<p><strong>ಬೆಂಗಳೂರು: </strong>ರಾಜ್ಯದ ಹಣಕಾಸು ವ್ಯವಹಾರ ಇನ್ನು ಮುಂದೆ ಮತ್ತಷ್ಟು ಆನ್ಲೈನ್ ಆಗಲಿದೆ. ವಿವಿಧ ಇಲಾಖೆ, ವ್ಯಕ್ತಿಗಳಿಗೆ ಹಣ ಬಿಡುಗಡೆ, ಹಣ ಸ್ವೀಕಾರ, ಲೆಕ್ಕ ಪರಿಶೋಧನೆ... ಹೀಗೆ ಎಲ್ಲವೂ ಆನ್ಲೈನ್ನಲ್ಲೇ ಮಾಡುವ `ಖಜಾನೆ-2~ರ ಜಾರಿಗೆ ರಾಜ್ಯ ಖಜಾನೆ ಇಲಾಖೆಯು ಸಾಫ್ಟ್ವೇರ್ ಸಂಸ್ಥೆ ಟಿ.ಸಿ.ಎಸ್ ಜತೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿತು.<br /> <br /> ಖಜಾನೆ ನಿರ್ದೇಶಕಿ ಎನ್.ಟಿ.ಆಬ್ರೂ ಮತ್ತು ಟಿಸಿಎಸ್ ಉಪಾಧ್ಯಕ್ಷ ತನ್ಮಯ ಚಕ್ರವರ್ತಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಇತರರು ಹಾಜರಿದ್ದರು.<br /> <br /> 2001ರಿಂದಲೂ `ಖಜಾನೆ-1~ ಜಾರಿಯಲ್ಲಿದೆ. ಅದರ ನಂತರದ ಸಾಫ್ಟ್ವೇರ್ `ಖಜಾನೆ-2~. ಇದರಲ್ಲಿ ಎಲ್ಲವೂ ಆನ್ಲೈನ್ನಲ್ಲೇ ನಡೆಯುತ್ತದೆ. ಪ್ರತಿ ಸೆಕೆಂಡಿಗೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವ; ಹಣ ಬಿಡುಗಡೆ ಮತ್ತು ಸ್ವೀಕಾರ.. ಹೀಗೆ ಎಲ್ಲವೂ ಆನ್ಲೈನ್ನಲ್ಲಿ ಆಗಲಿದೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್ ಸುದ್ದಿಗಾರರಿಗೆ ತಿಳಿಸಿದರು. <br /> <br /> 25 ಸಾವಿರ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಲು ಈ ಸಾಫ್ಟ್ವೇರ್ ನೆರವಾಗಲಿದೆ. ಆನ್ಲೈನ್ನಲ್ಲಿ ಹಣ ಬಳಕೆ ಬಗ್ಗೆಯೂ ಮಾಹಿತಿ ಸಿಗಲಿದೆ. ಲೆಕ್ಕ ಪರಿಶೋಧನೆ ಕೂಡ ಆಗುತ್ತದೆ ಎಂದರು.<br /> <br /> ಈ ಸಾಫ್ಟ್ವೇರ್ ಅನ್ನು ಟಿಸಿಎಸ್ ಅಭಿವೃದ್ಧಿಪಡಿಸಿ ಆರು ತಿಂಗಳಲ್ಲಿ ಸರ್ಕಾರಕ್ಕೆ ನೀಡಲಿದೆ. ನಂತರ ಅದನ್ನು ಪ್ರಾಯೋಗಿಕವಾಗಿ ಕೆಲ ಖಜಾನೆಗಳಲ್ಲಿ ಪರೀಕ್ಷೆ ಮಾಡಲಾಗುವುದು. 2013ರ ಏಪ್ರಿಲ್ ವೇಳೆಗೆ ಈ ಯೋಜನೆ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.<br /> <br /> ಈ ಗಡುವಿಗೆ ಕಾಯದೆ, ಆದಷ್ಟು ಬೇಗ ಯೋಜನೆ ಜಾರಿಗೊಳಿಸುವಂತೆಯೂ ಸೂಚಿಸಿದರು.