<p>ಕಾರ್ಗಲ್: ಸಮೀಪದ ವಡನ್ಬೈಲಿನ ಪದ್ಮಾವತಿ ಅಮ್ಮನವರ ದೇವಾಲಯದಲ್ಲಿ ಈಚಿನ ವರ್ಷಗಳಲ್ಲಿ ಉತ್ತರ ಭಾರತ ಮೂಲದಿಂದ ಬಂದು ನೆಲೆಸಿದ್ದ ಶ್ವೇತಾಂಬರ ಜೈನ ಮುನಿ ಶ್ರೀ ಮತಿಸಾರ ವಿಜಯ್ಜಿ ಮಹಾರಾಜ್ ಹೃದಯಾ ಘಾತದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು. <br /> <br /> ಪೂಜ್ಯರು ತಮ್ಮ ಅಣ್ಣನೊಂದಿಗೆ ವಡನ್ಬೈಲು ಜೈನ ಕ್ಷೇತ್ರಕ್ಕೆ ಬಂದು ನೆಲೆಸಿದ್ದು, 2008 ರಲ್ಲಿ ಮುನಿಗಳಾಗಿದ್ದ ಅವರ ಸೋದರ ಸಹಾ ಇದೇ ಕ್ಷೇತ್ರದಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದರು.<br /> <br /> ಜನವರಿ 1 ರಂದು ವಡನ್ಬೈಲು ಜೈನ ಕ್ಷೇತ್ರದಲ್ಲಿ ನಡೆದ ಪಿಂಚ ಪರಿವರ್ತನಾ ಕಾರ್ಯಕ್ರಮದಲ್ಲಿ ವಿಶೇಷವಾದ ಪ್ರವಚನವನ್ನು ಮಾಡಿದ್ದ ವಿಜಯ್ಜಿ, ತಾವು ಅನೇಕ ಧರ್ಮ ಕ್ಷೇತ್ರಗಳನ್ನು ಸಂದರ್ಶಿಸಿದ್ದರೂ, ತಮ್ಮ ಕೊನೆಗಾಲದಲ್ಲಿ ತಾವು ವಡನ್ಬೈಲಿನಲ್ಲಿಯೇ ಮಣ್ಣಾಗುವುದಾಗಿ ನುಡಿದಿದ್ದನ್ನು ಸ್ಮರಿಸಬಹುದು.<br /> <br /> ಬುಧವಾರ ಜೈನ ಧರ್ಮದ ವಿಧಿವಿಧಾನಗಳೊಂದಿಗೆ ಅಂತಿಮಕ್ರಿಯೆ ನೆರವೇರಿಸಲಾಗುವುದು ಎಂದು ಜೈನ ಸಮಾಜ ಮೂಲಗಳು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಗಲ್: ಸಮೀಪದ ವಡನ್ಬೈಲಿನ ಪದ್ಮಾವತಿ ಅಮ್ಮನವರ ದೇವಾಲಯದಲ್ಲಿ ಈಚಿನ ವರ್ಷಗಳಲ್ಲಿ ಉತ್ತರ ಭಾರತ ಮೂಲದಿಂದ ಬಂದು ನೆಲೆಸಿದ್ದ ಶ್ವೇತಾಂಬರ ಜೈನ ಮುನಿ ಶ್ರೀ ಮತಿಸಾರ ವಿಜಯ್ಜಿ ಮಹಾರಾಜ್ ಹೃದಯಾ ಘಾತದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು. <br /> <br /> ಪೂಜ್ಯರು ತಮ್ಮ ಅಣ್ಣನೊಂದಿಗೆ ವಡನ್ಬೈಲು ಜೈನ ಕ್ಷೇತ್ರಕ್ಕೆ ಬಂದು ನೆಲೆಸಿದ್ದು, 2008 ರಲ್ಲಿ ಮುನಿಗಳಾಗಿದ್ದ ಅವರ ಸೋದರ ಸಹಾ ಇದೇ ಕ್ಷೇತ್ರದಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದರು.<br /> <br /> ಜನವರಿ 1 ರಂದು ವಡನ್ಬೈಲು ಜೈನ ಕ್ಷೇತ್ರದಲ್ಲಿ ನಡೆದ ಪಿಂಚ ಪರಿವರ್ತನಾ ಕಾರ್ಯಕ್ರಮದಲ್ಲಿ ವಿಶೇಷವಾದ ಪ್ರವಚನವನ್ನು ಮಾಡಿದ್ದ ವಿಜಯ್ಜಿ, ತಾವು ಅನೇಕ ಧರ್ಮ ಕ್ಷೇತ್ರಗಳನ್ನು ಸಂದರ್ಶಿಸಿದ್ದರೂ, ತಮ್ಮ ಕೊನೆಗಾಲದಲ್ಲಿ ತಾವು ವಡನ್ಬೈಲಿನಲ್ಲಿಯೇ ಮಣ್ಣಾಗುವುದಾಗಿ ನುಡಿದಿದ್ದನ್ನು ಸ್ಮರಿಸಬಹುದು.<br /> <br /> ಬುಧವಾರ ಜೈನ ಧರ್ಮದ ವಿಧಿವಿಧಾನಗಳೊಂದಿಗೆ ಅಂತಿಮಕ್ರಿಯೆ ನೆರವೇರಿಸಲಾಗುವುದು ಎಂದು ಜೈನ ಸಮಾಜ ಮೂಲಗಳು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>