<p>ಮುರಗೋಡ (ಬೈಲಹೊಂಗಲ): ಜಾನಪದ ಕಲೆಯ ಮೂಲಕ ಗ್ರಾಮೀಣ ಸೊಗಡನ್ನು ಮನೆಮನೆಗೂ ತಲುಪಿಸಿದ ಶ್ರೇಯಸ್ಸು ಹುಕ್ಕೇರಿ ಬಾಳಪ್ಪ ಅವರಿಗೆ ಸಲ್ಲುತ್ತದೆ ಎಂದು ನೀಲಕಂಠ ಸ್ವಾಮೀಜಿ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಭಾರತ ಯಾತ್ರಾ ಕೇಂದ್ರ, ಧಾರವಾಡ ವಿದ್ಯಾವರ್ಧಕ ಸಂಘ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಜಾನಪದ ಗಾರುಡಿಗ ಬಾಳಪ್ಪ ಹುಕ್ಕೇರಿ ಜನ್ಮ ಶತಮಾನೋತ್ಸವ ಅಂಗವಾಗಿ `ತತ್ವ ಪದಕಾರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.<br /> <br /> ಜೋಗುಳ, ಬೀಸು ಕಲ್ಲಿನ ಪದಗಳು ಹಾಗೂ ರಂಗಭೂಮಿ, ಬಯಲಾಟ ಗೀತೆಗಳು ಸೇರಿದಂತೆ ಸ್ವಾತಂತ್ರ್ಯ ಜಾಗೃತಿ ಗೀತೆಗಳು ಬಾಳಪ್ಪನವರ ಹಾಡಿನ ಮೂಲವಾಗಿದ್ದವು. ಭಾಷೆ ಮೀರಿ ಜನಪದ ಲೋಕದಲ್ಲಿ ಬೆಳಗಿದ ಧ್ರುವತಾರೆಯಾಗಿ ಬೆಳಗಿದವರು ಬಾಳಪ್ಪ ಎಂದರು.<br /> <br /> ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಬಾಳಪ್ಪನವರ ಸ್ಮರಣೆ ಮಾಡುವುದೇ ಒಂದು ಮಹತ್ಕಾರ್ಯವಾಗಿದ್ದು, ಅವರ ಪುತ್ಥಳಿ ಪ್ರತಿಷ್ಠಾಪಿಸಿ, ಜಾನಪದ ಉತ್ಸವ ನಿರಂತರವಾಗಿ ನಡೆಯುವಂತೆ ಎಲ್ಲರೂ ಸೇರಿ ಶ್ರಮಿಸೋಣ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿದರು. ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸಿದರು. <br /> <br /> ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಅಶೋಕ ಶೆಟ್ಟರ, ಶಂಕ್ರಯ್ಯ ಮಲ್ಲಯ್ಯನವರ, ಸಿದ್ದು ಹುಕ್ಕೇರಿ, ಡಾ.ಬಾಳಣ್ಣ ಶೀಗಿಹಳ್ಳಿ, ಪ್ರೊ.ವಿ.ಎಸ್.ಮಾಳಿ, ಡಾ.ಶ್ರೀಶೈಲ ಹುದ್ದಾರ, ಪ್ರಕಾಶ ಅರಳೀಕಟ್ಟಿ ಉಪಸ್ಥಿತರಿದ್ದರು. <br /> <br /> ಜಾನಪದ ಅಕಾಡೆಮಿ ಅಧ್ಯಕ್ಷ ಗೋ.ರು. ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ವಂದಿಸಿದರು. <br /> <br /> <strong>ಸದ್ಭಾವನಾ ದಿನಾಚರಣೆ </strong><br /> ಮ.ಬೆಳವಡಿ (ಬೈಲಹೊಂಗಲ): ಈಶಪ್ರಭು ಶಿಕ್ಷಣ ಸಂಸ್ಥೆಯ ಪಿ.ಬಿ.ಪಾಟೀಲ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ (ಡಿ.ಇಡಿ) ಕೋಮು ಸೌಹಾರ್ದ ಪಾಕ್ಷಿಕ ಹಾಗೂ ಸದ್ಭಾವನಾ ದಿನಾಚರಣೆ ಇತ್ತೀಚೆಗೆ ಆಚರಿಸಲಾಯಿತು.<br /> <br /> ಸಂಸ್ಥೆಯ ಚೆರಮನ್ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಎಂ.ಪಿ.ಉಪ್ಪಿನ ಮಾತನಾಡಿ, ವ್ಯಕ್ತಿತ್ವ ವಿಕಸನದ ಜೊತೆಗೆ ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.<br /> <br /> ಉಪನ್ಯಾಸಕರಾದ ಸಿ.ಎಸ್.ಆನಿಕಿವಿ, ಬಿ.ಎನ್.ಕುರಕುರೆ, ಕು.ಎಂ.ಎಂ. ತುರಮರಿ, ವಿ.ಎಸ್.ಅಂಗಡಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.