<p><strong>ಚನ್ನರಾಯಪಟ್ಟಣ</strong>: ಇಲ್ಲಿನ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಶೌಚಾಲಯ ಉದ್ಘಾಟನೆಗೊಂಡು ಆರು ತಿಂಗಳಾದರೂ ಸೇವೆಗೆ ಲಭ್ಯವಿಲ್ಲ, ಆದರೆ ಪಂಚಾಯಿತಿ ನಡೆಸುವ, ಬೀಡಿ, ಸಿಗರೇಟು ಸೇದುವರ ತಾಣವಾಗಿದೆ.<br /> <br /> ಪುರುಷರ, ಮಹಿಳೆಯರ ಶೌಚಾಲಯದಲ್ಲಿ ಜೇಡರ ಬಲೆ ಆವರಿಸಿದೆ. ಹಾಳು ಬಿದ್ದ ಮನೆಯಂತೆ ಗೋಚರಿಸುತ್ತದೆ. ಅದರಲ್ಲಿ ಅಳವಡಿಸಿರುವ ಶೌಚಾಲಯ ಪರಿಕರಗಳು ಹಾಳಾಗುವ ಸ್ಥಿತಿ ತಲುಪಿದೆ. <br /> <br /> ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಿಲ್ಲದ್ದರಿಂದ ಬೇಸತ್ತ ಪುರಸಭೆ ಮಾಜಿ ಸದಸ್ಯರೊಬ್ಬರು ಶೌಚಾಲಯದ ಬೀಗ ಮುರಿದು ಸೇವೆಗೆ ಅವಕಾಶ ಕಲ್ಪಿಸಿದರು. ಆದರೆ ಕೆಲ ತಾಂತ್ರಿಕ ತೊಂದರೆಯಿಂದ ಸೇವೆಗೆ ಸ್ವಲ್ಪ ದಿನಗಳ ಕಾಲಾವಕಾಶಬೇಕಾಗುತ್ತದೆ ಎಂದು ಕಾರಣ ನೀಡಿದ ಅಧಿಕಾರಿಗಳು ಅದಕ್ಕೆ ಮತ್ತೆ ಬೀಗ ಜಡಿದಿದ್ದರು.<br /> <br /> ಈ ಸ್ಥಳ ಈಗ ಬೀಡಿ, ಸಿಗರೇಟು ಸೇದುವರ ಹಾಗೂ ರಾಜೀ ಪಂಚಾಯಿತಿ ಮಾಡುವ ಕೇಂದ್ರವಾಗಿದೆ. ಬೀಡಿ, ಸಿಗರೇಟುಗಳ ತುಂಡುಗಳು ಹೇರಳವಾಗಿ ಬಿದ್ದಿದೆ. <br /> <br /> ಕಚೇರಿ ಕೆಲಸಕ್ಕಾಗಿ ದಿನನಿತ್ಯ ಮಿನಿವಿಧಾನ ಸೌಧಕ್ಕೆ ಆಗಮಿಸುವ ಜನತೆ ನೈಸರ್ಗಿಕ ಕ್ರಿಯೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ಜನತೆ ಶೌಚಾಲಯದ ಪಕ್ಕದಲ್ಲಿರುವ ಗೋಡೆ ಮರೆಯಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ.<br /> <br /> ಸೆ. 17 ಮತ್ತು 18 ರಂದು ಮಾಧ್ಯಮಿಕ ಶಾಲಾ ಆವರಣದಲ್ಲಿ ~ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ~ ಜರುಗುವುದರಿಂದ ತಾಲ್ಲೂಕು ಆಡಳಿತ ಕೂಡಲೇ ಎಚ್ಚೆತ್ತು ಶೌಚಾಲಯವನ್ನು ಸೇವೆಗೆ ಒದಗಿಸಬೇಕು ಎಂದು ಜನತೆ ಆಗ್ರಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong>: ಇಲ್ಲಿನ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಶೌಚಾಲಯ ಉದ್ಘಾಟನೆಗೊಂಡು ಆರು ತಿಂಗಳಾದರೂ ಸೇವೆಗೆ ಲಭ್ಯವಿಲ್ಲ, ಆದರೆ ಪಂಚಾಯಿತಿ ನಡೆಸುವ, ಬೀಡಿ, ಸಿಗರೇಟು ಸೇದುವರ ತಾಣವಾಗಿದೆ.<br /> <br /> ಪುರುಷರ, ಮಹಿಳೆಯರ ಶೌಚಾಲಯದಲ್ಲಿ ಜೇಡರ ಬಲೆ ಆವರಿಸಿದೆ. ಹಾಳು ಬಿದ್ದ ಮನೆಯಂತೆ ಗೋಚರಿಸುತ್ತದೆ. ಅದರಲ್ಲಿ ಅಳವಡಿಸಿರುವ ಶೌಚಾಲಯ ಪರಿಕರಗಳು ಹಾಳಾಗುವ ಸ್ಥಿತಿ ತಲುಪಿದೆ. <br /> <br /> ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಿಲ್ಲದ್ದರಿಂದ ಬೇಸತ್ತ ಪುರಸಭೆ ಮಾಜಿ ಸದಸ್ಯರೊಬ್ಬರು ಶೌಚಾಲಯದ ಬೀಗ ಮುರಿದು ಸೇವೆಗೆ ಅವಕಾಶ ಕಲ್ಪಿಸಿದರು. ಆದರೆ ಕೆಲ ತಾಂತ್ರಿಕ ತೊಂದರೆಯಿಂದ ಸೇವೆಗೆ ಸ್ವಲ್ಪ ದಿನಗಳ ಕಾಲಾವಕಾಶಬೇಕಾಗುತ್ತದೆ ಎಂದು ಕಾರಣ ನೀಡಿದ ಅಧಿಕಾರಿಗಳು ಅದಕ್ಕೆ ಮತ್ತೆ ಬೀಗ ಜಡಿದಿದ್ದರು.<br /> <br /> ಈ ಸ್ಥಳ ಈಗ ಬೀಡಿ, ಸಿಗರೇಟು ಸೇದುವರ ಹಾಗೂ ರಾಜೀ ಪಂಚಾಯಿತಿ ಮಾಡುವ ಕೇಂದ್ರವಾಗಿದೆ. ಬೀಡಿ, ಸಿಗರೇಟುಗಳ ತುಂಡುಗಳು ಹೇರಳವಾಗಿ ಬಿದ್ದಿದೆ. <br /> <br /> ಕಚೇರಿ ಕೆಲಸಕ್ಕಾಗಿ ದಿನನಿತ್ಯ ಮಿನಿವಿಧಾನ ಸೌಧಕ್ಕೆ ಆಗಮಿಸುವ ಜನತೆ ನೈಸರ್ಗಿಕ ಕ್ರಿಯೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ಜನತೆ ಶೌಚಾಲಯದ ಪಕ್ಕದಲ್ಲಿರುವ ಗೋಡೆ ಮರೆಯಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ.<br /> <br /> ಸೆ. 17 ಮತ್ತು 18 ರಂದು ಮಾಧ್ಯಮಿಕ ಶಾಲಾ ಆವರಣದಲ್ಲಿ ~ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ~ ಜರುಗುವುದರಿಂದ ತಾಲ್ಲೂಕು ಆಡಳಿತ ಕೂಡಲೇ ಎಚ್ಚೆತ್ತು ಶೌಚಾಲಯವನ್ನು ಸೇವೆಗೆ ಒದಗಿಸಬೇಕು ಎಂದು ಜನತೆ ಆಗ್ರಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>