<p><strong>ಜಮ್ಮು (ಪಿಟಿಐ):</strong> ಭಾರೀ ಮಳೆಯಿಂದಾಗಿ ಜಮ್ಮು–ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದ ಮೂವರು ಯಾತ್ರಿಗಳು ಸೇರಿದಂತೆ 4 ಮಂದಿ ಮೃತಪಟ್ಟಿದ್ದಾರೆ.<br /> <br /> ಬೆಂಗಳೂರಿನ ಶಶಿಧರ್ ಕುಮಾರ್ (29), ಛತ್ತೀಸಗಡದ ಬಿಂದು ಸಹಾನಿ (30) ಮತ್ತು ಅವರ ಮಗ ವಿಶಾಲ್ (5) ಮತ್ತು ರೇಸಿ ಜಿಲ್ಲೆಯ ಸಾದಿಕ್ (32) ಮೃತಪಟ್ಟವರು.<br /> <br /> ಬಾನಗಂಗಾ–ಅರ್ಧಕುಮಾರಿ ದೇವಸ್ಥಾನ ರಸ್ತೆ ಸಮೀಪ ಮಧ್ಯರಾತ್ರಿ ಭೂಮಿ ಕುಸಿದು ಯಾತ್ರಿಗಳು ಉಳಿದುಕೊಂಡಿದ್ದ ಶಿಬಿರದ ಮೇಲೆ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜೀತ್ ಸಾಹು ಹೇಳಿದ್ದಾರೆ.<br /> <br /> ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಾಟಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೇಸಿಯ ಹೆಚ್ಚುವರಿ ಸೂಪರಿಟೆಂಡೆಂಟ್ ಸಂಜಯ್ ರಾಣಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು (ಪಿಟಿಐ):</strong> ಭಾರೀ ಮಳೆಯಿಂದಾಗಿ ಜಮ್ಮು–ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದ ಮೂವರು ಯಾತ್ರಿಗಳು ಸೇರಿದಂತೆ 4 ಮಂದಿ ಮೃತಪಟ್ಟಿದ್ದಾರೆ.<br /> <br /> ಬೆಂಗಳೂರಿನ ಶಶಿಧರ್ ಕುಮಾರ್ (29), ಛತ್ತೀಸಗಡದ ಬಿಂದು ಸಹಾನಿ (30) ಮತ್ತು ಅವರ ಮಗ ವಿಶಾಲ್ (5) ಮತ್ತು ರೇಸಿ ಜಿಲ್ಲೆಯ ಸಾದಿಕ್ (32) ಮೃತಪಟ್ಟವರು.<br /> <br /> ಬಾನಗಂಗಾ–ಅರ್ಧಕುಮಾರಿ ದೇವಸ್ಥಾನ ರಸ್ತೆ ಸಮೀಪ ಮಧ್ಯರಾತ್ರಿ ಭೂಮಿ ಕುಸಿದು ಯಾತ್ರಿಗಳು ಉಳಿದುಕೊಂಡಿದ್ದ ಶಿಬಿರದ ಮೇಲೆ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜೀತ್ ಸಾಹು ಹೇಳಿದ್ದಾರೆ.<br /> <br /> ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಾಟಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೇಸಿಯ ಹೆಚ್ಚುವರಿ ಸೂಪರಿಟೆಂಡೆಂಟ್ ಸಂಜಯ್ ರಾಣಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>