<p>ಗುಡಿಬಂಡೆ: ಜೀವ ವೈವಿಧ್ಯ ಸಂರಕ್ಷಣೆ ಕುರಿತು ಎಲ್ಲರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಹೇಳಿದರು.<br /> <br /> ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪರಿಸರ ದಿನಾಚರಣೆಯ ಘೋಷಣೆಯಾಗಿರುವ `ಯೋಚಿಸು- ತಿನ್ನು- ಉಳಿಸು' ಎಂಬ ಘೋಷಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.<br /> <br /> ಆಹಾರ ವ್ಯರ್ಥ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಕಾಡು ಬೆಳೆಸಲು ಯೋಗ್ಯವಾದ ಭೂಮಿಯನ್ನು ಆಹಾರ ಪದಾರ್ಥ ಬೆಳೆಯಲು ಉಪಯೋಗಿಸುತ್ತಿದ್ದೇವೆ ಎಂದು ನುಡಿದರು.<br /> <br /> ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಐ.ವಿ.ನಾಗೇಶ್ ಮಾತನಾಡಿ, ಮರಗಿಡಗಳನ್ನು ಬೆಳೆಸುವ ಉದ್ದೇಶದಿಂದ ಕೃಷಿ ಅರಣ್ಯ ಪ್ರೋತ್ಸಾಹ ವ್ಯವಸ್ಥೆ ಜಾರಿಯಾಗಿದೆ. ತಾಲ್ಲೂಕಿನ ರೈತರು ತಮಗೆ ಅನುಕೂಲವಾಗುವ ಸಸಿಗಳನ್ನು ಪಡೆಯಬಹುದು ಎಂದು ಹೇಳಿದರು.<br /> <br /> ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳಸಿದರೆ ಮೊದಲ ವರ್ಷಕ್ಕೆ ಪ್ರತಿ ಗಿಡಕ್ಕೆ ರೂ 10, ಎರಡನೇ ವರ್ಷ ಪ್ರತಿ ಗಿಡಕ್ಕೆ ರೂ 15, ಮೂರನೇ ವರ್ಷ ಪ್ರತಿ ಗಿಡಕ್ಕೆ ರೂ 20ರ ಅನುದಾನ ನೀಡುತ್ತದೆ. ತಾಲ್ಲೂಕಿನಲ್ಲಿ ವಿತರಿಸಲು ಒಟ್ಟು 1 ಲಕ್ಷ ವಿವಿಧ ಜಾತಿಯ ಗಿಡಗಳು ವಿವಿಧ ನರ್ಸರಿಗಳಲ್ಲಿ ಸಿದ್ಧವಿದೆ ಎಂದು ನುಡಿದರು.<br /> <br /> ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಸರ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಗುಂಪು ಮರದ ಆನಂದ್, ಪರಿಸರ ನಾಶದಿಂದ ಈ ಪ್ರಾಂತ್ಯದಲ್ಲಿ ಮಳೆ ಮತ್ತು ಬೆಳೆ ಎರಡೂ ಕಡಿಮೆಯಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಳಿಯ ಸಸಿಗಳನ್ನು ಪ್ರೌಢಶಾಲೆಯ ಆವರಣದಲ್ಲಿ ನೆಡಲಾಯಿತು. ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.<br /> <br /> ವಲಯ ಅರಣ್ಯಾಧಿಕಾರಿ ಮಹೇಶ್,ಪಟ್ಟಣ ಪಂಚಾಯಿತಿ ಅಧಿಕಾರಿ ಶ್ರೀರಾಮರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವಿದ್, ಮಂಜುನಾಥ್, ಮುಖ್ಯ ಶಿಕ್ಷಕ ಎನ್.ನಾರಾಯಣಸ್ವಾಮಿ, ಮುಖ್ಯ ಶಿಕ್ಷಕಿ ಸರಳಾಕುಮಾರಿ, ದೈಹಿಕ ಶಿಕ್ಷಕರಾದ ಶಿವಪ್ರಸಾದ್, ಶಿಕ್ಷಕರಾದ ವಿ.