ಈ ಸಲುವಾಗಿ ರಾಜ್ಯ ಸರ್ಕಾರ ರೂ 80 ಕೋಟಿ ವೆಚ್ಚ ಮಾಡುತ್ತಿದೆ ಎಂದು ನಾಗರಾಜನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ ಹಣಕಾಸು ವ್ಯವಹಾರ ಇನ್ನು ಮುಂದೆ ಮತ್ತಷ್ಟು ಆನ್ಲೈನ್ ಆಗಲಿದೆ. ವಿವಿಧ ಇಲಾಖೆ, ವ್ಯಕ್ತಿಗಳಿಗೆ ಹಣ ಬಿಡುಗಡೆ, ಹಣ ಸ್ವೀಕಾರ, ಲೆಕ್ಕ ಪರಿಶೋಧನೆ... ಹೀಗೆ ಎಲ್ಲವೂ ಆನ್ಲೈನ್ನಲ್ಲೇ ಮಾಡುವ `ಖಜಾನೆ-2~ರ ಜಾರಿಗೆ ರಾಜ್ಯ ಖಜಾನೆ ಇಲಾಖೆಯು ಸಾಫ್ಟ್ವೇರ್ ಸಂಸ್ಥೆ ಟಿ.ಸಿ.ಎಸ್ ಜತೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿತು.<br /> <br /> ಖಜಾನೆ ನಿರ್ದೇಶಕಿ ಎನ್.ಟಿ.ಆಬ್ರೂ ಮತ್ತು ಟಿಸಿಎಸ್ ಉಪಾಧ್ಯಕ್ಷ ತನ್ಮಯ ಚಕ್ರವರ್ತಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಇತರರು ಹಾಜರಿದ್ದರು.<br /> <br /> 2001ರಿಂದಲೂ `ಖಜಾನೆ-1~ ಜಾರಿಯಲ್ಲಿದೆ. ಅದರ ನಂತರದ ಸಾಫ್ಟ್ವೇರ್ `ಖಜಾನೆ-2~. ಇದರಲ್ಲಿ ಎಲ್ಲವೂ ಆನ್ಲೈನ್ನಲ್ಲೇ ನಡೆಯುತ್ತದೆ. ಪ್ರತಿ ಸೆಕೆಂಡಿಗೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವ; ಹಣ ಬಿಡುಗಡೆ ಮತ್ತು ಸ್ವೀಕಾರ.. ಹೀಗೆ ಎಲ್ಲವೂ ಆನ್ಲೈನ್ನಲ್ಲಿ ಆಗಲಿದೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್ ಸುದ್ದಿಗಾರರಿಗೆ ತಿಳಿಸಿದರು. <br /> <br /> 25 ಸಾವಿರ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಲು ಈ ಸಾಫ್ಟ್ವೇರ್ ನೆರವಾಗಲಿದೆ. ಆನ್ಲೈನ್ನಲ್ಲಿ ಹಣ ಬಳಕೆ ಬಗ್ಗೆಯೂ ಮಾಹಿತಿ ಸಿಗಲಿದೆ. ಲೆಕ್ಕ ಪರಿಶೋಧನೆ ಕೂಡ ಆಗುತ್ತದೆ ಎಂದರು.<br /> <br /> ಈ ಸಾಫ್ಟ್ವೇರ್ ಅನ್ನು ಟಿಸಿಎಸ್ ಅಭಿವೃದ್ಧಿಪಡಿಸಿ ಆರು ತಿಂಗಳಲ್ಲಿ ಸರ್ಕಾರಕ್ಕೆ ನೀಡಲಿದೆ. ನಂತರ ಅದನ್ನು ಪ್ರಾಯೋಗಿಕವಾಗಿ ಕೆಲ ಖಜಾನೆಗಳಲ್ಲಿ ಪರೀಕ್ಷೆ ಮಾಡಲಾಗುವುದು. 2013ರ ಏಪ್ರಿಲ್ ವೇಳೆಗೆ ಈ ಯೋಜನೆ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.<br /> <br /> ಈ ಗಡುವಿಗೆ ಕಾಯದೆ, ಆದಷ್ಟು ಬೇಗ ಯೋಜನೆ ಜಾರಿಗೊಳಿಸುವಂತೆಯೂ ಸೂಚಿಸಿದರು.ಈ ಸಲುವಾಗಿ ರಾಜ್ಯ ಸರ್ಕಾರ ರೂ 80 ಕೋಟಿ ವೆಚ್ಚ ಮಾಡುತ್ತಿದೆ ಎಂದು ನಾಗರಾಜನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>