<br /> <br /> ರಶ್ಮಿ ಹೊಂಗಲ ಪ್ರತಿಜ್ಞಾವಿಧಿ ಬೋಧಿಸಿದರು. ಸಂತೋಷ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಉಳ್ಳಿಗೇರಿ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುರಗೋಡ (ಬೈಲಹೊಂಗಲ): ಜಾನಪದ ಕಲೆಯ ಮೂಲಕ ಗ್ರಾಮೀಣ ಸೊಗಡನ್ನು ಮನೆಮನೆಗೂ ತಲುಪಿಸಿದ ಶ್ರೇಯಸ್ಸು ಹುಕ್ಕೇರಿ ಬಾಳಪ್ಪ ಅವರಿಗೆ ಸಲ್ಲುತ್ತದೆ ಎಂದು ನೀಲಕಂಠ ಸ್ವಾಮೀಜಿ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಭಾರತ ಯಾತ್ರಾ ಕೇಂದ್ರ, ಧಾರವಾಡ ವಿದ್ಯಾವರ್ಧಕ ಸಂಘ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಜಾನಪದ ಗಾರುಡಿಗ ಬಾಳಪ್ಪ ಹುಕ್ಕೇರಿ ಜನ್ಮ ಶತಮಾನೋತ್ಸವ ಅಂಗವಾಗಿ `ತತ್ವ ಪದಕಾರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.<br /> <br /> ಜೋಗುಳ, ಬೀಸು ಕಲ್ಲಿನ ಪದಗಳು ಹಾಗೂ ರಂಗಭೂಮಿ, ಬಯಲಾಟ ಗೀತೆಗಳು ಸೇರಿದಂತೆ ಸ್ವಾತಂತ್ರ್ಯ ಜಾಗೃತಿ ಗೀತೆಗಳು ಬಾಳಪ್ಪನವರ ಹಾಡಿನ ಮೂಲವಾಗಿದ್ದವು. ಭಾಷೆ ಮೀರಿ ಜನಪದ ಲೋಕದಲ್ಲಿ ಬೆಳಗಿದ ಧ್ರುವತಾರೆಯಾಗಿ ಬೆಳಗಿದವರು ಬಾಳಪ್ಪ ಎಂದರು.<br /> <br /> ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಬಾಳಪ್ಪನವರ ಸ್ಮರಣೆ ಮಾಡುವುದೇ ಒಂದು ಮಹತ್ಕಾರ್ಯವಾಗಿದ್ದು, ಅವರ ಪುತ್ಥಳಿ ಪ್ರತಿಷ್ಠಾಪಿಸಿ, ಜಾನಪದ ಉತ್ಸವ ನಿರಂತರವಾಗಿ ನಡೆಯುವಂತೆ ಎಲ್ಲರೂ ಸೇರಿ ಶ್ರಮಿಸೋಣ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿದರು. ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸಿದರು. <br /> <br /> ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಅಶೋಕ ಶೆಟ್ಟರ, ಶಂಕ್ರಯ್ಯ ಮಲ್ಲಯ್ಯನವರ, ಸಿದ್ದು ಹುಕ್ಕೇರಿ, ಡಾ.ಬಾಳಣ್ಣ ಶೀಗಿಹಳ್ಳಿ, ಪ್ರೊ.ವಿ.ಎಸ್.ಮಾಳಿ, ಡಾ.ಶ್ರೀಶೈಲ ಹುದ್ದಾರ, ಪ್ರಕಾಶ ಅರಳೀಕಟ್ಟಿ ಉಪಸ್ಥಿತರಿದ್ದರು. <br /> <br /> ಜಾನಪದ ಅಕಾಡೆಮಿ ಅಧ್ಯಕ್ಷ ಗೋ.ರು. ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ವಂದಿಸಿದರು. <br /> <br /> <strong>ಸದ್ಭಾವನಾ ದಿನಾಚರಣೆ </strong><br /> ಮ.ಬೆಳವಡಿ (ಬೈಲಹೊಂಗಲ): ಈಶಪ್ರಭು ಶಿಕ್ಷಣ ಸಂಸ್ಥೆಯ ಪಿ.ಬಿ.ಪಾಟೀಲ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ (ಡಿ.ಇಡಿ) ಕೋಮು ಸೌಹಾರ್ದ ಪಾಕ್ಷಿಕ ಹಾಗೂ ಸದ್ಭಾವನಾ ದಿನಾಚರಣೆ ಇತ್ತೀಚೆಗೆ ಆಚರಿಸಲಾಯಿತು.<br /> <br /> ಸಂಸ್ಥೆಯ ಚೆರಮನ್ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಎಂ.ಪಿ.ಉಪ್ಪಿನ ಮಾತನಾಡಿ, ವ್ಯಕ್ತಿತ್ವ ವಿಕಸನದ ಜೊತೆಗೆ ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.<br /> <br /> ಉಪನ್ಯಾಸಕರಾದ ಸಿ.ಎಸ್.ಆನಿಕಿವಿ, ಬಿ.ಎನ್.ಕುರಕುರೆ, ಕು.ಎಂ.ಎಂ. ತುರಮರಿ, ವಿ.ಎಸ್.ಅಂಗಡಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.<br /> <br /> ರಶ್ಮಿ ಹೊಂಗಲ ಪ್ರತಿಜ್ಞಾವಿಧಿ ಬೋಧಿಸಿದರು. ಸಂತೋಷ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಉಳ್ಳಿಗೇರಿ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>