<p><strong>ನವದೆಹಲಿ (ಪಿಟಿಐ): </strong>ಕೆಲವು ದಿನಗಳ ಹಿಂದೆಯಷ್ಟೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಈಗ ತಮ್ಮ ವರಸೆ ಬದಲಿದ್ದಾರೆ.<br /> <br /> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ ಅವರು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಗೆ ಶುಕ್ರವಾರ ತಣ್ಣೀರೆರಚಿದ್ದಾರೆ.<br /> ‘ತಪ್ಪುದಾರಿಗೆ ಎಳೆಯುವ ಕೆಲವು ಜನರು ಮಮತಾ ಅವರೊಂದಿಗೆ ಸೇರಿದ್ದಾರೆ. ಹಾಗಾಗಿ ಅವರಿಗೆ ಬೆಂಬಲ ನೀಡುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.<br /> <br /> ದೆಹಲಿಯಲ್ಲಿ ಬುಧವಾರ ನಡೆದಿದ್ದ ಬಹು ನಿರೀಕ್ಷಿತ ‘ಜಂಟಿ’ ರ್್ಯಾಲಿಗೆ ಗೈರು ಹಾಜರಾಗುವ ಮೂಲಕ ಮಮತಾ ಅವರಿಗೆ ಅಣ್ಣಾ ಹಜಾರೆ ಮುಜುಗರ ಉಂಟು ಮಾಡಿದ್ದರು.<br /> <br /> ರ್್ಯಾಲಿಗೆ ಗೈರು ಹಾಜರಾದ ನಂತರವೂ ಮಮತಾ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಬೆಂಬಲ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಣ್ಣಾ, ರ್್ಯಾಲಿ ವಿಚಾರದಲ್ಲಿ ತಮ್ಮನ್ನು ತಪ್ಪು ದಾರಿಗೆ ಎಳೆಯಲಾಯಿತು ಎಂದು ಹೇಳಿದ್ದಾರೆ.<br /> ಟಿಎಂಸಿಯ ಚುನಾವಣಾ ಜಾಹೀರಾತಿನಲ್ಲಿ ತಮ್ಮ ಹೆಸರು ಬಳಸುವುದನ್ನು ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದಾಗಿ ಅಣ್ಣಾ ಹೇಳಿದ್ದಾರೆ.<br /> <br /> ಹಜಾರೆ ಅವರ 17 ಅಂಶಗಳ ಕಾರ್ಯಸೂಚಿಗೆ ಮಮತಾ ಬ್ಯಾನರ್ಜಿ ಸಮ್ಮತಿಸಿದ್ದ ಹಿನ್ನೆಲೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಾಗಿ ಅಣ್ಣಾ ಫೆ.19ರಂದು ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕೆಲವು ದಿನಗಳ ಹಿಂದೆಯಷ್ಟೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಈಗ ತಮ್ಮ ವರಸೆ ಬದಲಿದ್ದಾರೆ.<br /> <br /> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ ಅವರು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಗೆ ಶುಕ್ರವಾರ ತಣ್ಣೀರೆರಚಿದ್ದಾರೆ.<br /> ‘ತಪ್ಪುದಾರಿಗೆ ಎಳೆಯುವ ಕೆಲವು ಜನರು ಮಮತಾ ಅವರೊಂದಿಗೆ ಸೇರಿದ್ದಾರೆ. ಹಾಗಾಗಿ ಅವರಿಗೆ ಬೆಂಬಲ ನೀಡುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.<br /> <br /> ದೆಹಲಿಯಲ್ಲಿ ಬುಧವಾರ ನಡೆದಿದ್ದ ಬಹು ನಿರೀಕ್ಷಿತ ‘ಜಂಟಿ’ ರ್್ಯಾಲಿಗೆ ಗೈರು ಹಾಜರಾಗುವ ಮೂಲಕ ಮಮತಾ ಅವರಿಗೆ ಅಣ್ಣಾ ಹಜಾರೆ ಮುಜುಗರ ಉಂಟು ಮಾಡಿದ್ದರು.<br /> <br /> ರ್್ಯಾಲಿಗೆ ಗೈರು ಹಾಜರಾದ ನಂತರವೂ ಮಮತಾ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಬೆಂಬಲ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಣ್ಣಾ, ರ್್ಯಾಲಿ ವಿಚಾರದಲ್ಲಿ ತಮ್ಮನ್ನು ತಪ್ಪು ದಾರಿಗೆ ಎಳೆಯಲಾಯಿತು ಎಂದು ಹೇಳಿದ್ದಾರೆ.<br /> ಟಿಎಂಸಿಯ ಚುನಾವಣಾ ಜಾಹೀರಾತಿನಲ್ಲಿ ತಮ್ಮ ಹೆಸರು ಬಳಸುವುದನ್ನು ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದಾಗಿ ಅಣ್ಣಾ ಹೇಳಿದ್ದಾರೆ.<br /> <br /> ಹಜಾರೆ ಅವರ 17 ಅಂಶಗಳ ಕಾರ್ಯಸೂಚಿಗೆ ಮಮತಾ ಬ್ಯಾನರ್ಜಿ ಸಮ್ಮತಿಸಿದ್ದ ಹಿನ್ನೆಲೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಾಗಿ ಅಣ್ಣಾ ಫೆ.19ರಂದು ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>