<p><strong>ಬೆಂಗಳೂರು: </strong>ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿಯ ಮೊತ್ತವನ್ನು ಕಸ್ಟಮ್ಸ ಅಧಿಕಾರಿಗಳು ತಪ್ಪಾಗಿ ಎಣಿಕೆ ಮಾಡುವ ಮೂಲಕ ಅಧಿಕ ಮೊತ್ತವನ್ನು ತೋರಿಸಿದ್ದಾರೆ ಎಂದು ಅವರ ಆಪ್ತ ಸ್ನೇಹಿತೆಯಾಗಿದ್ದ ಶಶಿಕಲಾ ಸಿಬಿಐ ವಿಶೇಷ ಕೋರ್ಟ್ಗೆ ಶುಕ್ರವಾರ ತಿಳಿಸಿದರು.<br /> <br /> ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಶಶಿಕಲಾ ಅವರ ಸಾಕ್ಷ್ಯ ಪಡೆಯಲಾಗುತ್ತಿದೆ. ಆ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದರು.<br /> <br /> `1996ರಲ್ಲಿ ಜಯಾ ಅವರು ಇದೇ ವಿವಾದದಲ್ಲಿ ಜೈಲಿನಲ್ಲಿ ಇದ್ದರು. ಆ ಸಂದರ್ಭದಲ್ಲಿ ಅವರ ಎರಡು ಮನೆಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಜಯಲಲಿತಾ ಅವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಸ್ಟಮ್ಸ ಅಧಿಕಾರಿಗಳು ತಜ್ಞರ ಸಲಹೆ ಪಡೆದುಕೊಳ್ಳದೇ ಜಯಾ ಅವರ ಆಸ್ತಿ 3.35 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. ಇದು ಸರಿಯಲ್ಲ~ ಎಂದರು. <br /> <br /> ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರಿಂದ ಜಟಾಪಟಿ ನಡೆದ ಕಾರಣ ವಿಚಾರಣೆಯನ್ನು ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನ ಮುಂದೂಡಿದರು. <br /> <br /> <strong>ಕೋರ್ಟ್ ಗರಂ: </strong>ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಆವರಣ ಗುರುವಾರ `ಗರಂ~ಆಗಿದ್ದು ಇಲ್ಲಿ ಉಲ್ಲೇಖಾರ್ಹ. ಶಶಿಕಲಾ ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕೆಲವೊಂದು ಉತ್ತರಗಳನ್ನು ತಮಿಳಿನಲ್ಲಿ ಬರೆದುಕೊಂಡು ಬರುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರ ವಕೀಲರು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೇಳುತ್ತಿದ್ದಾರೆ. ನಂತರ ಅವರ ಉತ್ತರಗಳನ್ನು ಅವರ ಪರ ವಕೀಲರು ಇಂಗ್ಲಿಷ್ಗೆ ಭಾಷಾಂತರ ಮಾಡುತ್ತಿದ್ದಾರೆ. ಈ ರೀತಿ `ಸಿದ್ಧ ಉತ್ತರ~ ನೀಡದಂತೆ ಹಿಂದೆ ಕೆಲವು ಬಾರಿ ನ್ಯಾಯಾಧೀಶರು ಸೂಚಿಸಿದ್ದರೂ ಇದೇ ಪ್ರಕ್ರಿಯೆ ಮುಂದುವರಿದಿದೆ. <br /> <br /> ಇದರಿಂದ ಕೋಪಗೊಂಡಿದ್ದ ಸಹಾಯಕ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೇಶ ಜೆ.ಚೌಟ ಅವರು, ಈ ರೀತಿ ಮಾಡದಂತೆ ಶಶಿಕಲಾ ಅವರಿಗೆ ತಿಳಿಸಿದರು. ಆಗ ನ್ಯಾಯಾಧೀಶರು ಶಶಿಕಲಾ ಅವರ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದರು. ಅದರಲ್ಲಿ ತಮಿಳಿನಲ್ಲಿ ಬರೆದಿರುವ ಹಲವು ಉತ್ತರಗಳನ್ನು ನ್ಯಾಯಾಧೀಶರು ಗಮನಿಸಿದರು. <br /> <br /> ಈ ಬೆಳವಣಿಗೆಗಳನ್ನು ಗಮನಿಸಿದ ಶಶಿಕಲಾ ಪರ ವಕೀಲರು, `ಪ್ರಾಸಿಕ್ಯೂಷನ್ ನನ್ನ ಕಕ್ಷಿದಾರರಿಗೆ ಬೆದರಿಕೆ ಹಾಕುತ್ತಿದೆ~ ಎಂದು ಗುಡುಗಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ ಅವರು ಕೂಡ ಶಶಿಕಲಾ ಅವರ `ಸಿದ್ಧ ಉತ್ತರ~ಕ್ಕೆ ಅಸಮಾಧಾನ ಸೂಚಿಸಿದರು. ಶುಕ್ರವಾರವೂ `ಸಿದ್ಧ ಉತ್ತರ~ ಪ್ರಕ್ರಿಯೆ ಮುಂದುವರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿಯ ಮೊತ್ತವನ್ನು ಕಸ್ಟಮ್ಸ ಅಧಿಕಾರಿಗಳು ತಪ್ಪಾಗಿ ಎಣಿಕೆ ಮಾಡುವ ಮೂಲಕ ಅಧಿಕ ಮೊತ್ತವನ್ನು ತೋರಿಸಿದ್ದಾರೆ ಎಂದು ಅವರ ಆಪ್ತ ಸ್ನೇಹಿತೆಯಾಗಿದ್ದ ಶಶಿಕಲಾ ಸಿಬಿಐ ವಿಶೇಷ ಕೋರ್ಟ್ಗೆ ಶುಕ್ರವಾರ ತಿಳಿಸಿದರು.