<p>ಬೆಂಗಳೂರು: `ಡಬ್ಬಿಂಗ್ ವಿರೋಧಿ ನಿಲುವು ತಳೆದ ಕಾರಣಕ್ಕೆ ನನ್ನ ವಿರುದ್ಧ ಬೇರೆ ಬೇರೆ ರೂಪದಲ್ಲಿ ದಾಳಿ ನಡೆಯುತ್ತಿದೆ. ಇದನ್ನು ಸಹಿಸುವುದು ಸಾಧ್ಯವಿಲ್ಲ. `ಶಿವ~ ಮೂರನೇ ಕಣ್ಣು ಬಿಟ್ಟರೆ ಪರಿಣಾಮ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ~ ಎಂದು ನಟ ಶಿವರಾಜ್ಕುಮಾರ್ ಗುಡುಗಿದರು.<br /> <br /> ನಗರದಲ್ಲಿ ಸೋಮವಾರ `ಅಂದರ್ ಬಾಹರ್~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವೊಂದಕ್ಕೆ ನೀಡಲಾದ ಮುಂಗಡ ಹಣ ಹಿಂತಿರುಗಿಸಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದರು. `ಡಾ.ರಾಜ್ ಹುಟ್ಟುಹಬ್ಬದ ದಿನ ಡಬ್ಬಿಂಗ್ ವಿರುದ್ಧವಾಗಿ ಮಾತನಾಡಿದೆ. ಕನ್ನಡ ಚಿತ್ರರಂಗದ ಉಳಿವಿನ ಸಂಬಂಧ ಈ ನಿಲುವು ತೆಗೆದುಕೊಂಡಿದ್ದೇನೆ. ಆದರೆ, ಇದನ್ನೇ ನೆಪವಾಗಿರಿಸಿಕೊಂಡು ಪರೋಕ್ಷವಾಗಿ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ~ ಎಂದು ಆರೋಪಿಸಿದರು. <br /> <br /> `ಬಾಬು ಅವರ ಅಸಮಾಧಾನದ ವಿಚಾರವಾಗಿ ನಟ ಅಂಬರೀಷ್ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಮ್ಮುಖದಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಪರಸ್ಪರ ಚರ್ಚಿಸಿ ಒಮ್ಮತಕ್ಕೆ ಬರಬಹುದಿತ್ತು. ಆದರೆ ವಿನಾಕಾರಣ ಸಮಸ್ಯೆ ಸೃಷ್ಟಿಸಲಾಗಿದೆ~ ಎಂದರು.<br /> <br /> ನಟ ತೂಗುದೀಪ ಶ್ರೀನಿವಾಸ್ ವಿರುದ್ಧ ಬಾಬು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, `ವಿವಾದದಲ್ಲಿ ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಬಾಬು ಅವರ ತೇಜೋವಧೆ ಮಾಡುವಂತಹ ಕೀಳು ವ್ಯಕ್ತಿ ನಾನಲ್ಲ. ಅವಹೇಳನಕಾರಿ ವಿಡಿಯೊವನ್ನು ಪ್ರಚುರಪಡಿಸುವಷ್ಟು ತಂತ್ರಜ್ಞಾನವೂ ನನಗೆ ಗೊತ್ತಿಲ್ಲ. ಅವರು ನಿರ್ಮಾಪಕರು ಎನ್ನುವ ಗೌರವ ನನಗೆ ಈಗಲೂ ಇದೆ. ನಟ ತೂಗುದೀಪರ ಕುರಿತು ಚಿಕ್ಕಂದಿನಿಂದಲೂ ಅಭಿಮಾನವಿದೆ~ ಎಂದು ಹೇಳಿದರು. <br /> <br /> `ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇವುಗಳಲ್ಲಿ 20-25 ಚಿತ್ರಗಳಲ್ಲಿ ನನಗೆ ಇನ್ನೂ ಹಣ ಸಂದಾಯವಾಗಬೇಕಿದೆ. ಮುಂಗಡ ನೀಡಿ ಏಳು ವರ್ಷದ ಬಳಿಕ ಅಣ್ಣ ತಂಗಿ ಚಿತ್ರ ತಯಾರಾಯಿತು~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಡಬ್ಬಿಂಗ್ ವಿರೋಧಿ ನಿಲುವು ತಳೆದ ಕಾರಣಕ್ಕೆ ನನ್ನ ವಿರುದ್ಧ ಬೇರೆ ಬೇರೆ ರೂಪದಲ್ಲಿ ದಾಳಿ ನಡೆಯುತ್ತಿದೆ. ಇದನ್ನು ಸಹಿಸುವುದು ಸಾಧ್ಯವಿಲ್ಲ. `ಶಿವ~ ಮೂರನೇ ಕಣ್ಣು ಬಿಟ್ಟರೆ ಪರಿಣಾಮ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ~ ಎಂದು ನಟ ಶಿವರಾಜ್ಕುಮಾರ್ ಗುಡುಗಿದರು.<br /> <br /> ನಗರದಲ್ಲಿ ಸೋಮವಾರ `ಅಂದರ್ ಬಾಹರ್~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವೊಂದಕ್ಕೆ ನೀಡಲಾದ ಮುಂಗಡ ಹಣ ಹಿಂತಿರುಗಿಸಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದರು. `ಡಾ.ರಾಜ್ ಹುಟ್ಟುಹಬ್ಬದ ದಿನ ಡಬ್ಬಿಂಗ್ ವಿರುದ್ಧವಾಗಿ ಮಾತನಾಡಿದೆ. ಕನ್ನಡ ಚಿತ್ರರಂಗದ ಉಳಿವಿನ ಸಂಬಂಧ ಈ ನಿಲುವು ತೆಗೆದುಕೊಂಡಿದ್ದೇನೆ. ಆದರೆ, ಇದನ್ನೇ ನೆಪವಾಗಿರಿಸಿಕೊಂಡು ಪರೋಕ್ಷವಾಗಿ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ~ ಎಂದು ಆರೋಪಿಸಿದರು. <br /> <br /> `ಬಾಬು ಅವರ ಅಸಮಾಧಾನದ ವಿಚಾರವಾಗಿ ನಟ ಅಂಬರೀಷ್ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಮ್ಮುಖದಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಪರಸ್ಪರ ಚರ್ಚಿಸಿ ಒಮ್ಮತಕ್ಕೆ ಬರಬಹುದಿತ್ತು. ಆದರೆ ವಿನಾಕಾರಣ ಸಮಸ್ಯೆ ಸೃಷ್ಟಿಸಲಾಗಿದೆ~ ಎಂದರು.<br /> <br /> ನಟ ತೂಗುದೀಪ ಶ್ರೀನಿವಾಸ್ ವಿರುದ್ಧ ಬಾಬು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, `ವಿವಾದದಲ್ಲಿ ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಬಾಬು ಅವರ ತೇಜೋವಧೆ ಮಾಡುವಂತಹ ಕೀಳು ವ್ಯಕ್ತಿ ನಾನಲ್ಲ. ಅವಹೇಳನಕಾರಿ ವಿಡಿಯೊವನ್ನು ಪ್ರಚುರಪಡಿಸುವಷ್ಟು ತಂತ್ರಜ್ಞಾನವೂ ನನಗೆ ಗೊತ್ತಿಲ್ಲ. ಅವರು ನಿರ್ಮಾಪಕರು ಎನ್ನುವ ಗೌರವ ನನಗೆ ಈಗಲೂ ಇದೆ. ನಟ ತೂಗುದೀಪರ ಕುರಿತು ಚಿಕ್ಕಂದಿನಿಂದಲೂ ಅಭಿಮಾನವಿದೆ~ ಎಂದು ಹೇಳಿದರು. <br /> <br /> `ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇವುಗಳಲ್ಲಿ 20-25 ಚಿತ್ರಗಳಲ್ಲಿ ನನಗೆ ಇನ್ನೂ ಹಣ ಸಂದಾಯವಾಗಬೇಕಿದೆ. ಮುಂಗಡ ನೀಡಿ ಏಳು ವರ್ಷದ ಬಳಿಕ ಅಣ್ಣ ತಂಗಿ ಚಿತ್ರ ತಯಾರಾಯಿತು~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>