು. ಮೊದಲ ದಿನದ ಚಿತ್ರೀಕರಣದ ವೇಳೆ ಕುದುರೆ ಮೇಲಿನಿಂದ ಬಿದ್ದದ್ದೂ ಆಯಿತು. ಈಗ ಸಂಗೀತಾ ಸವಾರಿ ಪ್ರವೀಣೆಯಾಗಿದ್ದಾರೆ. <br /> <br /> ಚೆನ್ನಮ್ಮನದು ಸಾಮಾನ್ಯ ಹೆಣ್ಣುಮಗಳೊಬ್ಬಳು ಅಸಾಮಾನ್ಯಳಾಗಿ ಹೊರಹೊಮ್ಮಿದ ಕತೆ ಎಂದು ಬಣ್ಣಿಸುತ್ತಾರೆ ಸಂಗೀತಾ. ತನ್ನ ಧೈರ್ಯ ಸಾಹಸದ ಮೂಲಕ ದೊರೆ ಸೋಮಶೇಖರ ನಾಯಕನ ಮನ ಗೆಲ್ಲುತ್ತಾಳೆ ಆಕೆ.<br /> <br /> ಪಟ್ಟದಿಂದ ಅವಳನ್ನು ದೂರವಿಡಲು ಹುನ್ನಾರ ನಡೆಯುತ್ತದೆ. ಕೊಲೆಯ ಸಂಚು ನಡೆಯುತ್ತದೆ. ಬದುಕಿದ್ದು ಸತ್ತಂತಿರುವ ಅರಸನೊಂದಿಗೆ ಅವಳು ಬಾಳ್ವೆ ನಡೆಸುತ್ತಾಳೆ. ಮಗಳಾಗಿ, ಹೆಂಡತಿಯಾಗಿ ರಾಜ್ಯವೊಂದಕ್ಕೆ ಒಡತಿಯಾಗಿ ವೈವಿಧ್ಯಮಯ ಆಯಾಮಗಳನ್ನು ಪಾತ್ರ ಹೊಂದಿದೆ ಎನ್ನುತ್ತಾರೆ ಅವರು. <br /> <br /> ಅಂದಹಾಗೆ ಸಂಗೀತಾ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಧಾರಾವಾಹಿಯ ಮೂಲಕವಲ್ಲ, ಚಿತ್ರರಂಗದ ಮುಖೇನ. ತುಳುವಿನ `ಬಿರ್ಸೆ~ ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ. ನಂತರ `ರಾಮಸೇತು~ ಕನ್ನಡ ಚಿತ್ರದಲ್ಲಿ ನಾಯಕಿ. `ಜಾಲಿಡೇಸ್~, `ಪ್ರತಿಕ್ಷಣ~ ಹಾಗೂ ಲಂಬಾಣಿ ಭಾಷೆಯ `ಸೋನಾ~ ಹೀಗೆ ಸಾಲು ಸಾಲು ಚಿತ್ರಗಳು ಬಂದು ಹೋದವು. `ಜಾಲಿಡೇಸ್~ ಹೊರತುಪಡಿಸಿದರೆ ಎಲ್ಲಾ ಚಿತ್ರಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೂ ಟೇಕಾಫ್ ಆಗುವುದು ಕಷ್ಟದ ಕೆಲಸವಾಯಿತು. ಅಷ್ಟಿಷ್ಟು ಹೆಸರು ತಂದುಕೊಟ್ಟದ್ದು `ಸೋನಾ~ ಮಾತ್ರ. <br /> <br /> ಪಾತ್ರಗಳ ಆಯ್ಕೆಯಲ್ಲಿ ಗಮನ ಹರಿಸದಿದ್ದುದು ಇದಕ್ಕೆ ಕಾರಣವಂತೆ. ಈಗ ಬಂದ ಪಾತ್ರಗಳನ್ನೆಲ್ಲಾ ಒಪ್ಪುವುದಕ್ಕಿಂತ `ಚೂಸಿ~ ಆಗುವುದು ಮೇಲು ಅನ್ನಿಸಿದೆ ಅವರಿಗೆ. ದೊಡ್ಡ ಬ್ಯಾನರ್ನ ಚಿತ್ರಗಳು ಅಥವಾ ಉತ್ತಮ ನಾಯಕರು ಜತೆ ಅಭಿನಯಿಸಬೇಕು ಎಂಬ ಆಸೆ ಅವರದು. <br /> <br /> ಧಾರಾವಾಹಿಯತ್ತ ಅವರು ಮುಖ ಮಾಡಿದ್ದು `ಪ್ಯಾಟೆ ಹುಡ್ಗೀರ ಹಳ್ಳಿ ಲೈಫು~ ರಿಯಾಲಿಟಿ ಕಾರ್ಯಕ್ರಮದ ಮೂಲಕ. ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಂಗೀತಾರನ್ನು ಜನ ಗುರುತಿಸಿದ್ದು ಈ ಕಾರ್ಯಕ್ರಮದ ಮುಖಾಂತರ. ಆಮೇಲೆ `ಕೃಷ್ಣ ರುಕ್ಮಿಣಿ~ ಧಾರಾವಾಹಿ ಅವರ ಕೈ ಹಿಡಿಯಿತು. ಜನ್ಮಾಂತರದ ಪ್ರೇಮದ ಎಳೆ ಹೊಂದಿದ್ದ ಧಾರಾವಾಹಿ ಅದು. ಸತ್ಯಭಾಮಾ ಪಾತ್ರದ ಮೂಲಕ ನಾಡಿನ ಮನೆಮನಗಳ ಗಮನ ಸೆಳೆದರು. <br /> <br /> ಮರಳಿ ಸಿನಿಮಾಗೆ ಅವಕಾಶ ದೊರೆತರೆ ಎಂಬ ಪ್ರಶ್ನೆಗೆ ಸದ್ಯಕ್ಕೆ `ಕೆಳದಿ~ಯೇ ನನ್ನ ಧ್ಯಾನ ಎನ್ನುತ್ತಾರೆ ಆಕೆ. ಹಿರಿತೆರೆಗಿಂತಲೂ ಕಿರುತೆರೆಯಲ್ಲಿ ಬೆಲೆಯಿದೆ ಎಂಬುದು ಅವರು ಕಂಡುಕೊಂಡಿರುವ ಅನುಭವ. ಅವರ ಪ್ರಕಾರ ಹಿರಿತೆರೆಯಿಂದ ಕಿರುತೆರೆಗೆ ಕಾಲಿಡುವುದು ಹಿಂಬಡ್ತಿಯಲ್ಲ. ಇದೇ ಬೇರೆ ಮಾಧ್ಯಮ ಅದೇ ಬೇರೆ ಮಾಧ್ಯಮ ಎಂಬ ವ್ಯಾಖ್ಯಾನ ಅವರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>