<br /> <br /> ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಶಶಿಕಲಾ ಅವರ ಸಾಕ್ಷ್ಯ ಪಡೆಯಲಾಗುತ್ತಿದೆ. ಆ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದರು.<br /> <br /> `1996ರಲ್ಲಿ ಜಯಾ ಅವರು ಇದೇ ವಿವಾದದಲ್ಲಿ ಜೈಲಿನಲ್ಲಿ ಇದ್ದರು. ಆ ಸಂದರ್ಭದಲ್ಲಿ ಅವರ ಎರಡು ಮನೆಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಜಯಲಲಿತಾ ಅವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಸ್ಟಮ್ಸ ಅಧಿಕಾರಿಗಳು ತಜ್ಞರ ಸಲಹೆ ಪಡೆದುಕೊಳ್ಳದೇ ಜಯಾ ಅವರ ಆಸ್ತಿ 3.35 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. ಇದು ಸರಿಯಲ್ಲ~ ಎಂದರು. <br /> <br /> ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರಿಂದ ಜಟಾಪಟಿ ನಡೆದ ಕಾರಣ ವಿಚಾರಣೆಯನ್ನು ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನ ಮುಂದೂಡಿದರು. <br /> <br /> <strong>ಕೋರ್ಟ್ ಗರಂ: </strong>ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಆವರಣ ಗುರುವಾರ `ಗರಂ~ಆಗಿದ್ದು ಇಲ್ಲಿ ಉಲ್ಲೇಖಾರ್ಹ. ಶಶಿಕಲಾ ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕೆಲವೊಂದು ಉತ್ತರಗಳನ್ನು ತಮಿಳಿನಲ್ಲಿ ಬರೆದುಕೊಂಡು ಬರುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರ ವಕೀಲರು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೇಳುತ್ತಿದ್ದಾರೆ. ನಂತರ ಅವರ ಉತ್ತರಗಳನ್ನು ಅವರ ಪರ ವಕೀಲರು ಇಂಗ್ಲಿಷ್ಗೆ ಭಾಷಾಂತರ ಮಾಡುತ್ತಿದ್ದಾರೆ. ಈ ರೀತಿ `ಸಿದ್ಧ ಉತ್ತರ~ ನೀಡದಂತೆ ಹಿಂದೆ ಕೆಲವು ಬಾರಿ ನ್ಯಾಯಾಧೀಶರು ಸೂಚಿಸಿದ್ದರೂ ಇದೇ ಪ್ರಕ್ರಿಯೆ ಮುಂದುವರಿದಿದೆ. <br /> <br /> ಇದರಿಂದ ಕೋಪಗೊಂಡಿದ್ದ ಸಹಾಯಕ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೇಶ ಜೆ.ಚೌಟ ಅವರು, ಈ ರೀತಿ ಮಾಡದಂತೆ ಶಶಿಕಲಾ ಅವರಿಗೆ ತಿಳಿಸಿದರು. ಆಗ ನ್ಯಾಯಾಧೀಶರು ಶಶಿಕಲಾ ಅವರ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದರು. ಅದರಲ್ಲಿ ತಮಿಳಿನಲ್ಲಿ ಬರೆದಿರುವ ಹಲವು ಉತ್ತರಗಳನ್ನು ನ್ಯಾಯಾಧೀಶರು ಗಮನಿಸಿದರು. <br /> <br /> ಈ ಬೆಳವಣಿಗೆಗಳನ್ನು ಗಮನಿಸಿದ ಶಶಿಕಲಾ ಪರ ವಕೀಲರು, `ಪ್ರಾಸಿಕ್ಯೂಷನ್ ನನ್ನ ಕಕ್ಷಿದಾರರಿಗೆ ಬೆದರಿಕೆ ಹಾಕುತ್ತಿದೆ~ ಎಂದು ಗುಡುಗಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ ಅವರು ಕೂಡ ಶಶಿಕಲಾ ಅವರ `ಸಿದ್ಧ ಉತ್ತರ~ಕ್ಕೆ ಅಸಮಾಧಾನ ಸೂಚಿಸಿದರು. ಶುಕ್ರವಾರವೂ `ಸಿದ್ಧ ಉತ್ತರ~ ಪ್ರಕ್ರಿಯೆ ಮುಂದುವರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>