ವೆಂಕಟೇಶ್, ಗಂಗರಾಜು, ವೆಂಕಟೇಶಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಡಿಬಂಡೆ: ಜೀವ ವೈವಿಧ್ಯ ಸಂರಕ್ಷಣೆ ಕುರಿತು ಎಲ್ಲರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಹೇಳಿದರು.<br /> <br /> ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪರಿಸರ ದಿನಾಚರಣೆಯ ಘೋಷಣೆಯಾಗಿರುವ `ಯೋಚಿಸು- ತಿನ್ನು- ಉಳಿಸು' ಎಂಬ ಘೋಷಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.<br /> <br /> ಆಹಾರ ವ್ಯರ್ಥ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಕಾಡು ಬೆಳೆಸಲು ಯೋಗ್ಯವಾದ ಭೂಮಿಯನ್ನು ಆಹಾರ ಪದಾರ್ಥ ಬೆಳೆಯಲು ಉಪಯೋಗಿಸುತ್ತಿದ್ದೇವೆ ಎಂದು ನುಡಿದರು.<br /> <br /> ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಐ.ವಿ.ನಾಗೇಶ್ ಮಾತನಾಡಿ, ಮರಗಿಡಗಳನ್ನು ಬೆಳೆಸುವ ಉದ್ದೇಶದಿಂದ ಕೃಷಿ ಅರಣ್ಯ ಪ್ರೋತ್ಸಾಹ ವ್ಯವಸ್ಥೆ ಜಾರಿಯಾಗಿದೆ. ತಾಲ್ಲೂಕಿನ ರೈತರು ತಮಗೆ ಅನುಕೂಲವಾಗುವ ಸಸಿಗಳನ್ನು ಪಡೆಯಬಹುದು ಎಂದು ಹೇಳಿದರು.<br /> <br /> ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳಸಿದರೆ ಮೊದಲ ವರ್ಷಕ್ಕೆ ಪ್ರತಿ ಗಿಡಕ್ಕೆ ರೂ 10, ಎರಡನೇ ವರ್ಷ ಪ್ರತಿ ಗಿಡಕ್ಕೆ ರೂ 15, ಮೂರನೇ ವರ್ಷ ಪ್ರತಿ ಗಿಡಕ್ಕೆ ರೂ 20ರ ಅನುದಾನ ನೀಡುತ್ತದೆ. ತಾಲ್ಲೂಕಿನಲ್ಲಿ ವಿತರಿಸಲು ಒಟ್ಟು 1 ಲಕ್ಷ ವಿವಿಧ ಜಾತಿಯ ಗಿಡಗಳು ವಿವಿಧ ನರ್ಸರಿಗಳಲ್ಲಿ ಸಿದ್ಧವಿದೆ ಎಂದು ನುಡಿದರು.<br /> <br /> ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಸರ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಗುಂಪು ಮರದ ಆನಂದ್, ಪರಿಸರ ನಾಶದಿಂದ ಈ ಪ್ರಾಂತ್ಯದಲ್ಲಿ ಮಳೆ ಮತ್ತು ಬೆಳೆ ಎರಡೂ ಕಡಿಮೆಯಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಳಿಯ ಸಸಿಗಳನ್ನು ಪ್ರೌಢಶಾಲೆಯ ಆವರಣದಲ್ಲಿ ನೆಡಲಾಯಿತು. ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.<br /> <br /> ವಲಯ ಅರಣ್ಯಾಧಿಕಾರಿ ಮಹೇಶ್,ಪಟ್ಟಣ ಪಂಚಾಯಿತಿ ಅಧಿಕಾರಿ ಶ್ರೀರಾಮರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವಿದ್, ಮಂಜುನಾಥ್, ಮುಖ್ಯ ಶಿಕ್ಷಕ ಎನ್.ನಾರಾಯಣಸ್ವಾಮಿ, ಮುಖ್ಯ ಶಿಕ್ಷಕಿ ಸರಳಾಕುಮಾರಿ, ದೈಹಿಕ ಶಿಕ್ಷಕರಾದ ಶಿವಪ್ರಸಾದ್, ಶಿಕ್ಷಕರಾದ ವಿ.ವೆಂಕಟೇಶ್, ಗಂಗರಾಜು, ವೆಂಕಟೇಶಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>